ಆ್ಯಪ್ನಗರ

ರಶ್ಮಿಕಾ ಜತೆ 'ಲಿಪ್‌ ಲಾಕ್' ಸೀನ್ ನೈಜವಾದುದಲ್ಲ: ವಿಜಯ್ ದೇವರಕೊಂಡ

"ನಾನು ರಶ್ಮಿಕಾ ಜತೆ ಮಾಡುವ 'ಕಿಸ್ಸಿಂಗ್' ಸೀನ್ ನೈಜವಾದುದಲ್ಲ, ಅದು ಕೃತಕ. ಸನ್ನಿವೇಶಕ್ಕೆ ಅಗತ್ಯವಿದೆ ಎಂದು ನಿರ್ದೇಶಕರು ಹೇಳಿದರೆ ನಾನು 'ಚೇರ್'ಗೆ ಸಹ ಕಿಸ್ ಮಾಡುತ್ತೇನೆ. ಕಲಾವಿದನಾಗಿ ಅದು ನನ್ನ ಕರ್ತವ್ಯ. ಕಿಸ್ ಸೀನ್‌ಗೆ ಕ್ಲಾರಿಟಿ ಕೊಡು ಮೂಲಕ ನಟ ವಿಜಯ್ ರಶ್ಮಿಕಾ ಜೊತೆ ಕಾಣಿಸಿಕೊಂಡ ಕಿಸ್ಸಿಂಗ್​ ದೃಶ್ಯಗಳಲ್ಲಿ ಯಾವುದೇ ನೈಜತೆ ಇಲ್ಲ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.

Vijaya Karnataka Web 29 Jul 2019, 12:02 pm
ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಅಭಿನಯದ 'ಡಿಯರ್ ಕಾಮ್ರೇಡ್' ಚಿತ್ರವು 'ಕಿಸ್ಸಿಂಗ್' ಸೀನ್ ಮೂಲಕ ಬಹಳಷ್ಟು ಸದ್ದು-ಸುದ್ದಿ ಮಾಡಿದೆ. ನಟಿ ರಶ್ಮಿಕಾ ಹಾಗೂ ನಟ ವಿಜಯ್ ದೇವರಕೊಂಡ ನಡುವಿನ 'ಲಿಪ್ ಲಾಕ್' ದೃಶ್ಯವು ಭಾರೀ ವೈರಲ್ ಆಗಿದೆ. ಮೀಡಿಯಾ ಸೇರಿದಂತೆ ಬಹಳಷ್ಟು ಕಡೆಗಳಲ್ಲಿ ನಟ ವಿಜಯ್ ದೇವರಕೊಂಡ ಅವರಿಗೆ ಈ 'ಕಿಸ್ಸಿಂಗ್ ದೃಶ್ಯ'ದ ಬಗ್ಗೆಯೇ ಪ್ರಶ್ನೆಗಳು ತೂರಿ ಬರುತ್ತಿವೆ. ಪದೇ ಪದೇ ತೂರಿಬಂದ ಈ ಪ್ರಶ್ನೆಗಳಿಂದ ಸುಸ್ತಾಗಿರುವ ವಿಜಯ್, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ಬಗ್ಗೆ ಸ್ಪಷ್ಟತೆ ಕೊಟ್ಟಿದ್ದಾರೆ.
Vijaya Karnataka Web vijay-rashmika2907


ಈ ಮೊದಲು 'ಗೀತ ಗೋವಿಂದಂ' ಚಿತ್ರದಲ್ಲಿನ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ನಡುವಿನ 'ಲಿಪ್ ಲಾಕ್' ದೃಶ್ಯವು ಸಹ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸೌಂಡ್ ಮಾಡಿತ್ತು. ಅದೇ ಸಮಯದಲ್ಲಿ ನಟ ರಕ್ಷಿತ್ ಶೆಟ್ಟಿ-ರಶ್ಮಿಕಾ ಲವ್ ಬ್ರೇಕಪ್ ಸಹ ಆಗಿತ್ತು. ವಿಜಯ್-ರಶ್ಮಿಕಾ ನಡುವಿನ 'ಲಿಪ್‌ ಲಾಕ್' ಸೀನ್ ಕಾರಣಕ್ಕೇ ರಕ್ಷಿತ್-ರಶ್ಮಿಕಾ ಬ್ರೇಕಪ್ ಆಗಿದೆ ಎಂಬ ಸುದ್ದಿ ಹರಡಿತ್ತು. ಈ ಎಲ್ಲ ಸಂಗತಿ ತಿಳಿದು ಬೇಸತ್ತಿರುವ ವಿಜಯ್ ದೇವರಕೊಂಡ 'ಕಿಸ್ಸಿಂಗ್ ದೃಶ್ಯ'ಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ತಮ್ಮ 'ಡಿಯರ್ ಕಾಮ್ರೇಡ್' ಸಿನಿಮಾದ ಪ್ರಮೋಷನ್ನಲ್ಲಿ ಪಾಲ್ಗೊಂಡಿದ್ದ ವಿಜಯ್ ಈ ಬಗ್ಗೆ ಹೇಳಿಕೊಂಡಿದ್ದಾರೆ. "ರಶ್ಮಿಕಾ ಜೊತೆ ಯಾವುದೇ ಭಾವನೆ ಇಟ್ಟುಕೊಂಡು ಕಿಸ್ ಮಾಡುವುದಿಲ್ಲ. ಸಿನಿಮಾಗೆ ಅಗತ್ಯವಿದೆ ಎಂದಾದರೆ ನಾನು ಯಾರ ಜೊತೆ ಬೇಕಿದ್ದರೂ ಕಿಸ್ ಮಾಡಲು ಸಿದ್ಧ. ಲಿಪ್ ಲಾಕ್ ದೃಶ್ಯಗಳನ್ನು ನಿರ್ಧಾರ ಮಾಡುವುದು ನಾನಲ್ಲ, ನಿರ್ದೇಶಕರು. ಸಿನಿಮಾ ಯಾವ ದೃಶ್ಯವನ್ನು ಬೇಡುತ್ತದೆಯೋ ಅದನ್ನು ನಾನು ಕೊಡುತ್ತೇನೆ" ಎಂದು ವಿಜಯ್ ದೇವರಕೊಂಡ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಕ್ಲಾರಿಟಿ ಕೊಡಲು ಪ್ರಯತ್ನಿಸಿರುವ ವಿಜಯ್ ದೇವರಕೊಂಡ "ಸನ್ನಿವೇಶಕ್ಕೆ ಅಗತ್ಯವಿದ್ದರೆ ರಶ್ಮಿಕಾ ಬದಲು ಅಲ್ಲೊಂದು ಕೂರ್ಚಿ ಇದ್ದರೂ ನಾನು ಕಿಸ್ ಮಾಡುತ್ತೇನೆ. ನಾನೊಬ್ಬ ನಟನಾಗಿ ಅದನ್ನು ಮಾಡಲೇಬೇಕು. ಸಿನಿಮಾಕ್ಕಾಗಿ ಕ್ಯಾಮರಾ ಮುಂದೆ ಮಾಡುವು ಯಾವುದೇ ನಟನೆಯಲ್ಲಿ 'ನೈಜತೆ' ಇರುವುದಿಲ್ಲ. ನಾನು ಕಲಾವಿದನಾಗಿ ನಟಿಸುತ್ತೇನೆ ಅಷ್ಟೇ. ನಾವು ಕೃತಕವಾಗಿ ಮಾಡುವುದು ನೋಡುಗರಿಗೆ ನೈಜವಾಗಿ ಕಾಣಿಸುತ್ತದೆ. ಆದರೆ ಅದು ಕೃತಕ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು" ಎಂದು ಹೇಳಿದ್ದಾರೆ ವಿಜಯ್ ದೇವರಕೊಂಡ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌