ಆ್ಯಪ್ನಗರ

ಧನುಷ್‌ ತಂದೆ ಚಿತ್ರದಲ್ಲಿ ಕನ್ನಡದ ಹುಡುಗಿ ವೈಷ್ಣವಿ

ಕನ್ನಡದ ಹುಡುಗಿ ವೈಷ್ಣವಿ ಚಂದ್ರನ್‌ ಮೆನನ್‌ ತಮಿಳಿನ ಖ್ಯಾತ ನಿರ್ದೇಶಕ ಕಸ್ತೂರಿ ರಾಜ್‌ ಅವರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಜಾಕಿ ಶ್ರಾಪ್‌ ಕೂಡ ನಟಿಸುತ್ತಿದ್ದಾರೆ.

Vijaya Karnataka 12 Apr 2019, 5:00 am
ತಮಿಳಿನ ಖ್ಯಾತ ನಟ ಧನುಷ್‌ ಅವರ ತಂದೆ ಕಸ್ತೂರಿ ರಾಜ್‌ ನಿರ್ದೇಶನದ 'ಪಾಂಡಿ ಮುನಿ' ಸಿನಿಮಾದಲ್ಲಿ ನನಗೆ ನಟಿಸಲು ಅವಕಾಶ ಸಿಕ್ಕಿದ್ದು ಸಂಭ್ರಮದ ಸಂಗತಿ ಎನ್ನುತ್ತಾರೆ ಕನ್ನಡದ ಹುಡುಗಿ ವೈಷ್ಣವಿ ಚಂದ್ರನ್‌ ಮೆನನ್‌. ತಮಿಳಿನ ಹೆಸರಾಂತ ನಿರ್ದೇಶಕರಾದ ಇವರು, ಕನ್ನಡದ ಈ ಹುಡುಗಿಯನ್ನು ಆಯ್ಕೆ ಮಾಡಿಕೊಳ್ಳಲು ಕಾರಣ ವೈಷ್ಣವಿ ಅವರ ಶಿಸ್ತು.
Vijaya Karnataka Web vaishnavi


'ನಾನು ಸಿಕ್ಕ ಸಿಕ್ಕ ಪಾತ್ರಗಳನ್ನು ಒಪ್ಪಿಕೊಳ್ಳಲಾರೆ. ನನಗೆ ಇಷ್ಟವಾಗುವಂತಹ ಪಾತ್ರ ಮತ್ತು ಕಥೆ ಇದ್ದರೆ ಮಾತ್ರ ನಟಿಸುತ್ತೇನೆ. ಹಾಗಾಗಿ ಒಳ್ಳೊಳ್ಳೆ ಚಿತ್ರಗಳಲ್ಲಿ ನಟಿಸಲು ಅವಕಾಶ ಸಿಗುತ್ತಿದೆ. ಕಸ್ತೂರಿ ರಾಜ್‌ ಅವರಂಥ ದಿಗ್ಗಜರ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು, ಅದು ನನಗೆ ಸಿಕ್ಕ ಗೌರವ ಎಂದು ಭಾವಿಸುತ್ತೇನೆ' ಎನ್ನುತ್ತಾರೆ ವೈಷ್ಣವಿ.

ಕನ್ನಡದಲ್ಲಿ ಶ್ರೀಮಂತ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುತ್ತಿರುವ ಇವರು, ತಮಿಳಿನಲ್ಲಿ ಎರಡು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಮತ್ತೊಂದು ಚಿತ್ರಕ್ಕೆ ವಿಲ್ಸಂಟ್‌ ಸೆಲ್ವಾ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಇವರು ಕೂಡ ಹೆಸರಾಂತ ನಿರ್ದೇಶಕರು ಎನ್ನುವುದು ವಿಶೇಷ.

'ಕನ್ನಡದಲ್ಲಿ ಶ್ರೀಮಂತ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಶ್ರೀಮಂತ ಚಿತ್ರದಲ್ಲಿ ನನ್ನದು ಹಳ್ಳಿ ಹುಡುಗಿಯ ಪಾತ್ರ. ಹಾಗಂತ ಬರೀ ಒಂದೇ ಬಗೆಯ ಪಾತ್ರವನ್ನು ನಾನು ಒಪ್ಪಿಕೊಳ್ಳಲಾರೆ. ಎಲ್ಲ ರೀತಿಯ ಪಾತ್ರಗಳನ್ನೂ ಮಾಡುವ ಆಸೆ ನನ್ನದು' ಎನ್ನುವುದು ವೈಷ್ಣವಿ ಮಾತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌