ಆ್ಯಪ್ನಗರ

ಕೌಟುಂಬಿಕ ಮೌಲ್ಯಗಳ ಸುತ್ತ ಎಡಕಲ್ಲು ಗುಡ್ಡ ಮೇಲೆ

ಪುಟ್ಟಣ್ಣ ಕಣಗಲ್‌ ನಿರ್ದೇಶನದ 'ಎಡಕಲ್ಲು ಗುಡ್ಡದ ಮೇಲೆ' ಸಿನಿಮಾದ ಶೀರ್ಷಿಕೆ ಹೊತ್ತು ಮತ್ತೊಂದು ಹೊಸ ಚಿತ್ರ ತೆರೆ ಕಾಣಲು ಸಿದ್ಧವಾಗಿದೆ. ವಿವಿನ್‌ ಸೂರ್ಯ ನಿರ್ದೇಶನದಲ್ಲಿ ತಯಾರಾಗಿರುವ ಈ ಚಿತ್ರದಲ್ಲಿ ಎಡಕಲ್ಲು ಗುಡ್ಡ ಚಿತ್ರ ಖ್ಯಾತಿಯ ಚಂದ್ರಶೇಖರ್‌ ಸೇರಿದಂತೆ ಸ್ಯಾಂಡಲ್‌ವುಡ್‌ನ ಅನೇಕ ಹಿರಿಯ ಕಲಾವಿದರು ನಟಿಸಿದ್ದಾರೆ.

Vijaya Karnataka 9 May 2018, 11:45 am
ಪುಟ್ಟಣ್ಣ ಕಣಗಲ್‌ ನಿರ್ದೇಶನದ 'ಎಡಕಲ್ಲು ಗುಡ್ಡದ ಮೇಲೆ' ಸಿನಿಮಾದ ಶೀರ್ಷಿಕೆ ಹೊತ್ತು ಮತ್ತೊಂದು ಹೊಸ ಚಿತ್ರ ತೆರೆ ಕಾಣಲು ಸಿದ್ಧವಾಗಿದೆ. ವಿವಿನ್‌ ಸೂರ್ಯ ನಿರ್ದೇಶನದಲ್ಲಿ ತಯಾರಾಗಿರುವ ಈ ಚಿತ್ರದಲ್ಲಿ ಎಡಕಲ್ಲು ಗುಡ್ಡ ಚಿತ್ರ ಖ್ಯಾತಿಯ ಚಂದ್ರಶೇಖರ್‌ ಸೇರಿದಂತೆ ಸ್ಯಾಂಡಲ್‌ವುಡ್‌ನ ಅನೇಕ ಹಿರಿಯ ಕಲಾವಿದರು ನಟಿಸಿದ್ದಾರೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಕೌಟುಂಬಿಕ ಮೌಲ್ಯಗಳನ್ನು ಈ ಚಿತ್ರದಲ್ಲಿ ಹೇಳುತ್ತಿದ್ದಾರಂತೆ ನಿರ್ದೇಶಕರು.
Vijaya Karnataka Web bharati-vishnuvardhan


ಸಿನಿಮಾದ ಕಥೆಯೇ ವಿಶೇಷವಾಗಿದೆಯಂತೆ. ತಂದೆ ತಾಯಿಯ ಪ್ರೀತಿಯಿಂದ ವಂಚಿತಳಾದ ಹೆಣ್ಣು ಮಗಳೊಬ್ಬಳ ಕಥೆಯು ಸಿನಿಮಾದಲ್ಲಿದೆ. ಅಂತಹ ಹುಡುಗಿಯರ ಬದುಕನ್ನು ವಿಭಿನ್ನವಾಗಿ ನೋಡುವ ಪ್ರಯತ್ನ ಮಾಡಿದ್ದಾರಂತೆ ನಿರ್ದೇಶಕರು. ಉದ್ಯೋಗಸ್ಥ ಪಾಲಕರು ಹೆಚ್ಚಿನ ಸಮಯವನ್ನು ಕೆಲಸ ಮಾಡುವ ಸ್ಥಳದಲ್ಲಿಯೇ ಕಳೆಯುತ್ತಾರೆ. ಹೀಗಾಗಿ ಮಕ್ಕಳಿಗೆ ತಮ್ಮ ಸಮಯವನ್ನು ಕೊಡುವುದಿಲ್ಲ. ಅದರಲ್ಲೂ ಹೆಣ್ಣು ಮಕ್ಕಳಿಗೂ ಇನ್ನೂ ಟೈಮ್‌ ಕೊಡಲ್ಲ. ಅಂತಹ ಮಕ್ಕಳ ಕೋಮಲ ಮನಸ್ಸಿನ ಸುತ್ತ ಹೆಣೆದಿರುವ ಸಿನಿಮಾ ಇದಾಗಿದೆಯಂತೆ.

ಸಿನಿಮಾದ ಮತ್ತೊಂದು ವಿಶೇಷತೆ ಅಂದರೆ ಹಿರಿಯ ನಟಿ ಭಾರತಿ ವಿಷ್ಣುವರ್ಧನ್‌, ಶ್ರೀನಾಥ್‌, ದತ್ತಣ್ಣ, ಸಿಹಿಕಹಿ ಚಂದ್ರು, ಸುಮಿತ್ರ, ಚಿದಾನಂದ್‌, ವೀಣಾ ಸುಂದರ್‌, ಭವ್ಯಶ್ರೀ, ಪದ್ಮಜಾ ರಾವ್‌, ಉಷಾ ಭಂಡಾರಿ ಹೀಗೆ ಅನುಭವಿ ಕಲಾವಿದರ ದಂಡೇ ಚಿತ್ರದಲ್ಲಿದೆ. ಇವರ ಜತೆಗೆ ಈ ಹೊತ್ತಿನ ಕಲಾವಿದರ ಸಂಗಮದ ಸಿನಿಮಾ ಇದಾಗಿದೆ.

ಕನ್ನಡ ಸಿನಿಮಾಗಳ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿರುವ ಜಿ.ಪಿ.ಪ್ರಕಾಶ್‌ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದೇ ಮೇ 11ರಂದು ಚಿತ್ರ ರಾಜ್ಯಾದ್ಯಂತ ರಿಲೀಸ್‌ ಆಗುತ್ತಿದೆ.

ಎಡಕಲ್ಲು ಗುಡ್ಡದ ಮೇಲೆ ಸಿನಿಮಾದಲ್ಲಿ ನಟಿಸಿದ ನಟರು ಮತ್ತು ಈ ಹೊತ್ತಿನ ಕಲಾವಿದರ ಮಹಾ ಸಂಗಮ ನಮ್ಮ ಸಿನಿಮಾದಲ್ಲಿದೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾದರೂ, ಕೌಟುಂಬಿಕ ಹಿನ್ನೆಲೆಯ ಕಥೆಯೂ ಚಿತ್ರದಲ್ಲಿದೆ.
ವಿವಿನ್‌ ಸೂರ್ಯ, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌