ಆ್ಯಪ್ನಗರ

'ಮಜವಾಗಿ ಆಟ ಕಟ್ಟುವುದರಲ್ಲಿ ಎತ್ತಿದ ಕೈ'; 'ಮಠ' ಗುರುಪ್ರಸಾದ್‌ ಕುರಿತು 'ಡಾಲಿ' ಧನಂಜಯ ಹೀಗೇಕೆ ಹೇಳಿದರು?

'ಡಾಲಿ' ಧನಂಜಯ ಮತ್ತು 'ಮಠ' ಗುರುಪ್ರಸಾದ್ 'ಎರಡನೇ ಸಲ' ಚಿತ್ರದ ನಂತರ ಉಂಟಾದ ಕೆಲವೊಂದು ವೈಮನಸ್ಸಿನಿಂದಾಗಿ ದೂರ ದೂರವಾಗಿದ್ದರು. ಬಹಿರಂಗವಾಗಿಯೇ ಇಬ್ಬರು ಆರೋಪ-ಪ್ರತ್ಯಾರೋಪಗಳನ್ನು ಮಾಡಿದ್ದರು.

Vijaya Karnataka Web 10 Oct 2019, 11:44 am
'ಎರಡನೇ ಸಲ' ಸಿನಿಮಾ ತೆರೆಕಂಡ ಬಳಿಕ ನಟ 'ಡಾಲಿ' ಧನಂಜಯ ಮತ್ತು ನಿರ್ದೇಶಕ ಗುರುಪ್ರಸಾದ್ ಮಧ್ಯೆ ಮುನಿಸು ಏರ್ಪಟ್ಟಿತ್ತು. ಆರೋಪ-ಪ್ರತ್ಯಾರೋಪಗಳಿಂದಾಗಿ ಇದು ಇನ್ನಷ್ಟು ತಾರಕ್ಕೇರಿತ್ತು. ಆದರೆ, ಇದೀಗ ಧನಂಜಯ ಮಾಡಿರುವ ಒಂದು ಟ್ವೀಟ್, ಸಿನಿಪ್ರಿಯರಲ್ಲಿ ಅಚ್ಚರಿ ಮೂಡಿಸಿದೆ.
Vijaya Karnataka Web Dhananjaya

ಡಾಲಿ ಧನಂಜಯ 'ಮಂಕಿ ಟೈಗರ್‌' ಖದರ್‌ ಲುಕ್ ರಿವೀಲ್

ಇತ್ತೀಚಿಗಷ್ಟೆ ಜಗ್ಗೇಶ್ ಮತ್ತು ಗುರುಪ್ರಸಾದ್ ಕಾಂಬಿನೇಷನ್ನಲ್ಲಿ 'ರಂಗನಾಯಕ' ಚಿತ್ರ ಸೆಟ್ಟೇರಿತ್ತು. ಅದರ ಮೊದಲ ಟೀಸರ್ ಮಂಗಳವಾರವಷ್ಟೇ ರಿಲೀಸ್ ಆಗಿತ್ತು. ಅದನ್ನು ನೋಡಿದವರು ಮೆಚ್ಚುಗೆ ಮಾತುಗಳನ್ನಾಡಿದ್ದರು. ಸಿನಿಮಾಗೆ ಇನ್ನೂ ತಯಾರಿಗಳೇ ಶುರುವಾಗಿಲ್ಲ ಎಂಬುದನ್ನೇ ಟೀಸರ್ನಲ್ಲಿ ವಿಭಿನ್ನವಾಗಿ ಹೇಳಲಾಗಿತ್ತು. ಇದೀಗ ಧನಂಜಯ ಕೂಡ ಆ ಟೀಸರ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.


ತಮ್ಮ ಟ್ವಿಟರ್ ಖಾತೆಯಲ್ಲಿ 'ರಂಗನಾಯಕ' ಚಿತ್ರದ ಟೀಸರ್ ಶೇರ್ ಮಾಡಿರುವ ಧನಂಜಯ, 'ರಂಗನಾಯಕನ ಹಿಂದಿರುವ ಸೂತ್ರಧಾರಿ ಮಜವಾಗಿ ಆಟ ಕಟ್ಟುವುದರಲ್ಲಿ ಎತ್ತಿದ ಕೈ!! ಅವರು ಮರಳಿ ಬಂದಿದ್ದಾರೆ. ಟೀಸರ್ ನೋಡಿ ಖುಷಿಪಟ್ಟಿದ್ದೇನೆ. ಇದೊಂದು ಉತ್ತಮ ಮನರಂಜನೆ ನೀಡುವ ಸಿನಿಮಾವಾಗಲಿದೆ ಎಂಬ ಭರವಸೆ ಇದೆ. ಇಡೀ ತಂಡಕ್ಕೆ ಶುಭವಾಗಲಿ' ಎಂದು ಹಾರೈಸಿದ್ದಾರೆ ಧನಂಜಯ.
ಡಾಲಿ ಜತೆ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌

ಈ ಟ್ವೀಟ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಹಿಂದಿನ ಕಹಿ ಘಟನೆಗಳನ್ನು ಮರೆತು ಶುಭ ಹಾರೈಸಿರುವುದು ಉತ್ತಮ ಬೆಳವಣಿಗೆ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ. ಇನ್ನು, 'ರಂಗನಾಯಕ' ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ ಗುರುಪ್ರಸಾದ್‌. ಎ.ಆರ್. ವಿಖ್ಯಾತ್ ಇದರ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಸದ್ಯ 'ರಂಗನಾಯಕ' ಟೀಸರ್ ಟ್ರೆಂಡಿಂಗ್ನಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌