ಆ್ಯಪ್ನಗರ

ವೀಕೆಂಡ್ ವಿತ್ ರಮೇಶ್ ಶೋ: ನೋವು ಹಂಚಿಕೊಂಡ ವಿನಯಾ ಪ್ರಸಾದ್

ತಮ್ಮ ದಾಂಪತ್ಯ ಜೀವನದಲ್ಲಿ ಅನುಭವಿಸಿದ ಅವಮಾನವನ್ನು ಅದರಿಂದ ಉಂಡ ಅಸಾಮಾಧಾನವನ್ನು ವಿನಯಾ ಪ್ರಸಾದ್ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹಂಚಿದ್ದಾರೆ. ಈ ಬಗ್ಗೆ ಮಾತನಾಡಿರುವ ನಟಿ ವಿನಯಾ ಪ್ರಸಾದ್ ಅವರು 'ಮಧ್ವಾಚಾರ್ಯ' ಚಿತ್ರದ ವೇಳೆ ತಮಗೆ ಪ್ರಸಾದ್ ಮೇಲೆ ಪ್ರೀತಿ ಅಂಕುರಿಸಿದ್ದ ಸಂಗತಿ ಬಹಿರಂಗಪಡಿಸಿದ್ದಾರೆ.

Vijaya Karnataka Web 18 May 2019, 6:51 pm
ರಮೇಶ್ ಅರವಿಂದ್ ನಡೆಸಿಕೊಡುತ್ತಿದ್ದ 'ವೀಕೆಂಡ್ ವಿತ್ ರಮೇಶ್ ಸೀಸನ್-4' ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು ಪಂಚಭಾಷಾ ನಟಿ ವಿನಯ ಪ್ರಸಾದ್. ವಿನಯಪ್ರಸಾದ್ ಅವರನ್ನು ಸಕಲಕಲಾವಲ್ಲಭೆ ಎನ್ನಬಹುದು. ನಟನೆಯ ಜೊತೆಗೆ ನಿರೂಪಣೆ ಹಾಗೂ ಗಾಯನದ ಮೂಲಕ ಬಹಳಷ್ಟು ಜನಮನವನ್ನು ಅವರು ಗೆದ್ದಿದ್ದಾರೆ. ಅವರು ತಮ್ಮ ಮೊದಲ ಪತಿಯೊಂದಿಗೆ ಕಳೆದಿದ್ದ ಸುಂದರ ಕ್ಷಣಗಳನ್ನು ಹಾಗೂ ಜನರಿಂದ ಅವರು ಅನುಭವಿಸಿದ ನೋವನ್ನು ಜನರೊಂದಿಗೆ ಹಂಚಿಕೊಂಡಿದ್ದಾರೆ.
Vijaya Karnataka Web vinaya1805


ಸಂಕಲನಕಾರ ಹಾಗೂ ನಿರ್ದೇಶಕರಾದ ವೈಲಾಯ ಕೃಷ್ಣ ಪ್ರಸಾದ್ ರನ್ನು 1988 ರಲ್ಲಿ ವಿನಯಾ ಪ್ರಸಾದ್ ಪ್ರೀತಿಸಿ ಮದುವೆಯಾದರು. ಆದರೆ ಅವರ ಸುಖಿ ಸಂಸಾರದ ಮೇಲೆ ಅದ್ಯಾರ ಕಣ್ಣು ಬಿದ್ದೀತೋ ತಿಳಿಯದೋ.. ಅವರ ಸುಖಮಯ ದಾಂಪತ್ಯ ಜೀವನ ಕೇವಲ ಏಳು ವರುಷಗಳಷ್ಟೇ ನಡೆಯಿತು. ನಂತರ ವಿನಯಾ ಅವರು ಪ್ರಸಾದ್ ರನ್ನು ಕಳೆದುಕೊಳ್ಳುತ್ತಾರೆ.

ತಮ್ಮ ದಾಂಪತ್ಯ ಜೀವನದಲ್ಲಿ ಅನುಭವಿಸಿದ ಅವಮಾನವನ್ನು ಅದರಿಂದ ಉಂಡ ಅಸಾಮಾಧಾನವನ್ನು ವಿನಯಾ ಪ್ರಸಾದ್ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹಂಚಿದ್ದಾರೆ. ಈ ಬಗ್ಗೆ ಮಾತನಾಡಿರುವ ನಟಿ ವಿನಯಾ ಪ್ರಸಾದ್ ಅವರು 'ಮಧ್ವಾಚಾರ್ಯ' ಚಿತ್ರದ ವೇಳೆ ತಮಗೆ ಪ್ರಸಾದ್ ಮೇಲೆ ಪ್ರೀತಿ ಅಂಕುರಿಸಿದ್ದ ಸಂಗತಿ ಬಹಿರಂಗಪಡಿಸಿದ್ದಾರೆ. ಆ ಬಳಿಕ ಪ್ರಸಾದ್ ಅವರ ಗುಣಕ್ಕೆ ಫಿದಾ ಆಗಿದ್ದ ವಿನಯಾ ಅವರನ್ನೇ ವಿವಾಹವಾದರು.

ನಟನಾ ಜೀವನದಲ್ಲಿ ದೊಡ್ಡ ಸಕ್ಸಸ್ ಕಂಡ ವಿನಯಾ ಪ್ರಸಾದ್ ಅವರಿಗೆ ಮದುವೆಯಾದ ಮೇಲೂ ನಟಿಸುವ ಆಸೆಯಂತೆ. ಜೊತೆಗೆ ಪತ್ನಿಯನ್ನು ಮನೆಯಲ್ಲಿ ಕೂರಿಸುವ ಗಂಡನನ್ನು ಕಂಡರೆ ಅವರಿಗೆ ಇಷ್ಟವಿರಲಿಲ್ಲ. ತಾನು ಇಷ್ಟಪಟ್ಟ ಗುಣವೆಲ್ಲಾ ಪ್ರಸಾದ್ ಅವರಲ್ಲಿ ಇರುವುದರಿಂದ ವಿನಯಾ ಅವರನ್ನೇ ಮದುವೆಯಾಗಿದ್ದರು. ಆದರೆ,
ಆ ಸುಖ ಸಂಸಾರದಲ್ಲಿ ಒಂದು ವಿಚಾರ ಮಾತ್ರ ವಿನಯಾ ಅವರಿಗೆ ತುಂಬಾ ನೋವು ಉಂಟುಮಾಡಿದೆಯಂತೆ.

ಮದುವೆಯಾದ ನಂತರ ಆ ಜೋಡಿಯನ್ನು ನೋಡಿದವರೆಲ್ಲಾ ಪ್ರಸಾದ್ ಅವರನ್ನು 'ವಿನಯಾ ಗಂಡ' ಎಂದೇ ಪರಿಚಯ ಮಾಡಿಕೊಡುತ್ತಿದ್ದರಂತೆ. ಎಲ್ಲಿ ಹೋದರೂ ವಿನಯಾ ಅವರ ಗಂಡ ಎಂದೇ ಪ್ರಸಾದ್ ಅವರನ್ನು ಪರಿಚಯ ಮಾಡಿಕೊಡುತ್ತಿದ್ದರು. ಆ ಸಂಗತಿ ವಿನಯಾ ಅವರಿಗೆ ತುಂಬಾ ಅಸಾಮಾಧಾನ ನೀಡುತ್ತಿತ್ತಂತೆ. ಈ ನೋವಿನ ವಿಷಯವನ್ನು ನಟಿ ವಿನಯಾ ಪ್ರಸಾದ್ ಅವರು 'ವೀಕೆಂಡ್ ಶೋ' ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌