ಆ್ಯಪ್ನಗರ

3 ಪಾಯಿಂಟ್ಸ್ ಹೇಳಿದ್ರೆ ವಿಷಯ ಮಂಡ್ಯ ರಾಜಕೀಯಕ್ಕಿಂತ ದೊಡ್ಡದಾಗತ್ತೆ : ನಿರ್ಮಾಪಕ ಉಮಾಪತಿ ಶ್ರೀನಿವಾಸ್

ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ಬಂದಿದ್ದ ಅರುಣಾ ಕುಮಾರಿ ಅವರು 25 ಕೋಟಿ ರೂಪಾಯಿ ವಂಚನೆ ಮಾಡಲು ಪ್ರಯತ್ನಪಟ್ಟಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇದರಲ್ಲಿ ಉಮಾಪತಿ ಅವರು ಭಾಗಿಯಾಗಿದ್ದಾರೆ ಎಂಬ ಆರೋಪವಿತ್ತು. ಅದಕ್ಕೆ ಉಮಾಪತಿ ಸುದ್ದಿಗೋಷ್ಠಿ ಮೂಲಕ ಸ್ಪಷ್ಟನೆ ನೀಡಿದ್ದಾರೆ.

Vijaya Karnataka Web 12 Jul 2021, 5:51 pm
'ಚಾಲೆಂಜಿಂಗ್ ಸ್ಟಾರ್' ನಟ ದರ್ಶನ್‌ ಅವರ ಹೆಸರಿನಲ್ಲಿ 25 ಕೋಟಿ ರೂ. ವಂಚನೆಗೆ ಪ್ರಯತ್ನಪಡಲಾಗಿದೆ ಎಂಬ ಆರೋಪದ ಮೇಲೆ ಬ್ಯಾಂಕ್ ಮ್ಯಾನೇಜರ್ ಎಂದು ಸುಳ್ಳು ಹೇಳಿದ್ದ ಮಹಿಳೆ ಅರುಣಾ ಕುಮಾರಿ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಈ ಕುರಿತು ಮೈಸೂರಿನಲ್ಲಿ, ಜಯನಗರದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆದರೆ ಈ ವೇಳೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮೇಲೆ ಕೆಲ ಆರೋಪಗಳು ಬಂದಿತ್ತು. ಅವುಗಳಿಗೆ ಉಮಾಪತಿ ಉತ್ತರ ನೀಡಿದ್ದಾರೆ.
Vijaya Karnataka Web actor darshan fraud and fake loan case producer umapathy srinivas reaction
3 ಪಾಯಿಂಟ್ಸ್ ಹೇಳಿದ್ರೆ ವಿಷಯ ಮಂಡ್ಯ ರಾಜಕೀಯಕ್ಕಿಂತ ದೊಡ್ಡದಾಗತ್ತೆ : ನಿರ್ಮಾಪಕ ಉಮಾಪತಿ ಶ್ರೀನಿವಾಸ್


(ಉಮಾಪತಿ ಶ್ರೀನಿವಾಸ್ ಹೇಳಿದ್ದಿಷ್ಟು)

ದರ್ಶನ್ ಫೋನ್‌ನಲ್ಲಿ ನಾನು ಅರುಣಾ ಕುಮಾರಿ ಜೊತೆ ಚರ್ಚೆ ಮಾಡಿದ್ದೆ, ಫೋನ್‌ನಲ್ಲಿ ಮಾತನಾಡಿದ ನಂತರದಲ್ಲಿ ದರ್ಶನ್ ಜೊತೆ ನಾನು ಕುಳಿತಾಗ ಅರುಣಾ ಕುಮಾರಿ ಭೇಟಿಯಾಗಿದ್ದರು. ನಾನು ದರ್ಶನ್‌ರಿಗೆ ಅರುಣಾ ಕುಮಾರಿಗೆ ಭೇಟಿ ಮಾಡಿಸಿರಲಿಲ್ಲ. ಜೂನ್‌ನಲ್ಲಿ ಪೊಲೀಸರು ಠಾಣೆಗೆ ಕರೆದಾಗ ಅರುಣಾ ಕುಮಾರಿ ಇದ್ದರು. ಅರುಣಾ ಕುಮಾರಿ ಜೊತೆ ನಡೆಸಿದ್ದ ವಾಟ್ಸಾಪ್ ಕಾಲ್ಸ್‌, ವಾಟ್ಸಾಪ್ ಚಾಟ್ ಎಲ್ಲವನ್ನು ಕೂಡ ನಾನೇ ದರ್ಶನ್‌ರಿಗೆ ಕಳಿಸಿದ್ದೆ. ಜಯ ನಗರ ಠಾಣೆಯಲ್ಲಿ ಆ ಮಹಿಳೆ ನನಗೆ ಹೀಗೆ ಹೇಳಲು ಹರ್ಷ, ರಾಕೇಶ್ ಬೆದರಿಕೆ ಮಾಡಿದ್ದರು ಅಂತ ಹೇಳಿದ್ರು. ಹೀಗಾಗಿ ಮೈಸೂರಿನ ಠಾಣೆಯಲ್ಲಿ ಪಡೆದ ಹೇಳಿಕೆ ಜೊತೆಗೆ ಜಯ ನಗರ ಠಾಣೆಯಲ್ಲಿಯೂ ಕೂಡ ಹೇಳಿಕೆ ತಗೊಳ್ಳಿ ಅಂತ ನಾನು ಪೊಲೀಸರಿಗೆ ಹೇಳಿದ್ದೆ.


ನನಗೆ ದರ್ಶನ್‌ರನ್ನು ಕಳೆದುಕೊಳ್ಳೋಕೆ ಇಷ್ಟ ಇಲ್ಲ: ಉಮಾಪತಿ ಶ್ರೀನಿವಾಸ್

ಎರಡು ದಿನ ಟೈಮ್ ಕೊಡಿ ಅಂತ ನಾನು ದರ್ಶನ್ ಬಳಿ ಮನವಿ ಮಾಡಿದ್ದೇನೆ. ಕಾನೂನಿನ ಚೌಕಟ್ಟಿನಲ್ಲಿ ನಂಬಿಕೆ ಇಟ್ಟು ಕೇಸ್ ಬಗೆಹರಿಯಲಿ ಎಂದು ದೂರು ನೀಡಿದ್ದೇವೆ. ನನಗೂ ಕೂಡ ದರ್ಶನ್, ಹರ್ಷ, ರಾಕೇಶ್ ಪಾಪಣ್ಣ ಅವರನ್ನು ಕಳೆದುಕೊಳ್ಳೋಕೆ ಇಷ್ಟ ಇಲ್ಲ. ದೂರು ನೀಡುದ್ದೇವೆ. ಈ ಪ್ರಕರಣದಲ್ಲಿ ಯಾರೋ ನನ್ನನು ಸಿಕ್ಕಿ ಹಾಕಿಸುತ್ತಿದ್ದಾರೆ. ದರ್ಶನ್ ಅಡ್ಡಾದಿಡ್ಡಿಯಾಗಿ ಮಾತನಾಡದೆ ಮುಕ್ತವಾಗಿ ನನ್ನ ಬಳಿ ಮಾತನಾಡುತ್ತಾರೆ. ನನ್ನ ಕಡೆಯಿಂದ ತಪ್ಪಾಗಿಲ್ಲ, ಪೊಲೀಸ್ ಸ್ಟೇಶನ್‌ನಲ್ಲಿ ತನಿಖೆ ಮಾಡಿದ ನಂತರದಲ್ಲಿ ಸತ್ಯಾಸತ್ಯತೆ ಹೊರಗಡೆ ಬರುವುದು. ನಾನು ಮಾತುಕತೆಯಲ್ಲಿ ಬಗೆಹರಿಸಿಕೊಳ್ಳೋಕೆ ರೆಡಿಯಿಲ್ಲ. ಕೆಲವೊಂದು ಮಾತಿಗೆ ನಾನು ಉತ್ತರ ಕೊಡುವೆ, ಇನ್ನು ಕೆಲವೊಂದಕ್ಕೆ ಉತ್ತರ ಕೊಡಲ್ಲ, ಪೊಲೀಸ್ ಠಾಣೆಯಲ್ಲಿ ಪುರಾವೆ ಇದೆ. ನನ್ನ ಮಾತಿಗಿಂತ ಪುರಾವೆಗೆ ಬೆಲೆ ಇರುತ್ತದೆ.

Fake Loan Case: ಪ್ರಕರಣದ ಅಸಲಿ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ದರ್ಶನ್!

ನನ್ನ ಹಾಗೂ ದರ್ಶನ್ ಸಂಬಂಧ ಯಾರೂ ಮುರಿಯೋಕೆ ಆಗಲ್ಲ

ನನ್ನ ಮೇಲೆ ಆರೋಪ ಬಂದಿದೆ, ಹೀಗಾಗಿ ನನಗೆ ಬಿಡಿ, ನಾನು ನೋಡಿಕೊಳ್ಳುತ್ತೇನೆ. ನನ್ನದು ಪಬ್ ಬ್ಯುಸಿನೆಸ್ ಇಲ್ಲ, ಹೀರೋ ಅಲ್ಲ, ನನ್ನ ವ್ಯಾಪಾರ ನಾನು ಮಾಡಿಕೊಂಡು ಹೋಗುತ್ತಿದ್ದೇನೆ. ವ್ಯಾಪಾರ ಬಿಟ್ಟು ಕೂಡ ದರ್ಶನ್ ಸರ್ ಜೊತೆ ನನ್ನ ಸಂಬಂಧ ತುಂಬ ಚೆನ್ನಾಗಿದೆ. ಅದನ್ನು ಯಾರೂ ಮುರಿಯೋಕೆ ಆಗಲ್ಲ. ನನಗೆ ಸಿನಿಮಾ ಒಂದು ವ್ಯವಹಾರ ಮಾತ್ರ, ಜೀವನ ಅಲ್ಲ. ಹರ್ಷ, ರಾಕೇಶ್ ಶರ್ಮಾ, ರಾಕೇಶ್ ಪಾಪಣ್ಣ ನನ್ನ ಜೊತೆ ತುಂಬ ಚೆನ್ನಾಗಿದ್ದಾರೆ. ನನ್ನ ತಾಯಿ, ಪತ್ನಿ-ಮಕ್ಕಳಿಗೆ ಮಾತ್ರ ನಾನು ಉತ್ತರ ಕೊಡಬೇಕು. ನನ್ನ ಕುಟುಂಬ ಸಿನಿಮಾ ಬೇಡ ಅಂದರೆ ನಾನು ಸಿನಿಮಾ ಎಲ್ಲವನ್ನು ಬಿಟ್ಟು ಹೋಗ್ತೀನಿ. ನನ್ನಪ್ಪನ ಭಿಕ್ಷೆಯಿಂದ ನಾನು ಬದುಕುತ್ತಿದ್ದೇನೆ, ಕುಡಿಯುವ ಹುಚ್ಚು ಇಲ್ಲ, ಪಬ್, ಪಾರ್ಟಿ ಹುಚ್ಚಿಲ್ಲ. ಕೆಲಸ ಮುಗಿದಕೂಡಲೇ ನಾನು ಮನೆಗೆ ಹೋಗಿ ಮಕ್ಕಳ ಜೊತೆ ಸಮಯ ಕಳೆಯುವೆ. 25 ಕೋಟಿ ರೂಪಾಯಿ ನನಗೆ ಸಣ್ಣದೋ ದೊಡ್ಡದೋ ಅದು ಸೆಕೆಂಡರಿ.

ದರ್ಶನ್-ಉಮಾಪತಿ ಶ್ರೀನಿವಾಸ್ ಮಧ್ಯೆ ಗಲಾಟೆ ಆಗಿತ್ತಾ? 'ದಾಸ'ನ ಕಿವಿಗೆ ಬಿದ್ದ ಗಾಸಿಪ್ ಏನು?

ಏನೋ ಆಗೋಯ್ತು, ಒಪ್ಪಿಕೊಳ್ಳಿ ಅಂತ ನನಗೆ ಪೊಲೀಸ್ ಸ್ಟೇಶನ್‌ನಲ್ಲಿ ಹೇಳಿದ್ರು: ಉಮಾಪತಿ

ನನ್ನನ್ನು ಗುಂಡಿಟ್ಟು ಯಾರಾದರೂ ಸಾಯಿಸ್ತಾರಾ? ಆ ತಾಕತ್ತು ಯಾರಿಗಾದರೂ ಇದೆಯಾ? ಭಗವಂತ ಎಲ್ಲವನ್ನು ನೋಡಿಕೊಳ್ತಾನೆ. ಇನ್ನು ಎರಡು ದಿನ ಕಾಯಿರಿ, ವಿಷಯ ಎಲ್ಲವೂ ಹೊರಗಡೆ ಬರುತ್ತದೆ. ರಾಕೇಶ್ ಶರ್ಮಾ, ರಾಕೇಶ್ ಪಾಪಣ್ಣ, ಹರ್ಷ ಮೆಲಂಟ ಅವರು ಠಾಣೆಯಲ್ಲಿ ನನ್ನನ್ನು ಕರೆಯದೆ ಆ ಮಹಿಳೆ ಜೊತೆ ತನಿಖೆ ಮಾಡುತ್ತಾರೆ, ನನ್ನನ್ನು ಯಾಕೆ ಕರೆದಿಲ್ಲ? ಇದರಲ್ಲಿ ಏನೋ ಇದೆ ಅಂತ ನಿಮಗೆ ಅನಿಸಲ್ವಾ? ಪೊಲೀಸ್‌ ಇಲಾಖೆಯಲ್ಲಿ ನೀವು ಏನೋ ಆಯ್ತು ಅಂತ ಒಪ್ಪಿಕೊಳ್ಳಿ ಅಂತ ನನಗೆ ಹೇಳಿದ್ರು. ನಾನು ಯಾಕೆ ಒಪ್ಪಿಕೊಳ್ಳಲಿ? ದರ್ಶನ್ ಜೊತೆ ನಾನು ಇರದಿದ್ದರೂ, ನಮ್ಮಿಬ್ಬರ ಜೀವನ ನಡೆಯತ್ತೆ. ಒಂದು ಕಡೆ ಕಥೆ ಕೇಳಬೇಡಿ, ಎರಡೂ ಕಥೆ ಕೇಳಿ. ನಾನಿಲ್ಲಿ ಯಾರ ಬಗ್ಗೆಯೂ ಆರೋಪ ಮಾಡುತ್ತಿಲ್ಲ.

ನಾನು ಆ ಮೂರು ಪಾಯಿಂಟ್ಸ್ ಹೇಳಿದ್ರೆ......

ಹರ್ಷ ಅವರು ಆಸ್ತಿ ಖರೀದಿ ಮಾಡಲು ದರ್ಶನ್ ಹಾಗೂ ಉಮಾಪತಿ ಶ್ಯೂರಿಟಿ ಹಾಕ್ತಾರೆ, ಅದಷ್ಟೇ ವಿಷಯ. ನಾನು ದರ್ಶನ್ ದೂರ ದೂರ ಆಗಿದ್ದೀವಿ ಅಂತ ಖುಷಿ ಪಡಬೇಡಿ, ನಾವಿಬ್ಬರೂ ಚೆನ್ನಾಗಿದ್ದೇವೆ. ನನಗೆ ದರ್ಶನ್ ಸರ್ ಫೋನ್ ಮಾಡಿದರೆ ಊಟ ಮಾಡಿದ್ದೀರಾ ಅಂತ ಮೊದಲು ಕೇಳ್ತಾರೆ. ಮೈಸೂರಿನಲ್ಲಿಯಾಗಲೀ, ಬೇರೆ ಎಲ್ಲಿಯೇ ಆದರೂ ಕೂಡ ತನಿಖೆ ಆದರೆ ನನಗೆ ನ್ಯಾಯ ಸಿಗತ್ತೆ ಎಂಬ ನಂಬಿಕೆ ಇದೆ. ನನ್ನ ಮೇಲೆ ಆರೋಪ ಬಂದಿದೆ, ತನಿಖೆ ಆಗಬೇಕು ಎಂದು ನಾನು ಕೂಡ ಗಡಿಬಿಡಿ ಮಾಡಿಕೊಳ್ಳುತ್ತಿದ್ದೀನಿ. ಈಗಾಗಲೇ ಮೂರು ಪಾಯಿಂಟ್‌ಗಳಿವೆ, ಅದನ್ನು ಹೇಳಿದರೆ ಮಂಡ್ಯ ರಾಜಕೀಯಕ್ಕಿಂತ ಇನ್ನು ದೊಡ್ಡದಾಗತ್ತೆ.

ನನ್ನ ಆಸ್ತಿ ಯಾರಿಗಿಂತ ಕಮ್ಮಿ ಏನಿಲ್ಲ!

ನನ್ನ ಆಸ್ತಿ ಯಾರಿಗಿಂತ ಕಮ್ಮಿ ಏನಿಲ್ಲ. ಎಚ್‌ ಎಸ್‌ ಆರ್ ಲೇ ಔಟ್‌ನಲ್ಲಿ ನಮ್ಮ ಹಿರಿಕರು ಕಟ್ಟಿದ ಬಿಲ್ಡಿಂಗ್‌ ಇದೆ. ನಾನು ಸಿನಿಮಾ ಕೆಲಸ ಮಾಡಿದವರಿಗೆ ಮಾಸ್ಟರ್ ಪೇಮೆಂಟ್ ಮಾಡುವೆ. ಇನ್ನೊಬ್ಬರ ಆಸ್ತಿ ಹೊಡೆಯುವ ದರ್ದು ಇಲ್ಲ. ನನ್ನ ಒಂದೊಂದು ಜಮೀನು 70-80 ಎಕರೆ ಇದೆ. ನನ್ನ ಮನೆಯಲ್ಲಿ ನಾನೇ ರಾಜ, ನಾಯಕ. ಸ್ನೇಹಿತರನ್ನು ದೂರ ಇಡುವ ಮಾತು ಬರಲ್ಲ. ನನ್ನ ವ್ಯಾಪಾರಕ್ಕೆ ಯಾರ ಪ್ರಚಾರವೂ ಬಿಡಲ್ಲ. ಮನೆ ಬಾಡಿಗೆ ಕೊಟ್ಟಿದ್ದೀನಿ, ತೋಟದಲ್ಲಿ ಕೃಷಿ ಮಾಡ್ತೀನಿ. ದುಡ್ಡು ಕೊಟ್ಟು ಸಿನಿಮಾ ಮಾಡಿ ರಿಲೀಸ್ ಮಾಡ್ತೀನಿ. ಇಷ್ಟೆಲ್ಲ ನಾನು ಮಾತನಾಡೋಕೆ ದರ್ಶನ್ ಸರ್ ಮೇಲೆ ಇರುವ ಲವ್ ಕಾರಣ. ನಾನು ಕಳಿಸಿರುವ ವಾಟ್ಸಾಪ್ ಚಾಟ್‌ನಲ್ಲಿ ಅಶ್ಲೀಲತೆಯೂ ಇಲ್ಲ.

ನಾನು ಯಾರಿಗೂ ತೊಂದರೆ ಕೊಟ್ಟಿಲ್ಲ, ಬೇರೆಯವರೂ ನನಗೆ ತೊಂದರೆ ಕೊಡೋದಿಲ್ಲ ಅಂತ ಅಂದುಕೊಂಡಿದ್ದೇನೆ. ಇಲ್ಲಿ ಯಾರೋ ಡಬಲ್ ಗೇಮ್ ಆಡ್ತಿದ್ದಾರೆ. ಫಿಲ್ಮ್‌ಸಿಟಿ ಮಾಡ್ತಿದ್ದೀನಿ, ಬಿಗ್ ಬಜೆಟ್ ಸಿನಿಮಾ ಮಾಡ್ತಿದ್ದೀನಿ, ಕನ್‌ಸ್ಟ್ರಕ್ಷನ್ ಮಾಡ್ತಿದ್ದೀನಿ, ಇನ್ನು ಕೆಲ ವ್ಯಾಪಾರ ಇದೆ. ನನ್ನ ತಾಕತ್ತು ನನಗೆ ಗೊತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌