ಆ್ಯಪ್ನಗರ

ಕನ್ನಡಕ್ಕೆ ಬಂದ ವಿಜಯ್‌ ಸೇತುಪತಿ

ಜಿಗರ್‌ಥಂಡ, ಹೃದಯದಲ್ಲಿ ಇದೇನಿದು, ತ್ರಾಟಕ ಚಿತ್ರಗಳನ್ನು ನಿರ್ದೇಶನ ಮಾಡಿರುವ ಶಿವಗಣೇಶ್‌ ಈಗ 'ಅಖಾಡ'ಕ್ಕೆ ತಮಿಳಿನ ಜನಪ್ರಿಯ ನಟ ವಿಜಯ್‌ ಸೇತುಪತಿ ಅವರನ್ನು ಕರೆತಂದಿದ್ದಾರೆ.

Vijaya Karnataka 9 Jul 2018, 5:00 am
ಜಿಗರ್‌ಥಂಡ, ಹೃದಯದಲ್ಲಿ ಇದೇನಿದು, ತ್ರಾಟಕ ಚಿತ್ರಗಳನ್ನು ನಿರ್ದೇಶನ ಮಾಡಿರುವ ಶಿವಗಣೇಶ್‌ ಈಗ 'ಅಖಾಡ'ಕ್ಕೆ ತಮಿಳಿನ ಜನಪ್ರಿಯ ನಟ ವಿಜಯ್‌ ಸೇತುಪತಿ ಅವರನ್ನು ಕರೆತಂದಿದ್ದಾರೆ. ಇರೈವಿ ಚಿತ್ರ ಖ್ಯಾತಿಯ ವಿಜಯ್‌ ಸೇತುಪತಿ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದು, ನೆಗೆಟಿವ್‌ ಶೇಡ್‌ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Vijaya Karnataka Web vijay_sethupathi_kaka


ಈ ಚಿತ್ರ ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ನಿರ್ಮಾಣವಾಗುತ್ತಿದೆ. ವಸಂತ್‌ ವಿಷ್ಣು ಮತ್ತು ನಯನ ಚಿತ್ರದಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ರಂಭಾ ಚಿತ್ರದಲ್ಲಿ ನಟಿಸಿದ್ದ ನಯನ ಕೃಷ್ಣ ಮತ್ತೆ ನಾಯಕಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಸೆಟ್ಟೇರಿದ್ದ ಚಿತ್ರ ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಚಿತ್ರೀಕರಣ ಪ್ರಾರಂಭವಾಗಿದ್ದು, ವಿಜಯ್‌ ಸೇತುಪತಿ ಮೂಲಕ ಚಿತ್ರಕ್ಕೆ ಇನ್ನಷ್ಟು ಜೀವ ತುಂಬ ಕೆಲಸವನ್ನು ನಿರ್ದೇಶಕರು ಮಾಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌