ರಿಯಲ್ ಸ್ಟಾರ್ ಉಪೇಂದ್ರ 'ನಟ ಭಯಂಕರ' ಚಿತ್ರಕ್ಕಾಗಿ ಹಾಡಿದ್ದಾರೆ. ಇದು ಹೀರೋನನ್ನು ಪರಿಚಯಿಸುವ ಗೀತೆಯಾಗಿದೆ ಎಂದಿದ್ದಾರೆ ನಿರ್ದೇಶಕ, ನಟ ಪ್ರಥಮ್. ಇದೊಂದು ಹೈ ವೋಲ್ಟೇಜ್ ಗೀತೆಯಾಗಿದ್ದು, ಹಾಡು ಕೇಳಿ ಸ್ವತಃ ಉಪ್ಪಿ ಥ್ರಿಲ್ ಆಗಿದ್ದಾರಂತೆ. ಹಾಗಾಗಿ ಈ ಗೀತೆಯನ್ನು ಉಪೇಂದ್ರ ಅವರ ಹುಟ್ಟು ಹಬ್ಬದ ದಿನದಂದು ರಿಲೀಸ್ ಮಾಡುವುದಾಗಿ ಪ್ರಥಮ್ ಹೇಳಿದ್ದಾರೆ.
'ಈ ಹಾಡಿನ ಸಾಹಿತ್ಯ ಮತ್ತು ಸಂಗೀತ ಕೇಳಿದ ಉಪೇಂದ್ರ ಗೀತೆಯ ಬಗ್ಗೆ ಮೆಚ್ಚುಗೆ ಸೂಚಿಸಿದರು. ಸಿನಿಮಾದ ಶೀರ್ಷಿಕೆಗೆ ತಕ್ಕಂತೆ, ಇದು ನಟಭಯಂಕರನ ಗುಣಗಾನ ಮಾಡುವ ಗೀತೆಯಾಗಿದೆ. ಈವರೆಗೂ ಬಂದಿರುವ ನಾಯಕನ ಇಂಟ್ರಡಕ್ಷನ್ ಸಾಂಗ್ಗಿಂತ ಇದು ವಿಭಿನ್ನವಾಗಿ ನಿಲ್ಲುತ್ತದೆ. ನಮ್ಮ ಸಿನಿಮಾ ತಂಡದ ಕಡೆಯಿಂದ ಉಪ್ಪಿ ಅವರ ಬತ್ರ್ಡೇಗೆ ನೀಡುತ್ತಿರುವ ಸ್ಪೆಷಲ್ ಗಿಫ್ಟ್ ಇದಾಗಿದೆ. ಸ್ವತಃ ಉಪೇಂದ್ರ ಅವರೇ ಈ ಹಾಡನ್ನು ರಿಲೀಸ್ ಮಾಡಲಿದ್ದಾರೆ' ಎಂದರು ಪ್ರಥಮ್.
ಭುವನ್ ಕ್ಷಮೆ ಕೇಳಿದ ಪ್ರಥಮ್: ತೊಡೆ ಕಚ್ಚಿದ ಪ್ರಕರಣ ಸುಖಾಂತ್ಯ
'ಈ ಗೀತೆಯನ್ನು ಉಪೇಂದ್ರ ಅವರೇ ಹಾಡಬೇಕು ಎನ್ನುವುದು ನನ್ನ ಆಸೆ ಆಗಿತ್ತು. ಹಾಗಾಗಿ ಅವರನ್ನು ಕೇಳಿಕೊಂಡೆ. ಸಾಹಿತ್ಯ ಮತ್ತು ಸಂಗೀತ ಕೇಳಿದ ನಂತರ ಖುಷಿಯಿಂದ ಅವರು ಹಾಡಿದರು. ಈ ವರ್ಷದ ಹಿಟ್ ಹಾಡುಗಳ ಸಾಲಿನಲ್ಲಿಇದು ಸೇರಲಿದೆ. ಮೇಕಿಂಗ್ ಕೂಡ ತುಂಬಾ ಚೆನ್ನಾಗಿ ಮೂಡಿ ಬಂದಿದೆ' ಎನ್ನುವುದು ಪ್ರಥಮ್ ಮಾತು.
'ಈ ಹಾಡಿನ ಸಾಹಿತ್ಯ ಮತ್ತು ಸಂಗೀತ ಕೇಳಿದ ಉಪೇಂದ್ರ ಗೀತೆಯ ಬಗ್ಗೆ ಮೆಚ್ಚುಗೆ ಸೂಚಿಸಿದರು. ಸಿನಿಮಾದ ಶೀರ್ಷಿಕೆಗೆ ತಕ್ಕಂತೆ, ಇದು ನಟಭಯಂಕರನ ಗುಣಗಾನ ಮಾಡುವ ಗೀತೆಯಾಗಿದೆ. ಈವರೆಗೂ ಬಂದಿರುವ ನಾಯಕನ ಇಂಟ್ರಡಕ್ಷನ್ ಸಾಂಗ್ಗಿಂತ ಇದು ವಿಭಿನ್ನವಾಗಿ ನಿಲ್ಲುತ್ತದೆ. ನಮ್ಮ ಸಿನಿಮಾ ತಂಡದ ಕಡೆಯಿಂದ ಉಪ್ಪಿ ಅವರ ಬತ್ರ್ಡೇಗೆ ನೀಡುತ್ತಿರುವ ಸ್ಪೆಷಲ್ ಗಿಫ್ಟ್ ಇದಾಗಿದೆ. ಸ್ವತಃ ಉಪೇಂದ್ರ ಅವರೇ ಈ ಹಾಡನ್ನು ರಿಲೀಸ್ ಮಾಡಲಿದ್ದಾರೆ' ಎಂದರು ಪ್ರಥಮ್.
ಭುವನ್ ಕ್ಷಮೆ ಕೇಳಿದ ಪ್ರಥಮ್: ತೊಡೆ ಕಚ್ಚಿದ ಪ್ರಕರಣ ಸುಖಾಂತ್ಯ
'ಈ ಗೀತೆಯನ್ನು ಉಪೇಂದ್ರ ಅವರೇ ಹಾಡಬೇಕು ಎನ್ನುವುದು ನನ್ನ ಆಸೆ ಆಗಿತ್ತು. ಹಾಗಾಗಿ ಅವರನ್ನು ಕೇಳಿಕೊಂಡೆ. ಸಾಹಿತ್ಯ ಮತ್ತು ಸಂಗೀತ ಕೇಳಿದ ನಂತರ ಖುಷಿಯಿಂದ ಅವರು ಹಾಡಿದರು. ಈ ವರ್ಷದ ಹಿಟ್ ಹಾಡುಗಳ ಸಾಲಿನಲ್ಲಿಇದು ಸೇರಲಿದೆ. ಮೇಕಿಂಗ್ ಕೂಡ ತುಂಬಾ ಚೆನ್ನಾಗಿ ಮೂಡಿ ಬಂದಿದೆ' ಎನ್ನುವುದು ಪ್ರಥಮ್ ಮಾತು.