ಆ್ಯಪ್ನಗರ

ಆಯುಧ ಪೂಜೆಗೆ ಕೈಯಲ್ಲಿ ಮಚ್ಚು, ಕತ್ತಿ ಹಿಡ್ಕೊಂಡು ಬಂದ ಟಾಲಿವುಡ್ ಸ್ಟಾರ್ ನಟರು!!!

ಆಯುಧ ಪೂಜೆಗೆ ಆಯುಧಗಳನ್ನು ಇಟ್ಟುಕೊಂಡು ಪೂಜೆ ಮಾಡಲಾಗುತ್ತಿದೆ. ಆದರೆ, ಟಾಲಿವುಡ್ನ ಇಬ್ಬರು ಸ್ಟಾರ್ ಹೀರೋಗಳು ಮಾತ್ರ ಕೈಯಲ್ಲಿ ಆಯುಧಗಳನ್ನೇ ಹಿಡಿದುಕೊಂಡು ಬಂದಿದ್ದಾರೆ. ಯಾಕೆ ಹೀಗೆ ಮಾಡಿದರು? ಅದಕ್ಕಿಲ್ಲಿದೆ ಕಾರಣ.

Vijaya Karnataka Web 7 Oct 2019, 6:30 pm
ಎಲ್ಲೆಡೆ ಸಂಭ್ರಮದಿಂದ ಆಯುಧ ಪೂಜೆ ಮಾಡಲಾಗುತ್ತಿದೆ. ಶಸ್ತ್ರಾಸ್ತ್ರಗಳನ್ನು, ವಾಹನಗಳನ್ನು ಇಟ್ಟು ಪೂಜೆ ಮಾಡುವುದು ಸಂಪ್ರದಾಯ. ಆದರೆ, ಟಾಲಿವುಡ್ನ ಇಬ್ಬರು ಸ್ಟಾರ್ ಹೀರೋಗಳು ಕೈಯಲ್ಲಿ ಕತ್ತಿ, ಕೊಡಲಿ ಥರದ ಅಪಾಯಕಾರಿ ಆಯುಧಗಳನ್ನು ಇಟ್ಟುಕೊಂಡು ಬಂದಿದ್ದಾರೆ. ಇದು ಅಚ್ಚರಿ ಎನಿಸಿದರು ಸತ್ಯ!
Vijaya Karnataka Web Blayya mahesh

ತೆಲುಗು ನಟ ನಂದಮೂರಿ ಬಾಲಕೃಷ್ಣ ಹುಟ್ಟಿದ್ದು ಅರಸೀಕೆರೆಯಲ್ಲಂತೆ!

ಸ್ಟೈಲೀಶ್ ಲುಕ್‌ನಲ್ಲಿ ಬಾಲಯ್ಯ!
ಹೌದು, ನಟ ನಂದಮೂರಿ ಬಾಲಕೃಷ್ಣ 'ಎನ್‌ಟಿಆರ್' ಬಯೋಪಿಕ್ ನಂತರ ಹೊಸದೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಆದರೆ, ಈ ಸಿನಿಮಾದ ಶೀರ್ಷಿಕೆ ನಿಗದಿಯಾಗದೇ ಇದ್ದರು, ಅದರಲ್ಲಿ ಬಾಲಯ್ಯ ಪಾತ್ರ ಸಖತ್ ಸ್ಟೈಲೀಶ್ ಆಗಿ ಇದೆ ಎಂಬುದು ಲುಕ್‌ಗಳ ಮೂಲಕ ಬಹಿರಂಗಗೊಂಡಿದೆ. ಸದ್ಯ ಆ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದ್ದು, ಕೈಯಲ್ಲಿ ರಕ್ತಸಿಕ್ತಗೊಂಡಿರುವ ಕತ್ತಿ ಹಿಡಿದು ಪೋಸ್ ನೀಡಿದ್ದಾರೆ ಬಾಲಯ್ಯ. ಕೆ.ಎಸ್‌. ರವಿಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ.
ಖ್ಯಾತ ನಟ ಮಹೇಶ್ ಬಾಬು ಮಲತಾಯಿ ವಿಜಯ ನಿರ್ಮಲಾ ವಿಧಿವಶ

ಕೆಟ್ಟದ್ದನ್ನು ನಾಶ ಮಾಡೋಣ ಅಂತಿದ್ದಾರೆ ಮಹೇಶ್ ಬಾಬುದಸರಾ ಹಬ್ಬದ ಪ್ರಯುಕ್ತ ಮಹೇಶ್‌ ಬಾಬು ನಟನೆಯ 'ಸರಿಲೇರು ನೀಕೆವ್ವರು' ಚಿತ್ರತಂಡ ಒಂದು ಪೋಸ್ಟರ್ ರಿಲೀಸ್ ಮಾಡಿದ್ದು, ಅಲ್ಲಿಯೂ ಮಹೇಶ್‌ ಕೈಯಲ್ಲಿ ಕೊಡಲಿ ಹಿಡಿದುಕೊಂಡು ರಗಡ್ ಆಗಿ ಪೋಸ್ ನೀಡಿದ್ದಾರೆ. ಅವರು ಚಿತ್ರದಲ್ಲಿ ಸೈನಿಕನಾಗಿ ಕಾಣಿಸಿಕೊಂಡಿದ್ದಾರೆ. ಅನಿಲ್ ರವಿಪುಡಿ ನಿರ್ದೇಶನ ಮಾಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌