ಆ್ಯಪ್ನಗರ

Rakshit Shetty: ಗೋವಾ ಸೇರಿಕೊಂಡ ರಕ್ಷಿತ್ ಶೆಟ್ಟಿ! ಇದರ ಹಿಂದಿದೆ ಒಂದು ಮುಖ್ಯ ಕಾರಣ!

'ಸಿಂಪಲ್ ಸ್ಟಾರ್‌' ರಕ್ಷಿತ್ ಶೆಟ್ಟಿ ಈಗ '777 ಚಾರ್ಲಿ' ಗುಂಗಲ್ಲಿದ್ದಾರೆ. ಆ ಸಿನಿಮಾದ ನಂತರ ಸಾಕಷ್ಟು ಪ್ರಾಜೆಕ್ಟ್‌ಗಳು ಸರದಿಯಲ್ಲಿವೆ. ಇದೆಲ್ಲದರ ಮಧ್ಯೆ ರಕ್ಷಿತ್ ಶೆಟ್ಟಿ ಗೋವಾಕ್ಕೆ ಹೋಗಿದ್ದಾರೆ. ಅದಕ್ಕೆ ಕಾರಣವೇನು?

Vijaya Karnataka Web 21 Sep 2020, 1:25 pm
ನಟ/ನಿರ್ದೇಶಕ ರಕ್ಷಿತ್ ಶೆಟ್ಟಿ ಈಗ '777 ಚಾರ್ಲಿ' ಚಿತ್ರದ ಶೂಟಿಂಗ್‌ ಶುರು ಮಾಡುವುದಕ್ಕೆ ಸಜ್ಜಾಗಿದ್ದಾರೆ. 'ಅವನೇ ಶ್ರೀಮನ್ನಾರಾಯಣ' ಚಿತ್ರದ ನಂತರ ಭಾರಿ ನಿರೀಕ್ಷೆ ಹುಟ್ಟು ಹಾಕಿರುವ ರಕ್ಷಿತ್ ನಟನೆಯ ಇನ್ನೊಂದು ಸಿನಿಮಾವಿದು. ಈ ಮಧ್ಯೆ ಅವರು ಸದ್ದಿಲ್ಲದೇ ಅವರು ಗೋವಾ ಸೇರಿಕೊಂಡಿದ್ದಾರೆ! 'ಅರೇ, ಇದ್ದಕ್ಕಿದ್ದಂತೆಯೇ ಅವರು ಗೋವಾಕ್ಕೆ ಪ್ರವಾಸ ಹೋಗಿದ್ದಾರಾ' ಎಂದುಕೊಳ್ಳುವಂತೆ ಇಲ್ಲ! ಅವರು ಹೋಗಿರುವುದು ಸ್ಕ್ರಿಪ್ಟ್ ಬರೆಯೋದಕ್ಕೆ. ಯಾವ ಸಿನಿಮಾ ಅದು? 'ರಿಚ್ಚಿ'.
Vijaya Karnataka Web Rakshit Shetty: ಗೋವಾ ಸೇರಿಕೊಂಡ ರಕ್ಷಿತ್ ಶೆಟ್ಟಿ! ಇದರ ಹಿಂದಿದೆ ಒಂದು ಮುಖ್ಯ ಕಾರಣ!


ರಕ್ಷಿತ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ್ದ 'ಉಳಿದವರು ಕಂಡಂತೆ' ಚಿತ್ರದ ಪ್ರೀಕ್ವೆಲ್‌ ಆಗಿ ಈ ಸಿನಿಮಾ ಮೂಡಿಬರಲಿದೆ. ಆ ಚಿತ್ರದಲ್ಲಿದ್ದ ರಿಚ್ಚಿ ಪಾತ್ರದ ಪೂರ್ವಾಪರವನ್ನು ತಿಳಿಸಲು ರಕ್ಷಿತ್ ಶೆಟ್ಟಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಹಿಂದೆಯೇ ಅವರು, 'ರಿಚ್ಚಿ' ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದರು. ಇದೀಗ ಸ್ಕ್ರಿಪ್ಟ್ ಕೆಲಸ ಶುರುವಾಗಿದ್ದು, ಕೊನೇ ಹಂತದಲ್ಲಿದೆ. 'ಕಥೆಯಲ್ಲಿ ಒಂದಷ್ಟು ಭಾಗ ಗೋವಾದಲ್ಲಿ ನಡೆಯುತ್ತದೆ. ಅದಕ್ಕಾಗಿ ನಾನು ಗೋವಾಕ್ಕೇ ಬಂದು ಸ್ಕ್ರಿಪ್ಟ್ ಬರೆಯುತ್ತಿದ್ದೇನೆ. ಆದರೆ, ಕಥೆಯ ಕೇಂದ್ರ ಭಾಗ ಉಡುಪಿಯೇ ಆಗಿರುತ್ತದೆ. ಮತ್ತೊಮ್ಮೆ ರಿಚ್ಚಿ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲು ಕಾತುರನಾಗಿದ್ದೇನೆ' ಎಂದಿದ್ದಾರೆ.

ಉಳಿದವರು ಕಂಡಂತೆ ನೋಡಿದ ರಕ್ಷಿತ್‌
ಇತ್ತೀಚೆಗೆ ಮತ್ತೆ ಅವರು 'ಉಳಿದವರು ಕಂಡಂತೆ' ಚಿತ್ರವನ್ನು ನೋಡಿದ್ದಾರೆ. 'ಕಳೆದ ಎರಡು ವರ್ಷಗಳಿಂದ ರಿಚ್ಚಿ ಸಿನಿಮಾ ಮಾಡುವುದಕ್ಕೆ ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದೇವೆ. 'ಉಳಿದವರು ಕಂಡಂತೆ' ಸಿನಿಮಾ ಬಿಡುಗಡೆ ಆದಾಗಿನಿಂದ ನಾನು ನೋಡಿರಲಿಲ್ಲ. ಆರು ವರ್ಷಗಳ ನಂತರ ಈಚೆಗೆ ಆ ಸಿನಿಮಾ ನೋಡಿದೆ. ನನಗೆ ಮತ್ತೊಂದು ಹೊಸ ಆಯಾಮ ಕಂಡಿತು' ಎಂದಿದ್ದಾರೆ ಅವರು. ಆ ಸಿನಿಮಾದಲ್ಲಿನ ಪ್ರಶ್ನೆಗಳಿಗೆ 'ರಿಚ್ಚಿ'ಯಲ್ಲಿ ಉತ್ತರ ಸಿಗಲಿದೆಯಂತೆ.

ನಟ ಶಿವರಾಜ್‌ಕುಮಾರ್ ಮನೆಯಲ್ಲಿ ಸಭೆ ನಡೆಸಿದ್ದೇಕೆ ಕನ್ನಡದ ಸ್ಟಾರ್ ನಟರು?

ರಕ್ಷಿತ್-ಪುಷ್ಕರ್ ನಿರ್ಮಾಣ
'ಉಳಿದವರು ಕಂಡಂತೆ' ಚಿತ್ರದಲ್ಲಿ ರಕ್ಷಿತ್‌ಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ರಾಹುಲ್, 'ರಿಚ್ಚಿ'ಯನ್ನು ನಿರ್ದೇಶನ ಮಾಡಲಿದ್ದಾರೆ. ಚಿತ್ರಕ್ಕೆ ಬಂಡವಾಳವನ್ನು ರಕ್ಷಿತ್‌ ಶೆಟ್ಟಿ ಜೊತೆಗೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಕೂಡ ಹಾಕಲಿದ್ದಾರೆ. '777 ಚಾರ್ಲಿ' ಶೂಟಿಂಗ್ ಮುಗಿದ ಮೇಲೆಯೇ ಈ ಸಿನಿಮಾ ಶುರುವಾಗಲಿದೆ. ಅದರ ಜೊತೆಗೆ 'ಕವಲುದಾರಿ' ಹೇಮಂತ್ ರಾವ್ ನಿರ್ದೇಶನದ ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಮಾಡಬೇಕಿದೆ. ರಕ್ಷಿತ್ ಶೆಟ್ಟಿ ನಿರ್ದೇಶನದಲ್ಲಿ 'ಪುಣ್ಯಕೋಟಿ' ಚಿತ್ರ ಕೂಡ ಸೆಟ್ಟೇರಲಿದೆ.

ರಕ್ಷಿತ್‌ ಶೆಟ್ಟಿಯ ಮಾಸ್ಟರ್‌ ಪ್ಲ್ಯಾನ್‌! ಓಟಿಟಿಗಾಗಿ ಸಿದ್ಧ ಆಗ್ತಿದೆ ಹೊಸ ಸಿನಿಮಾ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌