ಆ್ಯಪ್ನಗರ

ತಪ್ಪು ಒಪ್ಪುಗಳ ರಾಂಗ್‌ ರೂಟ್‌

ಹೊಸ ತಂಡದ ಪ್ರಯತ್ನ 'ರಾಂಗ್‌ ರೂಟ್‌ 9' ಸಿನಿಮಾದಲ್ಲಿ ಹೊಸ ದೇವದಾಸನನ್ನು ತೋರಿಸುವ ಪ್ರಯತ್ನ ಮಾಡಿದ್ದಾರಂತೆ ನಿರ್ದೇಶಕ ಬ್ಯಾಂಕ್‌ ಪರುಶುರಾಮ್‌.

Vijaya Karnataka 1 Jun 2018, 2:58 pm
ಈಗಾಗಲೇ ನಾನಾ ರೀತಿಯ ದೇವದಾಸ್‌ಗಳನ್ನು ಕನ್ನಡ ಸಿನಿಮಾ ರಂಗ ಕಂಡಿದೆ. ಈಗ 'ರಾಂಗ್‌ ರೂಟ್‌ 9' ಸಿನಿಮಾದ ಮೂಲಕ ಮತ್ತೊಬ್ಬ ದೇವದಾಸ್‌ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡುತ್ತಿದ್ದಾರೆ. ಇಂತಹ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಮಹೇಶ್‌ ದೇವ್‌. ಪರ್ಚಂಡಿ, ಚಟ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಮಹೇಶ್‌ಗೆ ಈ ಸಿನಿಮಾದಲ್ಲಿ ಹೊಸ ರೀತಿಯ ಪಾತ್ರ ಸಿಕ್ಕಿದೆಯಂತೆ.
Vijaya Karnataka Web wrong-route


'ಖೇಲ್‌ ಖತಂ ನಾಟಕ್‌ ಬಂದ್‌ ಎಂಬ ಅಡಿಬರಹ ಚಿತ್ರಕ್ಕಿದೆ. ಅಮಾಯಕ ಯುವಕನೊಬ್ಬನಿಗೆ ಒಂದು ಹೆಣ್ಣು ನೋವು ಕೊಟ್ಟಾಗ ಆತ ಯಾವ ಹಾದಿ ಹಿಡಿಯುತ್ತಾನೆ ಎಂಬ ವಿಷಯವನ್ನು ಸಿನಿಮಾದಲ್ಲಿ ಹೇಳುತ್ತಿದ್ದೇನೆ. ಅವನು ಅರಿಯದೇ ಒಂಬತ್ತು ದಾರಿಗಳನ್ನು ಹಿಡಿಯುತ್ತಾನೆ. ಆ ದಾರಿಗಳು ಯಾವವು ಮತ್ತು ಅವನ ಜೀವನ ಏನಾಗುತ್ತದೆ ಎನ್ನುವುದೇ ಸಿನಿಮಾ' ಅಂತಾರೆ ನಿರ್ದೇಶಕ ಬ್ಯಾಂಕ್‌ ಪರುಶುರಾಮ್‌.

ಈ ಚಿತ್ರಕ್ಕೆ ವಿದ್ಯಾ ಗೌಡ ನಾಯಕಿ. ಮೊದಲ ಬಾರಿಗೆ ಇವರು ಬಣ್ಣ ಹಚ್ಚಿದ್ದರೆ. ಸಂತೋಷ್‌ ಮತ್ತು ಸೋಮಶೇಖರ್‌ ಖಳನಟರಾಗಿ ನಟಿಸಿದ್ದಾರೆ. ನಿರ್ದೇಶಕರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಮಂಜುಕವಿ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬಂದಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌