ತಮಿಳಿನ ಖ್ಯಾತ ನಟ ಧನುಷ್ ಅವರ ತಂದೆ ಕಸ್ತೂರಿ ರಾಜ್ ನಿರ್ದೇಶನದ 'ಪಾಂಡಿ ಮುನಿ' ಸಿನಿಮಾದಲ್ಲಿ ನನಗೆ ನಟಿಸಲು ಅವಕಾಶ ಸಿಕ್ಕಿದ್ದು ಸಂಭ್ರಮದ ಸಂಗತಿ ಎನ್ನುತ್ತಾರೆ ಕನ್ನಡದ ಹುಡುಗಿ ವೈಷ್ಣವಿ ಚಂದ್ರನ್ ಮೆನನ್. ತಮಿಳಿನ ಹೆಸರಾಂತ ನಿರ್ದೇಶಕರಾದ ಇವರು, ಕನ್ನಡದ ಈ ಹುಡುಗಿಯನ್ನು ಆಯ್ಕೆ ಮಾಡಿಕೊಳ್ಳಲು ಕಾರಣ ವೈಷ್ಣವಿ ಅವರ ಶಿಸ್ತು.
'ನಾನು ಸಿಕ್ಕ ಸಿಕ್ಕ ಪಾತ್ರಗಳನ್ನು ಒಪ್ಪಿಕೊಳ್ಳಲಾರೆ. ನನಗೆ ಇಷ್ಟವಾಗುವಂತಹ ಪಾತ್ರ ಮತ್ತು ಕಥೆ ಇದ್ದರೆ ಮಾತ್ರ ನಟಿಸುತ್ತೇನೆ. ಹಾಗಾಗಿ ಒಳ್ಳೊಳ್ಳೆ ಚಿತ್ರಗಳಲ್ಲಿ ನಟಿಸಲು ಅವಕಾಶ ಸಿಗುತ್ತಿದೆ. ಕಸ್ತೂರಿ ರಾಜ್ ಅವರಂಥ ದಿಗ್ಗಜರ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು, ಅದು ನನಗೆ ಸಿಕ್ಕ ಗೌರವ ಎಂದು ಭಾವಿಸುತ್ತೇನೆ' ಎನ್ನುತ್ತಾರೆ ವೈಷ್ಣವಿ.
ಕನ್ನಡದಲ್ಲಿ ಶ್ರೀಮಂತ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುತ್ತಿರುವ ಇವರು, ತಮಿಳಿನಲ್ಲಿ ಎರಡು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಮತ್ತೊಂದು ಚಿತ್ರಕ್ಕೆ ವಿಲ್ಸಂಟ್ ಸೆಲ್ವಾ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇವರು ಕೂಡ ಹೆಸರಾಂತ ನಿರ್ದೇಶಕರು ಎನ್ನುವುದು ವಿಶೇಷ.
'ಕನ್ನಡದಲ್ಲಿ ಶ್ರೀಮಂತ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಶ್ರೀಮಂತ ಚಿತ್ರದಲ್ಲಿ ನನ್ನದು ಹಳ್ಳಿ ಹುಡುಗಿಯ ಪಾತ್ರ. ಹಾಗಂತ ಬರೀ ಒಂದೇ ಬಗೆಯ ಪಾತ್ರವನ್ನು ನಾನು ಒಪ್ಪಿಕೊಳ್ಳಲಾರೆ. ಎಲ್ಲ ರೀತಿಯ ಪಾತ್ರಗಳನ್ನೂ ಮಾಡುವ ಆಸೆ ನನ್ನದು' ಎನ್ನುವುದು ವೈಷ್ಣವಿ ಮಾತು.
'ನಾನು ಸಿಕ್ಕ ಸಿಕ್ಕ ಪಾತ್ರಗಳನ್ನು ಒಪ್ಪಿಕೊಳ್ಳಲಾರೆ. ನನಗೆ ಇಷ್ಟವಾಗುವಂತಹ ಪಾತ್ರ ಮತ್ತು ಕಥೆ ಇದ್ದರೆ ಮಾತ್ರ ನಟಿಸುತ್ತೇನೆ. ಹಾಗಾಗಿ ಒಳ್ಳೊಳ್ಳೆ ಚಿತ್ರಗಳಲ್ಲಿ ನಟಿಸಲು ಅವಕಾಶ ಸಿಗುತ್ತಿದೆ. ಕಸ್ತೂರಿ ರಾಜ್ ಅವರಂಥ ದಿಗ್ಗಜರ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು, ಅದು ನನಗೆ ಸಿಕ್ಕ ಗೌರವ ಎಂದು ಭಾವಿಸುತ್ತೇನೆ' ಎನ್ನುತ್ತಾರೆ ವೈಷ್ಣವಿ.
ಕನ್ನಡದಲ್ಲಿ ಶ್ರೀಮಂತ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುತ್ತಿರುವ ಇವರು, ತಮಿಳಿನಲ್ಲಿ ಎರಡು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಮತ್ತೊಂದು ಚಿತ್ರಕ್ಕೆ ವಿಲ್ಸಂಟ್ ಸೆಲ್ವಾ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇವರು ಕೂಡ ಹೆಸರಾಂತ ನಿರ್ದೇಶಕರು ಎನ್ನುವುದು ವಿಶೇಷ.
'ಕನ್ನಡದಲ್ಲಿ ಶ್ರೀಮಂತ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಶ್ರೀಮಂತ ಚಿತ್ರದಲ್ಲಿ ನನ್ನದು ಹಳ್ಳಿ ಹುಡುಗಿಯ ಪಾತ್ರ. ಹಾಗಂತ ಬರೀ ಒಂದೇ ಬಗೆಯ ಪಾತ್ರವನ್ನು ನಾನು ಒಪ್ಪಿಕೊಳ್ಳಲಾರೆ. ಎಲ್ಲ ರೀತಿಯ ಪಾತ್ರಗಳನ್ನೂ ಮಾಡುವ ಆಸೆ ನನ್ನದು' ಎನ್ನುವುದು ವೈಷ್ಣವಿ ಮಾತು.