ಆ್ಯಪ್ನಗರ

ಕನ್ನಡದ ಪದ್ಮಾವತಿಗೆ ವಿಕ್ರಮ್ ಆರ್ಯ ಹೀರೋ

ತಲೆ ಬಾಚ್ಕೊಳ್ಳಿ ಪೌಡ್ರು ಹಾಕ್ಕೊಳ್ಳಿ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದ ಉತ್ತರ ಕರ್ನಾಟಕದ ಪ್ರತಿಭೆ ವಿಕ್ರಮ್‌ ಆರ್ಯ, ಈಗ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ.

Vijaya Karnataka 25 May 2019, 5:00 pm
ಸಿನಿಮಾ ರಂಗದಲ್ಲಿ ಉತ್ತರ ಕರ್ನಾಟಕದ ನಟರು ಕಡಿಮೆ. ಈಗ ಆ ಕೊರತೆಯನ್ನು ನೀಗಿಸುವಂಥ ಕಲಾವಿದರು ಈಗ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಅವರಲ್ಲಿ ವಿಕ್ರಮ್‌ ಆರ್ಯ ಕೂಡ ಒಬ್ಬರು. ಈ ಹಿಂದೆ ತಲೆ ಬಾಚ್ಕೊಳ್ಳಿ ಪೌಡ್ರು ಹಾಕ್ಕೊಳ್ಳಿ ಚಿತ್ರ ಮಾಡಿದ್ದ ಇವರು, ಈಗ ಪದ್ಮಾವತಿ ಎಂಬ ಮತ್ತೊಂದು ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಮೂಲಕ ಸಮಾಜಕ್ಕೆ ಒಂದೊಳ್ಳೆ ಸಂದೇಶವನ್ನು ನೀಡಲಿದ್ದಾರೆ.
Vijaya Karnataka Web vikram-arya


'ಮೊದಲ ಸಿನಿಮಾವನ್ನು ನಿರ್ದೇಶಕರು ಕಮರ್ಷಿಯಲ್‌ ಆಗಿ ಮಾಡಿದ್ದರು. ಈ ಸಿನಿಮಾದಲ್ಲಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಲಿದ್ದೇವೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾದರೂ, ನಾಯಕನ ಪಾತ್ರಕ್ಕೂ ತನ್ನದೇ ಆದ ಮಹತ್ವವಿದೆ. ಮಹಿಳಾ ಸಂವೇದನೆ ಹೊಂದಿರುವ ಸಿನಿಮಾವಿದು' ಎನ್ನುತ್ತಾರೆ ವಿಕ್ರಮ್‌ ಆರ್ಯ.

ಇದೊಂದು ಹೊಸ ಬಗೆಯ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಹೊಸ ಬಗೆಯ ಪಾತ್ರ ಮಾಡಿದ್ದಾರಂತೆ ವಿಕ್ರಮ್‌. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸಿನಿಮಾ ಸದ್ದು ಮಾಡಲಿದೆಯಂತೆ.

ಈ ಚಿತ್ರವನ್ನು ಮಿಥುನ್‌ ಚಂದ್ರಶೇಖರ್‌ ನಿರ್ದೇಶನ ಮಾಡಿದ್ದು, ಸಾಕ್ಷಿ ಮೇಘನಾ ನಾಯಕಿಯಾಗಿ ನಟಿಸಿದ್ದಾರೆ. 'ಮಹಿಳೆಯರ ಬದುಕನ್ನು ಕಟ್ಟಿಕೊಡುವಂಥ ಚಿತ್ರ ಮಾಡಬೇಕು ಎನ್ನುವುದು ನನ್ನ ಆಸೆ ಆಗಿತ್ತು. ಅದು ಎರಡನೇ ಸಿನಿಮಾದಲ್ಲೇ ಈಡೇರುತ್ತಿದೆ. ಹಾಗಂತ ಇಲ್ಲಿ ಕಮರ್ಷಿಯಲ್‌ ಅಂಶಗಳು ಇಲ್ಲ ಅಂದುಕೊಳ್ಳಬೇಕಿಲ್ಲ. ಪ್ರೇಕ್ಷಕರಿಗೆ ಇಷ್ಟವಾಗುವಂಥ ಎಲ್ಲ ಅಂಶಗಳನ್ನು ಬೆರೆಸಿಕೊಂಡು ಸಿನಿಮಾ ಮಾಡಿದ್ದೇವೆ. ಇದೊಂದು ಅತ್ಯುತ್ತಮ ಸಿನಿಮಾ ಆಗಲಿದೆ ಎಂಬ ನಂಬಿಕೆ ನನ್ನದು' ಎನ್ನುತ್ತಾರೆ ವಿಕ್ರಮ್‌. ಇದೊಂದು ಕಲರ್‌ಫುಲ್‌ ಸಿನಿಮಾವಾಗಿದ್ದು, ಹಲವು ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಿದ್ದಾರಂತೆ ನಿರ್ದೇಶಕರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌