ಆ್ಯಪ್ನಗರ

ವಿನಯ್ ರಾಜ್‌ಕುಮಾರ್‌ಗೆ ಕೆಜಿಎಫ್ ಸಂಗೀತ ನಿರ್ದೇಶಕರ ಆ್ಯಕ್ಷನ್‌ ಕಟ್

ರಿಯಾಲಿಟಿಗೆ ಹತ್ತಿರವಿರುವ ಹೊಸ ಕಥೆಯನ್ನು ಬರೆದಿದ್ದೇನೆ. ವಿನಯ್‌ ಅವರಿಗೆ ಒನ್‌ಲೈನ್‌ ಹೇಳಿದ ತಕ್ಷಣ ಒಪ್ಪಿಕೊಂಡರು ಎಂದಿದ್ದಾರೆ ಕೆಜಿಎಫ್ ಸಂಗೀತ ನಿರ್ದೇಶಕ ರವಿ ಬಸ್ರೂರು.

Vijaya Karnataka 8 Aug 2019, 2:04 pm
ಕೆಜಿಎಫ್‌ ಸಿನಿಮಾದ ಸಂಗೀತ ನಿರ್ದೇಶಕ ರವಿ ಬಸ್ರೂರು ನಿಧಾನವಾಗಿ ಫುಲ್‌ ಟೈಮ್‌ ನಿರ್ದೇಶಕರಾಗುವತ್ತ ಗಮನ ಹರಿಸುತ್ತಿದ್ದಾರೆ. ಈಗ ಅವರು ವಿನಯ್‌ ರಾಜ್‌ಕುಮಾರ್‌ ನಟನೆಯ ಸಿನಿಮಾವೊಂದನ್ನು ನಿರ್ದೇಶನ ಮಾಡಲಿದ್ದಾರೆ.
Vijaya Karnataka Web vinay-rajkumar


ಸದ್ಯಕ್ಕೆ ಕರಮ್‌ ಚಾವ್ಲಾ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ವಿನಯ್‌ ನಟಿಸುತ್ತಿದ್ದು, ಅದಾದ ನಂತರ ರವಿ ಬಸ್ರೂರು ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ವಿನಯ್‌ ರಾಜ್‌ಕುಮಾರ್‌ಗೆ ಆ್ಯಕ್ಷನ್‌ ಓರಿಯೆಂಟೆಡ್‌ ಕಥೆಯನ್ನು ಬರೆದಿದ್ದೇನೆ. ಅವರಿಗೆ ಈ ಸಿನಿಮಾದಲ್ಲಿ ಹೊಸ ರೀತಿಯ ಪಾತ್ರ ಹೆಣೆಯಲಾಗಿದೆ. ಸಿನಿಮ್ಯಾಟಿಕ್‌ ಆದರೂ ವಾಸ್ತವತೆಗೆ ತೀರ ಹತ್ತಿರವಾದ ಕಥೆ ಇದಾಗಿದೆ ಎಂದಿದ್ದಾರೆ ರವಿ ಬಸ್ರೂರು.

ಸದ್ಯ ನನ್ನ ಗಿರ್ಮಿಟ್‌ ಸಿನಿಮಾದ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಈಗಾಗಲೇ ಒಂದು ರೌಂಡ್‌ ಕಥೆಯನ್ನು ಬರೆದಿದ್ದು, ಇನ್ನೊಂದಿಷ್ಟು ಕೆಲಸ ಮಾಡುತ್ತಿದ್ದೇನೆ’ ಎನ್ನುತ್ತಾರೆ ನಿರ್ದೇಶಕ ರವಿ ಬಸ್ರೂರು. ವಿನಯ್‌ ರಾಜ್‌ಕುಮಾರ್‌ ಸಿನಿಮಾವನ್ನು ರವಿ ಅವರ ಹಿಂದಿನ ಸಿನಿಮಾದ ನಿರ್ಮಾಪಕರಾದ ರಾಜ್‌ಕುಮಾರ್‌ ನಿರ್ಮಾಣ ಮಾಡಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌