ಆ್ಯಪ್ನಗರ

ಬೀದರ್‌ನಲ್ಲಿ ಯಶ್ 'ಯಶೋಮಾರ್ಗ'ದ ನೀರಿನ ಟ್ಯಾಂಕರ್‌ಗೆ ಮಂಗಳಾರತಿ!

ಬೀದರ್‌ನ ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಅದೆಷ್ಟು ಬರ ಇದೆ ಎಂದರೆ, ಒಂದು ಲೋಟ ನೀರಿಗೂ ಜನರು ಪರದಾಡುವಂತಾಗಿದೆ. ಪ್ರತಿವರ್ಷವೂ ಅಲ್ಲಿನ ಜನರಿಗೆ ಈ ಬವಣೆ ತಪ್ಪುತ್ತಿಲ್ಲ. ಸರ್ಕಾರದ ಎಲ್ಲ ಯೋಜನೆಗಳೂ ಸಹ ವಿಫಲ ಎಂಬಂತೆ, ಕುಡಿಯುವ ನೀರಿಗು ಸಹ ಹಾಹಾಕಾರ ತಪ್ಪುತ್ತಿಲ್ಲ.

Vijaya Karnataka Web 25 May 2019, 8:13 pm
ಏಪ್ರಿಲ್, ಮೇ ತಿಂಗಳಲ್ಲಿ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಮುಗಿಲು ಮುಟ್ಟುತ್ತದೆ. ಈ ಬಾರಿ ಬೀದರ್ ಜಿಲ್ಲೆಯಲ್ಲಿ ನೀರಿನ ಅಭಾವ ಹೇಳತೀರದಷ್ಟು ಆಗಿಬಿಟ್ಟಿದೆ. ಇದನ್ನರಿತ ಕನ್ನಡದ ರಾಕಿಂಗ್ ಸ್ಟಾರ್ ನಟ ಯಶ್ ಅವರು ಬೀದರ್ ಜಿಲ್ಲೆಯಲ್ಲಿ ನೀರಿನ ತೀವ್ರ ಅಭಾವವಿರುವ ಹಳ್ಳಿಗಳಿಗೆ ತಮ್ಮ 'ಯಶೋಮಾರ್ಗ'ದ ಮೂಲಕ ನೀರಿನ ವ್ಯವಸ್ಥೆ ಮಾಡಿದ್ದಾರೆ.
Vijaya Karnataka Web yash2505


ಕಳೆದ ಮೂರು ದಿನಗಳಿಂದ ಬೀದರ್ ಜಿಲ್ಲೆಯ ಔರಾದ್‌ನ ಅನೇಕ ಹಳ್ಳಿಗಳಿಗೆ ನೀರಿನ ವ್ಯವಸ್ಥೆಯನ್ನು ಯಶ್ ನೇತೃತ್ವದ 'ಯಶೋಮಾರ್ಗ' ಸಂಸ್ಥೆ ಮಾಡಿದೆ. ಕಳೆದ ಬಾರಿ ಕೊಪ್ಪಳದ ಕೆರೆ ಅಭಿವೃದ್ಧಿ ಪಡಿಸಿ ಯಶ್ ಕೊಪ್ಪಳದ ಜನತೆ ಸೇರಿದಂತೆ, ಬಹಳಷ್ಟು ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ಬೀದರ್ ಜನತೆ ಯಶ್ ಕೆಲಸಕ್ಕೆ ಮೆಚ್ಚುಗೆ ಸೂಚಿಸಿ ಯಶ್ ಅವರನ್ನು ಆಶೀರ್ವದಿಸುತ್ತಿದ್ದಾರೆ.

ಬೀದರ್‌ನ ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಅದೆಷ್ಟು ಬರ ಇದೆ ಎಂದರೆ, ಒಂದು ಲೋಟ ನೀರಿಗೂ ಜನರು ಪರದಾಡುವಂತಾಗಿದೆ. ಪ್ರತಿವರ್ಷವೂ ಅಲ್ಲಿನ ಜನರಿಗೆ ಈ ಬವಣೆ ತಪ್ಪುತ್ತಿಲ್ಲ. ಸರ್ಕಾರದ ಎಲ್ಲ ಯೋಜನೆಗಳೂ ಸಹ ವಿಫಲ ಎಂಬಂತೆ, ಕುಡಿಯುವ ನೀರಿಗು ಸಹ ಹಾಹಾಕಾರ ತಪ್ಪುತ್ತಿಲ್ಲ. ಇದನ್ನರಿತ ಯಶ್ ತಮ್ಮ ಯಶೋಮಾರ್ಗ ಸಂಸ್ಥೆ ಮೂಲಕ ಉತ್ತರ ಕರ್ನಾಟಕದಲ್ಲಿ ಕುಡಿಯುವ ನೀರಿಗೆ ತೊಂದರೆಯಿರುವ ಅನೇಕ ಹಳ್ಳಿಗಳನ್ನು ಗುರುತಿಸಿ ಅಲ್ಲಿ ನೀರಿನ ಟ್ಯಾಂಕರ್ ಮೂಲಕ ಜನರಿಗೆ ಅಗತ್ಯ ನೀರಿನ ಪೂರೈಕೆ ಮಾಡಿಸುತ್ತಿದ್ದಾರೆ.

ಉತ್ತರ ಕರ್ನಾಟಕದ ಹಳ್ಳಿಗಳ ಮಹಿಳೆಯರು ನೀರಿನ ಟ್ಯಾಂಕರ್‌ಗೆ ಮಂಗಳಾರತಿ ಮಾಡಿ, ಆ ಬಳಿಕ ನೀರು ತುಂಬಿಸಿಕೊಂಡು ಹೋಗುತ್ತಿದ್ದಾರೆ. ನೀರನ್ನು ಪೂರೈಸುತ್ತಿರುವ ಯಶ್ ನೇತೃತ್ವದ ಬಳಗಕ್ಕೆ ಮಹಿಳೆಯರು ಭಾರೀ ಮೆಚ್ಚುಗೆ ಸೂಚಿಸುತ್ತಿದ್ದು, ಈ ಬಗ್ಗೆ ಸಾಕಷ್ಟು ಜನರು ಮಾತನಾಡುತ್ತಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ, ನಟ ಯಶ್ ಜನೋಪಕಾರಿ ಕೆಲಸದ ಮೂಲಕ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌