ಆ್ಯಪ್ನಗರ

ತಮಿಳುನಾಡಿನ ಮಾಜಿ ಸಿಎಂ 'ಎಂಜಿಆರ್' ಗೆಟಪ್‌ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ ಖ್ಯಾತ ನಟ!

ಜಯಲಲಿತಾ ಬಯೋಪಿಕ್‌ 'ತಲೈವಿ'ಯಲ್ಲಿ ಕಂಗನಾ ರಣಾವತ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಚಿತ್ರದಲ್ಲಿನ ಅವರ ಲುಕ್ ಅಷ್ಟೇನು ಗಮನಸೆಳೆಯುವಂತೆ ಇರಲಿಲ್ಲ. ಇದೀಗ ಎಂಜಿಆರ್ ಪಾತ್ರದ ಫಸ್ಟ್‌ಲುಕ್ ಬಹಿರಂಗಗೊಂಡಿದ್ದು, ಅಭಿಮಾನಿಗಳು ಥ್ರಿಲ್ ಆಗುವಂತೆ ಇದೆ!

Vijaya Karnataka Web 17 Jan 2020, 3:58 pm
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಯೋಪಿಕ್‌ನಲ್ಲಿ ಬಾಲಿವುಡ್‌ ನಟಿ ಕಂಗನಾ ರಣಾವತ್ ನಟಿಸುತ್ತಿದ್ದು, ಈಗಾಗಲೇ ಟೀಸರ್ ಮೂಲಕ ಸಣ್ಣ ಝಲಕ್‌ ನೀಡಿತ್ತು ಚಿತ್ರತಂಡ. ಜಯಲಲಿತಾ ಪಾತ್ರದಲ್ಲಿ ಕಂಗನಾ ಕಾಣಿಸಿಕೊಂಡಿದ್ದಾರೆ. ಅವರ ಜೀವನದಲ್ಲಿ ಬರುವ ಬಹುಮುಖ್ಯ ಪಾತ್ರವೆಂದರೆ, ಅದು ಎಂ.ಜಿ. ರಾಮಚಂದ್ರನ್‌ (ಎಂಜಿಆರ್‌) ಅವರದ್ದು. ಅಂಥ ಪಾತ್ರವನ್ನು ಅರವಿಂದ್ ಸ್ವಾಮಿ ಮಾಡುತ್ತಾರೆ ಎಂದಾಗಲೇ ಕುತೂಹಲ ಮನೆ ಮಾಡಿತ್ತು.
Vijaya Karnataka Web ಎಂಜಿಆರ್


ಇದೀಗ ಚಿತ್ರತಂಡ ಎಂಜಿಆರ್ ಪಾತ್ರದ ಫಸ್ಟ್‌ಲುಕ್ ರಿಲೀಸ್ ಮಾಡಿದ್ದು, ಅರವಿಂದ್ ಸ್ವಾಮಿ ಥೇಟ್‌ ಎಂಜಿಆರ್ ಮಾದರಿಯಲ್ಲೇ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಎಂಜಿಆರ್ ಅವರ ಹೇರ್‌ಸ್ಟೈಲ್‌, ವಾಕಿಂಗ್ ಸ್ಟೈಲ್ ಹೇಗಿತ್ತೋ, ಅದೇ ಥರ ಅರವಿಂದ್ ಲುಕ್ ಮೂಡಿಬಂದಿದೆ. ಫಸ್ಟ್‌ಲುಕ್ ಇಷ್ಟೊಂದು ಭರವಸೆ ಮೂಡಿಸಿರುವಾಗ ತೆರೆಮೇಲೆ ಅವರ ನಟನೆ ಹೇಗಿರಬಹುದು ಎಂಬ ಕುತೂಹಲ ಅಭಿಮಾನಿಗಳದ್ದು.

ಈ ಹಿಂದೆ ಕಂಗನಾ ಲುಕ್‌ ರಿಲೀಸ್ ಮಾಡಿದಾಗ, ಜಯಲಲಿತಾ ಅವರೊಂದಿಗೆ ಅದು ಅಷ್ಟೊಂದು ಹೋಲಿಕೆ ಆಗುತ್ತಿರಲಿಲ್ಲ. ಹಾಗಾಗಿ, ಸಾಕಷ್ಟು ಅಸಮಾಧಾನ ಅಭಿಮಾನಿಗಳಲ್ಲಿತ್ತು. ಆದರೆ, ಅರವಿಂದ್‌ ಸ್ವಾಮಿ ಅವರ ಲುಕ್ ಆ ನಿರಾಸೆಯನ್ನು ಮರೆಸಿದೆ. ಇನ್ನು, ಪ್ರಕಾಶ್ ರೈ ಈ ಸಿನಿಮಾದಲ್ಲಿ ಎಂ. ಕರುಣಾನಿಧಿ ಪಾತ್ರ ಮಾಡಲಿದ್ದಾರೆ ಎನ್ನಲಾಗಿದೆ. ಅಲ್ಲದೆ, ಜಯಲಲಿತಾ ಅವರ ಆಪ್ತೆ ಶಶಿಕಲಾ ಪಾತ್ರವನ್ನು ಬಹುಭಾಷಾ ನಟಿ ಪ್ರಿಯಾಮಣಿ ನಿರ್ವಹಿಸಲಿದ್ದಾರಂತೆ.


ಎ.ಎಲ್‌. ವಿಜಯ್‌ ನಿರ್ದೇಶನ ಮಾಡುತ್ತಿರುವ ಈ ಸಿನಿಮಾಗೆ 'ಬಾಹುಬಲಿ' ಕಥೆಗಾರ ವಿಜಯೇಂದ್ರ ಪ್ರಸಾದ್‌ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ. ಜಿ.ವಿ. ಪ್ರಕಾಶ್‌ಕುಮಾರ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. 2020ರ ಜೂನ್ ತಿಂಗಳಲ್ಲಿ 'ತಲೈವಿ'ಯನ್ನು ತೆರೆಗೆ ತರುವ ಆಲೋಚನೆ ನಿರ್ಮಾಪಕರದ್ದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌