ಆ್ಯಪ್ನಗರ

'ದಿ ವಿಲನ್' ಸಿನಿಮಾ ನಟಿ ಆಮಿ ಜಾಕ್ಸನ್ ನಡವಳಿಕೆ ನೋಡಿ ಕಂಗಾಲಾಗಿದ್ದ ನಿರ್ದೇಶಕ ಎ ಎಲ್ ವಿಜಯ್!

ಕಿಚ್ಚ ಸುದೀಪ್ ಮತ್ತು ಶಿವರಾಜ್‌ಕುಮಾರ್ ನಟನೆಯ 'ದಿ ವಿಲನ್' ಸಿನಿಮಾದಲ್ಲಿ ಆಮಿ ಜಾಕ್ಸನ್ ನಟಿಸಿದ್ದರು. ಇವರು ಮೊದಲ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಅತ್ತಿದ್ದರಂತೆ. ಇದಕ್ಕೆ ಕಾರಣ ಏನು? ಇಲ್ಲಿದೆ ಹೆಚ್ಚಿನ ಮಾಹಿತಿ

Vijaya Karnataka Web 7 Aug 2020, 12:37 pm
ಬ್ರಿಟಿಷ್ ಮೂಲದ ನಟಿ, ಮಾಡೆಲ್ ಆಮಿ ಜಾಕ್ಸನ್ ಅವರು ಭಾರತೀಯ ಸಿನಿಮಾಗಳ ಮೂಲಕ ನಟಿಸಿ ಪ್ರಖ್ಯಾತಿ ಪಡೆದಿದ್ದಾರೆ. ಕನ್ನಡದ 'ದಿ ವಿಲನ್' ಸಿನಿಮಾದಲ್ಲಿ ಕಿಚ್ಚ ಸುದೀಪ್ ಹಾಗೂ ಶಿವರಾಜ್‌ಕುಮಾರ್ ಜೊತೆ ಆಮಿ ಜಾಕ್ಸನ್ ನಟಿಸಿದ್ದರು. ಮೊದಲ ಸಿನಿಮಾದಲ್ಲಿ ಆಮಿ ಸಿಕ್ಕಾಪಟ್ಟೆ ಅತ್ತಿದ್ದರಂತೆ. ಯಾಕೆ?
Vijaya Karnataka Web a l vijay reveals amy jackson cried in madrasapattinam movie set
'ದಿ ವಿಲನ್' ಸಿನಿಮಾ ನಟಿ ಆಮಿ ಜಾಕ್ಸನ್ ನಡವಳಿಕೆ ನೋಡಿ ಕಂಗಾಲಾಗಿದ್ದ ನಿರ್ದೇಶಕ ಎ ಎಲ್ ವಿಜಯ್!


ಆಮಿ ಜಾಕ್ಸನ್ ಮೊದಲು ನಟಿಸಿದ್ದು ತಮಿಳಿನಲ್ಲಿ!

Madrasapattinam ಸಿನಿಮಾ ಮೂಲಕ ಆಮಿ ಚಿತ್ರರಂಗ ಪ್ರವೇಶಿಸಿದರು. ಇದರಲ್ಲಿ ಆರ್ಯ ಹೀರೋ ಆಗಿ ನಟಿಸಿದ್ದರು. ಎ ಎಲ್ ವಿಜಯ್ ಅವರು ಈ ಚಿತ್ರದ ನಿರ್ದೆಶನ ಮಾಡಿದ್ದರು. ಇದಾದ ಮೇಲೆ ಆಮಿ ಒಂದಾದ ಮೇಲೆ ಒಂದರಂತೆ ತಮಿಳು, ಹಿಂದಿ, ತೆಲುಗು, ಕನ್ನಡ ಸಿನಿಮಾಗಳಲ್ಲಿ ನಟಿಸಿದರು. Madrasapattinam ಸಿನಿಮಾ ಸಲುವಾಗಿ ಆಮಿ ಮೊದಲ ಬಾರಿಗೆ ಅವರ ದೇಶದಿಂದ ಭಾರತಕ್ಕೆ ಬಂದಿದ್ದರು. ಹೀಗಾಗಿ ಭಾರತದ ಅವರಿಗೆ ತುಂಬ ಹೊಸದು.

ಭಾರತೀಯ ಸಂಸ್ಕೃತಿ ಮೆಚ್ಚಿದ್ದ ಆಮಿ ಜಾಕ್ಸನ್!
'ನಿಜವಾಗಿಯೂ ಚಿತ್ರರಂಗ, ಡಾನ್ಸ್, ನಟನೆ, ಭಾಷೆ ಎಲ್ಲವೂ ನನಗೆ ಏಲಿಯನ್ ರೀತಿ ಇದೆ. ನನಗೆ ಎಲ್ಲವನ್ನು ಚೆನ್ನಾಗಿ ಮಾಡಬೇಕು ಎಂಬ ಆಸೆಯಿದೆ. ಶೂಟಿಂಗ್‌ಗೂ ಮೊದಲು ಭಾರತದ ಸಂಸ್ಕೃತಿ ನೋಡಿ ತುಂಬ ಖುಷಿಯಾಯ್ತು. ನಾನು ತಮಿಳು ಮಾತನಾಡುವ ಮೊದಲು ಎಲ್ಲ ಪಾತ್ರಗಳ ಪರಿಚಯವಾಗಬೇಕು. ನಾನು ಎಲ್ಲಕ್ಕಿಂತ ಮಿಗಿಲಾಗಿ ಸಂಸ್ಕೃತಿಯನ್ನು ಮೆಚ್ಚಿದ್ದೇನೆ' ಎಂದು ಆಮಿ ಜಾಕ್ಸನ್ ಹೇಳಿರುವುದಾಗಿ ನಿರ್ದೇಶಕ ವಿಜಯ್ ಹೇಳಿದ್ದಾರೆ.

ಆಮಿ, ಕುದುರೆ ನೋಡಿ ಅತ್ತಿದ್ದರು
ವಿಜಯ್ ಅವರನ್ನು ಆಮಿ ಗಾಡ್‌ಫಾದರ್ ಆಗಿ ಪರಿಗಣಿಸಿದ್ದಾರೆ. ಇಡೀ ಸಿನಿಮಾ ಮುಗಿಯುವವರೆಗೂ ಸಾಕಷ್ಟು ಹಾಸ್ಯ ಸನ್ನಿವೇಶಗಳು ನಡೆದಿವೆಯಂತೆ. 'ಚೆನ್ನೈಗೆ ಆಮಿ ಬಂದು ಇಳಿದಾಗ ನಾವು ಅವರನ್ನು ಕರೆದುಕೊಂಡು ಬರಲು ಏರ್‌ಪೋರ್ಟ್‌ಗೆ ಹೋದೆವು. ಆಮೇಲೆ ಅವರು ನೋಡಿ ರಸ್ತೆ ಮೇಲೆ ಆಕಳು ಇದೆ ಎಂದರು. ಇವರು ಪ್ರಾಣಿಗಳನ್ನೇ ನೋಡಿಲ್ಲವಾ ಎಂದು ನಾನು ಒಮ್ಮೆ ಯೋಚಿಸಿದೆ. ಮೌಂಟ್ ರೋಡ್‌ನಲ್ಲಿ ನಾವು ಶೂಟಿಂಗ್ ಮಾಡುತ್ತಿದ್ದೆವು. 40 ಡಿಗ್ರಿ ತಾಪಮಾನವಿತ್ತು. ಸಿಕ್ಕಾಪಟ್ಟೆ ಬಿಸಿಲಿತ್ತು. ಆಮಿ ಕಾರ್‌ ಬಾಗಿಲು ತೆಗೆದು ಓಡಿಬಂದು ಅಳತೊಡಗಿದರು. ನನಗೆ ಏನಾಯ್ತು ಅಂತ ಅರ್ಥವಾಗದೆ ನಾನು ಭಯಬಿದ್ದೆ. ಅಸಿಸ್ಟಂಟ್ ಡೈರೆಕ್ಟರ್ ನನ್ನ ಬಳಿ ಬಂದು ಆಮಿ ತಾಯಿ ಕೂಡ ಅಳುತ್ತಿದ್ದಾರೆ ಎಂದು ಹೇಳಿದರು' ಎಂದು ವಿಜಯ್ ತಿಳಿಸಿದ್ದಾರೆ.

Also Read-ಕಿಚ್ಚ ಸುದೀಪ್ ಧರ್ಮಪತ್ನಿ ಪ್ರಿಯಾ ಬದುಕಿನ ರೋಚಕ ವಿಷಯಗಳು ಇಲ್ಲಿವೆ.

ಆಮಿ ಸಮಾಧಾನ ಮಾಡಲು ನಿರ್ದೇಶಕರು ಏನು ಮಾಡಿದ್ದರು?
'ಆಮಿ ಹತ್ತಿರ ಹೋಗಿ ಏನಾಯ್ತು ಅಂತ ಕೇಳಿದಾಗ ಅವರು ಬಿಸಿಲಿನಲ್ಲಿ ಕುದುರೆ ತುಂಬ ಕಷ್ಟಪಡುತ್ತಿದೆ. ನಾನು ಅದನ್ನು ದತ್ತು ಪಡೆಯುತ್ತೇನೆ. ನಾವು ಒಂದು ದೃಶ್ಯಕ್ಕಾಗಿ ಕುದುರೆ ತರಿಸಿದ್ದೆವು. ಬ್ರೇಕ್ ಸಮಯದಲ್ಲಿ ಕುದುರೆ ಅಲ್ಲಿಂದಿಲ್ಲಿಗೆ ಓಡಾಡುತ್ತಿತ್ತು. ಇದನ್ನು ಆಮಿ ಬಳಿ ನೋಡಲಾಗುತ್ತಿರಲಿಲ್ಲ. ಆಮೇಲೆ ಕುದುರೆಗಾಗಿ ಒಂದು ಶೆಡ್ ನಿರ್ಮಿಸಿ ಹೆಚ್ಚಿನ ಆಹಾರ ನೀಡಿದೆವು. ತದನಂತರದಲ್ಲಿ ಆಮಿ ಸಮಾಧಾನಪಟ್ಟುಕೊಂಡರು' ಎಂದು ವಿಜಯ್ ತಿಳಿಸಿದ್ದಾರೆ.

Also Read-ಮದುವೆಗೆ ಮೊದಲೇ ನಟಿ ಆಮಿ ಜಾಕ್ಸನ್ ಗರ್ಭಿಣಿ: ತಲೆ ಸುತ್ತಿ ಬಿದ್ದ ಅಭಿಮಾನಿಗಳು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌