ಆ್ಯಪ್ನಗರ

ನಟ ಚಿರಂಜೀವಿ ಸರ್ಜಾ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಿಗಲಿದೆ ವಿಶೇಷ ಉಡುಗೊರೆ!

ನಟ ಚಿರಂಜೀವಿ ಸರ್ಜಾ ಅವರು ಅಗಲಿ 4 ತಿಂಗಳಾಗಿವೆ. ಆದರೆ, ಅವರ ನೆನಪು ಮಾತ್ರ ಸದಾ ಹಸಿರಾಗಿರಲಿದೆ. ಅಂದಹಾಗೆ ಇದೇ ಅ.17, ಚಿರು ಹುಟ್ಟಿದ ದಿನ. ಅಂದು ಅವರ ಅಭಿಮಾನಿಗಳಿಗೆ ವಿಶೇಷ ಉಡುಗೊರೆಯೊಂದು ಸಿಗಲಿದೆ.

Vijaya Karnataka Web 8 Oct 2020, 5:16 pm
ಉದಯೋನ್ಮುಖ ನಟ ಚಿರಂಜೀವಿ ಸರ್ಜಾ ನಮ್ಮೆಲ್ಲರನ್ನು ಅಗಲಿ 4 ತಿಂಗಳಾಗಿದೆ. ಕಳೆದ ಜೂನ್‌ 7ರಂದು ಅವರು ಇಹಲೋಕ ತ್ಯಜಿಸಿದ್ದರು. ಅಂದಹಾಗೆ, ಅಕ್ಟೋಬರ್ 17ರಂದು ಅವರ ಜನ್ಮದಿನ. ಅವರಿಲ್ಲದ ಮೊದಲ ಜನ್ಮದಿನವಿದು. ಅವರಿಲ್ಲದಿದ್ದರೂ, ಅವರ ಹುಟ್ಟುಹಬ್ಬಕ್ಕೆ ಒಂದು ವಿಶೇಷ ಉಡುಗೊರೆ ಸಿಗಲಿದೆ! ಅದೇನು ಅನ್ನೋದರ ಮಾಹಿತಿ ಇಲ್ಲಿದೆ.
Vijaya Karnataka Web chiranjeevi sarja


ಮತ್ತೆ ರಿಲೀಸ್ ಆಗಲಿದೆ ಶಿವಾರ್ಜುನ
ಚಿರು ಬದುಕಿದ್ದಾಗ ರಿಲೀಸ್ ಆದ ಕಟ್ಟಕಡೆಯ ಸಿನಿಮಾ 'ಶಿವಾರ್ಜುನ'. ಮಾರ್ಚ್ 12ರಂದು ಈ ಸಿನಿಮಾ ರಾಜ್ಯಾದ್ಯಂತ ತೆರೆಕಂಡಿತ್ತು. ದುರದೃಷ್ಟವಶಾತ್‌, ಆ ಸಮಯಕ್ಕೆ ಸರಿಯಾಗಿ ಕೊರೊನಾ ಆರ್ಭಟ ಶುರುವಾಗುತ್ತಿತ್ತು. ಆ ಹಿನ್ನೆಲೆಯಲ್ಲಿ ಮಾರ್ಚ್ 14ರಿಂದ ರಾಜ್ಯಾದ್ಯಂತ ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿತ್ತು. ಹಾಗಾಗಿ, ಈ ಸಿನಿಮಾ ತೆರೆಕಂಡ ಎರಡೇ ದಿನಕ್ಕೆ ಪ್ರದರ್ಶನ ನಿಲ್ಲಿಸಿತ್ತು. ಇದರಿಂದ ಇಡೀ ಚಿತ್ರತಂಡಕ್ಕೆ ತುಂಬ ಬೇಸರವಾಗಿತ್ತು. ನಿರ್ಮಾಪಕ ಶಿವಾರ್ಜುನ್ ಅವರ ನಿರ್ಮಾಣದ ಮೊದಲ ಸಿನಿಮಾ ಇದಾಗಿತ್ತು. ಇದೀಗ ಅಕ್ಟೋಬರ್ 16ರಂದು ಈ ಸಿನಿಮಾ ರಾಜ್ಯಾದ್ಯಂತ ಮತ್ತೆ ಪ್ರದರ್ಶನ ಆರಂಭಿಸಲಿದೆ.

ಚಿರು ಹುಟ್ಟುಹಬ್ಬಕ್ಕೆ ಕೊನೇ ಸಿನಿಮಾ ಮತ್ತೆ ರಿಲೀಸ್
ಅಕ್ಟೋಬರ್ 17ರಂದು ಚಿರು ಹುಟ್ಟಿದ ಹಬ್ಬ. ಆ ಹಿನ್ನೆಲೆಯಲ್ಲಿ ಅಕ್ಟೋಬರ್ 16ರಂದು ಶುಕ್ರವಾರ 'ಶಿವಾರ್ಜುನ' ಸಿನಿಮಾವನ್ನು ರಾಜ್ಯಾದ್ಯಂತ ತೆರೆಗೆ ತರಲು ನಿರ್ಮಾಪಕರು ನಿರ್ಧಾರ ಮಾಡಿದ್ದಾರೆ. ಇಷ್ಟು ದಿನ ಚಿತ್ರಮಂದಿರಗಳು ಬಂದ್ ಆಗಿದ್ದವು. ಇದೀಗ ಸರ್ಕಾರ ಅ.15ರಿಂದ ಚಿತ್ರಮಂದಿರ ತೆರೆಯಲು ಅವಕಾಶ ನೀಡಿರುವುದರಿಂದ, ಈ ಸಿನಿಮಾವನ್ನು ಮರುಬಿಡುಗಡೆ ಮಾಡಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಶಿವಾರ್ಜುನ್, 'ಅಕ್ಟೋಬರ್ 17ರಂದು ಚಿರು ಹುಟ್ಟಿದ ಹಬ್ಬ. ಹಾಗಾಗಿ, ಒಂದು ದಿನ ಮೊದಲು ಅವರು ನಟಿಸಿದ್ದ 'ಶಿವಾರ್ಜುನ' ಸಿನಿಮಾವನ್ನು ರಾಜ್ಯಾದ್ಯಂತ 150ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಮತ್ತೆ ರಿಲೀಸ್ ಮಾಡಲಿದ್ದೇವೆ' ಎಂದು ಹೇಳುತ್ತಾರೆ.

ಈ ವರ್ಷವೇ ತೆರೆಕಂಡಿದ್ದವು 'ಚಿರಂಜೀವಿ ಸರ್ಜಾ' ನಟನೆಯ ಮೂರು ಸಿನಿಮಾಗಳು!

ಅಂದಹಾಗೆ, 'ಶಿವಾರ್ಜುನ' ಸಿನಿಮಾವನ್ನು ಚಿರು ಬಹಳ ಪ್ರೀತಿಯಿಂದ ಮಾಡಿದ್ದರು. ಕಾರಣ, ಇದು ಅವರ ಕುಟುಂಬದ ಆಪ್ತರಾದ ಶಿವಾರ್ಜುನ್ ನಿರ್ಮಾಣ ಮಾಡಿದ್ದ ಸಿನಿಮಾ. ಅಲ್ಲದೆ, ಅವರ ಮೊದಲ ನಿರ್ಮಾಣದ ಸಿನಿಮಾ ಕೂಡ ಇದೇ ಆಗಿತ್ತು. ಹಾಗಾಗಿ, ಮೊದಲ ಸಿನಿಮಾವನ್ನು ಚಿರು ಜೊತೆಯೇ ಮಾಡಿದ್ದರು. ಪಕ್ಕಾ ಮಾಸ್ ಕಮರ್ಷಿಯಲ್ ಸಿನಿಮಾವಾಗಿದ್ದ 'ಶಿವಾರ್ಜುನ' ಚಿತ್ರಕ್ಕೆ 'ಧೈರ್ಯಂ' ಖ್ಯಾತಿಯ ಶಿವ ತೇಜಸ್ ನಿರ್ದೇಶನ ಮಾಡಿದ್ದರು. ನಟಿ ಅಮೃತಾ ಅಯ್ಯಂಗಾರ್ ಇದರ ನಾಯಕಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌