'ನಿನ್ನ ಅಮ್ಮನನ್ನು ಮದುವೆ ಮಾಡಿಕೊಳ್ಳಬಹುದಾ? ಎಂದು ನನ್ನ ಮಗನನ್ನು ಕೇಳಿದ'
ಮೊದಲು ವೇದ್ಗೆ ವಿಶಾಗನ್ ಫೋಟೋ ತೋರಿಸಿ, "ಇಗೋ ನಿಮ್ಮ ಡ್ಯಾಡಿ" ಎಂದು ಹೇಳಿದ ಕೂಡಲೆ ತುಂಬಾ ಸಂಭ್ರಮಿಸಿದ. ಆದರೆ ಮದುವೆ ಮಂಟಪದಲ್ಲಿ ಕುಳಿತಿದ್ದಾಗ ಮುಹೂರ್ತ ಸಮೀಪಿಸುತ್ತಿದ್ದರೂ ಇನ್ನೂ ವೇದ್ ಮಂಟಪಕ್ಕೆ ಬಾರದಿದ್ದ ಕಾರಣ ನಾನು ತುಂಬಾ ಟೆನ್ಷನ್ಗೆ ಒಳಗಾಗಿದ್ದೆ.
Vijaya Karnataka Web 16 Apr 2019, 12:27 pm
ಸೂಪರ್ ಸ್ಟಾರ್ ರಜನಿಕಾಂತ್ ಮಗಳು ಸೌಂದರ್ಯಾ ರಜನಿಕಾಂತ್ ಇತ್ತೀಚೆಗೆ ಎರಡನೇ ಮದುವೆ ಮಾಡಿಕೊಂಡಿದ್ದು ಗೊತ್ತೇ ಇದೆ. ಇದಕ್ಕೂ ಮುನ್ನ 2010ರಲ್ಲಿ ಅಶ್ವಿನ್ ಎಂದ ಉದ್ಯಮಿ ಜತೆಗೆ ಮದುವೆಯಾಗಿದ್ದರು. ಮದುವೆಯಾದ ನಾಲ್ಕು ವರ್ಷಕ್ಕೆ ಕಾರಣಾಂತರಗಳಿಂದ ವಿಚ್ಛೇದನ ಪಡೆಯುವ ಮೂಲಕ ದಾಂಪತ್ಯ ಜೀವನ ಮುರಿದು ಬಿದ್ದಿತ್ತು.
ಆದರೆ ಅದಾಗಲೆ ಈ ಜೋಡಿಗೆ ವೇದ್ ಎಂಬ ಮಗ ಜನಿಸಿದ್ದ. ಬಳಿಕ ಸ್ವಲ್ಪ ಕಾಲಕ್ಕೆ ಪ್ರಮುಖ ನಟ ವಿಶಾಗನ್ ವನಗಮೂಡಿ ಜತೆಗೆ ಎರಡನೇ ವಿವಾಹ ಮಾಡಿಕೊಂಡರು ಸೌಂದರ್ಯ ರಜನಿಕಾಂತ್. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ತನ್ನ ಎರಡನೇ ಮದುವೆ ಕುರಿತು ಸಾಕಷ್ಟು ಕುತೂಹಲಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ ಸೌಂದರ್ಯಾ ರಜನಿಕಾಂತ್.
ಮೊದಲು ವೇದ್ಗೆ ವಿಶಾಗನ್ ಫೋಟೋ ತೋರಿಸಿ, "ಇಗೋ ನಿಮ್ಮ ಡ್ಯಾಡಿ" ಎಂದು ಹೇಳಿದ ಕೂಡಲೆ ತುಂಬಾ ಸಂಭ್ರಮಿಸಿದ. ಆದರೆ ಮದುವೆ ಮಂಟಪದಲ್ಲಿ ಕುಳಿತಿದ್ದಾಗ ಮುಹೂರ್ತ ಸಮೀಪಿಸುತ್ತಿದ್ದರೂ ಇನ್ನೂ ವೇದ್ ಮಂಟಪಕ್ಕೆ ಬಾರದಿದ್ದ ಕಾರಣ ನಾನು ತುಂಬಾ ಟೆನ್ಷನ್ಗೆ ಒಳಗಾಗಿದ್ದೆ. ಆ ಸಂದರ್ಭದಲ್ಲಿ ವೇದ್ ಬರುವವರೆಗೂ ನಾನು ತಾಳಿಕಟ್ಟಲ್ಲ ಎಂದು ವಿಶಾಗನ್ ತನಗೆ ಧೈರ್ಯ ತುಂಬಿಸಿದರು.
ಅಷ್ಟೇ ಅಲ್ಲ ತಾಳಿ ಕಟ್ಟುವುದಕ್ಕೂ ಮುನ್ನ, "ನಿಮ್ಮ ಅಮ್ಮನನ್ನು ನಾನು ಮದುವೆಯಾಗುತ್ತಿರುವುದು ನಿನಗೆ ಇಷ್ಟನಾ?" ಎಂದು ವೇದ್ ಬಳಿ ವಿಶಾಗನ್ ಕೇಳಿ ಅವನ ಅನುಮತಿ ಪಡೆದಿದ್ದಾಗಿ ಸೌಂದರ್ಯಾ ರಜನಿಕಾಂತ್ ತಿಳಿಸಿದ್ದಾರೆ. ವಿಶಾಗನ್ ಬಳಿ ಇದ್ದರೆ ವೇದ್ ಸುರಕ್ಷಿತವಾಗಿ ಇರುತ್ತಾನೆಂಬ ನಂಬಿಕೆ ತನಗಿದೆ ಎಂದು ಸೌಂದರ್ಯಾ ರನಿಕಾಂತ್ ಹೇಳಿದ್ದಾರೆ.
ಆದರೆ ಅದಾಗಲೆ ಈ ಜೋಡಿಗೆ ವೇದ್ ಎಂಬ ಮಗ ಜನಿಸಿದ್ದ. ಬಳಿಕ ಸ್ವಲ್ಪ ಕಾಲಕ್ಕೆ ಪ್ರಮುಖ ನಟ ವಿಶಾಗನ್ ವನಗಮೂಡಿ ಜತೆಗೆ ಎರಡನೇ ವಿವಾಹ ಮಾಡಿಕೊಂಡರು ಸೌಂದರ್ಯ ರಜನಿಕಾಂತ್. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ತನ್ನ ಎರಡನೇ ಮದುವೆ ಕುರಿತು ಸಾಕಷ್ಟು ಕುತೂಹಲಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ ಸೌಂದರ್ಯಾ ರಜನಿಕಾಂತ್.
ಮೊದಲು ವೇದ್ಗೆ ವಿಶಾಗನ್ ಫೋಟೋ ತೋರಿಸಿ, "ಇಗೋ ನಿಮ್ಮ ಡ್ಯಾಡಿ" ಎಂದು ಹೇಳಿದ ಕೂಡಲೆ ತುಂಬಾ ಸಂಭ್ರಮಿಸಿದ. ಆದರೆ ಮದುವೆ ಮಂಟಪದಲ್ಲಿ ಕುಳಿತಿದ್ದಾಗ ಮುಹೂರ್ತ ಸಮೀಪಿಸುತ್ತಿದ್ದರೂ ಇನ್ನೂ ವೇದ್ ಮಂಟಪಕ್ಕೆ ಬಾರದಿದ್ದ ಕಾರಣ ನಾನು ತುಂಬಾ ಟೆನ್ಷನ್ಗೆ ಒಳಗಾಗಿದ್ದೆ. ಆ ಸಂದರ್ಭದಲ್ಲಿ ವೇದ್ ಬರುವವರೆಗೂ ನಾನು ತಾಳಿಕಟ್ಟಲ್ಲ ಎಂದು ವಿಶಾಗನ್ ತನಗೆ ಧೈರ್ಯ ತುಂಬಿಸಿದರು.
ಅಷ್ಟೇ ಅಲ್ಲ ತಾಳಿ ಕಟ್ಟುವುದಕ್ಕೂ ಮುನ್ನ, "ನಿಮ್ಮ ಅಮ್ಮನನ್ನು ನಾನು ಮದುವೆಯಾಗುತ್ತಿರುವುದು ನಿನಗೆ ಇಷ್ಟನಾ?" ಎಂದು ವೇದ್ ಬಳಿ ವಿಶಾಗನ್ ಕೇಳಿ ಅವನ ಅನುಮತಿ ಪಡೆದಿದ್ದಾಗಿ ಸೌಂದರ್ಯಾ ರಜನಿಕಾಂತ್ ತಿಳಿಸಿದ್ದಾರೆ. ವಿಶಾಗನ್ ಬಳಿ ಇದ್ದರೆ ವೇದ್ ಸುರಕ್ಷಿತವಾಗಿ ಇರುತ್ತಾನೆಂಬ ನಂಬಿಕೆ ತನಗಿದೆ ಎಂದು ಸೌಂದರ್ಯಾ ರನಿಕಾಂತ್ ಹೇಳಿದ್ದಾರೆ.