ಆ್ಯಪ್ನಗರ

ಚಿತ್ರ ನಿರ್ದೇಶಕನೊಬ್ಬ ನನ್ನನ್ನು ರೂಮಿಗೆ ಆಹ್ವಾನಿಸಿದ್ದ: ನಟಿ ವಿದ್ಯಾ ಬಾಲನ್

ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ತಮಿಳು ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವವನ್ನು ಖ್ಯಾತ ತಾರೆ ವಿದ್ಯಾ ಬಾಲನ್ ಹಂಚಿಕೊಂಡಿದ್ದಾರೆ. ತಮಿಳು ಚಿತ್ರರಂಗದ ನಿರ್ದೇಶಕನೊಬ್ಬ ತನ್ನನ್ನು ರೂಮಿಗೆ ಆಹ್ವಾನಿಸಿದ್ದ ಎಂದು ಹೇಳಿ ಹೊಸ ವಿವಾದಕ್ಕೆ ಕಿಡಿ ಹೊತ್ತಿಸಿದ್ದಾರೆ.

Vijaya Karnataka Web 28 Aug 2019, 12:12 pm

ಬಣ್ಣದ ಜಗತ್ತಿನಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯವನ್ನು ಈಗಾಗಲೆ ಹಲವಾರು ಮಂದಿ ತಾರೆಗಳು ಬಯಲಿಗೆಳೆದಿದ್ದಾರೆ. ಈ ಬಗ್ಗೆ #MeToo ಅಭಿಯಾನವನ್ನೇ ಆರಂಭಿಸಿದರು. ಕಾಸ್ಟಿಂಗ್ ಕೌಚ್ ಹೆಸರಲ್ಲಿ ನಟಿಯರನ್ನು ನಂಬಿಸಿ ವಂಚಿಸಲಾಗುತ್ತಿದೆ ಎಂದು ಹಲವಾರು ಮಂದಿ ತಾರೆಗಳು ಮೌನ ಮುರಿದಿದ್ದಾರೆ. ಕರಿಯರ್‌ನ ಆರಂಭದಲ್ಲಿ ತಮಿಳು ಚಿತ್ರರಂಗದಲ್ಲಿ ತನಗೂ ಇದೇ ರೀತಿಯ ಅನುಭವ ಎದುರಾಯಿತು ಎಂದಿದ್ದಾರೆ ಖ್ಯಾತ ನಟಿ ವಿದ್ಯಾ ಬಾಲನ್.
Vijaya Karnataka Web vidya-balan


ಇತ್ತೀಚೆಗೆ ವಿದ್ಯಾ ಬಾಲನ್ ನಟನೆಯ 'ಮಿಷನ್ ಮಂಗಳ್' ಸಿನಿಮಾ ಯಶಸ್ವಿಯಾದ ಸಂದರ್ಭದಲ್ಲಿ ವಿದ್ಯಾ ಬಾಲನ್ ಸಂದರ್ಶನ ನೀಡಿದ್ದು ಇದರಲ್ಲಿ ಹಲವಾರು ಸಂಗತಿಗಳನ್ನು ಹೇಳಿಕೊಂಡಿದ್ದಾರೆ. ಕರಿಯರ್ ಆರಂಭದಲ್ಲಿ ದಕ್ಷಿಣದ ಚಿತ್ರೋದ್ಯಮಕ್ಕೆ ಸಂಬಂಧಿಸಿದ ನಿರ್ದೇಶಕರೊಬ್ಬರು ತನ್ನನ್ನು ರೂಮಿಗೆ ಬರುವಂತೆ ಹೇಳಿದ್ದರು ಎಂದು ಹೇಳುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.
ನನ್ನ ದೇಹ ಬಗ್ಗೆ ನಾನೇ ಬೇಸರಿಸಿಕೊಂಡ ದಿನಗಳಿವೆ: ವಿದ್ಯಾ ಬಾಲನ್

ಇದಿಷ್ಟೇ ಅಲ್ಲದೆ ಇನ್ನೊಬ್ಬ ನಿರ್ಮಾಪಕ ನನ್ನನ್ನು ನೋಡಿ ನಿನ್ನದು ಹೀರೋಯಿನ್ ಮುಖನಾ? ಎಂದಿದ್ದಾಗಿ ಅಂದಿನ ಕಹಿ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. "ಆ ದಿನ ನನಗೆ ಇನ್ನೂ ನೆನಪಿದೆ. ನಾನು ಚೆನ್ನೈನಲ್ಲಿ ಇದ್ದಾಗ ನಿರ್ದೇಶಕರೊಬ್ಬರು ನನ್ನನ್ನು ಭೇಟಿಯಾಗಲು ಬಂದು, ನಿಮ್ಮೊಂದಿಗೆ ಮಾತನಾಡಬೇಕು ರೂಮಿನೊಳಕ್ಕೆ ಹೋಗೋಣ ಎಂದ. ಕಾಫಿ ಶಾಪ್‍ನಲ್ಲಿ ಕುಳಿತು ಮಾತನಾಡಿಕೊಳ್ಳೋಣ ಎಂದರೆ ಒಪ್ಪಲಿಲ್ಲ..."

"ಹೋಗಲಿ ಎಂದು ಹೋಟೆಲ್ ರೂಮಿಗೆ ಹೋದರೆ, ಆ ವ್ಯಕ್ತಿ ಕೂಡಲೆ ರೂಮಿನ ಬಾಗಿಲು ಹಾಕಿ ನನ್ನೊಂದಿಗೆ ವಿಚಿತ್ರವಾಗಿ ವರ್ತಿಸಿದ. ನನಗೆ ಕೋಪ ಬಂದು ಜೋರಾಗಿ ಕೂಗಿ ಬಾಗಿಲು ತೆಗೆದು ಇಲ್ಲಿಂದ ಹೋಗು ಎಂಬಂತೆ ನೋಡಿದೆ. ಕೂಡಲೆ ಆತ ಅಲ್ಲಿಂದ ಹೊರಟು ಹೋದ" ಎಂದು ಎಳೆಎಳೆಯಾಗಿ ತಮಗಾದ ಅನುಭವನ್ನು ಬಿಡಿಸಿಟ್ಟಿದ್ದಾರೆ.
ವೀಡಿಯೊದಲ್ಲಿ ಕಣ್ಣೀರಿಟ್ಟ ನಟಿ ವಿದ್ಯಾ ಬಾಲನ್

"ಕರಿಯರ್ ಆರಂಭದಲ್ಲಿ ನನ್ನ ತಂದೆತಾಯಿಯೊಂದಿಗೆ ಸಿನಿಮಾ ಅವಕಾಶಕ್ಕಾಗಿ ನಿರ್ಮಾಪಕರೊಬ್ಬರನ್ನು ಭೇಟಿಯಾಗಲು ಹೋದರೆ... ಆತ ನನ್ನನ್ನು ನೋಡಿ ನಿನ್ನದು ಹೀರೋಯಿನ್ ಮುಖನಾ?" ಎಂದು ಅಪಮಾನ ಮಾಡಿದರು ಎಂದಿದ್ದಾರೆ. ಆ ಬಳಿಕ ವಿದ್ಯಾ ಬಾಲನ್ ಸಿನಿಮಾಗಳಲ್ಲಿ ನಟಿಸಿ ಹೆಸರು ಗಳಿಸಿದ್ದು ಬೆಳ್ಳಿಪರದೆ ಮೇಲೆ ತಮ್ಮದೇ ಛಾಪು ಮೂಡಿಸಿದ್ದು ಗೊತ್ತೇ ಇದೆ. ಇತ್ತೀಚೆಗೆ ಅಕ್ಷಯ್ ಕುಮಾರ್ ಜತೆಗಿನ ಮಿಷನ್ ಮಂಗಳ್ ಚಿತ್ರ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಗೆದ್ದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌