ಆ್ಯಪ್ನಗರ

ಸಿನಿಮಾ ನಂಬಿ ನಿಮ್ಮ ಜೀವನ ಹಾಳುಮಾಡಿಕೊಳ್ಳಬೇಡಿ: 'ನವರಸನಾಯಕ' ಜಗ್ಗೇಶ್!

ಸಿನಿಮಾವನ್ನೇ ನಂಬಿಕೊಂಡು ಬಂದಿರುವ ನಟ ಜಗ್ಗೇಶ್ ಅವರು ಸಿನಿಮಾ ನಂಬಿ ಜೀವನ ಹಾಳುಮಾಡಿಕೊಳ್ಳಬೇಡಿ ಎಂದಿದ್ದಾರೆ. ಇದಕ್ಕೆ ಕಾರಣ ಏನು? ಯಾಕೆ ಅವರು ಹೀಗೆ ಹೇಳಿದ್ದಾರೆ? ಈ ಬಗ್ಗೆ ಇಲ್ಲಿದೆ ಮಾಹಿತಿ

Vijaya Karnataka 15 Oct 2020, 4:19 pm
ಎಷ್ಟೋ ಜನರು ಸಿನಿಮಾಕ್ಕಾಗಿ ದೊಡ್ಡ ದೊಡ್ಡ ತ್ಯಾಗ ಮಾಡುತ್ತಾರೆ. ಲಕ್ಷ ಲಕ್ಷ ಹಣ ನೀಡುವ ಉದ್ಯೋಗಕ್ಕೆ ಗುಡ್‌ಬೈ ಹೇಳಿ ಸಿನಿಮಾದಲ್ಲಿ ನಟಿಸಲು ಅಥವಾ ತಾಂತ್ರಿಕ ವರ್ಗದಲ್ಲಿ ಕೆಲಸ ಮಾಡುವುದಿದೆ. ಅನೇಕ ನಟ-ನಟಿಯರು ಪದವಿ, ಸ್ನಾತಕೋತ್ತರ ಪದವಿ ಮಾಡಿದ್ದರೂ ನಟನೆ ಕಡೆಗೆ ಒಲವು ಹೊಂದಿರುತ್ತಾರೆ. ಆದರೆ ಚಿತ್ರರಂಗದಲ್ಲಿ ಬದುಕುವುದು ಅಷ್ಟು ಸುಲಭವಾದ ವಿಷಯವಲ್ಲ. ಇಂಜಿನಿಯರಿಂಗ್ ಮಾಡಲೇ ಅಥವಾ ಸಿನಿಮಾ ರಂಗಕ್ಕೆ ಕಾಲಿಡಲೇ ಎಂಬ ನೆಟ್ಟಿಗರೊಬ್ಬರ ಪ್ರಶ್ನೆಗೆ ಜಗ್ಗೇಶ್ ಅವರು ಪ್ರಾಯೋಗಿಕವಾಗಿ ಉತ್ತರ ನೀಡಿದ್ದಾರೆ.
Vijaya Karnataka Web actor jaggesh says consider cinema as hobby not professional
ಸಿನಿಮಾ ನಂಬಿ ನಿಮ್ಮ ಜೀವನ ಹಾಳುಮಾಡಿಕೊಳ್ಳಬೇಡಿ: 'ನವರಸನಾಯಕ' ಜಗ್ಗೇಶ್!


ನೆಟ್ಟಿಗರ ಪ್ರಶ್ನೆ ಏನಾಗಿತ್ತು?

ಸರ್, ನನಗೆ ಡೈರೆಕ್ಟರ್ ಆಗಬೇಕು ಅನ್ನೋದು ನನ್ನ ಕನಸು. 2ನೇ ವರ್ಷದ ಡಿಪ್ಲೋಮಾ ಮಾಡುತ್ತಿದ್ದೀನಿ. ಮುಂದೆ ನಾನು ಇಂಜಿನಿಯರಿಂಗ್‌ಗೆ ಹೋಗಲೇ ಅಥವಾ ಚಿತ್ರರಂಗಕ್ಕೆ ಕಾಲಿಡಲೇ? ನನಗೆ ನಿರ್ದೇಶಕ ಆಗಬೇಕೆಂಬ ದೊಡ್ಡ ಕನಸಿದೆ ಎಂದು ನೆಟ್ಟಿಗರೊಬ್ಬರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಜಗ್ಗೇಶ್ ನಿರೀಕ್ಷೆ ಮಾಡದ ರೀತಿಯಲ್ಲಿ ಉತ್ತರ ನೀಡಿದ್ದಾರೆ.

ಓದಿಕೊಂಡು ದಡ ಸೇರಿ: ಜಗ್ಗೇಶ್

'ದಯಮಾಡಿ ಓದಿ ದಡ ಸೇರಿ. ಇಂದಿನ ಸಿನಿಮ ನಂಬಿ ತಂದೆ-ತಾಯಿ ಕನಸು, ನಿಮ್ಮ ಜೀವನ ಹಾಳು ಮಾಡಿಕೊಳ್ಳದಿರಿ. ನೀವೆಲ್ಲ ಅಂದುಕೊಂಡಷ್ಟು ಸುಲಭವಿಲ್ಲ ಇಂದಿನ ಸಿನಿಮಾ. ಬೇಕಾದರೆ ಸಂತೋಷಕ್ಕೆ ಹವ್ಯಾಸ ಆಗಿ ಬಳಸಿ, ವೃತ್ತಿಯಾಗಿ ಅಲ್ಲ. ಬೆರಳೆಣಿಸುವ ಕೆಲವರ ಬಿಟ್ಟು 98% ಸಿನಿಮಾ ಜನ ಸಂಕಷ್ಟದಲ್ಲಿ ಇದ್ದಾರೆ' ಎಂದು ನವರಸನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಚಿತ್ರರಂಗದ ಪರಿಸ್ಥಿತಿ ಏನಾಗಿದೆ?

ಇಂದು ಸಾಕಷ್ಟು ಸಿನಿಮಾಗಳು ರಿಲೀಸ್ ಆಗುತ್ತವೆ, ಆದರೆ ಅವುಗಳಲ್ಲಿ ಗೆಲ್ಲುವ ಸಿನಿಮಾಗಳ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟು. ಇದರ ಜೊತೆಗೆ ಎಲ್ಲರಿಗೂ ಒಳ್ಳೆಯ ಪಾತ್ರಗಳು, ಬ್ರೇಕ್ ಸಿಗುವಂತಹ ಕಥೆ ಸಿಗುತ್ತದೆ ಎಂದು ಹೇಳಲಾಗದು. 300 ಸಿನಿಮಾದಲ್ಲಿ ಪೋಷಕ ನಟ-ನಟಿಯಾಗಿರುವವರಿಗೆ ಇಂದು ಸ್ವಂತ ಮನೆ ಕೂಡ ಇಲ್ಲದಿರುವ ಉದಾಹರಣೆ ಇದೆ. ಒಂದು ಸಿನಿಮಾ ಚೆನ್ನಾಗಿದ್ದರೂ ಕೂಡ ಅದನ್ನು ರಿಲೀಸ್ ಮಾಡೋದು, ಪ್ರೇಕ್ಷಕರನ್ನು ಥಿಯೇಟರ್‌ನತ್ತ ಕರೆದುಕೊಂಡು ಬರುವುದು ಸುಲಭದ ಮಾತಲ್ಲ. ಇದರ ನಡುವೆ ಅನೇಕ ಸಮಸ್ಯೆಗಳಿವೆ. ಅದರಲ್ಲೂ ಕೊರೊನಾ ವೈರಸ್‌ನಿಂದಾಗಿ ಚಿತ್ರರಂಗವೂ ಆರ್ಥಿಕ ಸಂಕಷ್ಟದಲ್ಲಿದೆ. ಈಗೀಗ ಸ್ವಲ್ಪ ಚೇತರಿಸಿಕೊಳ್ಳುತ್ತಿರುವಾಗ ಸಿನಿಮಾ ಎಂದು ನಂಬಿಕೊಂಡು ಕೂತರೆ ಹೊಟ್ಟೆಗೆ ತಣ್ಣೀರುಪಟ್ಟಿಯೇ ಗತಿ ಎನ್ನೋದು ಜಗ್ಗೇಶ್ ಅವರ ಅಭಿಪ್ರಾಯ

Also Read-ಇಂಥ ಸಿನಿಮಾ ನಟರನ್ನು ಜನರು ಆರಾಧಿಸಬೇಕೇ? ಜಗ್ಗೇಶ್‌ ಕೊಟ್ಟ ಅನುಭವದ ಉತ್ತರ ಇಲ್ಲಿದೆ ನೋಡಿ...

ಸೋಶಿಯಲ್ ಮೀಡಿಯಾದಲ್ಲಿ ಜಗ್ಗೇಶ್ ಸಕ್ರಿಯ!

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ನಟ ಜಗ್ಗೇಶ್ ಅವರು ಅಭಿಮಾನಿಗಳ ಪ್ರಶ್ನೆಗೆ ಉತ್ತರ ಕೊಡುತ್ತಿರುತ್ತಾರೆ, ನೆಟ್ಟಿಗರ ಜೊತೆ ಅನೇಕ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಸಮಾಜದಲ್ಲಿ ಏನೇ ಮಹತ್ವದ ಘಟನೆಗಳು ನಡೆದರೂ ಅದಕ್ಕೆ ಪ್ರತಿಕ್ರಿಯೆ ನೀಡುತ್ತಾರೆ.

Also Read-ಜ್ಯೋತಿಷ್ಯ ನಂಬುವವರಿಗೆ 2020ರ ಅನುಭವದ ಆಧಾರದಲ್ಲಿ ನಟ ಜಗ್ಗೇಶ್‌ ಹೇಳೋದೇನು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌