ಆ್ಯಪ್ನಗರ

ವೋಟ್‌ ಮಾಡುವುದು ದೇಶ ಸೇವೆ ಎಂದ ಮಯೂರಿ

ಮತದಾನ ಮಾಡುವುದು ನಮ್ಮ ಮನೆಯ ಕೆಲಸದಂತೆ. ಅದು ದೇಶಕ್ಕೆ ಮಾಡುವ ಸೇವೆ. ನಮ್ಮ ನಾಯಕರನ್ನು ಆಯ್ಕೆ ಮಾಡಲು ನಮಗೆ ಇರುವ ಒಂದೇ ಒಂದು ಅವಕಾಶ ಇದು. ಇದನ್ನು ಮಿಸ್‌ ಮಾಡಿಕೊಳ್ಳಬಾರದು ಎನ್ನುತ್ತಾರೆ ನೃತ್ಯಗಾತಿ ಮಯೂರಿ ಉಪಾಧ್ಯ.

Vijaya Karnataka 11 May 2018, 12:20 pm
ಮತದಾನ ಮಾಡುವುದು ನಮ್ಮ ಮನೆಯ ಕೆಲಸದಂತೆ. ಅದು ದೇಶಕ್ಕೆ ಮಾಡುವ ಸೇವೆ. ನಮ್ಮ ನಾಯಕರನ್ನು ಆಯ್ಕೆ ಮಾಡಲು ನಮಗೆ ಇರುವ ಒಂದೇ ಒಂದು ಅವಕಾಶ ಇದು. ಇದನ್ನು ಮಿಸ್‌ ಮಾಡಿಕೊಳ್ಳಬಾರದು ಎನ್ನುತ್ತಾರೆ ನೃತ್ಯಗಾತಿ ಮಯೂರಿ ಉಪಾಧ್ಯ.
Vijaya Karnataka Web mayuri


'ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ. ನಮಗೆ ದೇಶ ಏನು ಮಾಡಿದೆ ಎನ್ನುವುದಕ್ಕಿಂತ, ನಾವು ದೇಶಕ್ಕೆ ಏನು ಕೊಟ್ಟಿದ್ದೇವೆ ಎನ್ನುವುದೇ ಈಗ ಮುಖ್ಯ. ಮತದಾನ ಮಾಡುವ ಮೂಲಕ ಈ ಮಾತನ್ನು ಪಾಲಿಸಬಹುದು. ಅಲ್ಲದೇ ನಾವು ಮತದಾನ ಮಾಡುವುದರಿಂದ ನಮ್ಮ ನಾಯಕರನ್ನು ಆಯ್ಕೆ ಮಾಡುವ ಹಕ್ಕು ನಮ್ಮದಾಗಿರುತ್ತದೆ. ಮತದಾನ ಮಾಡದೇ ಹೋದರೆ, ಇನ್ಯಾರೋ ಬಂದು ವೋಟ್‌ ಮಾಡಿ ನಮ್ಮ ಲೀಡರ್‌ನ್ನು ಆಯ್ಕೆ ಮಾಡುತ್ತಾರೆ. ಹಾಗಾಗಿ ನಮ್ಮ ಹಕ್ಕನ್ನು ಚಲಾಯಿಸಬೇಕು' ಎನ್ನುತ್ತಾರವರು.

ಮತದಾನ ಎನ್ನುವುದು ಐದು ವರ್ಷಕ್ಕೊಮ್ಮೆ ಸಿಗುವ ಬಹು ದೊಡ್ಡ ಅವಕಾಶ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಅಲ್ಲದೇ ಆ ಅವಕಾಶವನ್ನು ಯಾರು ಕಳೆದುಕೊಳ್ಳಬಾರದು. ಈ ಬಾರಿ ನೂರಕ್ಕೆ ನೂರರಷ್ಟು ಮತದಾನ ನಡೆಯಲೇಬೇಕು ಅಂತಾರೆ ಮಯೂರಿ ಉಪಾಧ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌