ಆ್ಯಪ್ನಗರ

ತಾರೆಯರ ಮನೆಗಳಲ್ಲಿ ಸಂಭ್ರಮದ ವರಮಹಾಲಕ್ಷ್ಮಿ

ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷ ಮದುವೆಯಾಗಿರುವ ತಾರೆಯರು ಸಡಗರದಿಂದ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ...

Vijaya Karnataka Web 4 Aug 2017, 5:00 am

ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷ ಮದುವೆಯಾಗಿರುವ ತಾರೆಯರು ಸಡಗರದಿಂದ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಕುರಿತು ಅವರು ಲವಲವಿಕೆ ಜತೆ ಮಾತಾಡಿದ್ದಾರೆ.

Vijaya Karnataka Web varamahalakshmi celebration
ತಾರೆಯರ ಮನೆಗಳಲ್ಲಿ ಸಂಭ್ರಮದ ವರಮಹಾಲಕ್ಷ್ಮಿ


ಮದುವೆಯ ನಂತರ ಮೊದಲ ವರ ಮಹಾಲಕ್ಷ್ಮಿ ಹಬ್ಬವನ್ನು ಸಡಗರದಿಂದ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ನಟಿಯರಾದ ರಾಧಿಕಾ ಪಂಡಿತ್‌, ಅಮೂಲ್ಯ ಮತ್ತು ದೀಪಿಕಾ ಕಾಮಯ್ಯ. ಮೊನ್ನೆಯಷ್ಟೇ ಚೂಡಿ ಹಬ್ಬವನ್ನು ಬಲು ಸಂಭ್ರಮದಿಂದ ಆಚರಿಸಿರುವ ರಾಧಿಕಾ ಪಂಡಿತ್‌, ವರಮಹಾಲಕ್ಷ್ಮಿ ಹಬ್ಬಕ್ಕಾಗಿಯೂ ವಿಶೇಷ ರೀತಿಯಲ್ಲಿ ತಯಾರಿ ಮಾಡಿಕೊಂಡಿದ್ದಾರೆ.

ವರಮಹಾಲಕ್ಷ್ಮೇ ಹಬ್ಬ ನನಗೆ ಯಾವತ್ತೂ ವಿಶೇಷವೇ. ಇದೇ ಹಬ್ಬದ ದಿನದಂದೇ ಯಶ್‌ ಮೊದಲ ಬಾರಿಗೆ ತಮ್ಮ ಮನೆಗೆ ನನ್ನನ್ನು ಕರೆದುಕೊಂಡು ಹೋಗಿ ಅವರ ತಂದೆ ತಾಯಿಗೆ ಪರಿಚಯ ಮಾಡಿಸಿದ್ದರು. ಇದು ನಿಜಕ್ಕೂ ಸದಾ ನೆನಪಿನಲ್ಲಿ ಉಳಿಯುವ ಸಂಗತಿ. ಹಾಗೆಯೇ ನಮ್ಮ ನಿಶ್ಚಿತಾರ್ಥ ನಡೆದಿದ್ದು ವರಮಹಾ ಲಕ್ಷ್ಮೇ ಹಬ್ಬದ ದಿನವೇ. ಈ ವರ್ಷ ನಾನು ಅತ್ತೆ ಮನೆಯಲ್ಲೇ ಹಬ್ಬ ಮಾಡುತ್ತಿದ್ದೇನೆ.

ಮದ್ವೆಯಾದ ಮೇಲೆ ಇದು ನನ್ನ ಮೊದಲ ವರಮಹಾ ಲಕ್ಷ್ಮೇ ಹಬ್ಬ. ತುಂಬಾ ಎಕ್ಸೈಟ್‌ ಆಗಿದ್ದೇನೆ. ಹಬ್ಬಕ್ಕಾಗಿ ಹೊಸ ರೇಷ್ಮೆ ಸೀರೆ ತೆಗೆದುಕೊಂಡಿದ್ದೇನೆ. ನನಷ್ಟೇ ಅಲ್ಲ ನಾಡಿನ ಎಲ್ಲರಿಗೂ ವರಮಹಾಲಕ್ಷ್ಮೇ ದಯೆ ಇರಬೇಕು ಎಂದು ಪ್ರಾರ್ಥಿಸುತ್ತೇನೆ ಎಂದು ನಟಿ ರಾಧಿಕಾ ಪಂಡಿತ್‌ ತಿಳಿಸಿದ್ದಾರೆ.

ಅಮೂಲ್ಯ ಸದ್ಯಕ್ಕೆ ನ್ಯೂಜಿಲೆಂಡ್‌ನಲ್ಲಿದ್ದು ತವರು ಮನೆಯ ಈ ಹಬ್ಬವನ್ನು ಮಿಸ್‌ ಮಾಡಿಕೊಳ್ಳುತ್ತಿದ್ದಾರಂತೆ. ಮುಂದಿನ ಗೌರಿ ಹಬ್ಬವನ್ನು ಜೋರಾಗಿ ಆಚರಿಸುವುದಾಗಿ ಅವರು ಹೇಳಿದ್ದಾರೆ. 'ಈಗ ವಿದೇಶ ಪ್ರವಾಸದಲ್ಲಿದ್ದೇನೆ. ಹಾಗಾಗಿ ವರಮಹಾಲಕ್ಷ್ಮಿ ಹಬ್ಬವನ್ನು ಇಲ್ಲಿಂದಲೇ ಆಚರಿಸುತ್ತಿದ್ದೇನೆ. ಮತ್ತೊಂದು ದೊಡ್ಡ ಹಬ್ಬವಾದ ಗೌರಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಿದ್ದೇವೆ' ಎಂದು ತಿಳಿಸಿದ್ದಾರೆ.

'ವರಮಹಾಲಕ್ಷ್ಮಿ ಹಬ್ಬ ಅನ್ನುವುದು ಪ್ರತಿ ಮಹಿಳೆಗೂ ಮಹತ್ವದ ಹಬ್ಬ. ಹಾಗಾಗಿ ಎಲ್ಲ ಮಹಿಳೆಯರಿಗೂ ಈ ಮೂಲಕ ಶುಭ ಕೋರುತ್ತೇನೆ. ಹಬ್ಬಗಳು ಸಮಾಜಕ್ಕೆ ನೆಮ್ಮದಿಯ ದಿನಗಳನ್ನು ಕೊಡಲಿ' ಅನ್ನುವುದು ದೀಪಿಕಾ ಕಾಮಯ್ಯ' ಮಾತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌