ಆ್ಯಪ್ನಗರ

ರಜನಿಕಾಂತ್ 2.0 ಚಿತ್ರ ಬಿಡುಗಡೆಗೆ ಬೆಂಗಳೂರಿನಲ್ಲಿ ವಿರೋಧ

ರಾಜ್ಯದಲ್ಲಿ 2.0 ಚಿತ್ರ ಬಿಡುಗಡೆಯಾಗಿರುವುದನ್ನು ವಿರೋಧಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಊರ್ವಶಿ ಚಿತ್ರಮಂದಿರ ಬಳಿ ಗುರುವಾರ ಧರಣಿ ನಡೆಸಿದರು.

Vijaya Karnataka Web 29 Nov 2018, 12:45 pm
ತಮಿಳು ನಟ ರಜನಿಕಾಂತ್, ಬಾಲಿವುಡ್ ಆ್ಯಕ್ಷನ್ ಹೀರೋ ಅಕ್ಷಯ್ ಕುಮಾರ್ ಮತ್ತು ಎಮಿ ಜಾಕ್ಸನ್ ಮುಖ್ಯಭೂಮಿಕೆಯಲ್ಲಿರುವ 2.0 ಸಿನಿಮಾ ಕರ್ನಾಟಕದಲ್ಲೂ ಇಂದು ಬಿಡುಗಡೆಯಾಗಿದೆ. ರಾಜ್ಯದಲ್ಲಿ 2.0 ಚಿತ್ರ ಬಿಡುಗಡೆಯಾಗಿರುವುದನ್ನು ವಿರೋಧಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಊರ್ವಶಿ ಚಿತ್ರಮಂದಿರ ಬಳಿ ಗುರುವಾರ ಧರಣಿ ನಡೆಸಿದರು.
Vijaya Karnataka Web ambarish


ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್, "ಕನ್ನಡ ಚಿತ್ರಗಳಿಗೆ ಮಾನ್ಯತೆ ಬೇಕು. ಪರಭಾಷೆ ಚಿತ್ರಗಳು ಇಲ್ಲಿ ಬಿಡುಗಡೆಯಾವುದು ಬೇಡ. ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣ ಮತ್ತು ಕೇರಳದಲ್ಲಿ ಕನ್ನಡ ಇಲ್ಲ. ಕರ್ನಾಟಕದಲ್ಲಿ ತಮಿಳು, ತೆಲುಗು, ಮಲಯಾಳಂ ಪರಭಾಷಾ ಚಿತ್ರಗಳನ್ನು ಯಾಕೆ ಬಿಡುಗಡೆ ಮಾಡಬೇಕು? ಎಂದು ಪ್ರಶ್ನಿಸಿದರು.

ಪರಭಾಷಾ ಚಿತ್ರಗಳು ಒಂದು ತಿಂಗಳು ನಮ್ಮ ರಾಜ್ಯದಲ್ಲಿ ಬಿಡುಗಡೆಯಾಗುವುದು ಬೇಡ. ಒಂದು ತಿಂಗಳ ಬಳಿಕ ಇಲ್ಲಿನ ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಲಿ ಎಂದು ವಾಟಾಳ್ ಗುಡುಗಿದರು. ಪರಭಾಷಾ ಚಿತ್ರವನ್ನು ವಿರೋಧಿಸಿ ಊರ್ವಶಿ ಚಿತ್ರಮಂದಿರ ಬಳಿ ಕನ್ನಡ ಪರ ಸಂಘಟನೆಗಳು ಧರಣಿ ನಡೆಸಿದವು.

ರಜನಿಕಾಂತ್ ಅಭಿನಯದ 2.0 ಸಿನಿಮಾ ಇಂದು ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ತೆರೆಕಂಡಿದೆ. ಲೈಕಾ ಸಂಸ್ಥೆ ನಿರ್ಮಿಸಿರುವ ಈ ಸಿನಿಮಾದ ಸ್ಯಾಟಲೈಟ್ ಹಕ್ಕುಗಳು 120 ಕೋಟಿಗೆ ಮಾರಾಟವಾಗಿದ್ದು, ಮೂರು ಭಾಷೆಯ ಡಿಜಿಟಲ್ ರೈಟ್ಸ್ 60 ಕೋಟಿ ರೂ.ಗಳಿಗೆ ಮಾರಾಟವಾಗಿವೆ.

ಕರ್ನಾಟಕದ ವಿತರಣಾ ಹಕ್ಕುಗಳು 25 ಕೋಟಿಗೆ ಮಾರಾಟವಾಗಿವೆ. ಅದೇ ರೀತಿ ಆಂಧ್ರಪ್ರದೇಶ-ತೆಲಂಗಾಣ ಮತ್ತು ಕೇರಳ ವಿತರಣಾ ಹಕ್ಕುಗಳು ಕ್ರಮವಾಗಿ 70 ಕೋಟಿ ರೂ. ಮತ್ತು 15 ಕೋಟಿ ರೂ.ಗಳಿಗೆ ಮಾರಾಟವಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌