ಆ್ಯಪ್ನಗರ

ಬಂಗಾರ, ಪ್ಲಾಟಿನಂಗಿಂತಲೂ ನೀರು ಅತ್ಯಮೂಲ್ಯ: ಎಸ್‌ಪಿ ಬಾಲಸುಬ್ರಹ್ಮಣ್ಯಂ

ಇತ್ತೀಚೆಗೆ 'ಗೂರ್ಖಾ' ಎಂಬ ತಮಿಳು ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ನೀರಿನ ಮಹತ್ವದ ಬಗ್ಗೆ, ನೀರನ್ನು ಮಿತವಾಗಿ ಬಳಸಬೇಕೆಂದು ಸಭಿಕರಲ್ಲಿ ಮನವಿ ಮಾಡಿಕೊಂಡರು.

Vijaya Karnataka Web 20 Jun 2019, 2:13 pm
ಮಳೆ ಕೈಕೊಡುತ್ತಿರುವುದು, ಜಲಾಶಯಗಳು ಬರಿದಾಗುತ್ತಿರುವ ಕಾರಣ ನೀರಿನ ಸಮಸ್ಯೆ ದೇಶದಾದ್ಯಂತ ತಾಂಡವವಾಡುತ್ತಿದೆ. ನೀರನ್ನು ಮಿತವಾಗಿ ಬಳಸಿ ಎಂದು ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಇತ್ತೀಚೆಗೆ ತಾವು ಪಾಲ್ಗೊಳ್ಳುತ್ತಿರುವ ಕಾರ್ಯಕ್ರಮಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
Vijaya Karnataka Web spb


ಇತ್ತೀಚೆಗೆ 'ಗೂರ್ಖಾ' ಎಂಬ ತಮಿಳು ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ನೀರಿನ ಮಹತ್ವದ ಬಗ್ಗೆ, ನೀರನ್ನು ಮಿತವಾಗಿ ಬಳಸಬೇಕೆಂದು ಸಭಿಕರಲ್ಲಿ ಮನವಿ ಮಾಡಿಕೊಂಡರು.

"ಮುಖ್ಯವಾದ ಸಂಗತಿಯೊಂದನ್ನು ಹೇಳುತ್ತಿದ್ದೇನೆ ಚಿನ್ನ, ಪ್ಲಾಟಿನಂಗಿಂತಲೂ ನೀರು ಅತ್ಯಮೂಲ್ಯವಾದದ್ದು. ಇಂದು ನಾನು ಮನೆಯಲ್ಲಿ ಅರ್ಧ ಬಕೆಟ್ ನೀರಿಗಾಗಿ ಅರ್ಧ ಗಂಟೆ ಕಾಯುವಂತಾಯಿತು" ಎಂದಿದ್ದಾರೆ.

ನೀರಿನ ಸಮಸ್ಯೆ ತುಂಬಾ ಇದೆ. ಇದಕ್ಕೆ ಕಾರಣ ನಾವುಗಳೇ. ನೀರನ್ನು ಉಳಿಸಲು ಕೆಲವು ಸರಳ ಸಲಹೆಗಳನ್ನು ಪಾಲಿಸಿ. ಇದೆಲ್ಲಾ ನಿಮಗೂ ಗೊತ್ತೇ ಇದೆ. ತಟ್ಟೆಯಲ್ಲಿ ಊಟ ಮಾಡುವುದಕ್ಕಿಂತ ಊಟದೆಲೆ ಉಪಯೋಗಿಸಿ. ಇದರಿಂದ ಪಾತ್ರೆ ತೊಳೆಯಲು ನೀರು ಖರ್ಚಾಗುವುದು ಕಡಿಮೆಯಾಗುತ್ತದೆ.

ಪ್ರತಿದಿನ ನಾನಾ ರೀತಿಯ ಬಟ್ಟೆಗಳನ್ನು ಧರಿಸಬೇಡಿ. ಈಗಿರುವ ಪರಿಸ್ಥಿತಿಯಲ್ಲಿ ವಾರದಲ್ಲಿ ಒಂದೆರಡು ಸಲ ಬಳಸಿದ ಬಟ್ಟೆಗಳನ್ನೇ ಮತ್ತೆ ಹಾಕಿಕೊಂಡರೆ ಅಗನತ್ಯ ನೀರಿನ ಪೋಲನ್ನು ತಡೆದಂತಾಗುತ್ತದೆ. ನೀರಿನ ಬಳಕೆ ಬಗ್ಗೆ ತುಂಬಾ ಎಚ್ಚರಿಕೆ ವಹಿಸಿ. ಮುಂದಿನ ದಿನಗಳಲ್ಲಿ ನಮಗೆ ನೀರು ಸಿಗುವುದೇ ಕಷ್ಟವಾಗುತ್ತದೆ ಎಂದು ನೀರಿನ ಸಮಸ್ಯೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌