ಆ್ಯಪ್ನಗರ

ಕಥೆ ಕದ್ದ ಆರೋಪಕ್ಕೆ 'ಪ್ರಿಮಿಯರ್ ಪದ್ಮಿನಿ' ನಾಯಕ ಜಗ್ಗೇಶ್ ಹೇಳಿದ್ದೇನು?

ಈ ಬಗ್ಗೆ ಪ್ರೀಮಿಯರ್ ಪದ್ಮಿನಿ ನಾಯಕ ನಟ ಜಗ್ಗೇಶ್ ಏನು ಹೇಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿತ್ತು. ಆದರೆ ಅಚ್ಚರಿ ಎಂಬಂತೆ, ಈ ಬಗ್ಗೆ ಪ್ರೀಮಿಯರ್ ಪದ್ಮಿನಿ ನಾಯಕ ಜಗ್ಗೇಶ್ ಆಗಲಿ ಅಥವಾ ಉಳಿದ ಕಲಾವಿದರಾಗಲೀ ಏನೇನೂ ಮಾತನಾಡಿರಲಿಲ್ಲ.

Vijaya Karnataka Web 11 May 2019, 7:57 pm
ಕನ್ನಡದ ನವರಸ ನಾಯಕ ಜಗ್ಗೇಶ್ ಅಭಿನಯದ 'ಪ್ರೀಮಿಯರ್ ಪದ್ಮಿನಿ' ಚಿತ್ರವು ಕಳೆದ ಎರಡು ವಾರದ ಹಿಂದೆ ಬಿಡುಗಡೆಯಾಗಿತ್ತು. ಸಿನಿಮಾ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಇದೀಗ ಈ ಚಿತ್ರವು ಕೃತಿಚೌರ್ಯ ಆರೋಪ ಎದುಸರಿಸುತ್ತಿದೆ.
Vijaya Karnataka Web jaggesh1105


ಪ್ರಿಮಿಯರ್ ಪದ್ಮಿನಿ ಚಿತ್ರತಂಡವು ತನ್ನ ಚಿತ್ರವು ಯಶಸ್ವಿಯಾಯ್ತು ಎಂದು ಸಂಭ್ರಮಿಸುತ್ತಿರುವಾಗಲೇ ಈ ಚಿತ್ರಕ್ಕೆ ಬರಸಿಡಿಲಿನಂತೆ, ಕೃತಿಚೌರ್ಯ ಆರೋಪ ಎದುರಾಗಿದೆ. ಈ ಚಿತ್ರದಲ್ಲಿ ಬರುವ ನಂಜುಂಡಿ ಪಾತ್ರವು ಬರಹಗಾರ ವಸುಧೇಂದ್ರ ಬರೆದಿರುವ 'ವರ್ಣಮಯ' ಎಂಬ ಪುಸ್ತುಕದಲ್ಲಿರುವ ನಂಜುಂಡಿ ಎಂಬ ಪ್ರಬಂಧದ ಪಾತ್ರವಾಗಿದೆ ಎನ್ನಲಾಗಿದೆ.

ಈ ಬಗ್ಗೆ ಮಾತನಾಡಿರುವ ಬರಹಗಾರ ವಸುಧೇಂದ್ರ ಅವರು "ಈ ಬಗ್ಗೆ ಅನುಮತಿಯನ್ನೂ ಪಡೆದಿಲ್ಲ, ಕ್ರೆಡಿಟ್ ಸಹ ಕೊಡಲಿಲ್ಲ" ಎಂಬ ಆರೋಪ ಮಾಡಿದ್ದಾರೆ. ವಸುಧೇಂದ್ರ ಅವರ ಈ ಆರೋಪವನ್ನು 'ಪ್ರೀಮಿಯರ್ ಪದ್ಮಿನಿ' ಚಿತ್ರದ ನಿರ್ಮಾಪಕಿ ಶ್ರುತಿ ನಾಯ್ಡು ನಿರಾಕರಿಸಿದ್ದು, "ಸ್ಫೂರ್ತಿಯಾಗಿ ಎರಡರಿಂದ ಮೂರು ದೃಶ್ಯಗಳನ್ನು ನಾವು ಬಳಸಿರಹುದು ಅಷ್ಟೇ. ಅದಕ್ಕೆ ಕೃತಿಚೌರ್ಯ ಆರೋಪ ಮಾಡುವುದು ಸರಿಯಲ್ಲ" ಎಂದಿದ್ದರು.

ಈ ಬಗ್ಗೆ ಪ್ರೀಮಿಯರ್ ಪದ್ಮಿನಿ ನಾಯಕ ನಟ ಜಗ್ಗೇಶ್ ಏನು ಹೇಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿತ್ತು. ಆದರೆ ಅಚ್ಚರಿ ಎಂಬಂತೆ, ಈ ಬಗ್ಗೆ ಪ್ರೀಮಿಯರ್ ಪದ್ಮಿನಿ ನಾಯಕ ಜಗ್ಗೇಶ್ ಆಗಲಿ ಅಥವಾ ಉಳಿದ ಕಲಾವಿದರಾಗಲೀ ಏನೇನೂ ಮಾತನಾಡಿರಲಿಲ್ಲ. ಇದೀಗ, ಅಭಿಮಾನಿಯೊಬ್ಬರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಜಗ್ಗೇಶ್ ನೇರವಾಗಿ ಏನೂ ಹೇಳಿಲ್ಲ. ಆದರೆ, ಪರೋಕ್ಷವಾಗಿ ಕೃತಿಚೌರ್ಯ ಆರೋಪಕ್ಕೆ ತಿರುಗೇಟು ನೀಡಿದ್ದಾರೆ ಎನ್ನಬಹುದು.

ನಟ ಜಗ್ಗೇಶ್ ಅವರು ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ "''ಗೆಲುವಿಗೆ ನೂರಾರು ಪಿತಾಮಹರು..! ಸೋಲು ಅನಾಥ ಕೂಸು..! ಇದ್ದಾಗ ನೂರಾರು ನೆಂಟರು.! ಇಲ್ಲದಾಗ ಶಟ್ಟರ ಅಂಗಡಿ ಬಾಗಿಲು ಬಂದ್.! ಬದುಕು ಒಂದು ಯುದ್ಧ ಭೂಮಿ ಯುದ್ಧ ಮಾಡಿಗೆಲ್ಲು.! ಗೆದ್ದರೆ ಹೂವಿನ ಹಾರ..! ಬಿದ್ದರೆ ಬೆನ್ನಮೇಲೆ ಅಪಮಾನದ ಭಾರ..! ನಗುತ ನಗಿಸುತ್ತ ಎಲ್ಲಾ ನೋಡಿ ಮುಗುಳು ನಗೆ ಬೀರಿ ಬದುಕಬೇಕು..! ಅದೆ ಶ್ರೇಷ್ಟ ಬದುಕು..!'' ಎಂದಿದ್ದಾರೆ.

ರಮೇಶ್ ಇಂದಿರಾ ನಿರ್ದೇಶನ ಮಾಡಿರುವ ಈ 'ಪ್ರೀಮಿಯರ್ ಪದ್ಮಿನಿ' ಚಿತ್ರದಲ್ಲಿ ಜಗ್ಗೇಶ್, ಸುಧಾರಾನಿ, ಮಧುಬಾಲ, ಹಿತಾ ಚಂದ್ರಶೇಖರ್, ಪ್ರಮೋದ್ ಪಂಜು, ವಿವೇಕ್ ಸಿಂಹ, ದತ್ತಣ್ಣ ಸೇರಿದಂತೆ ಹಲವರು ನಟಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌