ಆ್ಯಪ್ನಗರ

'ಚಾಲೆಂಜಿಂಗ್ ಸ್ಟಾರ್' ದರ್ಶನ್‌ ಮನೆಮುಂದೆ ಹಾಕಿರುವ 'ಬೋರ್ಡ್‌'ನಲ್ಲೇನಿದೆ?

2019ರ ಫೆಬ್ರವರಿ 16ರಂದು ನಡೆದ ದರ್ಶನ್‌ ಬರ್ತ್‌ಡೇಯನ್ನು ಯಾರು ಮರೆಯಲಿಕ್ಕೆ ಸಾಧ್ಯವಿಲ್ಲ. ಯಾಕೆಂದರೆ, ಅಂದು 'ಡಿ ಬಾಸ್‌' ದೊಡ್ಡ ದೊಡ್ಡ ಹಾರಗಳನ್ನು ಹಾಕಿಕೊಂಡು ಸಂಭ್ರಮಿಸಲಿಲ್ಲ. ಕೇಕ್‌ ಕತ್ತರಿಸಲಿಲ್ಲ. ಅಭಿಮಾನಿಗಳು ಕೂಡ ಅಂಥದ್ದೇನನ್ನು ಮಾಡಲಿಲ್ಲ.

Vijaya Karnataka Web 19 Jan 2020, 6:04 pm
2019ರ ಫೆಬ್ರವರಿ 16ರಂದು ನಡೆದ ದರ್ಶನ್‌ ಬರ್ತ್‌ಡೇಯನ್ನು ಯಾರು ಮರೆಯಲಿಕ್ಕೆ ಸಾಧ್ಯವಿಲ್ಲ. ಯಾಕೆಂದರೆ, ಅಂದು 'ಡಿ ಬಾಸ್‌' ದೊಡ್ಡ ದೊಡ್ಡ ಹಾರಗಳನ್ನು ಹಾಕಿಕೊಂಡು ಸಂಭ್ರಮಿಸಲಿಲ್ಲ. ಕೇಕ್‌ ಕತ್ತರಿಸಲಿಲ್ಲ. ಅಭಿಮಾನಿಗಳು ಕೂಡ ಅಂಥದ್ದೇನನ್ನು ಮಾಡಲಿಲ್ಲ. ಕೇಕ್‌-ಹಾರದ ಬದಲಿಗೆ, ಅಕ್ಕಿ ಬೇಳೆ ತಂದರು. ಆ ಮೂಲಕ ದರ್ಶನ್ ಮನೆಯಲ್ಲಿ ರಾಶಿ-ರಾಶಿ ದವಸ ಸಂಗ್ರಹಣೆ ಆಯ್ತು. ನಂತರ ಅದೆಲ್ಲವನ್ನು ಖುದ್ದು ಮುಂದೆ ನಿಂತು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ತಲುಪಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಕಾರ್ಯದ ಬಗ್ಗೆ ಅಪಾರವಾದ ಮೆಚ್ಚುಗೆ ವ್ಯಕ್ತವಾಗಿತ್ತು. ಇಂಥದ್ದೊಂದು ಕೆಲಸಕ್ಕೆ ಕೈ ಹಾಕಿದ ದರ್ಶನ್‌ ಅವರಿಗೂ ಹೊಗಳಿಕೆಯ ಮಹಾಪೂರವೇ ಹರಿದುಬಂದಿತ್ತು. ಇದೀಗ ದರ್ಶನ್ ಬರ್ತ್‌ಡೇಗೆ ದಿನಗಣನೆ ಆರಂಭವಾಗಿದೆ. ಈ ಬಾರಿಯೂ ಅದೇ ಪುನರಾವರ್ತನೆ ಆಗಲಿದೆಯೇ? ಹೌದು ಎನ್ನುತ್ತಿದೆ ದರ್ಶನ್‌ ಮನೆ ಮುಂದಿರುವ ಈ ಬೋರ್ಡ್.
Vijaya Karnataka Web actor darshan requests his fans
'ಚಾಲೆಂಜಿಂಗ್ ಸ್ಟಾರ್' ದರ್ಶನ್‌ ಮನೆಮುಂದೆ ಹಾಕಿರುವ 'ಬೋರ್ಡ್‌'ನಲ್ಲೇನಿದೆ?


​ತೂಗುದೀಪ ನಿಲಯದ ಮುಂದೆ ಬೋರ್ಡ್‌

ಈ ಬಾರಿಯ ಜನ್ಮದಿನದ ಆಚರಣೆ ಅಂಗವಾಗಿ ಒಂದಷ್ಟು ಮಾಹಿತಿ ನೀಡುವ ಸಲುವಾಗಿ 'ಡಿ ಬಾಸ್' ದರ್ಶನ್, ತಮ್ಮ ತೂಗುದೀಪ ನಿಲಯದ ಮುಂದೆ ಒಂದು ಬೋರ್ಡ್‌ ಹಾಕಿದ್ದಾರೆ. ಅದರಲ್ಲಿ ಈ ಬಾರಿ ಜನ್ಮದಿನಕ್ಕೆ ಏನೆಲ್ಲ ಮಾಡಬೇಕು ಎಂಬುದರ ಬಗ್ಗೆ ಸಲಹೆ-ಸೂಚನೆ ನೀಡಿದ್ದಾರೆ ಅವರು.

Twitter-ಸರಳ ರೀತಿಯಲ್ಲಿ, ಅರ್ಥಪೂರ್ಣವಾಗಿ ಹುಟ್ಟುಹಬ್ಬವನ್ನು ಆಚರಿ...

​ಬ್ಯಾನರ್ ಕೇಕ್ ಹಾರ ಬೇಡ

'ಬ್ಯಾನರ್, ಕೇಕ್‌, ಹಾರಗಳನ್ನು ದಯಮಾಡಿ ತರಬೇಡಿ. ಅದೇ ಹಣದಲ್ಲಿ ಈ ವರ್ಷವೂ ಸಹ ನಿಮ್ಮ ಕೈಲಾದ ಅಕ್ಕಿ, ಬೇಳೆ, ಸಕ್ಕರೆ ಹಾಗೂ ಇತರೆ ದವಸ ಧಾನ್ಯಗಳನ್ನು ದಾನ ನೀಡಿ. ಅದನ್ನು ಒಗ್ಗೂಡಿಸಿ, ಸೇರಬೇಕಾದ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಪ್ರಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು ಎಂದಿದ್ದಾರೆ ಡಿ ಬಾಸ್‌.

​ಅಕ್ಕ ಪಕ್ಕದ ನಿವಾಸಿಗಳಿಗೆ ತೊಂದರೆ ಬೇಡ

ರಾಜರಾಜೇಶ್ವರಿ ನಗರದ ದರ್ಶನ್‌ ಮನೆಗೆ ಬರ್ತ್‌ಡೇ ದಿನ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಬರುತ್ತಾರೆ. ಆಗ ದರ್ಶನ್‌ ಅಕ್ಕ ಪಕ್ಕದ ಮನೆಗೆ ಸಾಕಷ್ಟು ಹಾನಿಯುಂಟಾಗುತ್ತಿತ್ತು. ಅದನ್ನು ಮನಗಂಡಿರುವ ದರ್ಶನ್‌, 'ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಮ್ಮ ಮನೆಯ ಅಕ್ಕ ಪಕ್ಕದ ನಿವಾಸಿಗಳಿಗೆ ನಿಮ್ಮಿಂದ ತೊಂದರೆಯಾಗುವುದು, ಪಟಾಕಿ ಹೊಡೆಯುವುದು, ಕಾಂಪೌಂಡ್‌ ಹತ್ತುವುದು, ಹೂವು ಕುಂಡಗಳನ್ನು ಬೀಳಿಸುವುದು ಹಾಗೂ ಅವರ ಸ್ವತ್ತುಗಳಿಗೆ ಹಾನಿ ಮಾಡುವುದು ಇಂತಹ ಅನುಚಿತ ವರ್ತನೆಗಳು ನಡೆಯಬಾರದು. ನನ್ನ ಬಗ್ಗೆ ಇಷ್ಟೆಲ್ಲ ಪ್ರೀತಿ ಅಭಿಮಾನ ಇಟ್ಟಡಿರುವ ನೀವೆಲ್ಲ ಈ ನನ್ನ ಕೋರಿಕೆಯನ್ನು ನಡೆಸಿಕೊಡುವಿರಿ ಎಂದು ನಂಬಿರುತ್ತೇನೆ. ಹಾಗೂ ಸಂಘದ ಕಾರ್ಯಕರ್ತರಿಗೆ, ಪೊಲೀಸ್ ಸಿಬ್ಬಂದಿ ವರ್ಗದವರಿಗೆ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ' ಎಂದು ದರ್ಶನ್ ಹೇಳಿದ್ದಾರೆ.

Twitter-ಚಾಲೆಂಜಿಂಗ್ ಸ್ಟಾರ್ @dasadarshan ಬಾಸ್ ಅವರ ಅಭಿಮಾನಿಗಳ ...

​ಈಗಾಗಲೇ ಶುರುವಾಗಿದೆ ಧಾನ್ಯ ಸಂಗ್ರಹಣೆ

ದರ್ಶನ್ ಅವರ ಹುಟ್ಟುಹಬ್ಬದ ಸಲುವಾಗಿ ಈಗಾಗಲೇ ಅಭಿಮಾನಿಗಳು ಧಾನ್ಯ ಸಂಗ್ರಹಣೆಗೆ ಮುಂದಾಗಿದ್ದಾರೆ. ಮೊನ್ನೆ ಮೈಸೂರಿನಲ್ಲಿ ಅಭಿಮಾನಿಗಳು ದರ್ಶನ್‌ ಅವರನ್ನು ಭೇಟಿ ಮಾಡಿ, ಅಕ್ಕಿ ನೀಡಿದ್ದಾರೆ. ಹುಟ್ಟುಹಬ್ಬಕ್ಕೆ ತಿಂಗಳಿಗೂ ಮೊದಲೇ ಈ ರೀತಿ ಸಂಗ್ರಹಣೆ ಮಾಡುತ್ತಿರುವುದು ವಿಶೇಷ.

Twitter-ಚಾಲೆಂಜಿಂಗ್ ⭐ @dasadarshan ರವರ ಹುಟ್ಟು ಹಬ್ಬಕ್ಕೆ ದಿನಗ...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌