ಆ್ಯಪ್ನಗರ

ಆಗಸ್ಟ್ ಮೊದಲ ವಾರದಲ್ಲಿ 'ಗಾಳಿಪಟ 2' ಶೂಟಿಂಗ್ ಶುರು!

ಹತ್ತು ವರ್ಷಗಳ ಹಿಂದೆ ಯೋಗರಾಜ್ ಭಟ್ ಅವರು 'ಗಾಳಿಪಟ' ಹೆಸರಿನ ಚಿತ್ರವನ್ನು ನಿರ್ದೇಶನ ಮಾಡಿದ್ದು, ಅದು ಸೂಪರ್ ಹಿಟ್ ದಾಖಲಿಸಿತ್ತು. ಇದೀಗ ಅದೇ ಭಟ್ಟರ ನಿರ್ದೇಶನದಲ್ಲಿ 'ಗಾಳಿಪಟ 2' ಚಿತ್ರವು ಶೂಟಿಂಗ್‌ಗೆ ಸಜ್ಜಾಗಿ ನಿಂತಿದೆ. ಮುಂದಿನ ತಿಂಗಳು ಮೊದಲ ವಾರದಲ್ಲಿ (ಆಗಸ್ಟ್ 2019) 'ಗಾಳಿಪಟ 2' ಚಿತ್ರತಂಡವು ಶೂಟಿಂಗ್ ಹೋಗಲಿದ್ದು, ಕರ್ನಾಟಕದ ಹಲವು ತಾಣಗಳು ಸೇರಿದಂತೆ ಲಂಡನ್ ಮತ್ತು ಮಲೇಶಿಯಾ ವಿದೇಶಿ ತಾಣಗಳಲ್ಲು ಸಹ ಚಿತ್ರೀಕರಣ ನಡೆಸಲಿದೆ ಎನ್ನಲಾಗಿದೆ.

Vijaya Karnataka Web 19 Jul 2019, 12:38 pm
ಪಂಚತಂತ್ರ ಚಿತ್ರದ ಬಳಿಕ ಯೋಗರಾಜ್ ಭಟ್ ನಿರ್ದೇಶನದ ಮುಂಬರುವ 'ಗಾಳಿಪಟ 2' ಚಿತ್ರವು ಸದ್ಯವೇ ಶೂಟಿಂಗ್ ಶುರುಮಾಡಲಿದೆ. ಈ ಚಿತ್ರವು ಆಗಸ್ಟ್‌ನಲ್ಲಿ ಚಿತ್ರೀಕರಣ ಪ್ರಾರಂಭಿಸಲಿದ್ದು, ಆಗಸ್ಟ್ ಮೊದಲ ವಾರದಲ್ಲಿ ಕುದುರೇಮುಖಕ್ಕೆ ಪ್ರಯಾಣ ಬೆಳೆಸಲಿದೆ. ಈ ಚಿತ್ರದಲ್ಲಿ ಶರಣ್, ರಿಷಿ ಮತ್ತು ಲೂಸಿಯಾ ನಿರ್ದೇಶಕ ಪವನ್ ಕುಮಾರ್ ನಾಯಕರಾಗಿದ್ದಾರೆ. ರಿಷಿ ಎದುರು ನಾಯಕಿಯಾಗಿ ನಟಿ ಆದಿತಿ ಪ್ರಭುದೇವ ನಟಿಸಲಿದ್ದು ಉಳಿದಂತೆ ಶರ್ಮಿಳಾ ಮಾಂಡ್ರೆ ಮತ್ತು ಸೋನಲ್ ಮಂಥೆರೋ ಈ ಚಿತ್ರದ ನಾಯಕಿಯರಾಗಿ ನಟಿಸಲಿದ್ದಾರೆ.
Vijaya Karnataka Web yogarajbhat1907


ಗಾಳಿಪಟ 2 ಚಿತ್ರವು ಕರ್ನಾಟಕದ ಕುದುರೆಮುಖ ಸೇರಿದಂತೆ ಬೆಂಗಳೂರು, ಮೈಸೂರು, ಮಂಗಳೂರು, ಲಂಡನ್ ಮತ್ತು ಮಲೇಶಿಯಾಗಳಲ್ಲಿ ಶೂಟಿಂಗ್ ನಡೆಸಲಿದೆ ಎನ್ನಲಾಗಿದೆ. ಈ ಚಿತ್ರದ ಬಗ್ಗೆ ಈಗಾಗಲೇ ಭಾರೀ ನಿರೀಕ್ಷೆ ಶುರುವಾಗಿದೆ. ಕಾರಣ, ಹತ್ತು ವರ್ಷಗಳ ಹಿಂದೆ ಭಟ್ಟರ ನಿರ್ದೇಶನದಲ್ಲಿ ಮೂಡಿಬಂದಿದ್ದ 'ಗಾಳಿಪಟ' ಚಿತ್ರವು ಸೂಪರ್ ಹಿಟ್ ದಾಖಲಿಸಿತ್ತು. ಸ್ಯಾಂಡಲ್‌ವುಡ್ ಪ್ರೇಕ್ಷಕರು ಹತ್ತು ವರುಷಗಳ ಬಳಿಕವೂ ಸಹ ಆ ಗಾಳಿಪಟ ಚಿತ್ರವನ್ನು ಮರೆತಿಲ್ಲ. ಅಂದರೆ, ಗಾಳಿಪಟವು ಅದೆಷ್ಟು ಸೂಪರ್ ಹಿಟ್ ಆಗಿತ್ತುಎ ಎಂಬುದಕ್ಕೆ ಬೇರೆ ಸಾಕ್ಷಿ ಬೇಕಿಲ್ಲ.

ಹತ್ತು ವರ್ಷಗಳ ಹಿಂದೆ ಗಾಳಿಪಟ ಚಿತ್ರದಲ್ಲಿ ನಟರಾದ ಗಣೇಶ್, ದಿಗಂತ್ ಮತ್ತು ರಾಜೇಶ್ ಕೃಷ್ಣನ್ ಅವರು ನಟಿಸಿದ್ದರು. ಅವರಿಗೆ ನಾಯಕಿಯರಾಗಿ ಕ್ರಮವಾಗಿ ಡೈಸಿ ಬೋಪಣ್ಣ, ನೀತು ಮತ್ತು ಭಾವನಾ ರಾವ್ ನಟಿಸಿದ್ದರು. ಈ ಚಿತ್ರವು ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಹೆಸರು ಮಾಡಿದ್ದಷ್ಟೇ ಅಲ್ಲ, ದಾಖಲೆಯ ಗಳಿಕೆಯನ್ನು ಸಹ ಮಾಡಿತ್ತು. ಹೀಗಾಗಿ ಸಹಜವಾಗಿಯೇ ಮುಂಬರುವ 'ಗಾಳಿಪಟ 2' ಚಿತ್ರಕ್ಕೆ ಭಾರೀ ನಿರೀಕ್ಷೆ ಹುಟ್ಟಿಕೊಂಡಿದೆ.

ನಿರೀಕ್ಷೆಗೆ ಸಹಜವಾಗಿ ಇದೀಗ ಮುಂಬರುವ ಈ ಗಾಳಿಪಟ 2' ಚಿತ್ರವು ಸದ್ಯದಲ್ಲೇ ಶೂಟಿಂಗ್ ಪ್ರಾರಂಭಿಸಲಿದೆ. ಈ ಚಿತ್ರಕ್ಕಾಗಿ ಕರ್ನಾಟಕ, ಇಂಡಿಯಾ ಹಾಗೂ ವಿದೇಶಗಳಲ್ಲಿ ಭಟ್ಟರ ನೇತೃತ್ವದ ಚಿತ್ರತಂಡ ಶೂಟಿಂಗ್ ನಡೆಸಲಿದೆ ಎಂದು ಈಗಾಗಲೇ ಬಂದ ಮಾಹಿತಿಯಿಂದ ಚಿತ್ರವು ರಿಚ್ ಆಗಿ ಮೂಡಿಬರಲಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ, ಹತ್ತು ವರುಷದ ಹಿಂದೆ ಬಂದಿದ್ದ 'ಗಾಳಿಪಟ' ಹಾಗೂ ಮುಂಬರುವ 'ಗಾಳಿಪಟ 2' ಚಿತ್ರಗಳೆರಡರಲ್ಲೂ ಮೂವರು ನಾಯಕರು ಮತ್ತು ನಾಯಕಿಯರು ಇದ್ದಾರೆ ಎಂಬುದು ಸಾಮ್ಯತೆ. ಆದರೆ ಕಥೆಯಲ್ಲಿ ಮಾತ್ರ ಸಾಕಷ್ಟು ಭಿನ್ನತೆ ಇದೆ ಎನ್ನಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌