ಆ್ಯಪ್ನಗರ

ದೆವ್ವದ ಪಾತ್ರದಲ್ಲಿ ಕನ್ನಡದ ಪ್ರತಿಭಾನ್ವಿತ ನಟ!

ಈಗಾಗಲೇ ಕನ್ನಡ ಸಿನಿಮಾ ರಂಗದಲ್ಲಿಅಪ್ಪ, ಅಣ್ಣ, ಪೊಲೀಸ್‌ ಆಫೀಸರ್‌ ಹೀಗೆ ನಾನಾ ಬಗೆಯ ಪಾತ್ರಗಳನ್ನು ಸಮರ್ಥವಾಗಿ ನಿರ್ವವಹಿಸಿರುವ ಅಚ್ಯುತ್‌ ಕುಮಾರ್‌ ಮೊದಲ ಬಾರಿಗೆ ದೆವ್ವದ ಪಾತ್ರದಲ್ಲಿ ನಟಿಸಿದ್ದಾರೆ. ರಾಜ್‌ ಪತ್ತಿಪಾಟಿ ನಿರ್ದೇಶನದಲ್ಲಿ ಮೂಡಿ ಬಂದಿರುವ 'ಕಾಣದಂತೆ ಮಾಯವಾದನು' ಸಿನಿಮಾದಲ್ಲಿಅವರು ಹೊಸ ಬಗೆಯ ಪಾತ್ರ ಮಾಡಿದ್ದಾರೆ.

Vijaya Karnataka Web 27 Jan 2020, 10:09 am
ಕನ್ನಡ ಚಿತ್ರರಂಗದಲ್ಲಿ ಸದ್ಯದ ಬಹುಬೇಡಿಕೆಯ ಪೋಷಕ ನಟ ಎಂದರೆ ಅಚ್ಯುತ್‌ ಕುಮಾರ್‌. ಎಲ್ಲ ಬಗೆಯ ಪಾತ್ರಗಳಿಗೂ ಜೀವ ತುಂಬಿರುವ ಅವರು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ್ದಾರೆ. ಯಾವ ಪಾತ್ರ ಕೊಟ್ಟರೂ ನೀರು ಕುಡಿದಷ್ಟೇ ಸಲೀಸಾಗಿ ನಿಭಾಯಿಸುವ ಅವರೀಗ ದೆವ್ವದ ಪಾತ್ರ ಮಾಡಿದ್ದಾರೆ.
Vijaya Karnataka Web actor achyuth kumar plays a ghost role in kanadanthe mayavadanu film
ದೆವ್ವದ ಪಾತ್ರದಲ್ಲಿ ಕನ್ನಡದ ಪ್ರತಿಭಾನ್ವಿತ ನಟ!


'ಸಾಮಾನ್ಯವಾಗಿ ಎಲ್ಲ ರೀತಿಯ ಪಾತ್ರಗಳನ್ನು ನಾನು ನಿರ್ವಹಿಸಿದ್ದೇನೆ. ಇದೊಂದು ಹೊಸ ಅನುಭವ. ನಿರ್ದೇಶಕ ರಾಜ್‌ ಅವರ ಕಲ್ಪನೆಯೇ ಚೆನ್ನಾಗಿದೆ. ಪ್ರತಿ ದೃಶ್ಯವನ್ನು ಎಂಜಾಯ್‌ ಮಾಡಿಕೊಂಡು ನಟಿಸಿದ್ದೇನೆ. ದೆವ್ವವಾಗಿ ನಟಿಸಿದ್ದು ಇದೇ ಮೊದಲು. ನಾನು ಖುಷಿ ಪಟ್ಟಿದ್ದೇನೆ ಜನರೂ ಖುಷಿ ಪಡುತ್ತಾರೆ ಎಂಬ ನಂಬಿಕೆ ನನ್ನದು' ಎಂದರು ಅಚ್ಯುತ್‌ಕುಮಾರ್‌.

'ಅಚ್ಯುತ್‌ಕುಮಾರ್‌ ಈ ಸಿನಿಮಾದಲ್ಲಿ ಯುದ್ಧದಲ್ಲಿ ವೀರ ಮರಣ ಹೊಂದಿದ ಸೈನಿಕನ ಪಾತ್ರ ನಿರ್ವಹಿಸಿದ್ದಾರೆ. ಬಾರ್ಡರ್‌ ಸೆಕ್ಯುರಿಟಿ ಮಾಡುವಾಗ ಅವರು ಮೃತ ಪಟ್ಟಿರುತ್ತಾರೆ. ಸತ್ತ ಮೇಲೂ ಒಂದು ಗುಹೆಯನ್ನು ಕಾಯುತ್ತಿರುತ್ತಾರೆ. ಆ ಗುಹೆಯೊಳಗೆ ಯಾವುದೇ ಆತ್ಮ ಹೋಗದಂತೆ ನೋಡಿಕೊಳ್ಳುವುದು ಅವರ ಕೆಲಸವಾಗಿರುತ್ತದೆ. ನಾವು ಮೊದಲು ಈ ಪಾತ್ರ ಹೇಳಿದಾಗ ಅವರು ನಕ್ಕರು. ಇದನ್ನೆಲ್ಲ ಹೇಗೆ ಮಾಡ್ತೀರಾ ಎಂದು ಕೇಳಿದರು. ಅವರಿಗೆ ಪಾತ್ರದ ಮೇಲೆ ನಂಬಿಕೆ ಬಂದಿದ್ದು ಶೂಟಿಂಗ್‌ ಸೆಟ್‌ನಲ್ಲಿ. ಸಖತ್‌ ಎಂಜಾಯ್‌ ಮಾಡಿಕೊಂಡು ಪಾತ್ರ ಮಾಡಿದ್ದಾರೆ' ಎಂದರು ನಿರ್ದೇಶಕರು.

ವಿಕಾಸ್‌ ನಾಯಕರಾಗಿ ನಟಿಸಿರುವ ಈ ಸಿನಿಮಾದಲ್ಲಿ ಆತ್ಮಗಳ ಕಥೆ ಇದೆ. ಜನವರಿ 31ಕ್ಕೆ ಸಿನಿಮಾ ರಾಜ್ಯಾದ್ಯಂತ ರಿಲೀಸ್‌ ಆಗುತ್ತಿದೆ. ವಿಕಾಸ್‌ಗೆ ಜೋಡಿಯಾಗಿ ನಟಿ ಸಿಂಧು ಲೋಕನಾಥ್‌ ಅಭಿನಯಿಸಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್‌ನಿಂದಾಗಿ ಸಖತ್‌ ನಿರೀಕ್ಷೆ ಮೂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌