ಆ್ಯಪ್ನಗರ

ವಿಕ್ರಂ ನಟಿಸಬೇಕಿದ್ದ ಚಿತ್ರ ಅಮರ್‌

ರವಿಚಂದ್ರನ್‌ ಪುತ್ರ ವಿಕ್ರಂ ಹೀರೊ ಆಗಿ 'ತ್ರಿವಿಕ್ರಮ' ಚಿತ್ರದಲ್ಲಿ ನಟಿಸಲಿದ್ದು, ಇದು ಸದ್ಯದಲ್ಲೇ ಸೆಟ್ಟೇರಲಿದೆ. ಇದಕ್ಕೂ ಮೊದಲು ಅಭಿಷೇಕ್‌ ನಟನೆಯ ಅಮರ್‌ ಚಿತ್ರದಲ್ಲಿ ನಟಿಸಬೇಕಿತ್ತು, ಆದರೆ ಅದು ಕೈತಪ್ಪಿತು ಎಂದಿದ್ದಾರೆ ವಿಕ್ರಂ.

Vijaya Karnataka 21 Jun 2019, 5:00 am
ರವಿಚಂದ್ರನ್‌ ಪುತ್ರ ವಿಕ್ರಂ ಹೀರೊ ಆಗಿ 'ತ್ರಿವಿಕ್ರಮ' ಚಿತ್ರದಲ್ಲಿ ನಟಿಸಲಿದ್ದು, ಇದು ಸದ್ಯದಲ್ಲೇ ಸೆಟ್ಟೇರಲಿದೆ. ಇದಕ್ಕೂ ಮೊದಲು ಅಭಿಷೇಕ್‌ ನಟನೆಯ ಅಮರ್‌ ಚಿತ್ರದಲ್ಲಿ ನಟಿಸಬೇಕಿತ್ತು, ಆದರೆ ಅದು ಕೈತಪ್ಪಿತು ಎಂದಿದ್ದಾರೆ ವಿಕ್ರಂ.
Vijaya Karnataka Web vikram ravichandra


ಅಭಿಷೇಕ್‌ ನಟನೆಯ ಮೊದಲ ಚಿತ್ರ ಅಮರ್‌. 'ಈ ಚಿತ್ರದಲ್ಲಿ ನಾನು ನಟಿಸಬೇಕಾಗಿತ್ತು. ಆಗ ಈ ಚಿತ್ರಕ್ಕೆ ನವೆಂಬರ್‌ನಲ್ಲಿ ನಾನು ಅವಳು ಎಂದು ಹೆಸರಿಡಲಾಗಿತ್ತು. ಕತೆ ಕೇಳಿ ನಾನು ಬಹಳ ಥ್ರಿಲ್‌ ಆಗಿದ್ದೆ. ಒಳ್ಳೆಯ ತಂಡ, ಒಳ್ಳೆಯ ನಿರ್ದೇಶಕ, ಜನಪ್ರಿಯ ಬ್ಯಾನರ್‌ ಎಲ್ಲವೂ ಇದಕ್ಕೆ ಕಾರಣವಾಗಿತ್ತು. ಎಲ್ಲಾ ರೀತಿಯಿಂದಲೂ ದೊಡ್ಡ ಸಿನಿಮಾ ಆಗಿತ್ತು. ಸುಮಾರು 20-25 ಬಾರಿ ಕತೆಯ ನರೇಷನ್‌ ಕೇಳಿಸಿಕೊಂಡಿದ್ದೆ. ಇವತ್ತಿನ ಟ್ರೆಂಡ್‌ಗೆ ತಕ್ಕದ್ದಾಗಿತ್ತು. ಚಿತ್ರಕ್ಕಾಗಿ ನಾನು ತಯಾರಿ ನಡೆಸಿದ್ದೆ. ಆದರೆ, 2 ತಿಂಗಳ ನಂತರ ಎಲ್ಲವೂ ಬದಲಾಗಿತ್ತು. ನಿರ್ದೇಶಕ ನಾಗಶೇಖರ್‌ ಅಭಿಷೇಕ್‌ ಅವರಿಗಾಗಿ ಕತೆಯಲ್ಲಿ ಬದಲಾವಣೆ ಮಾಡಿಕೊಂಡಿದ್ದರು. ಇದರಿಂದ ನನಗೆ ಏನೂ ಆಗಲಿಲ್ಲ ಎಂದರೆ ಸುಳ್ಳಾಗುತ್ತದೆ. ನನ್ನ ಮೇಲೆ ಪರಿಣಾಮ ಬೀರಿದ್ದು ನಿಜ. ಆಗ ನನಗೆ ಸಿಗಬೇಕಾಗಿದ್ದು, ಈಗ 'ತ್ರಿವಿಕ್ರಮ' ಚಿತ್ರದಲ್ಲಿ ಸಿಕ್ಕಿದೆ' ಎಂದು ತಮ್ಮ ಭಾವನೆಗಳನ್ನು ತೋಡಿಕೊಂಡಿದ್ದಾರೆ.

ಚಿತ್ರದಲ್ಲಿ ಲವ್‌ ಸ್ಟೋರಿ ಇದ್ದು, ನಾಯಕಿಗಾಗಿ ಆಡಿಷನ್‌ ಮಾಡಲಿದ್ದಾರೆ. ಸಹನಾ ಮೂರ್ತಿ ಚಿತ್ರ ನಿರ್ದೇಶನ ಮಾಡಲಿದ್ದಾರೆ. 'ನಾನು ನಿರ್ದೇಶಕ-ನಟ ಆಗಲು ಬಯಸುತ್ತೇನೆ. ಹಲವು ಸ್ಕ್ರಿಪ್ಟ್‌ಗಳನ್ನು ಈಗಾಗಲೇ ಬರೆದು ಸಿದ್ಧ ಮಾಡಿಟ್ಟುಕೊಂಡಿದ್ದೇನೆ. ಆದಷ್ಟು ಬೇಗ ಚಿತ್ರ ನಿರ್ದೇಶನ ಮಾಡಲಿದ್ದೇನೆ. ಇದಕ್ಕೆ ನನ್ನ ಸಹೋದರ ಮನೋರಂಜನ್‌ ಇದಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ' ಎಂದಿದ್ದಾರೆ ಅವರು. ಅಪ್ಪ ರವಿಚಂದ್ರನ್‌ ಕೂಡಾ ಸದಾ ಸಿನಿಮಾ ಬಗ್ಗೆ ತಮಗೆ ಗೈಡ್‌ ಮಾಡುತ್ತಿರುತ್ತಾರೆ ಎಂದಿದ್ದಾರೆ ಅವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌