ಮಾತೃಶ್ರೀ ಎಂಟರ್ ಪ್ರೈಸಸ್ ಬ್ಯಾನರ್ನಲ್ಲಿ ಮೈಲಾರಿ ನಿರ್ಮಿಸಿರುವ ಸಿನಿಮಾ 'ಡಿಎನ್ಎ'. ಪ್ರಕಾಶ್ ರಾಜ್ ಮೇಹು ಇದರ ನಿರ್ದೇಶಕರು. ಈ ಚಿತ್ರದ ಒಂದು ಪ್ರಮೋಷನಲ್ ಸಾಂಗ್ ಅನ್ನು ಈಚೆಗೆ ರಿಲೀಸ್ ಮಾಡಲಾಗಿದೆ. ವಿಶೇಷವೆಂದರೆ, ಇದನ್ನು ಬರೆದಿರುವುದು ನಿರ್ದೇಶಕ ಯೋಗರಾಜ್ ಭಟ್. ಹಾಗೆಯೇ, ಹಾಡಿಗೆ ಧ್ವನಿ ನೀಡಿದರು ನಟ ಸತೀಶ್ ನೀನಾಸಂ. ಜೊತೆಗೆ ಯೋಗರಾಜ್ ಭಟ್ ಕೂಡ ಅಲ್ಲಲ್ಲಿ ಹಾಡಿಗೆ ಧ್ವನಿಗೂಡಿಸಿದ್ದಾರೆ. ನಾವ್ಯಾರು ಎಲ್ಲಿಂದ ಬಂದಿದ್ದೀವಿ
ಬಹಳ ವಿಶೇಷವಾಗಿರುವ ಈ ಹಾಡಿನ ಬಗ್ಗೆ ಯೋಗರಾಜ್ ಭಟ್, ಡಿಎನ್ಎ ಚಿತ್ರತಂಡ, ಗೆಳೆಯ ಚೇತನ್ ಮತ್ತು ನಾನು ಒಟ್ಟುಗೂಡಿ ಪ್ರಯೋಗಾತ್ಮಕವಾಗಿ ಹೊಸಬಗೆಯ ಹಾಡೊಂದನ್ನು ತಯಾರಿಸಿ ಬಿಡುಗಡೆ ಮಾಡಿದ್ದೇವೆ..' ಹೇಳುತ್ತಾರೆ. 'ನಾವ್ಯಾರು ಎಲ್ಲಿಂದ ಬಂದಿದ್ದೀವಿ.. ನಾವ್ಯಾಕೆ ಸ್ವಾಮಿ ಹಿಂಗಿದ್ದೀವಿ.. ಹುಟ್ಟು ತೊಟ್ಲು ಬಿಟ್ಟಿ ಜನ್ಮ ತುಟ್ಟಿ ಸಾವು ಒಟ್ಟು ಮನ್ಸ ಕೆಟ್ಟೋಗವ್ನೆ ಒಟ್ಟು ಸೈನ್ಸು ಟೆಸ್ಟು ಮಾಡಿ ನೆಟ್ರು ನಾವ್ಯಾರೆಂಬ ಮೈಲಿಗಲ್ಲು ಡಿಎನ್ಎ..' ಹೀಗೆ ಸಾಗುತ್ತದೆ ಹಾಡಿನ ಲಿರಿಕ್ಸ್!
ಎಲ್ಲ ವರ್ಗಕ್ಕೂ ಸಲ್ಲುವ ಸಿನಿಮಾ
'ಕಳೆದ 25 ವರ್ಷಗಳಿಂದ ನಾನು ಸಿನಿಮಾರಂಗದಲ್ಲಿದ್ದೇನೆ. ಹೀಗಿದ್ದರೂ ಇದು ನನ್ನ ಮೊದಲ ಸಿನಿಮಾ. ಸಾಕಷ್ಟು ಸಿನಿಮಾಗಳನ್ನು ನೋಡಿಕೊಂಡು ಬಂದಿದ್ದರಿಂದ ನನ್ನ ಸಿನಿಮಾ ಒಂದೇ ವರ್ಗಕ್ಕಷ್ಟೇ ಸೀಮಿತ ಆಗಬಾರದು ಎಂಬ ನಿಟ್ಟಿನಲ್ಲಿ ಆರ್ಟ್ ಚಿತ್ರವಾಗಿಸದೇ, ಪೂರ್ಣ ಕಮರ್ಷಿಯಲ್ ಚಿತ್ರವಾಗಿಸದೇ ಅದರ ನಡುವಿನ ಸಿನಿಮಾವನ್ನಾಗಿ ಡಿಎನ್ಎ ಮಾಡಿದ್ದೇನೆ. ಶೀರ್ಷಿಕೆಯೇ ಹೇಳುವಂತೆ ಇದೊಂದು ಗುರುತಿನ ಕಣದ ಸಿನಿಮಾ. ಸಂಪೂರ್ಣ ಸಂದೇಶದೊಂದಿಗೆ ತಯಾರಾಗಿದೆ' ಎನ್ನುತ್ತಾರೆ ನಿರ್ದೇಶಕ ಪ್ರಕಾಶ್ ರಾಜ್ ಮೇಹು.
'ನಾನು ಮತ್ತು ನಿರ್ದೇಶಕರು ಒಂದೇ ಶಾಲೆಯಲ್ಲಿ ಓದಿದವರು. ಆದರೆ ಒಟ್ಟಿಗೆ ಕೆಲಸ ಮಾಡಿರಲಿಲ್ಲ. ಈ ಸಿನಿಮಾ ಮೂಲಕ ಅದು ಸಾಕಾರವಾಗಿದೆ. ಇದು ಸಂಬಂಧಗಳ ಕುರಿತು ಮಾಡಿರುವ ಸಿನಿಮಾ. ತಂಡಕ್ಕೆ ಯಶಸ್ಸು ಸಿಗಲಿ' ಎಂದು ಹಾರೈಸಿದರು ನಟ ಅಚ್ಯುತ್ ಕುಮಾರ್. 'ನಾನೂ ಕನ್ನಡದಲ್ಲಿ ಸಿನಿಮಾ ಮಾಡಬೇಕು ಅಂತ ತುಂಬ ದಿನಗಳಿಂದ ಕಾಯುತ್ತಿದ್ದೆ. ಈಗ ಡಿಎನ್ಎ ಮೂಲಕ ಗಟ್ಟಿ ಕಥೆಯೊಂದಿಗೆ ಬಂದಿದ್ದೇನೆ. ಸಂಬಂಧಗಳ ಬಗ್ಗೆ ಸಿನಿಮಾ ಮಾತನಾಡಲಿದೆ. ನಮ್ಮ ನಡುವಿನ ಕಥೆ ಇದು' ಎನ್ನುತ್ತಾರೆ ಚಿತ್ರದ ನಾಯಕಿ ಎಸ್ಟರ್ ನರೋನಾ. ಉಳಿದಂತೆ, ರೋಜರ್ ನಾರಾಯಣ್, ಯುಮನಾ, ಮಾಸ್ಟರ್ ಆನಂದ್ ಅವರ ಪುತ್ರ ಮಾಸ್ಟರ್ ಕೃಷ್ಣ ಚೈತನ್ಯ ಮುಂತಾದವರು ನಟಿಸಿದ್ದಾರೆ.
ಯೋಗರಾಜ್ ಭಟ್ ಹೇಳಿದ ಕಥೆಗೆ ಪ್ರಭುದೇವ & ಶಿವರಾಜ್ಕುಮಾರ್ ನೀಡಿದ ಪ್ರತಿಕ್ರಿಯೆ ಹೇಗಿತ್ತು?
ಪ್ರಮೋಷನಲ್ ಹಾಡನ್ನು ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್ ಬಿಡುಗಡೆ ಮಾಡಿದರು. ಹಾಡುಗಳಿಗೆ ಚೇತನ್ ಕೃಷ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ. 'ಸಂಪೂರ್ಣ ಕುಟುಂಬ ಕುಳಿತು ನೋಡುವ ಸಿನಿಮಾ ಇದು. ಈಗಾಗಲೇ ಸೆನ್ಸಾರ್ ಮಂಡಳಿಯವರೂ ಚಿತ್ರವನ್ನು ಮೆಚ್ಚಿ ಯು ಸರ್ಟಿಫಿಕೇಟ್ ನೀಡಿದ್ದಾರೆ. ಇದೇ ತಿಂಗಳ 16ಕ್ಕೆ ಅಥವಾ 30ಕ್ಕೆ ಸಿನಿಮಾ ತೆರೆಗೆ ತರುವ ಪ್ಲಾನ್ ಇತ್ತು. ಕೋವಿಡ್ನಿಂದಾಗಿ ಶೇ.50 ಸೀಟು ಭರ್ತಿಗೆ ಅವಕಾಶ ಇರುವುದರಿಂದ ಸದ್ಯಕ್ಕೆ ಬಿಡುಗಡೆ ಮುಂದೂಡಿದ್ದೇವೆ' ಎಂಬುದು ನಿರ್ಮಾಪಕ ಮೈಲಾರಿ ಮಾತು. ಚಿತ್ರಕ್ಕೆ ಶಿವರಾಜ್ ಮೇಹು ಸಂಕಲನ, ರವಿಕುಮಾರ್ ಛಾಯಾಗ್ರಹಣ ಇದೆ.
ತನ್ನ ಸಾಲುಗಳಿಗೆ ರಾಜಕೀಯ ಬಣ್ಣ, ಯೋಗರಾಜ್ ಭಟ್ ಸಿಡಿಮಿಡಿ
ಬಹಳ ವಿಶೇಷವಾಗಿರುವ ಈ ಹಾಡಿನ ಬಗ್ಗೆ ಯೋಗರಾಜ್ ಭಟ್, ಡಿಎನ್ಎ ಚಿತ್ರತಂಡ, ಗೆಳೆಯ ಚೇತನ್ ಮತ್ತು ನಾನು ಒಟ್ಟುಗೂಡಿ ಪ್ರಯೋಗಾತ್ಮಕವಾಗಿ ಹೊಸಬಗೆಯ ಹಾಡೊಂದನ್ನು ತಯಾರಿಸಿ ಬಿಡುಗಡೆ ಮಾಡಿದ್ದೇವೆ..' ಹೇಳುತ್ತಾರೆ. 'ನಾವ್ಯಾರು ಎಲ್ಲಿಂದ ಬಂದಿದ್ದೀವಿ.. ನಾವ್ಯಾಕೆ ಸ್ವಾಮಿ ಹಿಂಗಿದ್ದೀವಿ.. ಹುಟ್ಟು ತೊಟ್ಲು ಬಿಟ್ಟಿ ಜನ್ಮ ತುಟ್ಟಿ ಸಾವು ಒಟ್ಟು ಮನ್ಸ ಕೆಟ್ಟೋಗವ್ನೆ ಒಟ್ಟು ಸೈನ್ಸು ಟೆಸ್ಟು ಮಾಡಿ ನೆಟ್ರು ನಾವ್ಯಾರೆಂಬ ಮೈಲಿಗಲ್ಲು ಡಿಎನ್ಎ..' ಹೀಗೆ ಸಾಗುತ್ತದೆ ಹಾಡಿನ ಲಿರಿಕ್ಸ್!
ಎಲ್ಲ ವರ್ಗಕ್ಕೂ ಸಲ್ಲುವ ಸಿನಿಮಾ
'ಕಳೆದ 25 ವರ್ಷಗಳಿಂದ ನಾನು ಸಿನಿಮಾರಂಗದಲ್ಲಿದ್ದೇನೆ. ಹೀಗಿದ್ದರೂ ಇದು ನನ್ನ ಮೊದಲ ಸಿನಿಮಾ. ಸಾಕಷ್ಟು ಸಿನಿಮಾಗಳನ್ನು ನೋಡಿಕೊಂಡು ಬಂದಿದ್ದರಿಂದ ನನ್ನ ಸಿನಿಮಾ ಒಂದೇ ವರ್ಗಕ್ಕಷ್ಟೇ ಸೀಮಿತ ಆಗಬಾರದು ಎಂಬ ನಿಟ್ಟಿನಲ್ಲಿ ಆರ್ಟ್ ಚಿತ್ರವಾಗಿಸದೇ, ಪೂರ್ಣ ಕಮರ್ಷಿಯಲ್ ಚಿತ್ರವಾಗಿಸದೇ ಅದರ ನಡುವಿನ ಸಿನಿಮಾವನ್ನಾಗಿ ಡಿಎನ್ಎ ಮಾಡಿದ್ದೇನೆ. ಶೀರ್ಷಿಕೆಯೇ ಹೇಳುವಂತೆ ಇದೊಂದು ಗುರುತಿನ ಕಣದ ಸಿನಿಮಾ. ಸಂಪೂರ್ಣ ಸಂದೇಶದೊಂದಿಗೆ ತಯಾರಾಗಿದೆ' ಎನ್ನುತ್ತಾರೆ ನಿರ್ದೇಶಕ ಪ್ರಕಾಶ್ ರಾಜ್ ಮೇಹು.
'ನಾನು ಮತ್ತು ನಿರ್ದೇಶಕರು ಒಂದೇ ಶಾಲೆಯಲ್ಲಿ ಓದಿದವರು. ಆದರೆ ಒಟ್ಟಿಗೆ ಕೆಲಸ ಮಾಡಿರಲಿಲ್ಲ. ಈ ಸಿನಿಮಾ ಮೂಲಕ ಅದು ಸಾಕಾರವಾಗಿದೆ. ಇದು ಸಂಬಂಧಗಳ ಕುರಿತು ಮಾಡಿರುವ ಸಿನಿಮಾ. ತಂಡಕ್ಕೆ ಯಶಸ್ಸು ಸಿಗಲಿ' ಎಂದು ಹಾರೈಸಿದರು ನಟ ಅಚ್ಯುತ್ ಕುಮಾರ್. 'ನಾನೂ ಕನ್ನಡದಲ್ಲಿ ಸಿನಿಮಾ ಮಾಡಬೇಕು ಅಂತ ತುಂಬ ದಿನಗಳಿಂದ ಕಾಯುತ್ತಿದ್ದೆ. ಈಗ ಡಿಎನ್ಎ ಮೂಲಕ ಗಟ್ಟಿ ಕಥೆಯೊಂದಿಗೆ ಬಂದಿದ್ದೇನೆ. ಸಂಬಂಧಗಳ ಬಗ್ಗೆ ಸಿನಿಮಾ ಮಾತನಾಡಲಿದೆ. ನಮ್ಮ ನಡುವಿನ ಕಥೆ ಇದು' ಎನ್ನುತ್ತಾರೆ ಚಿತ್ರದ ನಾಯಕಿ ಎಸ್ಟರ್ ನರೋನಾ. ಉಳಿದಂತೆ, ರೋಜರ್ ನಾರಾಯಣ್, ಯುಮನಾ, ಮಾಸ್ಟರ್ ಆನಂದ್ ಅವರ ಪುತ್ರ ಮಾಸ್ಟರ್ ಕೃಷ್ಣ ಚೈತನ್ಯ ಮುಂತಾದವರು ನಟಿಸಿದ್ದಾರೆ.
ಯೋಗರಾಜ್ ಭಟ್ ಹೇಳಿದ ಕಥೆಗೆ ಪ್ರಭುದೇವ & ಶಿವರಾಜ್ಕುಮಾರ್ ನೀಡಿದ ಪ್ರತಿಕ್ರಿಯೆ ಹೇಗಿತ್ತು?
ಪ್ರಮೋಷನಲ್ ಹಾಡನ್ನು ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್ ಬಿಡುಗಡೆ ಮಾಡಿದರು. ಹಾಡುಗಳಿಗೆ ಚೇತನ್ ಕೃಷ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ. 'ಸಂಪೂರ್ಣ ಕುಟುಂಬ ಕುಳಿತು ನೋಡುವ ಸಿನಿಮಾ ಇದು. ಈಗಾಗಲೇ ಸೆನ್ಸಾರ್ ಮಂಡಳಿಯವರೂ ಚಿತ್ರವನ್ನು ಮೆಚ್ಚಿ ಯು ಸರ್ಟಿಫಿಕೇಟ್ ನೀಡಿದ್ದಾರೆ. ಇದೇ ತಿಂಗಳ 16ಕ್ಕೆ ಅಥವಾ 30ಕ್ಕೆ ಸಿನಿಮಾ ತೆರೆಗೆ ತರುವ ಪ್ಲಾನ್ ಇತ್ತು. ಕೋವಿಡ್ನಿಂದಾಗಿ ಶೇ.50 ಸೀಟು ಭರ್ತಿಗೆ ಅವಕಾಶ ಇರುವುದರಿಂದ ಸದ್ಯಕ್ಕೆ ಬಿಡುಗಡೆ ಮುಂದೂಡಿದ್ದೇವೆ' ಎಂಬುದು ನಿರ್ಮಾಪಕ ಮೈಲಾರಿ ಮಾತು. ಚಿತ್ರಕ್ಕೆ ಶಿವರಾಜ್ ಮೇಹು ಸಂಕಲನ, ರವಿಕುಮಾರ್ ಛಾಯಾಗ್ರಹಣ ಇದೆ.
ತನ್ನ ಸಾಲುಗಳಿಗೆ ರಾಜಕೀಯ ಬಣ್ಣ, ಯೋಗರಾಜ್ ಭಟ್ ಸಿಡಿಮಿಡಿ