ಆ್ಯಪ್ನಗರ

ಕುತೂಹಲ ಕೆರಳಿಸಿರುವ ರಾಘಣ್ಣ-ಉಪ್ಪಿ ಭೇಟಿ, ಏನಿರಬಹುದು ವಿಶೇಷ?

ಇನ್ನು ಈಗಷ್ಟೇ ಉಪೇಂದ್ರ ಅಭಿನಯದ 'ಐ ಲವ್ ಯು’ ಸಿನಿಮಾ ಬಿಡುಗಡೆಯಾಗಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೇ ಸಂದರ್ಭದಲ್ಲಿ ಉಪೇಂದ್ರ ಅವರು ರಾಘಣ್ಣನನ್ನು ಭೇಟಿಯಾಗಿರುವುದು ಕುತೂಹಲ ಕೆರಳಿಸಿದೆ. ಇಬರಿಬ್ಬರ ಭೇಟಿ ಕೇವಲ ಉಭಯಕುಶಲೋಪರಿಗಷ್ಟೇ ಸೀಮಿತವೇ ಅಥವಾ ಏನಾದರು ವಿಶೇಷ ಇದೆಯಾ?

Vijaya Karnataka Web 18 Jun 2019, 4:04 pm
ಅನಾರೋಗ್ಯದ ನಡುವೆಯೂ ನಟ ರಾಘವೇಂದ್ರ ರಾಜ್‌ಕುಮಾರ್ ಹಲವಾರು ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದಾರೆ. 'ಅಮ್ಮನ ಮನೆ' ಸಿನಿಮಾ ಬಳಿಕ 25ನೇ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಧ್ರುವ ಸರ್ಜಾ ಮುಖ್ಯ ಭೂಮಿಕೆಯ ಪೊಗರು ಚಿತ್ರದಲ್ಲೂ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.
Vijaya Karnataka Web raghanna


ಈ ಮಧ್ಯೆ 'ಆಡಿಸಿದಾತ' ಚಿತ್ರಕ್ಕೆ ಸಹಿ ಮಾಡಿದ್ದಾರೆ. ಇದು ರಾಘವೇಂದ್ರ ರಾಜ್‌ಕುಮಾರ್‌ ಅವರ 25ನೇ ಸಿನಿಮಾ ಎನ್ನುವುದು ವಿಶೇಷ. ರಾಘವೇಂದ್ರ ರಾಜ್‌ಕುಮಾರ್‌ರ ಕಿರಿಯ ಪುತ್ರ ಯುವರಾಜ್‌ ಕುಮಾರ್‌, ಮೈಸೂರು ಮೂಲದ ಶ್ರೀದೇವಿ ಮದುವೆ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿದ್ದು ಗೊತ್ತೇ ಇದೆ. [ಐವತ್ತಾರರಲ್ಲಿ ಮತ್ತೆ ತಂದೆಯಾದೆ: ರಾಘವೇಂದ್ರ ರಾಜ್‌ಕುಮಾರ್]

ಇನ್ನು ಈಗಷ್ಟೇ ಉಪೇಂದ್ರ ಅಭಿನಯದ 'ಐ ಲವ್ ಯು’ ಸಿನಿಮಾ ಬಿಡುಗಡೆಯಾಗಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೇ ಸಂದರ್ಭದಲ್ಲಿ ಉಪೇಂದ್ರ ಅವರು ರಾಘಣ್ಣನನ್ನು ಭೇಟಿಯಾಗಿರುವುದು ಕುತೂಹಲ ಕೆರಳಿಸಿದೆ. ಇಬರಿಬ್ಬರ ಭೇಟಿ ಕೇವಲ ಉಭಯಕುಶಲೋಪರಿಗಷ್ಟೇ ಸೀಮಿತವೇ ಅಥವಾ ಏನಾದರು ವಿಶೇಷ ಇದೆಯಾ?

ಉಪೇಂದ್ರ ಮತ್ತೆ ಆಕ್ಷನ್ ಕಟ್‌ಗೆ ಮರಳುತ್ತಾರಾ? ರಾಜ್ ಕುಟುಂಬದ ಕುಡಿಯ ಚಿತ್ರವನ್ನೇನಾದರೂ ನಿರ್ದೇಶಿಸುತ್ತಾರಾ ಎಂಬ ಅನುಮಾನಗಳು ಮೂಡಿವೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ರಾಘಣ್ಣ ಈ ರೀತಿ ಬರೆದುಕೊಂಡಿದ್ದಾರೆ, "ಮನೆಗೆ ಬಂದಿದ್ದಕ್ಕೆ ಉಪೇಂದ್ರ ಅವರಿಗೆ ಥ್ಯಾಂಕ್ಸ್. ಅದೇ ಸರಳತನ, ನೀವಿನ್ನೂ ಬದಲಾಗಿಲ್ಲ" ಎಂದಿದ್ದಾರೆ.

ರಾಘಣ್ಣನಿಗೆ ಉಪ್ಪಿ 1999ರಲ್ಲಿ ಸ್ವಸ್ತಿಕ್ (ಚಿನ್ಹೆ) ಸಿನಿಮಾ ನಿರ್ದೇಶಿಸಿದ್ದಾರೆ. ಆ ಸಿನಿಮಾ ಸಾಕಷ್ಟು ಸದ್ದು ಮಾಡಿತ್ತು. ಅದಾದ ಬಳಿಕ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಬರಲೇ ಇಲ್ಲ. ಈಗ ಯುವರಾಜ್ ಕುಮಾರ್‌, ವಿನಯ್ ರಾಜ್‌ಕುಮಾರ್‌ಗೆ ಏನಾದರೂ ಸಿನಿಮಾ ನಿರ್ದೇಶಿಸಲು ಕರೆದಿರಬಹುದೇ? ಎಂಬ ಕುತೂಹಲ ಸಿನಿಮಾ ಅಭಿಮಾನಿಗಳಲ್ಲಿ ಮನೆಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌