ಆ್ಯಪ್ನಗರ

'ರಾಕಿಂಗ್ ಸ್ಟಾರ್' ಯಶ್ ಮತ್ತು ಸಂಜಯ್ ದತ್‌ರನ್ನು ಊಟಕ್ಕೆ ಆಹ್ವಾನಿಸಿದ್ದ ಟಾಲಿವುಡ್ ಸ್ಟಾರ್ ನಟ!

ನಟ ಯಶ್ ಈಗ ಪ್ಯಾನ್‌ ಇಂಡಿಯಾ ನಟ. ದೇಶದ ಉದ್ದಗಲಕ್ಕೂ ಅವರಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಅಲ್ಲದೆ, ಬೇರೆ ಬೇರೆ ಭಾಷೆಯ ಕಲಾವಿದರೊಂದಿಗೂ ಒಳ್ಳೆಯ ಸ್ನೇಹ ಹೊಂದಿದ್ದಾರೆ ಅವರು. ಸದ್ಯ ಯಶ್ ಮತ್ತು ಸಂಜಯ್ ದತ್‌ ಅವರನ್ನು ಜೂ. ಎನ್‌ಟಿಆರ್ ಊಟಕ್ಕೆ ಆಹ್ವಾನಿಸಿದ್ದು, ಟಾಲಿವುಡ್ನಲ್ಲಿ ಚರ್ಚೆ ಆಗುತ್ತಿದೆ!

Vijaya Karnataka Web 2 Oct 2019, 5:15 pm
'ಕೆಜಿಎಫ್' ಚಿತ್ರದ ನಟ ಯಶ್ ಪ್ಯಾನ್ ಇಂಡಿಯಾ ಸ್ಟಾರ್‌ ಆಗಿದ್ದಾರೆ. ಸದ್ಯ ಅವರೀಗ 'ಕೆಜಿಎಫ್ ಚಾಪ್ಟರ್ 2' ಚಿತ್ರದ ಶೂಟಿಂಗ್ನಲ್ಲಿ ಸಖತ್ ಬಿಜಿ ಆಗಿದ್ದಾರೆ. ಅಲ್ಲದೆ, ಅಧೀರ ಪಾತ್ರ ಮಾಡುವುದಕ್ಕಾಗಿ ಬಾಲಿವುಡ್‌ ನಟ ಸಂಜಯ್‌ ದತ್‌ ಕೂಡ 'ಕೆಜಿಎಫ್' ಬಳಗ ಸೇರಿಕೊಂಡಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆ ದ್ವಿಗುಣಗೊಂಡಿದೆ. ಸದ್ಯ ಆಂಧ್ರ ಪ್ರದೇಶದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಯಶ್ ಮತ್ತು ಸಂಜೂ ಟಾಲಿವುಡ್ನ ಸ್ಟಾರ್‌ ನಟರೊಬ್ಬರ ಆಹ್ವಾನದ ಮೇರೆಗೆ, ಅವರ ಮನೆಗೆ ಊಟಕ್ಕೆ ಹೋಗಿದ್ದಾರಂತೆ.
Vijaya Karnataka Web Yash sanjay


'ಕೆಜಿಎಫ್' ದಾಖಲೆ ಮುರಿಯಲು ಕನ್ನಡದ ಮತ್ತೊಂದು ಚಿತ್ರ ರೆಡಿ!

ಹೌದು, ಇತ್ತೀಚೆಗೆ ನಟ ಜೂ. ಎನ್‌ಟಿಆರ್ ಈ ಇಬ್ಬರು ಕಲಾವಿದರನ್ನು ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿದ್ದರಂತೆ. ಅದನ್ನು ಅಷ್ಟೇ ಪ್ರೀತಿಪೂರ್ವಕವಾಗಿ ಸ್ವೀಕರಿಸಿದ ಯಶ್ ಮತ್ತು ಸಂಜಯ್‌ ದತ್‌, ಎನ್‌ಟಿಆರ್ ಮನೆಗೆ ಹೋಗಿ ಊಟ ಮಾಡಿಕೊಂಡು ಬಂದಿದ್ದಾರೆ.

ತುಂಬ ಚೂಟಿಯಾಗಿ ಮಾತನಾಡ್ತಾಳೆ ಯಶ್ ಮಗಳು ಆಯ್ರಾ; ವಿಡಿಯೋ ನೋಡಿ
ಊಟಕ್ಕೆ ದಕ್ಷಿಣ ಭಾರತದ ವಿಶೇಷ ಅಡುಗೆಗಳನ್ನು ಸಿದ್ಧಪಡಿಸಲಾಗಿತ್ತಂತೆ. ಜತೆಗೆ ಈ ಮೂವರು ಚಿತ್ರರಂಗದ ಗಣ್ಯರು, ಸಿನಿಮಾಗಳ ಕುರಿತು ಸಾಕಷ್ಟು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಸಂಜಯ್, 'ಮುಂದಿನ ಬಾರಿ ಮುಂಬೈಗೆ ಬಂದಾಗ ನಮ್ಮ ಮನೆಗೆ ಊಟಕ್ಕೆ ಬರಬೇಕು' ಎಂದು ಎನ್‌ಟಿಆರ್ ಅವರನ್ನು ಆಹ್ವಾನಿಸಿದ್ದಾರಂತೆ.

ಮಗಳಿಗೆ ಕನ್ನಡ ಕಲಿಸಿ, ಕೊಂಕಣಿ ಅಲ್ಲ ಎಂದು ರಾಧಿಕಾಗೆ ಪಾಠ ಮಾಡಿದ ಅಭಿಮಾನಿಗಳು

'ಕೆಜಿಎಫ್' ಚಿತ್ರವು ಕನ್ನಡದ ಜತೆಗೆ ತೆಲುಗು, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬಂದಿತ್ತು. ಆ ಮೂಲಕ ಬೇರೆ ಬೇರೆ ಭಾಷೆಗಳ ಚಿತ್ರರಂಗದ ಜತೆಗೆ ಯಶ್ ಉತ್ತಮ ಭಾಂದವ್ಯ ಇಟ್ಟುಕೊಂಡಿದ್ದಾರೆ. ಜತೆಗೆ ನಟ ಎನ್‌ಟಿಆರ್ ಸಹ ಕರ್ನಾಟಕದೊಂದಿಗೆ ವಿಶೇಷ ನಂಟು ಹೊಂದಿದ್ದಾರೆ. ಅಲ್ಲದೆ, ಅವರ ತಾಯಿ ಕೂಡ ಕರ್ನಾಟಕ ಮೂಲದವರು.

ರಾಕಿಂಗ್ ಸ್ಟಾರ್ ಯಶ್ 'ಜನ ಗಣ ಮನ' ಸಿನಿಮಾದ ಕಥೆ ಏನಾಯಿತು?

ಸದ್ಯ 'ಆರ್‌ಆರ್‌ಆರ್‌' ಚಿತ್ರದ ಚಿತ್ರೀಕರಣದಲ್ಲಿ ಎನ್‌ಟಿಆರ್ ಸಖತ್ ಬಿಜಿ ಆಗಿದ್ದಾರೆ. ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ಸಿನಿಮಾ ಇದಾಗಿದ್ದು, ಎನ್‌ಟಿಆರ್ ಜತೆಗೆ ರಾಮ್‌ ಚರಣ್ ಕೂಡ ತೆರೆ ಹಂಚಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌