ಆ್ಯಪ್ನಗರ

ಅಖಿಲ್‌ ಅಕ್ಕಿನೇನಿ-ಶ್ರಿಯಾ ಮದುವೆ ಮುರಿದಿದ್ದೇಕೆ ?

ಅಖಿಲ್‌-ಶ್ರಿಯಾ ದಾಂಪತ್ಯ ಜೀವನಕ್ಕೆ ಕಾಲಿಡಲಿಡುವ ಮೊದಲೇ ಸಂಬಂಧ ಮುರಿದುಬಿದ್ದಿದೆ ಎನ್ನಲಾಗಿದೆ.

ಟೈಮ್ಸ್ ಆಫ್ ಇಂಡಿಯಾ 23 Feb 2017, 2:40 pm
ಕೆಲ ತಿಂಗಳ ಹಿಂದಷ್ಟೇ ಟಾಲಿವುಡ್‌ ಖ್ಯಾತ ನಟ ನಾಗಾರ್ಜುನ್‌ರ ಎರಡನೇ ಪುತ್ರ ಅಖಿಲ್‌ ಅಕ್ಕಿನೇನಿ ವಿವಾಹ ನಿಶ್ಚಿತಾರ್ಥ ಸಮಾರಂಭ ಪ್ರೇಯಸಿ ಶ್ರಿಯಾ ಭೂಪಾಲ್‌ ಜತೆ ಅದ್ಧೂರಿಯಾಗಿ ನೆರವೇರಿತ್ತು.
Vijaya Karnataka Web why was the akhil akkineni shriya bhupal wedding called off
ಅಖಿಲ್‌ ಅಕ್ಕಿನೇನಿ-ಶ್ರಿಯಾ ಮದುವೆ ಮುರಿದಿದ್ದೇಕೆ ?


ಇನ್ನೇನು ಈ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸಂದರ್ಭದಲ್ಲಿ ಇವರಿಬ್ಬರ ಸಂಬಂಧದಲ್ಲಿ ಬಿರುಕು ಉಂಟಾಗಿ ಮದುವೆ ಮುರಿದುಬಿದ್ದಿದೆ ಎಂಬ ಸುದ್ದಿ ಟಾಲಿವುಡ್‌ ಅಂಗಳದಿಂದ ಕೇಳಿಬರುತ್ತಿದೆ.

3 ವರ್ಷಗಳಿಂದ ಪರಸ್ಪರ ಪ್ರೀತಿಸಿ, ಇತ್ತೀಚೆಗಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಅಖಿಲ್‌-ಶ್ರಿಯಾ. ಹೈದರಾಬಾದ್‌ನ ಖಾಸಗಿ ಹೊಟೇಲ್‌ವೊಂದರಲ್ಲಿ ಅದ್ಧೂರಿಯಾಗಿ ನೆರವೇರಿದ್ದ ಎಂಗೇಜ್‌ಮೆಂಟ್‌ನಲ್ಲಿ ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ಸಹ ಭಾಗಿಯಾಗಿದ್ದರು.

'ಕಳೆದ ಕೆಲವು ದಿನಗಳ ಹಿಂದೆ ಅಖಿಲ್‌ ಮತ್ತು ಶ್ರಿಯಾ ಹೈದರಾಬಾದ್‌ ವಿಮಾನ ನಿಲ್ದಾಣದಲ್ಲಿ ಜಗಳವಾಡಿದ್ದರು. ಪ್ರೀತಿಯಲ್ಲಿ ಇದು ಸಾಮಾನ್ಯವೆಂದು ಭಾವಿಸಿದ್ದ ನಮ್ಮ ತರ್ಕ ಸುಳ್ಳಾಯಿತು' ಎಂದು ಅಕ್ಕಿನೇನಿ ಕುಟುಂಬಕ್ಕೆ ಆತ್ಮೀಯರಾದ ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಅಖಿಲ್‌-ಶ್ರಿಯಾ ಮದುವೆಗೆ ಇಟಲಿಯಲ್ಲಿ ಸಕಲ ಸಿದ್ಧತೆಗಳು ನಡೆದಿದ್ದವು ಎನ್ನಲಾಗಿದೆ. ಇಟಲಿಯ ರೋಮ್‌ನಲ್ಲಿ ನಡೆಯಬೇಕಿದ್ದ ಅದ್ಧೂರಿ ಮದುವೆಗೆ ಚಿತ್ರರಂಗದ ಗಣ್ಯ ವ್ಯಕ್ತಿಗಳಿಗೆ ಮತ್ತು ಖ್ಯಾತ ಉದ್ಯಮಿಗಳಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಕೊನೆಯ ಕ್ಷಣದ ನಿರ್ಧಾರವೆಂಬಂತೆ ಈಗಾಗಲೇ ಇಟಲಿಗೆ ಬುಕ್‌ ಆದ ಟಿಕೆಟ್‌ಗಳನ್ನು ರದ್ದುಗೊಳಿಸಲಾಗಿದೆ ಎಂಬ ಮಾಹಿತಿ ಬಂದಿದೆ.

ಮದುವೆ ರದ್ದಾಗಲು ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ಆದರೆ ಅಖಿಲ್ ಹಾಗೂ ಶ್ರಿಯಾ ನಡುವಿನ ಬಾಂಧವ್ಯ ಈಗ ಮೊದಲಿನಂತಿಲ್ಲ ಎಂಬ ಮಾತುಗಳು ಅವರ ಆಪ್ತವಲಯದಿಂದ ಕೇಳಿ ಬರುತ್ತಿವೆ. ಅಖಿಲ್‌ ಅಕ್ಕಿನೇನಿ ಕೆಲ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಉದ್ಯಮಿ ಜಿವಿಕೆ ರೆಡ್ಡಿ ಮೊಮ್ಮಗಳಾಗಿರುವ ಶ್ರಿಯಾ, ಫ್ಯಾಶನ್‌ ಡಿಸೈನರ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌