ಆ್ಯಪ್ನಗರ

"ಸ್ಟಾರ್ ವಾರ್ ಇರಬೇಕು, ಚೆನ್ನಾಗಿರತ್ತೆ" ಎಂದಿದ್ದೇಕೆ ರಿಯಲ್ ಸ್ಟಾರ್ ಉಪೇಂದ್ರ?

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವುದು ಸ್ಟಾರ್ ವಾರ್. ಎರಡು ನಟರ ಮಧ್ಯೆ ಈಗ ಈ ಸ್ಟಾರ್ ವಾರ್ ಥಳುಕು ಹಾಕಿಕೊಂಡಿದೆ. ಇವರಿಬ್ಬರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಚ್ಚಾಡಿಕೊಳ್ಳುತ್ತಿದ್ದಾರೆ. ಸ್ಟಾರ್ ವಾರ್ ಬಗ್ಗೆ ಉಪೇಂದ್ರ ಮಾತನಾಡಿದ್ದಾರೆ.

Vijaya Karnataka Web 18 Sep 2019, 3:39 pm
ಮಧ್ಯರಾತ್ರಿಯಿಂದ ಉಪ್ಪಿ ಹುಟ್ಟುಹಬ್ಬ ಸಂಭ್ರಮ ಶುರುವಾಗಿತ್ತು. 'ಬುದ್ಧಿವಂತ 2' ಸಿನಿಮಾದವರು ತಂದಿದ್ದ ಕೇಕ್ ಕಟ್ ಮಾಡಿದ ಉಪೇಂದ್ರರಿಗೆ ತುಂಬ ಜನರು ಗಿಡ ತಂದುಕೊಟ್ಟಿದ್ದರು. ಇದನ್ನು ಪ್ರಜಾಕೀಯದ ಮೂಲಕ ಬೇರೆ ಬೇರೆ ಕಡೆ ಕಳಿಸಿ ಪೋಷಿಸಲಾಗುತ್ತದೆ ಎಂದಿದ್ದಾರೆ ಉಪ್ಪಿ. ಈ ಸಮಯದಲ್ಲಿ ಸ್ಟಾರ್ ವಾರ್ ಬಗ್ಗೆ ಉಪೇಂದ್ರ ಮಾತನಾಡಿದ್ದಾರೆ.
Vijaya Karnataka Web upendra


ಇತ್ತೀಚಿನ ದಿನಗಳಲ್ಲಿ ಸ್ಟಾರ್ ವಾರ್ ಹೆಚ್ಚಾಗುತ್ತಿದೆ. ಅಭಿಮಾನಿಗಳು ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಪರಸ್ಪರ ಒಬ್ಬರ ಮೇಲೆ ಒಬ್ಬರು ಆರೋಪ ಮಾಡಿಕೊಳ್ಳುತ್ತ ಜಗಳವಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಪೇಜ್‌ಗಳಲ್ಲಂತೂ ಹಿಗ್ಗಾಮುಗ್ಗಾ ಒಬ್ಬರ ಮೇಲೆ ಅಸಭ್ಯ, ಅಶ್ಲೀಲ ಭಾಷಾ ಪ್ರಯೋಗದಿಂದಾಗಿ ಕಾದಾಡುತ್ತಿದ್ದಾರೆ. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಅಲ್ಲ. ಈ ಹಿನ್ನೆಲೆಯಲ್ಲಿ ನಟ ಉಪೇಂದ್ರ ಎಂದಿಗೂ ವಾದ, ಸ್ಟಾರ್ ವಾರ್‌ನಿಂದ ದೂರ. ಯಾರ ಮೇಲೂ ದೂರು ನೀಡುತ್ತ ಕೂರುವವರಲ್ಲ. ತಾವಾಯಿತು, ತಮ್ಮ ಸಿನಿಮಾ ಕೆಲಸವಾಯಿತು, ಪ್ರಜಾಕೀಯವಾಯಿತು, ಸಾಮಾಜಿಕ ಕೆಲಸವಾಯಿತು ಎಂದಿರುತ್ತಾರೆ. ಆದರೆ ಉಪ್ಪಿ ಹೊಸ ವಿಷಯಗಳನ್ನು ತಿಳಿದುಕೊಳ್ಳಲು, ವಿಚಾರವನ್ನು ಬೇರೆ ಬೇರೆ ದೃಷ್ಟಿಕೋನದಲ್ಲಿ ವಿಶ್ಲೇಷಿಸಿಕೊಳ್ಳಲು ಇಷ್ಟಪಡುತ್ತಾರೆ.

ಸ್ಟಾರ್ ವಾರ್ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಉಪೇಂದ್ರ " ಇದೆಲ್ಲ ಇರಲಿ. ಚೆನ್ನಾಗಿರತ್ತೆ, ಸಿನಿಮಾದಲ್ಲಿ ಅದೆಲ್ಲ ಸ್ವಲ್ಪ ಸ್ವಲ್ಪ ಇರಬೇಕು. ಸ್ಟಾರ್ ವಾರ್ ಚೆನ್ನಾಗಿದೆ ಹೆಸರು. ಸಿನಿಮಾದಲ್ಲೂ ಸಣ್ಣ ಸ್ಪರ್ಧೆ ಇರಬೇಕು. ಆದರೆ ಅದು ದೊಡ್ಡದಾಗಿರಬಾರದು. ಮಾಧ್ಯಮಗಳಿಗೂ ಟೈಮ್‌ಪಾಸ್ ಆಗತ್ತೆ. ಯಾವ ಸಿನಿಮಾ ಎಷ್ಟು ಬಜೆಟ್ ಆಯ್ತು, ಇವರದ್ದೆಷ್ಟು ಬಜೆಟ್ ಆಯ್ತು. ಸಿನಿಮಾ ಅಂತಂದುಕೂಡಲೇ ರಾಜಕೀಯಕ್ಕೆ ಬರ್ತಾರೆ. ಸಿನಿಮಾ ಬೇರೆ, ರಾಜಕೀಯ ಬೇರೆ. ಸಿನಿಮಾದಲ್ಲಿ ಹಾಗೆಲ್ಲ ಮಾಡ್ತೀರಾ. ರಾಜಕೀಯದಲ್ಲಿ ಮಾಡಬಾರದಾ ಅಂತ ಕೇಳ್ತಾರೆ. ಸಿನಿಮಾದಲ್ಲಿ ಕಟೌಟ್ ನಿಲ್ಲಿಸ್ತೀರಾ, ರಾಜಕೀಯದಲ್ಲಿ ವಿಚಾರ ನಿಲ್ಲಿಸಿ. ಸಿನಿಮಾ, ಜೀವನ ಬೇರೆ ಬೇರೆ. ರಾಜಕೀಯದವರು ಸಿನಿಮಾಕ್ಕೆ ಬರೋದು, ಸಿನಿಮಾದವರು ರಾಜಕೀಯಕ್ಕೆ ಬರೋದೆ ಆಗಿದೆ. ಪ್ರಜಾಕೀಯದ ಬಗ್ಗೆ ತಿಳಿದುಕೊಳ್ಳಿ" ಎಂದಿದ್ದಾರೆ ಉಪೇಂದ್ರ.

"ನನ್ನ ಅನ್ನದಾತರನ್ನು ಕೆಣಕದಿರಿ" ಎಂದು ದರ್ಶನ್ ವಾರ್ನ್ ಮಾಡಿದ್ದು ಯಾರಿಗೆ
ಉಪೇಂದ್ರ ಅವರ ನಿರ್ದೇಶನದಲ್ಲಿ 'ತರ್ಲೆ ನನ್ ಮಗ, ಶ್!!, ಓಂ, ಆಪರೇಶನ್ ಅಂತ, A, ಸ್ವಸ್ತಿಕ್, ಉಪೇಂದ್ರ, ಸೂಪರ್, '
ನಿರ್ದೇಶನದ ಬಗ್ಗೆ ಪ್ರಶ್ನೆ ಮಾಡಿದಾಗ "ಒಂದು ವಿಷಯ ರೆಡಿ ಇದೆ. ಸದ್ಯದಲ್ಲೇ ಅದನ್ನು ಸರ್ಪ್ರೈಸ್ ಆಗಿ ರಿವೀಲ್ ಮಾಡ್ತೀನಿ" ಎಂದಷ್ಟೇ ಹೇಳಿದ್ದಾರೆ ಅಭಿಮಾನಿಗಳ ಚಕ್ರವರ್ತಿ.

ಚರ್ಚೆಗೆ ಕಾರಣವಾದ ದರ್ಶನ್‌ ಟ್ವೀಟ್‌
ಹುಟ್ಟುಹಬ್ಬದ ಸಮಯದಲ್ಲಿ ಅಭಿಮಾನಿಗಳು 'ಮುಂದಿನ ಮುಖ್ಯಮಂತ್ರಿ ಉಪ್ಪಿಗೆ ಜೈ' ಎಂದು ಜೈಕಾರ ಹಾಕಿದ್ದು ವಿಶೇಷವಾಗಿತ್ತು. ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಅಭಿಮಾನಿಗಳು ಫೋಟೋಗಾಗಿ ಮುಗಿಬಿದ್ದರು. ಉಪ್ಪಿ ಸಿನಿಮಾ ಟೈಟಲ್‌, ಕಥೆ, ಉಡುಗೆಗಳುಯಾವಾಗಲೂ ಡಿಫೆರೆಂಟ್ ಆಗಿರುತ್ತವೆ. ಉಪ್ಪಿ ಸಿನಿಮಾ ಟೈಟಲ್, ಕಥೆ, ಡ್ರೆಸ್ ಯಾವಾಗಲೂ ಡಿಫೆರೆಂಟ್ ಆಗಿರುತ್ತವೆ. ಇತ್ತೀಚೆಗಷ್ಟೇ 'ಕಬ್ಜ' ಎನ್ನುವ ಸಿನಿಮಾ ಸೆಟ್ಟೇರಿದೆ. ಈ ಸಿನಿಮಾದಲ್ಲಿ ಉಪೇಂದ್ರ ಲಾಂಗ್ ಹಿಡಿದಿದ್ದರೆ. 'ಓಂ' ಸಿನಿಮಾದಲ್ಲಿ ಶಿವಣ್ಣಗೆ ಮಚ್ಚು ಹಿಡಿಸಿದ್ದ ಉಪ್ಪಿ ಈ ಬಾರಿ 'ಕಬ್ಜ' ಸಿನಿಮಾದಲ್ಲಿ ಲಾಂಗ್ ಹಿಡಿಯಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌