ಆ್ಯಪ್ನಗರ

ರಕ್ಷಿತ್‌-ರಶ್ಮಿಕಾ ಬ್ರೇಕ್‌ಅಪ್ ಕುರಿತು ಸುದೀಪ್‌ ಹೇಳಿದ್ದೇನು?

ರಕ್ಷಿತ್ ಕಪೋಲಕಲ್ಪಿತ ಸುದ್ದಿಗಳಿಗೆ ಬ್ರೇಕ್ ಹಾಲುವ ಶೈಲಿಯಲ್ಲಿ ಉತ್ತರ ನೀಡಿರುವುದನ್ನು ನೋಡಿ ಮೆಚ್ಚಿಕೊಂಡಿರುವ ಸುದೀಪ್ 'ಇದುವೇ ಘನತೆ ಹಾಗೂ ಪರಿಪಕ್ವತೆ ರಕ್ಷಿತ್, ನೀನು ಚೆನ್ನಾಗಿರು' ಎಂದು ಹೇಳುವ ಮೂಲಕ ರಕ್ಷಿತ್‌ಗೆ ತಮ್ಮ ನೈತಿಕ ಬೆಂಬಲ ಸೂಚಿಸಿದ್ದಾರೆ.

Vijaya Karnataka Web 13 Sep 2018, 3:29 pm
ಸ್ಯಾಂಡಲ್‌ವುಡ್‌ನ ಕ್ಯೂಟ್‌ ಜೋಡಿ ಎನಿಸಿಕೊಂಡಿದ್ದ ರಕ್ಷಿತ್‌ ಶೆಟ್ಟಿ- ರಕ್ಷಿಕಾ ಮಂದಣ್ಣ ಸಂಬಂಧದಲ್ಲಿ ಬಿರುಕು ಮೂಡಿ, ಇವರ ಬ್ರೇಕ್‌ಅಪ್‌ ನ್ಯೂಸ್‌ ಹೊರ ಬೀಳುತ್ತಿದ್ದಂತೆ ಇವರಿಬ್ಬರ ಬ್ರೇಕ್‌ಅಪ್‌ ಕುರಿತು ಹಲವಾರು ಊಹಾ-ಪೋಹಗಳು ಹುಟ್ಟಿಕೊಂಡಿದ್ದೆವು.
Vijaya Karnataka Web sudeep


ಸೋಷಿಯಲ್‌ ಮೀಡಿಯಾದಿಂದ ಸ್ವಲ್ಪ ದಿನಗಳವರೆಗೆ ದೂರ ಸರಿಯುತ್ತೇನೆ ಎಂದು ಸಾಮಾಜಿಕ ತಾಣದಿಂದ ಹೊರನಡೆದಿದ್ದ ರಕ್ಷಿತ್‌ ಶೆಟ್ಟಿ ಬ್ರೇಕ್‌ಅಪ್‌ ಸುದ್ದಿ ಬಗ್ಗೆ ರಕ್ಷಿತ್‌ ಶೆಟ್ಟಿಯೇ ಕಾರಣ ಎಂಬ ರೀತಿಯ ರೂಮರ್‌ಗಳು ಹರಡಲಾರಂಭಿಸಿದಾಗ ಬ್ರೇಕಪ್‌ ಸುದ್ದಿಗೆ ಬ್ರೇಕ್‌ ಹಾಕುವ ರೀತಿಯಲ್ಲಿ ಉತ್ತರ ನೀಡಿದ್ದರು.

ಕಪೋಲಕಲ್ಪಿತ ಸುದ್ದಿಗಳಿಗೆ ಬ್ರೇಕ್ ಹಾಕುವ ಶೈಲಿಯಲ್ಲಿ ರಕ್ಷಿತ್ ಉತ್ತರ ನೀಡಿರುವುದನ್ನು ನೋಡಿ ಮೆಚ್ಚಿಕೊಂಡಿರುವ ಸುದೀಪ್ 'ಇದುವೇ ಘನತೆ ಹಾಗೂ ಪರಿಪಕ್ವತೆ ರಕ್ಷಿತ್, ನೀನು ಚೆನ್ನಾಗಿರು' ಎಂದು ಹೇಳುವ ಮೂಲಕ ರಕ್ಷಿತ್‌ಗೆ ತಮ್ಮ ನೈತಿಕ ಬೆಂಬಲ ಸೂಚಿಸಿದ್ದಾರೆ.

ಸೆಲೆಬ್ರಿಟಿ ಅಂದ ಮಾತ್ರಕ್ಕೆ ಅವರು ಭಾವನೆಗಳನ್ನೂ ಸಾರ್ವಜನಿಕವಾಗಿ ಹಂಚಿಕೊಳ್ಳಬೇಕೆ? ಪ್ರತಿಯೊಬ್ಬರಿಗೂ ಅವರದ್ದೇ ಆದ ಖಾಸಗಿತನ ಇದೆ, ಅದಕ್ಕೆ ಧಕ್ಕೆ ತರುವುದು ಸ್ವಲ್ಪ ಅತಿಯಾಗಿಲ್ವಾ? ಎಂದು ರೂಮರ್‌ ಸೃಷ್ಟಿಸುವವರ ವಿರುದ್ಧ ಕಿಡಿ ಕಾರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌