ಆ್ಯಪ್ನಗರ

ಕೊಡಗು ಪ್ರವಾಹ: ನೊಂದವರಿಗಾಗಿ ಟೊಂಕಕಟ್ಟಿದ ನಟರು

ಕೊಡಗಿನಲ್ಲಿ ಭೀಕರ ದುರಂತ ಸಂಭವಿಸಿ ವಾರವಾಗುತ್ತಾ ಬಂದಿದೆ. ನಟರಾದ ಸಂಚಾರಿ ವಿಜಯ್‌, ಚೇತನ್‌ ಮತ್ತು ಒರಟ ಪ್ರಶಾಂತ್‌ ನಿರಂತರವಾಗಿ ಸಂತ್ರಸ್ತರ ಮಧ್ಯೆ ಕೆಲಸ ಮಾಡುತ್ತಿರುವುದು ಪ್ರಶಂಸೆ ಗಳಿಸಿದೆ.

Vijaya Karnataka 24 Aug 2018, 12:10 pm
ಕೊಡಗಿನಾದ್ಯಂತ ಜನರು ಮಳೆಯ ಅಬ್ಬರಕ್ಕೆ ತತ್ತರಿಸುತ್ತಿದ್ದಂತೆ ಅವರ ಸಹಾಯಕ್ಕೆ ಧಾವಿಸಿದ ನಟ ಸಂಚಾರಿ ವಿಜಯ್‌ ಕಳೆದ 5 ದಿನಗಳಿಂದ ಕೊಡಗಿನಲ್ಲೇ ಇದ್ದಾರೆ. ಜನ ಸಾಮಾನ್ಯರಲ್ಲಿ ಒಬ್ಬರಾಗಿ ಹಗಲು ರಾತ್ರಿ ಎನ್ನದೆ ನಿರಾಶ್ರಿತ ಶಿಬಿರಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವುದು ಮಾತ್ರವಲ್ಲದೆ, ರಿಮೋಟ್‌ ಏರಿಯಾಗಳಲ್ಲಿ ಮನೆಗಳಲ್ಲಿ ಸಿಕ್ಕಿಕೊಂಡ ಕೂಲಿ ಕಾರ್ಮಿಕರಿಗೆ ಬೇಕಾದ ವ್ಯವಸ್ಥೆ ಕಲ್ಪಿಸಿಕೊಡುತ್ತಿದ್ದಾರೆ. ಪೀಪಲ್‌ ಫಾರ್‌ ಕೂರ್ಗ್‌ ತಂಡವನ್ನು ಕಟ್ಟಿಕೊಂಡು ಚರ್ಕವರ್ತಿ ಚಂದ್ರಚೂಡ್‌, ನಜ್ಮಾ, ಒರಟ ಪ್ರಶಾಂತ್‌, ವಿನುತಾ ಮತ್ತಿತರರ ತಂಡದೊಂದಿಗೆ ಸುಮಾರು 15ಕ್ಕೂ ಹೆಚ್ಚು ಊರುಗಳಿಗೆ ಹೋಗಿ ಅಗತ್ಯ ವಸ್ತುಗಳನ್ನು ನೀಡಿದ್ದಾರೆ. ಇದರ ಜತೆ ಜಿಲ್ಲಾ ಅಧಿಕಾರಿಯೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
Vijaya Karnataka Web chetan1


'ನಾವು ಹೋಗುವ ದಾರಿಯಲ್ಲಿ ಈಗಲೂ ದಿಬ್ಬಗಳು ಕುಸಿಯುತ್ತಿವೆ. ಭಯವಾಗುತ್ತಿತ್ತು. ಇಲ್ಲಿನ ಜನರ ಬದುಕಿನ ಚಿತ್ರಣ ಇನ್ನು ಒಂದು ತಿಂಗಳಾದ ನಂತರ ಸಿಗಲಿದೆ. ಅದು ಇನ್ನೂ ಭೀಕರ. ಕೂಲಿ ಸಿಗದ ಸ್ಥಿತಿಯಲ್ಲಿದ್ದಾರೆ. ಹೊಟ್ಟೆಪಾಡಿಗೆ ಏನು ಮಾಡುತ್ತಾರೆ ಗೊತ್ತಾಗುತ್ತಿಲ್ಲ. ಈಗ ನಾವು ಇಂಥವರನ್ನು ಗುರುತಿಸಿ ಊರುಗಳಿಗೆ ಹೋಗಿ ಹಂಚುತ್ತಿದ್ದೇವೆ. ಈ ಸಂದರ್ಭದಲ್ಲಿ ಜನರಿಂದ ಹರಿದು ಬಂದ ಸಹಾಯವನ್ನು ನೋಡಿದಾಗ ನಿಜಕ್ಕೂ ತುಂಬಾ ಸಂತೋಷವಾಯ್ತು. ಜನರಲ್ಲಿ ಮಾನವೀಯತೆ, ಪ್ರೀತಿಯ ಸೆಲೆ ಕಾಣುತ್ತಿದೆ' ಎಂದಿದ್ದಾರೆ ಸಂಚಾರಿ ವಿಜಯ್‌.

ಇನ್ನು ಚೇತನ್‌ ದುಬಾರಿ ಬೆಲೆಯ ಇ ಟಾಯ್ಲೆಟ್‌ಗಳನ್ನು ಚೆನ್ನೈನಿಂದ ತರಿಸಿದ್ದು, ಇದರ ಜತೆ ತುರ್ತು ಅಗತ್ಯ ವಸ್ತುಗಳೊಂದಿಗೆ ಹೋಗಿದ್ದಾರೆ. ದುರಂತ ಸಂಭವಿಸಿದಾಗಿನಿಂದ ತಮ್ಮ 'ಯುವ ಕರ್ನಾಟಕ' ತಂಡದೊಂದಿಗೆ ಲಾರಿಗಳಲ್ಲಿ ವಸ್ತುಗಳನ್ನು ತುಂಬಿಕೊಂಡು ಹೋಗಿ ಹಂಚುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌