ಆ್ಯಪ್ನಗರ

ಸಸ್ಪೆನ್ಸ್‌ ಥ್ರಿಲ್ಲರ್‌ ಪ್ರಿಯರಿಗೆ ಹೇಳಿ ಮಾಡಿಸಿದ ಸಿನಿಮಾ ಉದ್ಘರ್ಷ: ದೇಸಾಯಿ

ಮಾ.22 ರಂದು ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳಂನಲ್ಲಿ 'ಉದ್ಘರ್ಷ' ಚಿತ್ರ ಏಕಕಾಲಕ್ಕೆ ಬಿಡುಗಡೆ ಆಗುತ್ತಿದ್ದು, ದಕ್ಷಿಣ ಭಾರತದ ಖ್ಯಾತ ಕಲಾವಿದರು ನಟಿಸಿದ್ದಾರೆ.

Vijaya Karnataka 17 Mar 2019, 5:00 am
* ಶರಣು ಹುಲ್ಲೂರು
Vijaya Karnataka Web udhgarsha


ಠಾಕೂರ್‌ ಅನೂಪ್‌ಸಿಂಗ್‌, ಧನ್ಸಿಕಾ ಮುಂತಾದವರು ನಟಿಸಿರುವ 'ಉದ್ಘರ್ಷ' ಸಿನಿಮಾ ಈಗಾಗಲೇ ಟ್ರೇಲರ್‌ನಿಂದಾಗಿ ಕ್ರೇಜ್‌ ಕ್ರಿಯೇಟ್‌ ಮಾಡಿದ್ದು, ಈ ಚಿತ್ರದಲ್ಲಿ ಅನೇಕ ವಿಶೇಷಗಳಿವೆ. ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಚಿತ್ರಗಳನ್ನು ಇಷ್ಟಪಡುವ ಪ್ರೇಕ್ಷಕರಿಗೆ ಥ್ರಿಲ್‌ ನೀಡುವಂಥ ಚಿತ್ರ ಇದಾಗಿದೆ ಎಂದು ನಿರ್ದೇಶಕ ಸುನೀಲ್‌ಕುಮಾರ್‌ ದೇಸಾಯಿ ಹೇಳಿದ್ದಾರೆ.

'ಚಿತ್ರಕಥೆಯೇ ಸಿನಿಮಾದ ಹೀರೋ. ಹಾಗಾಗಿಯೇ ಈ ಚಿತ್ರಕ್ಕೆ ಸ್ಟಾರ್‌ ನಟರ ಅವಶ್ಯಕತೆ ಬೀಳಲಿಲ್ಲ. ಚಿತ್ರಕಥೆಯಲ್ಲಿ ಬರುವ ಒಂದೊಂದು ಪಾತ್ರಕ್ಕೂ ತನ್ನದೇ ಆದ ಮಹತ್ವ ಇರುವುದರಿಂದ, ಪ್ರತಿ ಕ್ಯಾರೆಕ್ಟರ್‌ ಕೂಡ ನೋಡುಗನಿಗೆ ಕುತೂಹಲ ಮೂಡಿಸುತ್ತಾ ಸಾಗುತ್ತದೆ. ಇದೇ ಸಿನಿಮಾದ ಜೀವಾಳ. ಇಂಥ ಉತ್ತಮ ಚಿತ್ರವನ್ನು ಡಿ ಕ್ರಿಯೇಷನ್‌ ಲಾಂಛನದಲ್ಲಿ ಚಿತ್ರ ಬಂದಿದ್ದು, ದೇವರಾಜ್‌ ನಿರ್ಮಿಸಿದ್ದಾರೆ' ಎನ್ನುತ್ತಾರೆ ದೇಸಾಯಿ.

'ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಮಾದರಿಯ ಚಿತ್ರಗಳನ್ನು ನೋಡುವಂಥ ದೊಡ್ಡ ಪ್ರೇಕ್ಷಕ ವರ್ಗವೇ ಭಾರತದಲ್ಲಿದೆ. ಕನ್ನಡದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಇಂಥ ವೀಕ್ಷಕರಿದ್ದಾರೆ. ಅವರನ್ನು ಮನಸ್ಸಿನಲ್ಲಿಟ್ಟುಕೊಂಡು ಚಿತ್ರ ಮಾಡಿದ್ದೇನೆ. ಪ್ರತಿ ಸನ್ನಿವೇಶವೂ ನೋಡುಗನಿಗೆ ಕ್ಯೂರಿಯಾಸಿಟಿ ಮೂಡಿಸುತ್ತಾ, ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ' ಎಂದು ಅವರು ಹೇಳಿದ್ದಾರೆ.

ಹೆಸರಾಂತ ತಾರಾಬಳಗ ಸಿನಿಮಾದಲ್ಲಿದ್ದರೂ, ಅವರು ಕೇವಲ ಪಾತ್ರವಾಗಿ ಕಾಣುವುದು ಸಿನಿಮಾದ ವಿಶೇಷಗಳಲ್ಲಿ ಒಂದು. ಮೇಕಿಂಗ್‌, ಸಿನಿಮಾಟೋಗ್ರಫಿ ಮತ್ತು ಸಂಗೀತಕ್ಕೆ ಪೂರಕ ಎನ್ನುವಂತೆ ಕಲಾವಿದರು ಇದ್ದಾರೆ. ಸಿನಿಮಾದಲ್ಲಿ ಮಾತು ಕಡಿಮೆ ಇದ್ದರೂ, ಮೇಕಿಂಗ್‌ನಲ್ಲಿಯೇ ಕಥೆ ದಾಟಿಸುವ ಪ್ರಯತ್ನ ಈ ಸಿನಿಮಾದಲ್ಲಿ ಆಗಿದೆ ಎನ್ನುತ್ತಾರೆ ದೇಸಾಯಿ.

'ಟ್ರೇಲರ್‌ ನೋಡಿರುವ ಪ್ರೇಕ್ಷಕರು ಉದ್ಘರ್ಷದ ಮೇಕಿಂಗ್‌ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಯಾವ ರೀತಿಯ ಸ್ಟೋರಿ ಹೇಳಿರಬಹುದು ಎಂದು ಮಾತನಾಡಿಕೊಂಡಿದ್ದಾರೆ. ತೆಲುಗು ಮತ್ತು ತಮಿಳಿನ ಪ್ರೇಕ್ಷಕರಲ್ಲೂ ಕ್ರೇಜ್‌ ಮೂಡಿಸಿದಂಥ ಟ್ರೇಲರ್‌ ಅದಾಗಿದೆ. ಸಿನಿಮಾವನ್ನೂ ಹೀಗೆಯೇ ಸ್ವೀಕರಿಸುತ್ತಾರೆ ಎಂಬ ನಂಬಿಕೆ ನಮ್ಮದು' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದೇ ಮಾ.22 ರಂದು ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳಂನಲ್ಲಿ ಈ ಸಿನಿಮಾ ಏಕಕಾಲಕ್ಕೆ ಬಿಡುಗಡೆ ಆಗುತ್ತಿದ್ದು, ದಕ್ಷಿಣ ಭಾರತದ ಖ್ಯಾತ ಕಲಾವಿದರು ನಟಿಸಿದ್ದಾರೆ. ಡಿ ಕ್ರಿಯೇಷನ್‌ ಲಾಂಛನದಲ್ಲಿ ಚಿತ್ರ ಬಂದಿದ್ದು, ದೇವರಾಜ್‌ ನಿರ್ಮಾಪಕರು.

------------

ಇದೊಂದು ಪಕ್ಕಾ ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಮಾದರಿಯ ಸಿನಿಮಾ. ಎರಡು ಗಂಟೆಗಳ ಕಾಲ ಪ್ರೇಕ್ಷಕರನ್ನು ಈ ಚಿತ್ರ ಬೇರೆ ಪ್ರಪಂಚಕ್ಕೆ ಕರೆದೊಯ್ಯಲಿದೆ.

- ಸುನೀಲ್‌ ಕುಮಾರ್‌ ದೇಸಾಯಿ, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌