‘ಅಮೃತವರ್ಷಿಣಿ’.. 1997ರಲ್ಲಿ ತೆರೆಕಂಡ ಸಿನಿಮಾ. ರಮೇಶ್ ಅರವಿಂದ್, ಸುಹಾಸಿನಿ, ಶರತ್ ಬಾಬು, ನಿವೇದಿತಾ ಜೈನ್ ಅಭಿನಯಿಸಿದ್ದ ‘ಅಮೃತವರ್ಷಿಣಿ’ ಚಿತ್ರ ಮ್ಯೂಸಿಕಲ್ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಇವತ್ತಿಗೂ ‘ಅಮೃತವರ್ಷಿಣಿ’ ಚಿತ್ರದ ಹಾಡುಗಳು ಅನೇಕರಿಗೆ ಫೇವರಿಟ್ ಆಗಿ ಉಳಿದಿದೆ. ಅಷ್ಟರಮಟ್ಟಿಗೆ ‘ಅಮೃತವರ್ಷಿಣಿ’ ಸಿನಿಮಾದ ಹಾಡುಗಳು ಜನರ ಮನಸ್ಸನ್ನು ಗೆದ್ದಿವೆ. 1997ರಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಪೈಕಿ ‘ಅಮೃತವರ್ಷಿಣಿ’ ಕೂಡ ಒಂದು. ದಿನೇಶ್ ಬಾಬು ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದರು. ‘ಅಮೃತವರ್ಷಿಣಿ’ ಚಿತ್ರವನ್ನು ಇಂದು ನೆನಪಿಸಿಕೊಳ್ಳೋಕೆ ಒಂದು ಕಾರಣ ಇದೆ. ಅದೇನಪ್ಪಾ ಅಂದ್ರೆ, ‘ಅಮೃತವರ್ಷಿಣಿ’ ಸಿನಿಮಾ ತೆರೆಕಂಡು 25 ವರ್ಷಗಳು ತುಂಬಿವೆ. ಹೌದು.. ಇವತ್ತಿಗೆ ಸರಿಯಾಗಿ 25 ವರ್ಷಗಳ ಹಿಂದೆ ‘ಅಮೃತವರ್ಷಿಣಿ’ ಚಿತ್ರ ರಿಲೀಸ್ ಆಗಿತ್ತು. 25 ವಸಂತಗಳು ತುಂಬಿದ ಸಂಭ್ರಮದಲ್ಲಿ ‘ಅಮೃತವರ್ಷಿಣಿ’ ಕುರಿತಾದ ಕೆಲ ಇಂಟ್ರೆಸ್ಟಿಂಗ್ ಸಂಗತಿಗಳು ಇಲ್ಲಿವೆ ನೋಡಿ…
ಎರಡು ದಶಕಗಳ ಹಿಂದೆಯೇ ಕಥೆ ರೆಡಿಮಾಡಿಟ್ಟುಕೊಂಡಿದ್ದ ದಿನೇಶ್ ಬಾಬು
‘ಅಮೃತವರ್ಷಿಣಿ’ ಸಿನಿಮಾ ತಯಾರಾಗಿದ್ದು 1996-97 ರಲ್ಲಿ. ಆದರೆ, ಅದಕ್ಕೂ ಎರಡು ದಶಕಗಳ ಹಿಂದೆಯೇ.. ಅಂದ್ರೆ, 1979ರಲ್ಲೇ ‘ಅಮೃತವರ್ಷಿಣಿ’ ಕಥೆಯನ್ನ ದಿನೇಶ್ ಬಾಬು ರೆಡಿ ಮಾಡಿಕೊಂಡಿದ್ದರು. 1979ರಿಂದಲೂ ‘ಅಮೃತವರ್ಷಿಣಿ’ ಕಥೆಯನ್ನ ಸಿನಿಮಾ ಮಾಡಬೇಕು ಎಂಬುದು ದಿನೇಶ್ ಬಾಬು ಅವರ ತಲೆಯಲ್ಲಿತ್ತು. ಆದರೆ, ಅದು ಸಾಕಾರಗೊಂಡಿದ್ದು 1996-97 ರಲ್ಲಿ.
‘ಅಮೃತವರ್ಷಿಣಿ’ ಕಥೆ ಹೇಳಲು ಹೋಗಿ ‘ಸುಪ್ರಭಾತ’ ಸಿನಿಮಾ ಮಾಡಿದರು!
80ರ ದಶಕದಲ್ಲಿ ನಟಿ ಸುಹಾಸಿನಿ ಜನಪ್ರಿಯ ಹೀರೋಯಿನ್ ಆಗಿದ್ದರು. ಸುಹಾಸಿನಿ ಅವರೊಂದಿಗೆ ‘ಅಮೃತವರ್ಷಿಣಿ’ ಸಿನಿಮಾ ಮಾಡಲು ದಿನೇಶ್ ಬಾಬು ಮನಸ್ಸು ಮಾಡಿದರು. ಹೀಗಾಗಿ, 1987-88ರಲ್ಲಿ ‘ಅಮೃತವರ್ಷಿಣಿ’ ಕಥೆಯನ್ನು ಹೇಳಲು ಸುಹಾಸಿನಿ ಅವರನ್ನು ದಿನೇಶ್ ಬಾಬು ಭೇಟಿ ಮಾಡಿದರು. ಆದರೆ, ಅಲ್ಲಾಗಿದ್ದೇ ಬೇರೆ. ‘ಅಮೃತವರ್ಷಿಣಿ’ ಕಥೆ ಹೇಳಲು ಹೋದ ದಿನೇಶ್ ಬಾಬು ಕೊನೆಗೆ ಸುಹಾಸಿನಿ ಹಾಗೂ ಡಾ.ವಿಷ್ಣುವರ್ಧನ್ ಜೊತೆಗೆ ‘ಸುಪ್ರಭಾತ’ ಸಿನಿಮಾ ಮಾಡಿದರು.
ಯಾವುದೋ ಸಿನಿಮಾ ಮಾಡಬೇಕಿದ್ದ ನಿರ್ಮಾಪಕಿ ‘ಅಮೃತವರ್ಷಿಣಿ’ ಕಥೆ ಮೆಚ್ಚಿದರು!
‘ಸುಪ್ರಭಾತ’ ಸಿನಿಮಾ ಬಿಡುಗಡೆಯಾಗಿ ವರ್ಷಗಳು ಉರುಳಿದ ಬಳಿಕ ಕೇರಳದಲ್ಲಿ ಇದ್ದ ದಿನೇಶ್ ಬಾಬು ಅವರಿಗೆ ಸುಹಾಸಿನಿ ಫೋನ್ ಮಾಡಿದರು. ‘’ಕ್ಯಾಮರಾಮ್ಯಾನ್ ಕಮ್ ಡೈರೆಕ್ಟರ್ ಆಗಿರುವ ಒಬ್ಬರನ್ನು ನಿರ್ಮಾಪಕಿ ಹುಡುಕುತ್ತಿದ್ದಾರೆ’’ ಅಂತ ದಿನೇಶ್ ಬಾಬುಗೆ ಸುಹಾಸಿನಿ ತಿಳಿಸಿದ್ದರು. ನಿರ್ಮಾಪಕಿ ಬಳಿ ಬೇರೆಯೇ ಸ್ಕ್ರಿಪ್ಟ್ ಇತ್ತು. ಆದರೆ, ಆ ಸ್ಕ್ರಿಪ್ಟ್ ಯಾಕೋ ದಿನೇಶ್ ಬಾಬು ಅವರಿಗೆ ಹಿಡಿಸಲಿಲ್ಲ. ಆಗ ತಮ್ಮ ಬಳಿಯೇ ಇದ್ದ ‘ಅಮೃತವರ್ಷಿಣಿ’ ಕಥೆಯನ್ನ ನಿರ್ಮಾಪಕಿ ಜಯಶ್ರೀದೇವಿಗೆ ದಿನೇಶ್ ಬಾಬು ಹೇಳಿದರು. ‘ಅಮೃತವರ್ಷಿಣಿ’ ಕಥೆ ಜಯಶ್ರೀದೇವಿ ಅವರಿಗೆ ಸಿಕ್ಕಾಪಟ್ಟೆ ಇಷ್ಟವಾಯಿತು. ಹೀಗಾಗಿ, ಸುಹಾಸಿನಿ ಅವರನ್ನು ಒಪ್ಪಿಸಿ ‘ಅಮೃತವರ್ಷಿಣಿ’ ಚಿತ್ರಕ್ಕೆ 1996ರಲ್ಲಿ ಚಾಲನೆ ಕೊಡಲಾಯಿತು.
ಒಂದು ವಾರ ಓಡಲ್ಲ!
‘ಅಮೃತವರ್ಷಿಣಿ’ ಸಿನಿಮಾದ ಫಸ್ಟ್ ಕಾಪಿ ರೆಡಿಯಾದ್ಮೇಲೆ ವಿತರಕರು ಚಿತ್ರವನ್ನು ನೋಡಿ ನಿರ್ಮಾಪಕರಿಗೆ ‘’ಕ್ಲೈಮ್ಯಾಕ್ಸ್ ಚೇಂಜ್ ಮಾಡಿ.. ಇಲ್ಲಾಂದ್ರೆ ಒಂದು ವಾರವೂ ಓಡಲ್ಲ’’ ಅಂತ ಹೇಳಿದ್ದರಂತೆ. ಆದರೆ, ಪ್ರೊಡ್ಯೂಸರ್ ಮೇಡಂ ಇದಕ್ಕೆ ಒಪ್ಪಿಕೊಳ್ಳಲಿಲ್ಲ. ‘’ಇದು ನನ್ನ ಸಿನಿಮಾ. ಇದೇ ಕ್ಲೈಮ್ಯಾಕ್ಸ್. ಚೇಂಜ್ ಮಾಡಲ್ಲ’’ ಅಂತ ನಿರ್ಮಾಪಕಿ ಜಯಶ್ರೀದೇವಿ ಗಟ್ಟಿ ನಿರ್ಧಾರ ಮಾಡಿದ್ದರು. ಆ ದೃಢ ನಿರ್ಧಾರದ ಫಲವೋ ಏನೋ.. ‘ಅಮೃತವರ್ಷಿಣಿ’ ಚಿತ್ರದಲ್ಲಿ ಕ್ಲೈಮ್ಯಾಕ್ಸ್ ಹೈಲೈಟ್ ಆಯ್ತು. ಕ್ಲೈಮ್ಯಾಕ್ಸ್ನಿಂದಲೇ ಸಿನಿಮಾ ಸೂಪರ್ ಹಿಟ್ ಆಯ್ತು.
ಮಣಿರತ್ನಂ ಫೋನ್ ಮಾಡಿದ್ದರು!
‘ಅಮೃತವರ್ಷಿಣಿ’ ಸಿನಿಮಾ ಹಿಟ್ ಆದ ಬಳಿಕ ಸುಹಾಸಿನಿ ಮೂಲಕ ದಿನೇಶ್ ಬಾಬು ಅವರಿಗೆ ಮಣಿರತ್ನಂ ಫೋನ್ ಮಾಡಿದ್ರಂತೆ. ‘‘ಅಮೃತವರ್ಷಿಣಿ’ ಸಿನಿಮಾ ತುಂಬಾ ಇಷ್ಟ ಆಯ್ತು. ‘’ಬ್ಯೂಟಿಫುಲ್ ಫಿಲ್ಮ್’’ ಅಂತ ದಿನೇಶ್ ಬಾಬು ಅವರ ಬಳಿ ಮಣಿರತ್ನಂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆಗ, ‘’ಸಿನಿಮಾದ ಮೈನಸ್ ಪಾಯಿಂಟ್ಸ್ ಹೇಳಿ’’ ಎಂದು ದಿನೇಶ್ ಬಾಬು ಕೇಳಿದಾಗ, ‘’ಮೈನಸ್ ಪಾಯಿಂಟ್ಸ್ ಏನೂ ಇಲ್ಲ. ಆದರೆ, ಇಂಟರ್ವೆಲ್ನಲ್ಲೇ ಎಲ್ಲಾ ಮ್ಯಾಟರ್ ಹೇಳಿದ್ರಿ. ಹೀಗಾಗಿ ಸೆಕೆಂಡ್ ಹಾಫ್ನಲ್ಲಿ ಏನಾಗಬಹುದು ಎಂಬ ಕುತೂಹಲ ಇತ್ತು. ಆದರೂ ಚೆನ್ನಾಗಿತ್ತು’’ ಅಂತ ಮಣಿರತ್ನಂ ಹೇಳಿದ್ದರಂತೆ.
ರಮೇಶ್ ಅರವಿಂದ್ಗೆ ಹೀಗಾಗಿದ್ದು ಇದು ಒಂದೇ ಸಲ!
‘’ಕ್ಯಾಮರಾ ಆಫ್ ಆದ್ಮೇಲೂ ನಾನು ಪಾತ್ರದಿಂದ ಹೊರಗೆ ಬರಲು ಆಗದೇ ಇದ್ದದ್ದು ಒಂದೇ ಸಲ.. ಅದು ‘ಅಮೃತವರ್ಷಿಣಿ’ ಸಿನಿಮಾದಲ್ಲಿ. ನಾನು ಕೊಲೆ ಮಾಡಿ, ಶರತ್ ಬಾಬು ಅವರು ತೀರಿಕೊಂಡ ಮೇಲೆ, ಆ ವಿಚಾರವನ್ನು ಸುಹಾಸಿನಿಗೆ ಹೇಳಬೇಕಿತ್ತು. ಅವರು ಆಗ ಪ್ರೆಗ್ನೆಂಟ್ ಆಗಿರುತ್ತಾರೆ. ನಾನು ಆ ನ್ಯೂಸ್ ಹೇಳುವ ಶಾಟ್ ಆದ್ಮೇಲೆ ನನಗೆ ಒಂದರ್ಥ ಗಂಟೆ ಆಕ್ಟ್ ಮಾಡೋದಕ್ಕೆ ಆಗಲಿಲ್ಲ. ಇಷ್ಟು ವರ್ಷಗಳಲ್ಲಿ ಅದು ಒಂದೇ ಸಲ ನನಗೆ ಹಾಗೆ ಆಗಿರೋದು’’ ಎನ್ನುತ್ತಾರೆ ನಟ ರಮೇಶ್ ಅರವಿಂದ್
ಕಿವಿಗೆ ಇಂಪು ಕೊಡುವ ಹಾಡುಗಳು
‘ಅಮೃತವರ್ಷಿಣಿ’ ಸಿನಿಮಾದಲ್ಲಿ ಹಾಡುಗಳು ಕೂಡ ಹೈಲೈಟ್. ದೇವಾ ಸಂಗೀತ ಸಂಯೋಜನೆಯ ಹಾಡುಗಳು ಇನ್ನೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ. ‘ತುಂತುರು..’, ‘ಈ ಸುಂದರ ಬೆಳದಿಂಗಳ..’, ‘ಮನಸೇ ಬದುಕು..’, ‘ತಂಪು ತಂಗಾಳಿ..’, ‘ಭಲೇ ಭಲೇ ಚಂದದ ಚಂದುಳ್ಳಿ ಹೆಣ್ಣು ನೀನು..’, ‘ಎಲ್ಲಾ ಶಿಲ್ಪಗಳಿಗೂ..’ ಹಾಡುಗಳಿಗೆ ಈಗಲೂ ತಲೆದೂಗುವವರಿದ್ದಾರೆ.
ಪ್ರಶಸ್ತಿಗಳು
‘ಅಮೃತವರ್ಷಿಣಿ’ ಚಿತ್ರಕ್ಕೆ ಹಲವು ಪ್ರಶಸ್ತಿಗಳು ಲಭಿಸಿವೆ. ಅತ್ಯುತ್ತಮ ಚಿತ್ರ ಫಿಲ್ಮ್ಫೇರ್ ಪ್ರಶಸ್ತಿ, ರಮೇಶ್ ಅರವಿಂದ್ಗೆ ಅತ್ಯುತ್ತಮ ನಟ ಫಿಲ್ಮ್ಫೇರ್ ಪ್ರಶಸ್ತಿ, ಸಂಗೀತ ನಿರ್ದೇಶಕ ದೇವಾ ಅವರಿಗೆ ಅತ್ಯುತ್ತಮ ಸಂಗೀತ ಫಿಲ್ಮ್ಫೇರ್ ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ಚಿತ್ರಕಥೆ ಹಾಗೂ ಸಂಕಲನ ವಿಭಾಗಗಳಲ್ಲಿ ರಾಜ್ಯ ಪ್ರಶಸ್ತಿಯೂ ಸಿನಿಮಾಗೆ ದಕ್ಕಿದೆ.
ಧನ್ಯವಾದ ತಿಳಿಸಿದ ರಮೇಶ್ ಅರವಿಂದ್
‘’ಅಮೃತವರ್ಷಿಣಿ’ಗೆ ಇಂದು 25 ವರ್ಷ. ಜಯಶ್ರೀದೇವಿ, ದಿನೇಶ್ ಬಾಬು, ಸುಹಾಸಿನಿ, ಶರತ್ ಬಾಬು, ನಿವೇದಿತಾ, ದೇವಾ, ಕಲ್ಯಾಣ್, ಚಿತ್ರಾ ಮತ್ತು ನಮ್ಮ ಪ್ರೀತಿಯ ಎಸ್ಪಿಬಿ ಸರ್ ಅವರಿಗೆ ನಾನು ಋಣಿ. ಇಷ್ಟು ವರ್ಷಗಳ ಕಾಲ ನಿರಂತರ ಪ್ರೀತಿ ತೋರಿರುವ ನಿಮ್ಮೆಲ್ಲರಿಗೂ ನನ್ನ ಧನ್ಯವಾದಗಳು’’ ಎಂದು ರಮೇಶ್ ಅರವಿಂದ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಎರಡು ದಶಕಗಳ ಹಿಂದೆಯೇ ಕಥೆ ರೆಡಿಮಾಡಿಟ್ಟುಕೊಂಡಿದ್ದ ದಿನೇಶ್ ಬಾಬು
‘ಅಮೃತವರ್ಷಿಣಿ’ ಸಿನಿಮಾ ತಯಾರಾಗಿದ್ದು 1996-97 ರಲ್ಲಿ. ಆದರೆ, ಅದಕ್ಕೂ ಎರಡು ದಶಕಗಳ ಹಿಂದೆಯೇ.. ಅಂದ್ರೆ, 1979ರಲ್ಲೇ ‘ಅಮೃತವರ್ಷಿಣಿ’ ಕಥೆಯನ್ನ ದಿನೇಶ್ ಬಾಬು ರೆಡಿ ಮಾಡಿಕೊಂಡಿದ್ದರು. 1979ರಿಂದಲೂ ‘ಅಮೃತವರ್ಷಿಣಿ’ ಕಥೆಯನ್ನ ಸಿನಿಮಾ ಮಾಡಬೇಕು ಎಂಬುದು ದಿನೇಶ್ ಬಾಬು ಅವರ ತಲೆಯಲ್ಲಿತ್ತು. ಆದರೆ, ಅದು ಸಾಕಾರಗೊಂಡಿದ್ದು 1996-97 ರಲ್ಲಿ.
‘ಅಮೃತವರ್ಷಿಣಿ’ ಕಥೆ ಹೇಳಲು ಹೋಗಿ ‘ಸುಪ್ರಭಾತ’ ಸಿನಿಮಾ ಮಾಡಿದರು!
80ರ ದಶಕದಲ್ಲಿ ನಟಿ ಸುಹಾಸಿನಿ ಜನಪ್ರಿಯ ಹೀರೋಯಿನ್ ಆಗಿದ್ದರು. ಸುಹಾಸಿನಿ ಅವರೊಂದಿಗೆ ‘ಅಮೃತವರ್ಷಿಣಿ’ ಸಿನಿಮಾ ಮಾಡಲು ದಿನೇಶ್ ಬಾಬು ಮನಸ್ಸು ಮಾಡಿದರು. ಹೀಗಾಗಿ, 1987-88ರಲ್ಲಿ ‘ಅಮೃತವರ್ಷಿಣಿ’ ಕಥೆಯನ್ನು ಹೇಳಲು ಸುಹಾಸಿನಿ ಅವರನ್ನು ದಿನೇಶ್ ಬಾಬು ಭೇಟಿ ಮಾಡಿದರು. ಆದರೆ, ಅಲ್ಲಾಗಿದ್ದೇ ಬೇರೆ. ‘ಅಮೃತವರ್ಷಿಣಿ’ ಕಥೆ ಹೇಳಲು ಹೋದ ದಿನೇಶ್ ಬಾಬು ಕೊನೆಗೆ ಸುಹಾಸಿನಿ ಹಾಗೂ ಡಾ.ವಿಷ್ಣುವರ್ಧನ್ ಜೊತೆಗೆ ‘ಸುಪ್ರಭಾತ’ ಸಿನಿಮಾ ಮಾಡಿದರು.
ಯಾವುದೋ ಸಿನಿಮಾ ಮಾಡಬೇಕಿದ್ದ ನಿರ್ಮಾಪಕಿ ‘ಅಮೃತವರ್ಷಿಣಿ’ ಕಥೆ ಮೆಚ್ಚಿದರು!
‘ಸುಪ್ರಭಾತ’ ಸಿನಿಮಾ ಬಿಡುಗಡೆಯಾಗಿ ವರ್ಷಗಳು ಉರುಳಿದ ಬಳಿಕ ಕೇರಳದಲ್ಲಿ ಇದ್ದ ದಿನೇಶ್ ಬಾಬು ಅವರಿಗೆ ಸುಹಾಸಿನಿ ಫೋನ್ ಮಾಡಿದರು. ‘’ಕ್ಯಾಮರಾಮ್ಯಾನ್ ಕಮ್ ಡೈರೆಕ್ಟರ್ ಆಗಿರುವ ಒಬ್ಬರನ್ನು ನಿರ್ಮಾಪಕಿ ಹುಡುಕುತ್ತಿದ್ದಾರೆ’’ ಅಂತ ದಿನೇಶ್ ಬಾಬುಗೆ ಸುಹಾಸಿನಿ ತಿಳಿಸಿದ್ದರು. ನಿರ್ಮಾಪಕಿ ಬಳಿ ಬೇರೆಯೇ ಸ್ಕ್ರಿಪ್ಟ್ ಇತ್ತು. ಆದರೆ, ಆ ಸ್ಕ್ರಿಪ್ಟ್ ಯಾಕೋ ದಿನೇಶ್ ಬಾಬು ಅವರಿಗೆ ಹಿಡಿಸಲಿಲ್ಲ. ಆಗ ತಮ್ಮ ಬಳಿಯೇ ಇದ್ದ ‘ಅಮೃತವರ್ಷಿಣಿ’ ಕಥೆಯನ್ನ ನಿರ್ಮಾಪಕಿ ಜಯಶ್ರೀದೇವಿಗೆ ದಿನೇಶ್ ಬಾಬು ಹೇಳಿದರು. ‘ಅಮೃತವರ್ಷಿಣಿ’ ಕಥೆ ಜಯಶ್ರೀದೇವಿ ಅವರಿಗೆ ಸಿಕ್ಕಾಪಟ್ಟೆ ಇಷ್ಟವಾಯಿತು. ಹೀಗಾಗಿ, ಸುಹಾಸಿನಿ ಅವರನ್ನು ಒಪ್ಪಿಸಿ ‘ಅಮೃತವರ್ಷಿಣಿ’ ಚಿತ್ರಕ್ಕೆ 1996ರಲ್ಲಿ ಚಾಲನೆ ಕೊಡಲಾಯಿತು.
ಒಂದು ವಾರ ಓಡಲ್ಲ!
‘ಅಮೃತವರ್ಷಿಣಿ’ ಸಿನಿಮಾದ ಫಸ್ಟ್ ಕಾಪಿ ರೆಡಿಯಾದ್ಮೇಲೆ ವಿತರಕರು ಚಿತ್ರವನ್ನು ನೋಡಿ ನಿರ್ಮಾಪಕರಿಗೆ ‘’ಕ್ಲೈಮ್ಯಾಕ್ಸ್ ಚೇಂಜ್ ಮಾಡಿ.. ಇಲ್ಲಾಂದ್ರೆ ಒಂದು ವಾರವೂ ಓಡಲ್ಲ’’ ಅಂತ ಹೇಳಿದ್ದರಂತೆ. ಆದರೆ, ಪ್ರೊಡ್ಯೂಸರ್ ಮೇಡಂ ಇದಕ್ಕೆ ಒಪ್ಪಿಕೊಳ್ಳಲಿಲ್ಲ. ‘’ಇದು ನನ್ನ ಸಿನಿಮಾ. ಇದೇ ಕ್ಲೈಮ್ಯಾಕ್ಸ್. ಚೇಂಜ್ ಮಾಡಲ್ಲ’’ ಅಂತ ನಿರ್ಮಾಪಕಿ ಜಯಶ್ರೀದೇವಿ ಗಟ್ಟಿ ನಿರ್ಧಾರ ಮಾಡಿದ್ದರು. ಆ ದೃಢ ನಿರ್ಧಾರದ ಫಲವೋ ಏನೋ.. ‘ಅಮೃತವರ್ಷಿಣಿ’ ಚಿತ್ರದಲ್ಲಿ ಕ್ಲೈಮ್ಯಾಕ್ಸ್ ಹೈಲೈಟ್ ಆಯ್ತು. ಕ್ಲೈಮ್ಯಾಕ್ಸ್ನಿಂದಲೇ ಸಿನಿಮಾ ಸೂಪರ್ ಹಿಟ್ ಆಯ್ತು.
ಮಣಿರತ್ನಂ ಫೋನ್ ಮಾಡಿದ್ದರು!
‘ಅಮೃತವರ್ಷಿಣಿ’ ಸಿನಿಮಾ ಹಿಟ್ ಆದ ಬಳಿಕ ಸುಹಾಸಿನಿ ಮೂಲಕ ದಿನೇಶ್ ಬಾಬು ಅವರಿಗೆ ಮಣಿರತ್ನಂ ಫೋನ್ ಮಾಡಿದ್ರಂತೆ. ‘‘ಅಮೃತವರ್ಷಿಣಿ’ ಸಿನಿಮಾ ತುಂಬಾ ಇಷ್ಟ ಆಯ್ತು. ‘’ಬ್ಯೂಟಿಫುಲ್ ಫಿಲ್ಮ್’’ ಅಂತ ದಿನೇಶ್ ಬಾಬು ಅವರ ಬಳಿ ಮಣಿರತ್ನಂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆಗ, ‘’ಸಿನಿಮಾದ ಮೈನಸ್ ಪಾಯಿಂಟ್ಸ್ ಹೇಳಿ’’ ಎಂದು ದಿನೇಶ್ ಬಾಬು ಕೇಳಿದಾಗ, ‘’ಮೈನಸ್ ಪಾಯಿಂಟ್ಸ್ ಏನೂ ಇಲ್ಲ. ಆದರೆ, ಇಂಟರ್ವೆಲ್ನಲ್ಲೇ ಎಲ್ಲಾ ಮ್ಯಾಟರ್ ಹೇಳಿದ್ರಿ. ಹೀಗಾಗಿ ಸೆಕೆಂಡ್ ಹಾಫ್ನಲ್ಲಿ ಏನಾಗಬಹುದು ಎಂಬ ಕುತೂಹಲ ಇತ್ತು. ಆದರೂ ಚೆನ್ನಾಗಿತ್ತು’’ ಅಂತ ಮಣಿರತ್ನಂ ಹೇಳಿದ್ದರಂತೆ.
ರಮೇಶ್ ಅರವಿಂದ್ಗೆ ಹೀಗಾಗಿದ್ದು ಇದು ಒಂದೇ ಸಲ!
‘’ಕ್ಯಾಮರಾ ಆಫ್ ಆದ್ಮೇಲೂ ನಾನು ಪಾತ್ರದಿಂದ ಹೊರಗೆ ಬರಲು ಆಗದೇ ಇದ್ದದ್ದು ಒಂದೇ ಸಲ.. ಅದು ‘ಅಮೃತವರ್ಷಿಣಿ’ ಸಿನಿಮಾದಲ್ಲಿ. ನಾನು ಕೊಲೆ ಮಾಡಿ, ಶರತ್ ಬಾಬು ಅವರು ತೀರಿಕೊಂಡ ಮೇಲೆ, ಆ ವಿಚಾರವನ್ನು ಸುಹಾಸಿನಿಗೆ ಹೇಳಬೇಕಿತ್ತು. ಅವರು ಆಗ ಪ್ರೆಗ್ನೆಂಟ್ ಆಗಿರುತ್ತಾರೆ. ನಾನು ಆ ನ್ಯೂಸ್ ಹೇಳುವ ಶಾಟ್ ಆದ್ಮೇಲೆ ನನಗೆ ಒಂದರ್ಥ ಗಂಟೆ ಆಕ್ಟ್ ಮಾಡೋದಕ್ಕೆ ಆಗಲಿಲ್ಲ. ಇಷ್ಟು ವರ್ಷಗಳಲ್ಲಿ ಅದು ಒಂದೇ ಸಲ ನನಗೆ ಹಾಗೆ ಆಗಿರೋದು’’ ಎನ್ನುತ್ತಾರೆ ನಟ ರಮೇಶ್ ಅರವಿಂದ್
ಕಿವಿಗೆ ಇಂಪು ಕೊಡುವ ಹಾಡುಗಳು
‘ಅಮೃತವರ್ಷಿಣಿ’ ಸಿನಿಮಾದಲ್ಲಿ ಹಾಡುಗಳು ಕೂಡ ಹೈಲೈಟ್. ದೇವಾ ಸಂಗೀತ ಸಂಯೋಜನೆಯ ಹಾಡುಗಳು ಇನ್ನೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ. ‘ತುಂತುರು..’, ‘ಈ ಸುಂದರ ಬೆಳದಿಂಗಳ..’, ‘ಮನಸೇ ಬದುಕು..’, ‘ತಂಪು ತಂಗಾಳಿ..’, ‘ಭಲೇ ಭಲೇ ಚಂದದ ಚಂದುಳ್ಳಿ ಹೆಣ್ಣು ನೀನು..’, ‘ಎಲ್ಲಾ ಶಿಲ್ಪಗಳಿಗೂ..’ ಹಾಡುಗಳಿಗೆ ಈಗಲೂ ತಲೆದೂಗುವವರಿದ್ದಾರೆ.
ಪ್ರಶಸ್ತಿಗಳು
‘ಅಮೃತವರ್ಷಿಣಿ’ ಚಿತ್ರಕ್ಕೆ ಹಲವು ಪ್ರಶಸ್ತಿಗಳು ಲಭಿಸಿವೆ. ಅತ್ಯುತ್ತಮ ಚಿತ್ರ ಫಿಲ್ಮ್ಫೇರ್ ಪ್ರಶಸ್ತಿ, ರಮೇಶ್ ಅರವಿಂದ್ಗೆ ಅತ್ಯುತ್ತಮ ನಟ ಫಿಲ್ಮ್ಫೇರ್ ಪ್ರಶಸ್ತಿ, ಸಂಗೀತ ನಿರ್ದೇಶಕ ದೇವಾ ಅವರಿಗೆ ಅತ್ಯುತ್ತಮ ಸಂಗೀತ ಫಿಲ್ಮ್ಫೇರ್ ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ಚಿತ್ರಕಥೆ ಹಾಗೂ ಸಂಕಲನ ವಿಭಾಗಗಳಲ್ಲಿ ರಾಜ್ಯ ಪ್ರಶಸ್ತಿಯೂ ಸಿನಿಮಾಗೆ ದಕ್ಕಿದೆ.
ಧನ್ಯವಾದ ತಿಳಿಸಿದ ರಮೇಶ್ ಅರವಿಂದ್
‘’ಅಮೃತವರ್ಷಿಣಿ’ಗೆ ಇಂದು 25 ವರ್ಷ. ಜಯಶ್ರೀದೇವಿ, ದಿನೇಶ್ ಬಾಬು, ಸುಹಾಸಿನಿ, ಶರತ್ ಬಾಬು, ನಿವೇದಿತಾ, ದೇವಾ, ಕಲ್ಯಾಣ್, ಚಿತ್ರಾ ಮತ್ತು ನಮ್ಮ ಪ್ರೀತಿಯ ಎಸ್ಪಿಬಿ ಸರ್ ಅವರಿಗೆ ನಾನು ಋಣಿ. ಇಷ್ಟು ವರ್ಷಗಳ ಕಾಲ ನಿರಂತರ ಪ್ರೀತಿ ತೋರಿರುವ ನಿಮ್ಮೆಲ್ಲರಿಗೂ ನನ್ನ ಧನ್ಯವಾದಗಳು’’ ಎಂದು ರಮೇಶ್ ಅರವಿಂದ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.