ಆ್ಯಪ್ನಗರ

'ರೆಬೆಲ್‌ ಸ್ಟಾರ್' ಅಂಬರೀಷ್‌ ಸಮಾಧಿ ಬಳಿ ನಟ ಆದಿತ್ಯ ಕಾಣಿಸಿಕೊಂಡಿದ್ದೇಕೆ?

ನಟ ಆದಿತ್ಯ ಅಭಿನಯದ ಸಿನಿಮಾವೊಂದು ತೆರೆಕಾಣದೆ ಎರಡು ವರ್ಷಗಳೇ ಕಳೆದಿವೆ. ಹಾಗಾದರೆ, ಅವರ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿದೆ. ಈ ಮಧ್ಯೆ ಅವರು 'ರೆಬೆಲ್‌ ಸ್ಟಾರ್' ಅಂಬರೀಷ್‌ ಅವರ ಸಮಾಧಿ ಬಳಿ ಕಾಣಿಸಿಕೊಂಡಿದ್ದಾರೆ. ಯಾಕೆ?

Vijaya Karnataka Web 22 Oct 2019, 5:25 pm
ನಟ ಆದಿತ್ಯ ಅವರ ಕೊನೇ ಸಿನಿಮಾ ತೆರೆಕಂಡಿದ್ದು 2017ರಲ್ಲಿ. ಆ ವರ್ಷ ಅವರ 'ಬೆಂಗಳೂರು ಅಂಡರ್‌ ವರ್ಲ್ಡ್‌' ಚಿತ್ರ ತೆರೆಕಂಡಿತ್ತು. ಆದರೆ, ಗೆಲುವು ಕಾಣಲಿಲ್ಲ. ನಿರ್ದೇಶಕ ಪಿ.ಎನ್. ಸತ್ಯ ಅವರ ಕೊನೆಯ ಸಿನಿಮಾ ಇದಾಗಿತ್ತು. ಆನಂತರ ಅವರು ದರ್ಶನ್ ಜೊತೆ 'ಚಕ್ರವರ್ತಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಪೊಲೀಸ್ ಅಧಿಕಾರಿಯಾಗಿ ಖಡಕ್ ಆಗಿಯೇ ನಟಿಸಿದ್ದರು ಆದಿತ್ಯ. ಆನಂತರ ಅವರ ಯಾವ ಸಿನಿಮಾಗಳು ತೆರೆಕಾಣಲಿಲ್ಲ. ಇದೀಗ ಅವರು 'ರೆಬೆಲ್ ಸ್ಟಾರ್‌' ಅಂಬರೀಷ್ ಅವರ ಸಮಾಧಿ ಬಳಿ ಕಾಣಿಸಿಕೊಂಡಿದ್ದಾರೆ!!
Vijaya Karnataka Web SENU8626

ಲಾಂಗ್ ಗ್ಯಾಪ್ ಬಳಿಕ 'ಮುಂದುವರೆದ ಅಧ್ಯಾಯ'ಕ್ಕೆ ಹೊರಟ ನಟ ಆದಿತ್ಯ!
ಅಷ್ಟಕ್ಕೂ ಅವರೇಕೆ ಅಲ್ಲಿ ಕಾಣಿಸಿಕೊಂಡರು? ಅದಕ್ಕೂ ಕಾರಣವಿದೆ. ಸದ್ಯ ಅವರೀಗ 'ಮುಂದುವರಿದ ಅಧ್ಯಾಯ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೆ ಸಂಪೂರ್ಣಗೊಂಡಿದೆ. ವಿಶೇಷವೆಂದರೆ, ಕಂಠೀರವ ಸ್ಟುಡಿಯೋದಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡಲಾಯ್ತು. ಆನಂತರ ಇಡೀ ಚಿತ್ರತಂಡ ಅಲ್ಲಿಯೇ ಇರುವ ಅಂಬರೀಷ್‌ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಆಶೀರ್ವಾದ ಪಡೆದುಕೊಂಡಿತು. ಕುಂಬಳಕಾಯಿ ಒಡೆದು ಚಿತ್ರೀಕರಣಕ್ಕೆ ಮುಕ್ತಾಯ ಹಾಡಿದೆ. ಈ ವೇಳೆ, ಆದಿತ್ಯ, ಆಶಿಕಾ ಸೋಮಶೇಖರ್‌, ಸಂದೀಪ್ ಕುಮಾರ್, ಚಂದನಾ, ಭಾವನ, ನಾಗೇಂದ್ರ ಬಾಬು ಮುಂತಾದವರು ಇದ್ದರು. ಪೋಸ್ಟ್ ಪ್ರೋಡಕ್ಷನ್ಸ್ ಕೆಲಸಗಳು ಮುಗಿಯುತ್ತಿದ್ದಂತೆಯೇ ಸಿನಿಮಾವನ್ನು ತೆರೆಕಾಣಿಸುವ ಯೋಜನೆ ಚಿತ್ರತಂಡದ್ದು.

ಇತ್ತೀಚೆಗೆ 'ಮಾಸ್ಟರ್' ಪಟ್ಟದಲ್ಲಿ ಮಿಂಚಲು ಹೊರಟ ನಟ ಆದಿತ್ಯ!
ಈ ಚಿತ್ರಕ್ಕೆ 50 ದಿನಗಳ ಕಾಲ ಬೆಂಗಳೂರು, ದೇವರಾಯನದುರ್ಗ, ಮಳವಳ್ಳಿ, ಮಾಗಡಿ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ವಿಭಿನ್ನ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಬಾಲು ಚಂದ್ರಶೇಖರ್ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಹೊಣೆಯೂ ಅವರದ್ದೇ. ಹಾಡುಗಳಿಗೆ ಜಾನಿ-ನಿತಿನ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ಜಯಂತ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ವಿಶೇಷವೆಂದರೆ, ಈ ಚಿತ್ರದ ಹಿನ್ನೆಲೆ ಸಂಗೀತ ಹೊಣೆ ಅನೂಪ್ ಸೀಳಿನ್ ಅವರದ್ದು. ದಿಲೀಪ್ ಚಕ್ರವರ್ತಿ ಛಾಯಾಗ್ರಹಣ ಮಾಡಿದ್ದರೆ, ವಿನೋದ್ ಸಾಹಸ ಸಂಯೋಜಿಸಿದ್ದಾರೆ. ಅಜೇಯ್‍ ರಾವ್‌, ಸಂದೀಪ್ ಕುಮಾರ್, ಆಶಿಕಾ ಸೋಮಶೇಖರ್, ಚಂದನಾ, ಮುಖ್ಯಮಂತ್ರಿ ಚಂದ್ರು, ಜೈಜಗದೀಶ್, ಭಾಸ್ಕರ್ ಸೂರ್ಯ, ವಿನೋದ್, ಶಕ್ತಿ ಸೋಮಣ್ಣ ಮುಂತಾದವರು ನಟಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌