ಆ್ಯಪ್ನಗರ

'ಹಾಗೆ ಸುಮ್ಮನೆ, ನನ್ನ ಕಥೆ ಗೀಚಿದೆ..' ಎನ್ನುತ್ತ 50 ವರ್ಷದ ಗೆಳೆತನದ ಬಗ್ಗೆ ಹೇಳಿದ ನಟ ಜಗ್ಗೇಶ್‌

ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ ಅನೇಕ ಬಾರಿಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬಾಲ್ಯದ ದಿನಗಳ ಬಗ್ಗೆ ಹೇಳಿಕೊಳ್ಳುತ್ತಿರುತ್ತಾರೆ. ಇದೀಗ ಶ್ರೀರಾಮಪುರದಲ್ಲಿರುವ ತಮ್ಮ ಸ್ನೇಹಿತರೊಬ್ಬರ ಬಗ್ಗೆ ಜಗ್ಗೇಶ್ ಹೇಳಿಕೊಂಡಿದ್ದಾರೆ. ಅಂದಹಾಗೆ, ಈ ಗೆಳೆತನಕ್ಕೆ ಭರ್ತಿ 50 ವರ್ಷವಾಗಿದೆ. ಆ ಕುರಿತು ಜಗ್ಗೇಶ್ ವಿಶೇಷ ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ.

Authored byಅವಿನಾಶ್ ಜಿ. ರಾಮ್ | Vijaya Karnataka Web 5 Apr 2024, 7:05 pm

ಹೈಲೈಟ್ಸ್‌:

  • ಆಗಾಗ ಬಾಲ್ಯದ ನೆನಪುಗಳನ್ನು ಹಂಚಿಕೊಳ್ಳುವ 'ನವರಸ ನಾಯಕ' ಜಗ್ಗೇಶ್
  • ತಮ್ಮ 50 ವರ್ಷದ ಹಳೆಯ ಗೆಳೆಯನನ್ನು ಪರಿಚಯಿಸಿದ ಜಗ್ಗೇಶ್
  • ಶ್ರೀರಾಮಪುರದಲ್ಲಿ ಜಗ್ಗೇಶ್ ಅವರಿಗೆ ಯಾರೆಲ್ಲಾ ಸ್ನೇಹಿತರಿದ್ದರು ನೋಡಿ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web jaggesh childhood
'ನವರಸ ನಾಯಕ' ಜಗ್ಗೇಶ್ ಅವರು ಆಗಾಗ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ತಮ್ಮ ಬದುಕಿನಲ್ಲಿ ನಡೆದ ಹಳೆಯ ಘಟನೆಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಜಗ್ಗೇಶ್ ಅವರ ಬಾಲ್ಯದ ಕಥೆಗಳು ಕೂಡ ಅಷ್ಟೇ ಮಜಾವಾಗಿರುತ್ತವೆ. ಇದೀಗ ಜಗ್ಗೇಶ್ ಅವರು ತಮ್ಮ 50 ವರ್ಷದ ಗೆಳೆತನದ ಬಗ್ಗೆ ಹೇಳಿಕೊಂಡಿದ್ದಾರೆ ಮತ್ತು ತಮ್ಮ ಬಾಲ್ಯದ ಗೆಳೆಯನ ಜೊತೆಗೆ ಈಗಲೂ ಒಡನಾಟ ಹೊಂದಿರುವುದಾಗಿ ತಿಳಿಸಿದ್ದಾರೆ.

ಇವ್ರೇ ನೋಡಿ ಜಗ್ಗೇಶ್ ಅವ್ರ ಮೆಕ್ಯಾನಿಕ್ ಫ್ರೆಂಡ್

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಮೆಕ್ಯಾನಿಕ್ ಗೆಳೆಯನನ್ನು ಜಗ್ಗೇಶ್ ಪರಿಚಯ ಮಾಡಿಸಿದ್ದಾರೆ. ಜೊತೆಗೆ ಹಾಗೆ ಸುಮ್ಮನೆ, ನನ್ನ ಕಥೆ ಗೀಚಿದ್ದಾರೆ. "ಇದೇ ಬೈಕ್ ಮೆಕ್ಯಾನಿಕ್ ಅಂಗಡಿಯಲ್ಲಿ ನಮ್ಮ ತಂದೆ, ಅವರ ಬುಲೆಟ್ ಬೈಕನ್ನು ರಿಪೇರಿ ಮಾಡಿಸುತ್ತಿದ್ದರು. ಆಗ ಇವನ ಅಣ್ಣ ಥಾಮಸ್ ಮುಖ್ಯ ಮೆಕ್ಯಾನಿಕ್. ಈತ ಶಾಲೆಗೆ ಹೋಗದೇ ಅಣ್ಣನ ಸಹಾಯಕನಾಗಿದ್ದ" ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.
'ನನ್ನ ಜಾತಕದಲ್ಲಿ ಕಳೆದ ವರ್ಷ ಆ ಯೋಗ ಇದ್ದಿದ್ದಕ್ಕೆ ನಾನು 1.5 ಕೋಟಿ ರೂ. ಕಾರ್ ಕಳೆದುಕೊಂಡೆ': ನಟ ಜಗ್ಗೇಶ್


ಈ ಅಂಗಡಿಯಲ್ಲಿ ನಮ್ಮ ಸ್ನೇಹಕೂಟ ಕೂರುತ್ತಿತ್ತು

"ಇವನ ಅಣ್ಣ ತೀರಿದ ಮೇಲೆ ಇವನ ಕೈಗೆ ಅಂಗಡಿ ಬಂತು. ನನ್ನ ಕೈಗೆ ಬುಲೆಟ್ ಬಂತು. ಅಲ್ಲಿಂದ ಇವನು ನನ್ನ ಆತ್ಮೀಯ.. ಈ ಅಂಗಡಿಯಲ್ಲಿ ಅಂದಿನ ನಮ್ಮ ಸ್ನೇಹಕೂಟ ಕೂರುತ್ತಿತ್ತು.. ಈ ಅಂಗಡಿಗೆ 'ಆ ದಿನಗಳು' ಶ್ರೀರಾಮಪುರ ಕಿಟ್ಟಿ, ಕರಿಯ (ಪ್ರೇಮ್ ಚಿತ್ರದ ಸ್ಪೂರ್ತಿ), ಸ್ವತಂತ್ರಪಾಳ್ಯ ಶಿವ, ನಂಜುಂಡ, ಮಚ್ಚ ಪ್ರಕಾಶ ಬರುತ್ತಿದ್ದರು ನನ್ನ ಜೊತೆ ಬಿಲ್ಡಪ್‌ ಇಲ್ಲದೆ ಉತ್ತಮ ನಡವಳಿಕೆ ತೋರುತ್ತಿದ್ದರು" ಎಂದು ಅಂದಿನ ಕಾಲದ ಸ್ನೇಹಿತರ ಬಗ್ಗೆಯೂ ಜಗ್ಗೇಶ್ ತಿಳಿಸಿದ್ದಾರೆ.
'ರಂಗನಾಯಕ' ಸಿನಿಮಾದಲ್ಲಿ ಜಗ್ಗೇಶ್‌ಗೆ ತಾಯಿ ಪಾತ್ರ ಮಾಡಿದ 'ಬಿಗ್ ಬಾಸ್' ಚೈತ್ರಾ ಕೊಟ್ಟೂರು

ಇಲ್ಲಿ ಕುಳಿತು ಟೀ ಕುಡಿದು ಬರುವೆ

"ನಾನು ಬಾಲ್ಯದಲ್ಲಿ ತಪ್ಪು ಮಾಡಿದರೆ, ಅಪ್ಪ ನನ್ನ ಕೈಕಾಲುಗಳನ್ನು ಹಗ್ಗದಲ್ಲಿ ಕಟ್ಟಿ, ಈ ಅಂಗಡಿ ಬಾಗಲಿಗೆ ಕೂರಿಸಿ ಶಿಕ್ಷೆ ನೀಡುತ್ತಿದ್ದರು.. ನನಗೆ ಬಹಳ ಬೇಜಾರಾದಾಗ ಅಥವಾ ಸಮಯ ಸಿಕ್ಕರೆ ಇಲ್ಲಿ ಕುಳಿತು ಟೀ ಕುಡಿದು ಬರುವೆ. ಅಂದಹಾಗೆ, ಈ ಸ್ನೇಹಿತನ ಹೆಸರು ಅಂತೋಣಿ ಕ್ರೂಸಿಸ್... ಹಾಗೆ ಸುಮ್ಮನೆ ನನ್ನ ಕಥೆ ಗೀಚಿದೆ" ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ. ಜಗ್ಗೇಶ್ ಅವರ ಈ ಪೋಸ್ಟ್‌ಗೆ 20 ಸಾವಿರಕ್ಕೂ ಅಧಿಕ ಲೈಕ್ಸ್ ಸಿಕ್ಕಿವೆ. ಜೊತೆಗೆ ಸಾವಿರಾರು ಮಂದಿ ಕಾಮೆಂಟ್ ಮಾಡಿದ್ದಾರೆ.
View this post on Instagram A post shared by 𝐉𝐀𝐆𝐆𝐄𝐒𝐇 𝐒𝐇𝐈𝐕𝐀𝐋𝐈𝐍𝐆𝐀𝐏𝐏𝐀 (@actor_jaggesh)


'ರಂಗನಾಯಕ' ಸಿನಿಮಾದಲ್ಲಿ ನಟಿಸಿದ್ದ ಜಗ್ಗೇಶ್

ಈಚೆಗೆ ಜಗ್ಗೇಶ್ ಅವರ 'ರಂಗನಾಯಕ' ಸಿನಿಮಾ ತೆರೆಕಂಡಿತ್ತು. 'ಮಠ' ಗುರುಪ್ರಸಾದ್ ನಿರ್ದೇಶನ ಮಾಡಿದ್ದ ಈ ಸಿನಿಮಾಕ್ಕೆ ಪ್ರೇಕ್ಷಕರಿಗೆ ಹೇಳಿಕೊಳ್ಳುವಂತಹ ರೆಸ್ಪಾನ್ಸ್ ಸಿಗಲಿಲ್ಲ. ಅಲ್ಲದೆ, ಚಿತ್ರದಲ್ಲಿದ್ದ ಕೆಲವೊಂದು ದೃಶ್ಯಗಳ ಬಗ್ಗೆ ಆಕ್ಷೇಪವೂ ಕೇಳಿಬಂದಿತ್ತು. ಕೊನೆಗೆ ನಟ ಜಗ್ಗೇಶ್ ಅವರು ಮಂತ್ರಾಲಯಕ್ಕೆ ಹೋದಾಗ, ಫೇಸ್‌ಬುಕ್‌ನಲ್ಲಿ ಲೈವ್ ಬಂದಿದ್ದರು. "ಮೊನ್ನೆ ಒಂದು ಸಿನಿಮಾ ಮಾಡಿದೆ. ಎಲ್ಲರಿಗೂ ನೋವಾಗಿದೆ. ಅದರಲ್ಲಿ ನನ್ನ ತಪ್ಪಿಲ್ಲಿ. ಆ ಸಿನಿಮಾ ನನ್ನದಲ್ಲ. ನಿರ್ದೇಶಕನನ್ನು ನಂಬಿ ನಾನು ಕೆಲಸ ಕೊಟ್ಟಾಗ ಆತನ ಆಸೆಯಂತೆ ನನ್ನ ಕರ್ತವ್ಯ ಮಾಡಿರುವೆ. ನಿರ್ದೇಶಕ ಹೇಳಿದಂತೆ ನಟಿಸಿದ್ದೇನೆ. ನನಗೂ ಅದಕ್ಕೂ ಸಂಬಂಧವಿಲ್ಲ" ಎಂದು ಜಗ್ಗೇಶ್ ಕ್ಷಮೆ ಕೇಳಿದದ್ದರು.
ಲೇಖಕರ ಬಗ್ಗೆ
ಅವಿನಾಶ್ ಜಿ. ರಾಮ್
'ವಿಜಯ ಕರ್ನಾಟಕ' ಡಿಜಿಟಲ್ ವಿಭಾಗದಲ್ಲಿ 2019ರ ಸೆಪ್ಟೆಂಬರ್‌ನಿಂದ ಪತ್ರಕರ್ತನಾಗಿ ಅವಿನಾಶ್ ಜಿ. ರಾಮ್ ಕೆಲಸ ಮಾಡುತ್ತಿದ್ದಾರೆ. ಚಿನ್ನದ ಪದಕದೊಂದಿಗೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ ಕಳೆದ 10 ವರ್ಷಗಳಿಂದ ಸಿನಿಮಾ ವರದಿಗಾರರಾಗಿ ಕೆಲಸ ಮಾಡಿದ ಅನುಭವವಿದೆ. ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ನಾಲ್ಕು ವರ್ಷ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಅವಿನಾಶ್‌ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ವರದಿಗಾರಿಕೆ ಜೊತೆಗೆ ಪ್ರವಾಸ, ಓದು, ಸಂಗೀತ ಕೇಳುವುದು ಇವರ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌