ಆ್ಯಪ್ನಗರ

Yajamana Press Meet: ದರ್ಶನ್ ಬಳಿ ಅಂಬರೀಶ್ ಕೇಳಿದ ಕೊನೆಯ ಉಡುಗೊರೆ ಏನ್ ಗೊತ್ತಾ?

ದರ್ಶನ್‌ಗಾಗಿ ಯಜಮಾನ ಅಲ್ಲ, ಯಜಮಾನನಿಗಾಗಿ ದರ್ಶನ್. ಪ್ರತಿ ಸಿನಿಮಾದಲ್ಲೂ ಅಂಬರೀಶ್ ಇರುತ್ತಿದ್ದರು. ಈ ಸಿನಿಮಾದಲ್ಲಿ ಅವರು ಇಲ್ಲದೆ ಇರುವುದು ತುಂಬಾನೇ ಮಿಸ್ ಮಾಡಿಕೊಂಡಿದ್ದೇವೆ. ನಾನು ವಿದೇಶಕ್ಕೆ ಹೋಗುವ ಎರಡು ದಿನಕ್ಕೂ ಮುನ್ನ ಅಲ್ಲಿಂದ ಏನೋ ತರ್ತೀಯಾ ನೀನು ಎಂದು ಕೇಳಿದ್ದರು.

Vijaya Karnataka Web 21 Feb 2019, 12:00 pm
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಇದೇ ಮಾರ್ಚ್ 1ರಂದು ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಸಾಕಷ್ಟು ಸಂಗತಿಗಳನ್ನು ಚಿತ್ರತಂಡ ಹಂಚಿಕೊಂಡಿತು. ಮುಖ್ಯವಾಗಿ ದರ್ಶನ್ ತಮ್ಮ ಸಿನಿಮಾ ಬಗ್ಗೆ ಅಷ್ಟೇ ಅಲ್ಲದೆ ಅಂಬರೀಶ್ ಕುರಿತ ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡರು.
Vijaya Karnataka Web darshan4


ರಿಯಲ್ ಲೈಫ್‌ನಲ್ಲಿ ನನ್ನ ಪಾಲಿನ ಯಜಮಾನರು ಅಂಬರೀಶ್. ಅವರು ನನ್ನ ಪಾಲಿನ ಯಜಮಾನ ಎಂದರು. ಯಜಮಾನ ಅನ್ನೋ ಟೈಟಲ್ ನಮ್ಮ ಸಿನಿಮಾಗೆ ಆಪ್ಟ್ ಆಗಿತ್ತು. ಹಾಗಾಗಿ ಮೊದಲೇ ನಾನು ನಿರ್ಮಾಪಕರಾದ ಶೈಲಜಾ ನಾಗ್ ಅವರನ್ನು ಕೇಳಿದೆ. ಇದರಿಂದ ಏನಾದರೂ ಕಾಂಟ್ರೋವರ್ಸಿ ಆಗುತ್ತಾ ಎಂದು. ಎಲ್ಲಾ ಪಕ್ಕಾ ಮಾಡಿಕೊಂಡ ಬಳಿಕವೇ ಸಿನಿಮಾ ಆರಂಭವಾಗಿದ್ದು ಎಂದಿದ್ದಾರೆ ದರ್ಶನ್.

ದರ್ಶನ್‌ಗಾಗಿ ಯಜಮಾನ ಅಲ್ಲ, ಯಜಮಾನನಿಗಾಗಿ ದರ್ಶನ್. ಪ್ರತಿ ಸಿನಿಮಾದಲ್ಲೂ ಅಂಬರೀಶ್ ಇರುತ್ತಿದ್ದರು. ಈ ಸಿನಿಮಾದಲ್ಲಿ ಅವರು ಇಲ್ಲದೆ ಇರುವುದು ತುಂಬಾನೇ ಮಿಸ್ ಮಾಡಿಕೊಂಡಿದ್ದೇವೆ. ನಾನು ವಿದೇಶಕ್ಕೆ ಹೋಗುವ ಎರಡು ದಿನಕ್ಕೂ ಮುನ್ನ ಅಲ್ಲಿಂದ ಏನೋ ತರ್ತೀಯಾ ನೀನು ಎಂದು ಕೇಳಿದ್ದರು. ಸಾಮಾನ್ಯವಾಗಿ ಅವರಿಗೆ ಬೇರೆ ಏನೋ ಗಿಫ್ಟ್‌ಗಳನ್ನು ತರುತ್ತಿದ್ದೆವು. ಎರಡು ಗಿಫ್ಟ್‌ಗಳಂತೂ ಇದ್ದೇ ಇರುತ್ತಿದ್ದವು. ಆದರೆ ಈ ಸಲ ಏನ್ ತರ್ತೀಯ ಎಂದರು. ಏನ್ ಬೇಕು ಎಂದು ಕೇಳಿದ್ದಕ್ಕೆ. ಈ ಸಲ ನನಗೆ ವಾಚ್ ಕೊಡು ಎಂದರು. ಅಲ್ಲಿಗೆ ಬರ್ತೀನಿ, ನೀವು ತೋರಿಸಿದ ವಾಚ್ ನಿಮಗೆ ಕೊಡಿಸುತ್ತೇನೆ ಎಂದೆ. ಆದರೆ ಬಂದ ಉದ್ದೇಶವೇ ಬೇರೆ ಆಯಿತು ಎಂದು ಕೊನೆಯದಾಗಿ ಅಂಬರೀಶ್ ಕೇಳಿದ ಉಡುಗೊರೆ ಬಗ್ಗೆ ನೆನಪಿಸಿಕೊಂಡರು ದರ್ಶನ್.

ದರ್ಶನ್‌ ನಾಯಕನಾಗಿ ನಟಿಸಿರುವ 'ಯಜಮಾನ' ಸಿನಿಮಾ ಇದೇ ಮಾ.1 ರಂದು ದೇಶಾದ್ಯಂತ ಬಿಡುಗಡೆ ಆಗುತ್ತಿದೆ. ಈ ಕುರಿತು ವಿವರಣೆ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜನೆ ಮಾಡಿತ್ತು. ನಿರ್ದೇಶಕ ವಿ.ಹರಿಕೃಷ್ಣ, ಪಿ.ಕುಮಾರ್‌, ಕಲಾವಿದರಾದ ದರ್ಶನ್‌, ದೇವರಾಜ್‌, ರವಿಶಂಕರ್‌, ಡಾಲಿ ಧನಂಜಯ್‌, ನಾಯಕಿ ತಾನ್ಯಾ ಹೋಪ್‌, ಹಿರಿಯ ಕಲಾವಿದೆ ಮಾಲತಿಶ್ರೀ ಮೈಸೂರು, ನಿರ್ಮಾಪಕರಾದ ಶೈಲಜಾ ನಾಗ್‌, ಬಿ.ಸುರೇಶ ಹೀಗೆ ಚಿತ್ರತಂಡವೇ ಹಾಜರಿತ್ತು. ಸಿನಿಮಾದ ನಾಲ್ಕು ಹಾಡು ಮತ್ತು ಟ್ರೈಲರ್‌ ಅನ್ನು ಈ ಸಂದರ್ಭದಲ್ಲಿ ತೋರಿಸಲಾಯಿತು. ಚಿತ್ರಸಾಹಿತಿ ಕವಿರಾಜ್‌, ಈ ಚಿತ್ರಕ್ಕೆ ಡೈಲಾಗ್‌ ಬರೆದಿರುವ ಚೇತನ್‌ ಕುಮಾರ್‌ ಮತ್ತು ನಟ ವಿನೋದ್‌ ಪ್ರಭಾಕರ್‌ ಕೂಡ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌