ಆ್ಯಪ್ನಗರ

ಮೂವರು ನಾಯಕಿಯರ ಜತೆ ಒರಟ ಪ್ರಶಾಂತ್‌ ಡ್ಯುಯೆಟ್‌

ಇದೊಂದು ಪಕ್ಕಾ ಲವ್‌ಸ್ಟೋರಿ ಆಗಿದ್ದು, ಮೂವರು ನಾಯಕಿಯರು ಯಾವೆಲ್ಲ ಪಾತ್ರಗಳನ್ನು ನಿರ್ವಹಿಸಿದ್ದಾರೆ ಎಂಬ ಕ್ಯೂರಿಯಾಸಿಟಿ ಕೂಡ ಮೂಡಿದೆ

Vijaya Karnataka 20 Nov 2018, 8:36 am
ಒರಟ ಪ್ರಶಾಂತ್‌ 'ಯಾರಿಗೆ ಯಾರುಂಟು' ಸಿನಿಮಾದ ಮೂಲಕ ಮತ್ತೆ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್‌ ಆಗಿದ್ದಾರೆ. ಈ ಸಿನಿಮಾದಲ್ಲಿ ಅವರು ಮೂವರು ನಾಯಕಿಯರ ಜತೆ ಡ್ಯುಯೆಟ್‌ ಹಾಡುತ್ತಿದ್ದಾರೆ. ಅದಿತಿ ರಾವ್‌, ಲೇಖಚಂದ್ರ ಮತ್ತು ಕೃತಿಕಾ ರವೀಂದ್ರ ನಾಯಕಿಯರಾಗಿ ನಟಿಸಿದ್ದು, ಮೂವರೂ ವಿಭಿನ್ನ ಪಾತ್ರ ಮಾಡಿದ್ದಾರಂತೆ.
Vijaya Karnataka Web Varata Prashant


ಇದೊಂದು ಪಕ್ಕಾ ಲವ್‌ಸ್ಟೋರಿ ಆಗಿದ್ದು, ಮೂವರು ನಾಯಕಿಯರು ಯಾವೆಲ್ಲ ಪಾತ್ರಗಳನ್ನು ನಿರ್ವಹಿಸಿದ್ದಾರೆ ಎಂಬ ಕ್ಯೂರಿಯಾಸಿಟಿ ಕೂಡ ಮೂಡಿದೆ. ಈಗಾಗಲೇ ರಿಲೀಸ್‌ ಆಗಿರುವ ಟ್ರೇಲರ್‌ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

'ಇದೊಂದು ಫ್ಯಾಮಿಲಿ ಎಂಟರ್‌ಟೈನ್ಮೆಂಟ್‌ ಚಿತ್ರ. ಯುವಕರಿಗೆ ಕನೆಕ್ಟ್ ಆಗುವಂಥ ಹಲವು ಅಂಶಗಳು ಸಿನಿಮಾದಲ್ಲಿವೆ. ತ್ರಿಕೋನ ಪ್ರೇಮಕಥೆ ಅನ್ನುವುದಕ್ಕಿಂತ ಫ್ರೆಶ್‌ ಲವ್‌ಸ್ಟೋರಿ ಹೇಳುವ ಪ್ರಯತ್ನ ಈ ಸಿನಿಮಾದಲ್ಲಿ ಆಗಿದೆ. ಪ್ರತಿ ಪಾತ್ರಕ್ಕೂ ತಮ್ಮದೇ ಆದ ಮಹತ್ವವಿದೆ. ಅಲ್ಲದೇ, ನಮ್ಮ ಬದುಕಿಗೆ ಅನೇಕ ಅಂಶಗಳು ಕನೆಕ್ಟ್ ಆಗುತ್ತವೆ. ಹಾಗಾಗಿ ಇದೊಂದು ಎಲ್ಲರ ನೆಚ್ಚಿನ ಸಿನಿಮಾ ಆಗಲಿದೆ' ಅಂತಾರೆ ಪ್ರಶಾಂತ್‌.

ಕಿರಣ್‌ ಗೋವಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದ್ದು, ಪಾರು ವೈಫ್‌ ಆಫ್‌ ದೇವದಾಸ್‌ ಚಿತ್ರದ ನಂತರ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ ನಿರ್ದೇಶಕರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌