ಆ್ಯಪ್ನಗರ

ಕರಾವಳಿ ಬದುಕಿನ ಬಗ್ಗೆ ವೆಬ್ ಸಿರೀಸ್ ಮಾಡಲಿದ್ದಾರೆ ನಟ ರಕ್ಷಿತ್ ಶೆಟ್ಟಿ! ವಿಶೇಷವಾಗಿದೆ ಇದರ ಶೀರ್ಷಿಕೆ!

'777 ಚಾರ್ಲಿ' ಚಿತ್ರದಲ್ಲಿ ಬ್ಯುಸಿ ಇರುವ ನಟ ರಕ್ಷಿತ್‌ ಶೆಟ್ಟಿ ಈಗ ವೆಬ್‌ ಸಿರೀಸ್‌ ನಿರ್ಮಾಣ ಮಾಡುವ ಆಲೋಚನೆ ಮಾಡಿದ್ದಾರೆ. ಅದರ ಬಗ್ಗೆ ಅವರು 'ವಿಜಯ ಕರ್ನಾಟಕ'ದ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

Vijaya Karnataka Web 20 Nov 2020, 8:45 pm
ನಟ ರಕ್ಷಿತ್‌ ಶೆಟ್ಟಿ ವಿಶಿಷ್ಟ ಆಲೋಚನೆಯ ನಟ ಮತ್ತು ನಿರ್ದೇಶಕ. ಹೊಸ ಹೊಸ ಆಲೋಚನೆಗೆ ಅವರು ಯಾವಾಗಲೂ ತಮ್ಮ ಪ್ರೋತ್ಸಾಹ ನೀಡುತ್ತಿರುತ್ತಾರೆ. ಈಗ ತಮ್ಮ ತಂಡದ ವತಿಯಿಂದ ಅವರು ವೆಬ್‌ ಸಿರೀಸ್‌ ಒಂದನ್ನು ನಿರ್ಮಾಣ ಮಾಡುತ್ತಿದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿಅವರು ಒಟಿಟಿ ಪ್ಲಾಟ್‌ಫಾರ್ಮ್‌ಗಾಗಿ ಸಿನಿಮಾವೊಂದನ್ನು ಮಾಡುವುದಾಗಿ ಹೇಳಿಕೊಂಡಿದ್ದರು. ಈಗ ವೆಬ್‌ ಸಿರೀಸ್‌ ಮಾಡಲು ಅವರು ಪ್ಲ್ಯಾನ್‌ ಮಾಡಿಕೊಂಡಿದ್ದಾರೆ.
Vijaya Karnataka Web rakshit shetty


ಆರ್‌ಜೆ ಪ್ರದೀಪ ಸಾರಥ್ಯದಲ್ಲಿ ಒಂದು ವೆಬ್‌ ಸಿರೀಸ್‌ ಬಂದಿತ್ತು. ಈಗ ರಕ್ಷಿತ್‌ ಸಹ ಅಂತಹದ್ದೊಂದು ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. 'ವೆಬ್‌ ಸಿರೀಸ್‌ ಸದ್ಯದ ಟ್ರೆಂಡ್‌. ಬೇರೆ ಬೇರೆ ಒಟಿಟಿಗಳಲ್ಲಿ ಸಿನಿಮಾಗಳ ಕ್ವಾಲಿಟಿಯಲ್ಲೇ ಸಾಕಷ್ಟು ವೆಬ್‌ ಸಿರೀಸ್‌ಗಳು ಬಂದಿವೆ. ನಾನು ಸಹ ಲಾಕ್‌ಡೌನ್‌ ಅವಧಿಯಲ್ಲಿಒಂದು ಸಬ್ಜೆಕ್ಟ್ ಬರೆದಿಟ್ಟಿದ್ದೇನೆ. ಅದಕ್ಕೆ 'ಏಕಂ' ಎಂದು ಹೆಸರಿಡಲಾಗಿದೆ. ಒಟ್ಟು ಎಂಟು ಎಪಿಸೋಡ್‌ನ ವೆಬ್‌ ಸಿರೀಸ್‌ ಇದಾಗಿದೆ. ಮೊದಲ ಸೀಸನ್‌ನಲ್ಲಿ ಕರಾವಳಿಯ ಬಗೆಗಿನ ಕಥೆ ಇರುತ್ತದೆ. ಕರಾವಳಿಯ ವಿಶೇಷತೆ, ಅಲ್ಲಿನ ಜನಜೀವನ ಎಲ್ಲವೂ ಈ ಎಪಿಸೋಡ್‌ನಲ್ಲಿರುತ್ತವೆ' ಎಂದು ಹೇಳುತ್ತಾರೆ ರಕ್ಷಿತ್.

'ಸಾಮಾನ್ಯವಾಗಿ ವೆಬ್‌ ಸಿರೀಸ್‌ಗಳಲ್ಲಿ ಹೆಚ್ಚಿನವು ಕ್ರೈಂ ಥ್ರಿಲ್ಲರ್‌ ಸಬ್ಜೆಕ್ಟ್ ಇರುತ್ತದೆ. ನಮ್ಮ 'ಏಕಂ' ಸೀರಿಸ್‌ ಮಾಲ್ಗುಡಿ ಡೇಸ್‌ ರೀತಿಯಲ್ಲಿಇರುತ್ತದೆ. ಮಾಲ್ಗುಡಿಯಲ್ಲಿ ಪಶ್ಚಿಮ ಘಟ್ಟಗಳ ಸೌಂದರ್ಯ , ಬೇರೆ ಬೇರೆ ಪ್ರದೇಶಗಳ ಜನ ಜೀವನ ಎಲ್ಲವೂ ಅನಾವರಣಗೊಂಡಿದ್ದವು. ನಮ್ಮ ಸಿರೀಸ್‌ನಲ್ಲಿ ಕರಾವಳಿಯನ್ನು ಸಂಪೂರ್ಣವಾಗಿ ಅನಾವರಣಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಸಾಕಷ್ಟು ಜನ ಹೊಸಬರಿಗೆ ಈ ಬಾರಿ ಅವಕಾಶ ನೀಡಲಿದ್ದೇವೆ. ನನ್ನದು ಬರೀ ನಿರ್ಮಾಣವಷ್ಟೇ. ನಿರ್ದೇಶನವನ್ನು ಬೇರೆಯವರು ಮಾಡುತ್ತಾರೆ' ಎಂದಿದ್ದಾರೆ ರಕ್ಷಿತ್‌ ಶೆಟ್ಟಿ.

'ಕಿರಿಕ್ ಪಾರ್ಟಿ' ಚಿತ್ರದ ಸೀಕ್ವೆಲ್ ಬಗ್ಗೆ ನಟ ರಕ್ಷಿತ್ ಶೆಟ್ಟಿ ನೀಡಿದ್ರು ಹೊಸ ಮಾಹಿತಿ!

ಇದರಲ್ಲಿ ಎಂಟು ಎಪಿಸೋಡ್‌ನಲ್ಲಿಯೂ ಬೇರೆ ಬೇರೆ ಕಥೆ ಇರಬೇಕು ಎಂದು ರಕ್ಷಿತ್‌ ಯೋಚಿಸಿದ್ದಾರೆ. ಸದ್ಯಕ್ಕೆ ಸುಮಂತ್‌ ಭಟ್‌ ಎನ್ನುವವರು ನಟಿಸುತ್ತಿದ್ದಾರೆ. ಜನವರಿಯಿಂದ ಕರಾವಳಿ ಭಾಗದಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಇದು ಕರಾವಳಿಯ ಕಥೆಯಾದರೂ ಇಡೀ ಭಾರತಕ್ಕೆ ಇಷ್ಟವಾಗುತ್ತದೆ ಎನ್ನುವುದು ರಕ್ಷಿತ್‌ ಅಭಿಪ್ರಾಯ. ರಕ್ಷಿತ್‌ ಶೆಟ್ಟಿಯವರ ಬರಹಗಾರರ ತಂಡ ಇದಕ್ಕಾಗಿ ಕೆಲಸ ಮಾಡುತ್ತಿದೆ. 'ಕರಾವಳಿ ಭಾಗದಲ್ಲಿ ಹುಟ್ಟಿ ಬೆಳೆದವರಿಗೆ 'ಏಕಂ' ಸಿರೀಸ್‌ ಭಾವನಾತ್ಮಕವಾಗಿ ಬೆಸೆದುಕೊಳ್ಳುತ್ತದೆ. ಮಾಲ್ಗುಡಿ ಡೇಸ್‌ ಕಥೆ ಪ್ರಾದೇಶಿಕವಾದರೂ ಇಡೀ ಭಾರತೀಯರನ್ನೇ ಸೆಳೆದಿತ್ತು. ಇದು ಸಹ ಭಾಷೆಯನ್ನು ಮೀರಿ ಜನರನ್ನು ಸೆಳೆಯುತ್ತದೆ' ಎಂಬ ನಂಬಿಕೆ ರಕ್ಷಿತ್‌ ಶೆಟ್ಟಿ ಅವರದ್ದು.

ಗೋವಾ ಸೇರಿಕೊಂಡ ರಕ್ಷಿತ್ ಶೆಟ್ಟಿ! ಇದರ ಹಿಂದಿದೆ ಒಂದು ಮುಖ್ಯ ಕಾರಣ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌