ಆ್ಯಪ್ನಗರ

ವೀಕೆಂಡ್ ವಿತ್ ರಮೇಶ್ : ಶ್ರೀ ಮುರಳಿಯನ್ನು ಕರೆತಂದಿದ್ದಕ್ಕೆ ವೀಕ್ಷಕರ ಅಸಹನೆ!

ಕಳೆದ ಸಾರಿ ವೀಕೆಂಡ್ ವಿತ್ ರಮೇಶ್ ಶೋದಲ್ಲಿ ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ ಅವರನ್ನು ಕರೆದು ಕೂರಿಸಿದ್ದರು. ಈಗ ಶ್ರೀಮುರಳಿ ಬಗ್ಗೆ ಎದ್ದಿರುವ ಆಕ್ರೋಶವೇ ಆಗಲೂ ರಕ್ಷಿತ್ ಶೆಟ್ಟಿ ಬಗ್ಗೆ ವ್ಯಕ್ತವಾಗಿತ್ತು. ಅಷ್ಟೇ ಅಲ್ಲ, ರಕ್ಷಿತ್ ಶೆಟ್ಟಿ ಎಪಿಸೋಡ್ ಬಳಿಕ ವೀಕೆಂಡ್ ವಿತ್ ರಮೇಶ್ ಶೋ ಟಿಆರ್‌ಪಿ ಇಳಿದುಹೋಗಿ ಆ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಗಿತ್ತು.

Vijaya Karnataka Web 17 May 2019, 1:17 pm
ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಕರೆತರುತ್ತಿರುವ ಅತಿಥಿಗಳ ಬಗ್ಗೆ ಪ್ರೇಕ್ಷಕರ ಆಕ್ರೋಶ ಮತ್ತೆ ಸಿಡಿದೆದ್ದಿದೆ. ಈ ವಾರ ನಟ ಶ್ರೀಮುರಳಿ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಅತಿಥಿ ಆಗಿರುವುದು ಕಿರುತೆರೆ ವೀಕ್ಷಕರಲ್ಲಿ ಬಹಳಷ್ಟು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸಾಧಕ ಎಂದು ಹೇಳಿಕೊಳ್ಳಲು ಶ್ರೀಮುರಳಿ ಮಾಡಿರುವ ಸಾಧನೆ ಏನು? 'ಉಗ್ರಂ' ಎಂಬ ಸಿನಿಮಾವೊಂದೇ ಅವರ ಸಿನಿ ಜೀವನದಲ್ಲಿ ಮೈಲುಗಲ್ಲು.ಅದು ಬಿಟ್ಟರೆ ಅವರಿಂದ ಅತ್ಯುತ್ತಮ ಸಿನಿಮಾ ಬಂದಿಲ್ಲ ಎನ್ನಲಾಗುತ್ತಿದೆ.
Vijaya Karnataka Web srimurali1705


ಅಷ್ಟೇ ಅಲ್ಲ, ವೀಕ್ಷಕರು ಇನ್ನು ಹಲವು ಪ್ರಶ್ನೆಗಳನ್ನು ಸಹ ಎತ್ತಿದ್ದಾರೆ. ವೀಕೆಂಡ್ ವಿತ್ ರಮೇಶ್ ಶೋ ಎಂದರೆ ಅದು ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳಿಗೆ ಮಾತ್ರ ಸೀಮಿತವೇ ಅಥವಾ ಬೇರೆ ಕ್ಷೇತ್ರದ ಸಾಧಕರನ್ನೂ ಸಹ ಅಲ್ಲಿ ಕರೆದು ಕೂರಿಸಲಾಗುತ್ತದೆಯೇ? ಇಷ್ಟು ದಿನ ನಡೆದುಕೊಂಡು ಬಂದ ರೀತಿ ನೋಡಿದರೆ, ಈ ಸೀಸನ್‌ನಲ್ಲಿ ಈ ಮೊದಲು ಡಾ ವೀರೆಂದ್ರ ಹೆಗ್ಗಡೆ, ಸುಧಾ ಮೂರ್ತಿ ಮುಂತಾದವರನ್ನು ಕರೆತಂದಿದ್ದರು. ಅವರೆಲ್ಲಾ ಬೇರೆ ಬೇರೆ ಕ್ಷೇತ್ರದ ಸಾಧಕರೇ ಆಗಿದ್ದಾರೆ. ಆದರೆ, ಮತ್ತೆ ಕಳೆದ ಬಾರಿ ಮಾಡಿದ ತಪ್ಪನ್ನೇ ವೀಕೆಂಡ್ ವಿತ್ ರಮೇಶ್ ರಿಪೀಟ್ ಮಾಡುವಂತಿದೆ ಎಮದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಹೌದು, ಕಳೆದ ಸಾರಿ ವೀಕೆಂಡ್ ವಿತ್ ರಮೇಶ್ ಶೋದಲ್ಲಿ ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ ಅವರನ್ನು ಕರೆದು ಕೂರಿಸಿದ್ದರು. ಈಗ ಶ್ರೀಮುರಳಿ ಬಗ್ಗೆ ಎದ್ದಿರುವ ಆಕ್ರೋಶವೇ ಆಗಲೂ ರಕ್ಷಿತ್ ಶೆಟ್ಟಿ ಬಗ್ಗೆ ವ್ಯಕ್ತವಾಗಿತ್ತು. ಅಷ್ಟೇ ಅಲ್ಲ, ರಕ್ಷಿತ್ ಶೆಟ್ಟಿ ಎಪಿಸೋಡ್ ಬಳಿಕ ವೀಕೆಂಡ್ ವಿತ್ ರಮೇಶ್ ಶೋ ಟಿಆರ್‌ಪಿ ಇಳಿದುಹೋಗಿ ಆ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಗಿತ್ತು. ರಕ್ಷಿತ್ ಶೆಟ್ಟಿ, ಶ್ರೀಮುರಳಿ ಅಂಥವರೆಲ್ಲಾ ಸಾಧಕರು ಎಂದಾದರೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಅವರನ್ನು ಮೀರಿಸಿದ ಸಾಧಕರು ಇದ್ದಾರೆ. ಅಂಥವರನ್ನು ವೀಕೆಂಡ್ ವಿತ್ ರಮೇಶ್ ಮರೆತಿರುವುದೇಕೆ ಎಂಬುದು ಬಹಳಷ್ಟು ವೀಕ್ಷಕರ ಪ್ರಶ್ನೆ.

ಅಷ್ಟೇ ಅಲ್ಲ, ವೀಕೆಂಡ್ ವಿತ್ ರಮೇಶ್ ಶೋ ಟೈಟಲ್ ಬದಲಾಯಿಸಬಹುದಲ್ಲ ಎಂಬ ಸಲಹೆಯನ್ನೂ ಹಲವರು ನೀಡಿದ್ದಾರೆ. ವೀಕೆಂಡ್ ವಿತ್ ರಮೇಶ್ ಬದಲು 'ವೀಕೆಂಡ್ ವಿತ್ ಸ್ಯಾಂಡಲ್‌ವುಡ್' ಅಥವಾ 'ವೀಕೆಂಡ್ ವಿತ್ ರಮೇಶ್ ಫ್ರಂಡ್ಸ್‌' ಎಂದು ಹೆಸರು ಬದಲಾಯಿಸಬಹುದಲ್ಲ ಎಂದು ಹಲವರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ, ಕಳೆದ ಬಾರಿ ಮಾಡಿದ ತಪ್ಪನ್ನೇ ಈ ಬಾರಿಯೂ ಮಾಡಿರುವ ವೀಕೆಂಡ್ ವಿತ್ ರಮೇಶ್ ತಂಡ, ಮತ್ತೆ ಕಳೆದ ಬಾರಿಯಂತೆ ಟಿಆರ್‌ಪಿ ಬಿದ್ದು ಹಳ್ಳಹಿಡಿಯಲಿದೆಯೋ ಏನೋ ಎಂಬ ಅಭಿಪ್ರಾಯವನ್ನು ಹಲವು ವೀಕ್ಷಕರು ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌