ಆ್ಯಪ್ನಗರ

ನಂದಿ ಬೆಟ್ಟದಲ್ಲಿ ಐ ಲವ್‌ ಯೂ ಹೇಳಿದ ಉಪೇಂದ್ರ

ನಟ, ನಿರ್ದೇಶಕ ಉಪೇಂದ್ರ 'ಎ' ಸಿನಿಮಾದಲ್ಲಿ ಪ್ರೀತಿ ಪ್ರೇಮ ಪುಸ್ತಕದ ಬದ್ನೆಕಾಯಿ ಎಂಬ ಡೈಲಾಗ್‌ ಹೊಡೆದು ಫೇಮಸ್‌ ಆಗಿದ್ದರು. ಈ ದೃಶ್ಯವನ್ನು ಶೂಟ್‌ ಮಾಡಿರುವ ಜಾಗದಲ್ಲೇ ಐ ಲವ್‌ ಯು ಸಿನಿಮಾದ ಚಿತ್ರೀಕರಣವಾಗಿದ್ದು, ಅದೇ ಉಪ್ಪಿಯಿಂದ ಪ್ರೀತಿಯ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿಸಿದ್ದಾರೆ ನಿರ್ದೇಶಕ ಆರ್‌.ಚಂದ್ರು.

Vijaya Karnataka 5 Nov 2018, 11:21 am
* ಶರಣು ಹುಲ್ಲೂರು
Vijaya Karnataka Web I LOVE YOU-2


ಉಪೇಂದ್ರ ನಿರ್ದೇಶಿಸಿ, ನಟಿಸಿದ್ದ 'ಎ' ಸಿನಿಮಾದ ಡೈಲಾಗ್‌ ಇಂದಿಗೂ ಫೇಮಸ್‌. ಅದರಲ್ಲೂ 'ಪ್ರೀತಿ ಪ್ರೇಮ ಪುಸ್ತಕದ ಬದ್ನೆಕಾಯಿ' ಎಂದು ಹೇಳುವ ಸಂಭಾಷಣೆಗೆ ಫಿದಾ ಆಗದ ಪಡ್ಡೆಗಳೇ ಇಲ್ಲ. ಬೆಂಗಳೂರಿನ ನಂದಿಬೆಟ್ಟದಲ್ಲಿ ಈ ದೃಶ್ಯವನ್ನು ಸೆರೆ ಹಿಡಿಯಲಾಗಿದ್ದು, ಆ ಜಾಗ ಇಂದಿಗೂ ಪ್ರವಾಸಿಗರಿಗೆ ಫೇವರೆಟ್‌. ಈಗ ಅದೇ ಜಾಗದಲ್ಲೇ ಉಪೇಂದ್ರ ನಟನೆಯ 'ಐ ಲವ್‌ ಯೂ' ಸಿನಿಮಾದ ದೃಶ್ಯವೊಂದನ್ನು ಶೂಟ ಮಾಡಿದ್ದಾರೆ ನಿರ್ದೇಶಕ ಆರ್‌.ಚಂದ್ರು. ಈ ಬಾರಿ ಉಪೇಂದ್ರ ಪ್ರೀತಿ ಪ್ರೇಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಪ್ರೀತಿಗೆ ಬೇರೇನೆ ವ್ಯಾಖ್ಯಾನ ನೀಡಿದ್ದಾರಂತೆ.

'ಉಪೇಂದ್ರ ಅವರ ಎ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಮೂಡಿಸಿತ್ತು. ಲವ್‌ ಸ್ಟೋರಿಯನ್ನೂ ಹೀಗೂ ಯೋಚಿಸಲಿಕ್ಕೆ ಸಾಧ್ಯವಾ ಎಂಬ ಅಚ್ಚರಿ ಮೂಡಿಸಿತ್ತು. ಕ್ಲೈಮ್ಯಾಕ್ಸ್‌ ಅನ್ನು ನಾಲ್ಕೈದು ಬಾರಿ ನೋಡಿದವರೂ ಇದ್ದಾರೆ. ನನಗೂ ಕೂಡ ಈ ಸಿನಿಮಾ ಇಷ್ಟ. ಈ ಕಥೆಗೆ ಬೇರೆ ಟ್ವಿಸ್ಟ್‌ ಕೊಟ್ಟರೆ ಹೇಗೆ ಅಂತ ಯಾವತ್ತೋ ಅನಿಸಿತ್ತು. ಈಗ ಕಾಲ ಕೂಡಿ ಬಂದಿದೆ. ಹಾಗಾಗಿ ಐ ಲವ್‌ ಯೂ ಕಥೆಯಲ್ಲಿ ಉಪೇಂದ್ರ ಅವರಿಗಾಗಿಯೇ ವಿಶೇಷ ದೃಶ್ಯಗಳನ್ನು ಬರೆದುಕೊಂಡಿದ್ದೇನೆ. ಸಂಭಾಷಣೆಯನ್ನೂ ಹೆಣೆದಿದ್ದೇನೆ. ಎ ನೆನಪಿಸುವಂಥ ಹಲವು ಘಟನೆಗಳೂ ಈ ಸಿನಿಮಾದಲ್ಲಿವೆ' ಎಂದರು ನಿರ್ದೇಶಕ ಆರ್‌.ಚಂದ್ರು.

ಉಪೇಂದ್ರ ಕೂಡ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. 'ನಿರ್ದೇಶಕ ಚಂದ್ರು ನನಗಿಂತಲೂ ವಿಭಿನ್ನವಾಗಿ ಯೋಚಿಸಿದ್ದಾರೆ. ಅವರ ದೃಶ್ಯಗಳನ್ನು ವಿವರಿಸುವಾಗ ನನಗೇ ಥ್ರಿಲ್‌ ಅನಿಸುತ್ತಿತ್ತು. ಎ ಸಿನಿಮಾದಂತೆ ಇದು ತಲೆಯಲ್ಲಿ ಹುಳು ಬಿಡಲ್ಲ. ನೇರವಾಗಿ ನೋಡುಗರ ಹೃದಯ ತಟ್ಟುತ್ತದೆ. ಅದರಲ್ಲೂ ನಂದಿಬೆಟ್ಟದ ದೃಶ್ಯ ನನಗಂತೂ ಖುಷಿ ಕೊಟ್ಟಿತು. ಮತ್ತೆ ಮತ್ತೆ ಇತಿಹಾಸ ನೆನಪಿಸುವುದು ಯಾರಿಗಾದರೂ ಥ್ರಿಲ್‌ ನೀಡುತ್ತದೆ' ಎಂದರು.

ಚಂದ್ರು ಮತ್ತು ಉಪೇಂದ್ರ ಕಾಂಬಿನೇಷನ್‌ನ ಎರಡನೇ ಸಿನಿಮಾವಿದೆ. ಬ್ರಹ್ಮ ಕೂಡ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿತ್ತು. ಹೀಗಾಗಿ ಐ ಲವ್‌ ಯೂ ಸಿನಿಮಾದ ಬಗ್ಗೆಯೂ ಅಷ್ಟೇ ಕ್ಯೂರಿಯಾಸಿಟಿ ಮೂಡಿದೆ. ಮೊನ್ನೆಯಷ್ಟೇ ರಿಲೀಸ್‌ ಆದ ಫಸ್ಟ್‌ಲುಕ್‌ನಲ್ಲಿ ಉಪೇಂದ್ರ ಅರೆಬೆತ್ತಲೆಯಾಗಿ ಕಾಣಿಸಿಕೊಂಡು ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌