(ನೇತ್ರಾವತಿ ಕೃಷ್ಣಮೂರ್ತಿ) ಕನ್ನಡ ಕಿರುತೆರೆಯ 'ಶಿವ' ಎಂದೇ ಖ್ಯಾತಿ ಪಡೆದಿರುವ ಪ್ರತಿಭಾನ್ವಿತ ನಟ ವಿನಯ್ ಗೌಡ ಅವರ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಅವರೀಗ ತೆಲುಗು ಕಿರುತೆರೆ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಬಗ್ಗೆ 'ಲವಲವಿಕೆ'ಯೊಂದಿಗೆ ಮಾತನಾಡಿದ್ದಾರೆ.
ನಿಮ್ಮ ಧಾರಾವಾಹಿ ಪಟ್ಟಿಯಲ್ಲಿ ಹೊಸದಾಗಿ ಪರಭಾಷಾ ಧಾರಾವಾಹಿ ಸೇರ್ಪಡೆಯಾಗಿದೆ...
ಹೌದು. ಕನ್ನಡದ ನನ್ನ ನಟನೆಯ 'ನಂದಿನಿ', 'ಹರಹರ ಮಹಾದೇವ' ಧಾರಾವಾಹಿಗಳು ತೆಲುಗಿಗೆ ಡಬ್ ಆಗಿ ಪ್ರಸಾರವಾಗುತ್ತಿದ್ದವು. ನನ್ನ ಪಾತ್ರ ನೋಡಿ ತೆಲುಗು ಧಾರಾವಾಹಿಯಲ್ಲಿ ನಟಿಸುವ ಆಫರ್ ನೀಡಿದರು. ವಿಭಿನ್ನವಾದ ಹಾಗೂ ನನಗೆ ಒಪ್ಪುವಂಥ ಪಾತ್ರವಾಗಿದ್ದರಿಂದ ನಟಿಸಲು ನಿರ್ಧರಿಸಿದೆ. ಧಾರಾವಾಹಿಯಲ್ಲಿ ನನ್ನ ಪಾತ್ರ ಸೋಮವಾರದಿಂದ ಪ್ರಸಾರವಾಗುತ್ತಿದೆ. ಪಾತ್ರ ಹಾಗೂ ನನ್ನ ಲುಕ್ ಬಗ್ಗೆ ಪ್ರೇಕ್ಷಕರಿಂದ, ಹಿತೈಷಿಗಳಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತುಂಬಾ ಖುಷಿ ಇದೆ. ನಾನು ಈ ಧಾರಾವಾಹಿಯಲ್ಲಿ ಹೈದರಾಬಾದ್ ಗ್ಯಾಂಗ್ಸ್ಟರ್ನಂಥ ಮೇನ್ ವಿಲನ್ ಪಾತ್ರದಲ್ಲಿನಟಿಸುತ್ತಿದ್ದೇನೆ.
'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ' ಧಾರಾವಾಹಿಯಿಂದ ಇತ್ತೀಚೆಗೆ ಹೊರಬಂದಿದ್ದೀರಿ, ಕಾರಣ?
ಕೊರೊನಾ ಕಾರಣದಿಂದ ಅನಿವಾರ್ಯವಾಗಿ, ಮನಸ್ಸಿಲ್ಲದ ಮನಸ್ಸಿನಿಂದ ನಾನು ಈ ಧಾರಾವಾಹಿಯಿಂದ ಹೊರಬಂದಿದ್ದೇನೆ. ಇದೊಂದು ತುಂಬಾ ಕಠಿಣ ನಿರ್ಧಾರ. ನನಗೆ ಬಹಳ ಇಷ್ಟವಾದ ಶಿವನ ಪಾತ್ರದಿಂದ ಹೊರಬಂದಿದ್ದಕ್ಕೆ ಹೃದಯ ಭಾರವಾಗಿದೆ.
ಹೊಸ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದೀರಾ?
ಕನ್ನಡದ 'ಕೈಮರ' ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಕೋವಿಡ್ನಿಂದಾಗಿ ಚಿತ್ರ ಮುಂದಕ್ಕೆ ಹೋಗಿದೆ. ಇನ್ನೂ ಹೆಸರಿಡದ 'ಪ್ರೊಡಕ್ಷನ್ ನಂ. 7' ಸಿನಿಮಾ ಹಾಗೂ ತಮಿಳು ಸಿನಿಮಾವೊಂದರಲ್ಲಿ ಖಳನಾಯಕನ ಪಾತ್ರ ನಿರ್ವಹಿಸುತ್ತಿದ್ದೇನೆ. ನನ್ನ ಮೊದಲ ಸಿನಿಮಾ 'ರಾಕೆಟ್'. ನಂತರ 'ಪೊಗರು', 'ಶಿವಾಜಿ ಸುರತ್ಕಲ್', 'ಅವನಲ್ಲಿ ಇವಳಿಲ್ಲಿ' ಸಿನಿಮಾಗಳಲ್ಲಿ ನಟಿಸಿದ್ದೇನೆ. ಈ ಎಲ್ಲಾ ಸಿನಿಮಾಗಳ ಪಾತ್ರಗಳು ನನಗೆ ಅಪಾರ ಜನಪ್ರಿಯತೆ ತಂದುಕೊಟ್ಟಿವೆ.
ಪಾತ್ರಕ್ಕಾಗಿ ದೇಹವನ್ನು ಮಾರ್ಪಡಿಸುವುದು ಅಷ್ಟು ಸಲೀಸಾ?
ಪಾತ್ರದ ಅಗತ್ಯಕ್ಕಾಗಿ ದೇಹವನ್ನೇ ಮಾರ್ಪಡಿಸುವುದು ನನಗೆ ಬಹಳ ಖುಷಿಯ ಸಂಗತಿ. ಅದು ನನ್ನ ಬದ್ಧತೆ. ಪಾತ್ರವನ್ನು ಒಪ್ಪಿಕೊಂಡಾಗ ಪಾತ್ರದ ಸಂಪೂರ್ಣ ಹಿನ್ನೆಲೆ ಹಾಗೂ ಪಾತ್ರಕ್ಕೆ ನಾನು ಹೇಗೆ ಸಿದ್ಧನಾಗಬೇಕು ಎಂಬುದರ ಬಗ್ಗೆ ಸಾಕಷ್ಟು ಗಮನ ಹರಿಸುತ್ತೇನೆ. 'ಹರಹರ ಮಹಾದೇವ' ಧಾರಾವಾಹಿಯಲ್ಲಿ ನಟಿಸುವಾಗ ಮಾಂಸಾಹಾರ ತ್ಯಜಿಸಿದ್ದೆ. ಅಘೋರಿ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದೆ, ಜಲಂಧರ ಪಾತ್ರಕ್ಕಾಗಿ ಪುನಃ ಸಣ್ಣ ಆಗಬೇಕಿತ್ತು. ಹಾಗಾಗಿ ಈ ಧಾರಾವಾಹಿಯಲ್ಲೇ ನಾನು ಮೂರು ನಾಲ್ಕು ಬಾರಿ ತೂಕ ಇಳಿಸಿದ್ದೆ ಮತ್ತು ಹೆಚ್ಚಿಸಿಕೊಂಡಿದ್ದೆ. ನಂತರ 'ಜೈ ಹನುಮಾನ್' ಧಾರಾವಾಹಿಯಲ್ಲಿ ರಾವಣನ ಪಾತ್ರಕ್ಕಾಗಿ 98 ಕೆಜಿಯಿಂದ 120 ಕೆಜಿಗೆ ತೂಕ ಹೆಚ್ಚಿಸಿಕೊಂಡಿದ್ದೆ.
ತೆಲುಗು ನಾಡಲ್ಲಿ ಮುಖಾಮುಖಿಯಾದ ಕನ್ನಡ ನಟರಾದ ವಿನಯ್ ಗೌಡ, ತಾರಕ್ ಪೊನ್ನಪ್ಪ!
ಮೊದಲು ಮುಖಕ್ಕೆ ಬಣ್ಣ ಹಚ್ಚಿದ್ದು ಯಾವಾಗ?
ನನ್ನ ತಂದೆ ಸಿನಿಮಾ ಹಿನ್ನೆಲೆ ಇದ್ದವರು. ನನ್ನ ಸಹೋದರಿ ಸೇರಿದಂತೆ ಕುಟುಂಬದ ಹಲವರು ನಟನಾ ಕ್ಷೇತ್ರದಲ್ಲೇ ಇದ್ದಾರೆ. ಹಾಗಾಗಿ ಸಹಜವಾಗಿ ನನಗೆ ನಟನೆ ಮೇಲೆ ಒಲವು ಇತ್ತು. 2010ರಲ್ಲಿ ನಾನು ನಟನಾ ಕ್ಷೇತ್ರಕ್ಕೆ ಕಾಲಿಟ್ಟೆ. 'ಚಿಟ್ಟೆ ಹೆಜ್ಜೆ' ನನ್ನ ಮೊದಲ ಧಾರಾವಾಹಿ. ನಂತರ 'ಸಿಐಡಿ ಕರ್ನಾಟಕ', 'ಅಂಬಾರಿ', 'ಶುಭವಿವಾಹ', 'ಅಮ್ಮ' ಸೇರಿ 8ರಿಂದ 10 ಧಾರಾವಾಹಿಗಳಲ್ಲಿ ನಟಿಸಿದ್ದೇನೆ. 'ಸೂಪರ್ ಜೋಡಿ' ರಿಯಾಲಿಟಿ ಶೋನಲ್ಲಿ ನನ್ನ ಪತ್ನಿಯೊಂದಿಗೆ ಭಾಗವಹಿಸಿ ವಿಜೇತನಾದೆ. ಇಲ್ಲಿಯವರೆಗಿನ ನಟನಾ ಪಯಣ ಖುಷಿಕೊಟ್ಟಿದೆ.
'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ' ಧಾರಾವಾಹಿಯಿಂದ ಹೊರಬಂದ ನಟ ವಿನಯ್ ಗೌಡ! ಕಾರಣ ಏನು?
ನಿಮ್ಮ ಧಾರಾವಾಹಿ ಪಟ್ಟಿಯಲ್ಲಿ ಹೊಸದಾಗಿ ಪರಭಾಷಾ ಧಾರಾವಾಹಿ ಸೇರ್ಪಡೆಯಾಗಿದೆ...
ಹೌದು. ಕನ್ನಡದ ನನ್ನ ನಟನೆಯ 'ನಂದಿನಿ', 'ಹರಹರ ಮಹಾದೇವ' ಧಾರಾವಾಹಿಗಳು ತೆಲುಗಿಗೆ ಡಬ್ ಆಗಿ ಪ್ರಸಾರವಾಗುತ್ತಿದ್ದವು. ನನ್ನ ಪಾತ್ರ ನೋಡಿ ತೆಲುಗು ಧಾರಾವಾಹಿಯಲ್ಲಿ ನಟಿಸುವ ಆಫರ್ ನೀಡಿದರು. ವಿಭಿನ್ನವಾದ ಹಾಗೂ ನನಗೆ ಒಪ್ಪುವಂಥ ಪಾತ್ರವಾಗಿದ್ದರಿಂದ ನಟಿಸಲು ನಿರ್ಧರಿಸಿದೆ. ಧಾರಾವಾಹಿಯಲ್ಲಿ ನನ್ನ ಪಾತ್ರ ಸೋಮವಾರದಿಂದ ಪ್ರಸಾರವಾಗುತ್ತಿದೆ. ಪಾತ್ರ ಹಾಗೂ ನನ್ನ ಲುಕ್ ಬಗ್ಗೆ ಪ್ರೇಕ್ಷಕರಿಂದ, ಹಿತೈಷಿಗಳಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತುಂಬಾ ಖುಷಿ ಇದೆ. ನಾನು ಈ ಧಾರಾವಾಹಿಯಲ್ಲಿ ಹೈದರಾಬಾದ್ ಗ್ಯಾಂಗ್ಸ್ಟರ್ನಂಥ ಮೇನ್ ವಿಲನ್ ಪಾತ್ರದಲ್ಲಿನಟಿಸುತ್ತಿದ್ದೇನೆ.
'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ' ಧಾರಾವಾಹಿಯಿಂದ ಇತ್ತೀಚೆಗೆ ಹೊರಬಂದಿದ್ದೀರಿ, ಕಾರಣ?
ಕೊರೊನಾ ಕಾರಣದಿಂದ ಅನಿವಾರ್ಯವಾಗಿ, ಮನಸ್ಸಿಲ್ಲದ ಮನಸ್ಸಿನಿಂದ ನಾನು ಈ ಧಾರಾವಾಹಿಯಿಂದ ಹೊರಬಂದಿದ್ದೇನೆ. ಇದೊಂದು ತುಂಬಾ ಕಠಿಣ ನಿರ್ಧಾರ. ನನಗೆ ಬಹಳ ಇಷ್ಟವಾದ ಶಿವನ ಪಾತ್ರದಿಂದ ಹೊರಬಂದಿದ್ದಕ್ಕೆ ಹೃದಯ ಭಾರವಾಗಿದೆ.
ಹೊಸ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದೀರಾ?
ಕನ್ನಡದ 'ಕೈಮರ' ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಕೋವಿಡ್ನಿಂದಾಗಿ ಚಿತ್ರ ಮುಂದಕ್ಕೆ ಹೋಗಿದೆ. ಇನ್ನೂ ಹೆಸರಿಡದ 'ಪ್ರೊಡಕ್ಷನ್ ನಂ. 7' ಸಿನಿಮಾ ಹಾಗೂ ತಮಿಳು ಸಿನಿಮಾವೊಂದರಲ್ಲಿ ಖಳನಾಯಕನ ಪಾತ್ರ ನಿರ್ವಹಿಸುತ್ತಿದ್ದೇನೆ. ನನ್ನ ಮೊದಲ ಸಿನಿಮಾ 'ರಾಕೆಟ್'. ನಂತರ 'ಪೊಗರು', 'ಶಿವಾಜಿ ಸುರತ್ಕಲ್', 'ಅವನಲ್ಲಿ ಇವಳಿಲ್ಲಿ' ಸಿನಿಮಾಗಳಲ್ಲಿ ನಟಿಸಿದ್ದೇನೆ. ಈ ಎಲ್ಲಾ ಸಿನಿಮಾಗಳ ಪಾತ್ರಗಳು ನನಗೆ ಅಪಾರ ಜನಪ್ರಿಯತೆ ತಂದುಕೊಟ್ಟಿವೆ.
ಪಾತ್ರಕ್ಕಾಗಿ ದೇಹವನ್ನು ಮಾರ್ಪಡಿಸುವುದು ಅಷ್ಟು ಸಲೀಸಾ?
ಪಾತ್ರದ ಅಗತ್ಯಕ್ಕಾಗಿ ದೇಹವನ್ನೇ ಮಾರ್ಪಡಿಸುವುದು ನನಗೆ ಬಹಳ ಖುಷಿಯ ಸಂಗತಿ. ಅದು ನನ್ನ ಬದ್ಧತೆ. ಪಾತ್ರವನ್ನು ಒಪ್ಪಿಕೊಂಡಾಗ ಪಾತ್ರದ ಸಂಪೂರ್ಣ ಹಿನ್ನೆಲೆ ಹಾಗೂ ಪಾತ್ರಕ್ಕೆ ನಾನು ಹೇಗೆ ಸಿದ್ಧನಾಗಬೇಕು ಎಂಬುದರ ಬಗ್ಗೆ ಸಾಕಷ್ಟು ಗಮನ ಹರಿಸುತ್ತೇನೆ. 'ಹರಹರ ಮಹಾದೇವ' ಧಾರಾವಾಹಿಯಲ್ಲಿ ನಟಿಸುವಾಗ ಮಾಂಸಾಹಾರ ತ್ಯಜಿಸಿದ್ದೆ. ಅಘೋರಿ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದೆ, ಜಲಂಧರ ಪಾತ್ರಕ್ಕಾಗಿ ಪುನಃ ಸಣ್ಣ ಆಗಬೇಕಿತ್ತು. ಹಾಗಾಗಿ ಈ ಧಾರಾವಾಹಿಯಲ್ಲೇ ನಾನು ಮೂರು ನಾಲ್ಕು ಬಾರಿ ತೂಕ ಇಳಿಸಿದ್ದೆ ಮತ್ತು ಹೆಚ್ಚಿಸಿಕೊಂಡಿದ್ದೆ. ನಂತರ 'ಜೈ ಹನುಮಾನ್' ಧಾರಾವಾಹಿಯಲ್ಲಿ ರಾವಣನ ಪಾತ್ರಕ್ಕಾಗಿ 98 ಕೆಜಿಯಿಂದ 120 ಕೆಜಿಗೆ ತೂಕ ಹೆಚ್ಚಿಸಿಕೊಂಡಿದ್ದೆ.
ತೆಲುಗು ನಾಡಲ್ಲಿ ಮುಖಾಮುಖಿಯಾದ ಕನ್ನಡ ನಟರಾದ ವಿನಯ್ ಗೌಡ, ತಾರಕ್ ಪೊನ್ನಪ್ಪ!
ಮೊದಲು ಮುಖಕ್ಕೆ ಬಣ್ಣ ಹಚ್ಚಿದ್ದು ಯಾವಾಗ?
ನನ್ನ ತಂದೆ ಸಿನಿಮಾ ಹಿನ್ನೆಲೆ ಇದ್ದವರು. ನನ್ನ ಸಹೋದರಿ ಸೇರಿದಂತೆ ಕುಟುಂಬದ ಹಲವರು ನಟನಾ ಕ್ಷೇತ್ರದಲ್ಲೇ ಇದ್ದಾರೆ. ಹಾಗಾಗಿ ಸಹಜವಾಗಿ ನನಗೆ ನಟನೆ ಮೇಲೆ ಒಲವು ಇತ್ತು. 2010ರಲ್ಲಿ ನಾನು ನಟನಾ ಕ್ಷೇತ್ರಕ್ಕೆ ಕಾಲಿಟ್ಟೆ. 'ಚಿಟ್ಟೆ ಹೆಜ್ಜೆ' ನನ್ನ ಮೊದಲ ಧಾರಾವಾಹಿ. ನಂತರ 'ಸಿಐಡಿ ಕರ್ನಾಟಕ', 'ಅಂಬಾರಿ', 'ಶುಭವಿವಾಹ', 'ಅಮ್ಮ' ಸೇರಿ 8ರಿಂದ 10 ಧಾರಾವಾಹಿಗಳಲ್ಲಿ ನಟಿಸಿದ್ದೇನೆ. 'ಸೂಪರ್ ಜೋಡಿ' ರಿಯಾಲಿಟಿ ಶೋನಲ್ಲಿ ನನ್ನ ಪತ್ನಿಯೊಂದಿಗೆ ಭಾಗವಹಿಸಿ ವಿಜೇತನಾದೆ. ಇಲ್ಲಿಯವರೆಗಿನ ನಟನಾ ಪಯಣ ಖುಷಿಕೊಟ್ಟಿದೆ.
'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ' ಧಾರಾವಾಹಿಯಿಂದ ಹೊರಬಂದ ನಟ ವಿನಯ್ ಗೌಡ! ಕಾರಣ ಏನು?