ಆ್ಯಪ್ನಗರ

ಮಹೇಶ್ ಬಾಬುಗೆ 'ಬ್ರದರ್' ಅಂದಿದ್ದೇ ತಪ್ಪಾಯ್ತು! ಸಂಗೀತ ನಿರ್ದೇಶಕನ ವಿರುದ್ಧ ಫ್ಯಾನ್ಸ್ ಗರಂ!

'ಪ್ರಿನ್ಸ್' ಮಹೇಶ್‌ ಬಾಬು ಅಭಿಮಾನಿಗಳು ಈಚೆಗಷ್ಟೆ ಉಮಾ ಮಹೇಶ್ವರ ಉಗ್ರರೂಪಸ್ಯ ತಂಡದ ಮೇಲೆ ಗರಂ ಆಗಿದ್ದರು. ಈಗ ಯುವರತ್ನ ಸಂಗೀತ ನಿರ್ದೇಶಕನ ಮೇಲೆ ಸಿಟ್ಟು ಮಾಡಿಕೊಂಡಿದ್ದಾರೆ! ಅದಕ್ಕೆ ಕಾರಣವೇನು?

Vijaya Karnataka Web 7 Aug 2020, 6:00 pm
ಕೆಲವೊಮ್ಮೆ ಅಭಿಮಾನಿಗಳು ಯಾವ ವಿಚಾರಕ್ಕೆ ಬೇಸರ ಮಾಡಿಕೊಳ್ಳುತ್ತಾರೆ ಎಂಬುದೇ ಗೊತ್ತಾಗುವುದಿಲ್ಲ. ಕಾರಣವಲ್ಲದ ಕಾರಣಗಳಿಗೂ ಫ್ಯಾನ್ಸ್ ಕೋಪ ಮಾಡಿಕೊಂಡಿದ್ದನ್ನು ಕೆಲ ಬಾರಿ ಕಂಡಿದ್ದೇವೆ. ಸದ್ಯ 'ಟಾಲಿವುಡ್‌' ನಟ ಪ್ರಿನ್ಸ್ ಮಹೇಶ್ ಬಾಬು ಅವರ ಅಭಿಮಾನಿಗಳು ಸಂಗೀತ ನಿರ್ದೇಶಕ ಎಸ್‌. ಥಮನ್ ಮೇಲೆ ಗರಂ ಆಗಿದ್ದಾರೆ. ಸದ್ಯದ ಈ ಸಮಸ್ಯೆಗೆ ಕಾರಣ, ಥಮನ್ ಮಾಡಿದ ಒಂದೇ ಒಂದು ಟ್ವೀಟ್!
Vijaya Karnataka Web actor mahesh babu fans angry on yuvarathnaa music director s thaman
ಮಹೇಶ್ ಬಾಬುಗೆ 'ಬ್ರದರ್' ಅಂದಿದ್ದೇ ತಪ್ಪಾಯ್ತು! ಸಂಗೀತ ನಿರ್ದೇಶಕನ ವಿರುದ್ಧ ಫ್ಯಾನ್ಸ್ ಗರಂ!


ಅಷ್ಟಕ್ಕೂ ಆಗಿದ್ದೇನು?
ಇದೇ ಆಗಸ್ಟ್ 9ರಂದು ನಟ ಮಹೇಶ್‌ ಬಾಬು ಅವರಿಗೆ ಜನ್ಮದಿನ. ಆ ಸಲುವಾಗಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡುವುದು ಕಾಮನ್‌. ಅದನ್ನರಿತ ಮಹೇಶ್, ಶುಕ್ರವಾರ ಒಂದು ಟ್ವೀಟ್ ಮಾಡಿದ್ದರು. 'ನನ್ನ ಮೇಲೆ ಪ್ರೀತಿ ಅಭಿಮಾನ ತೋರಿಸುವ ನನ್ನೆಲ್ಲ ಅಭಿಮಾನಿಗಳಿಗೆ ಧನ್ಯವಾದಗಳು. ನನ್ನ ವಿಶೇಷ ದಿನವನ್ನು ನೀವೆಲ್ಲ ಸ್ಮರಣೀಯವಾಗಿಸುವುದಕ್ಕೆ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ಪ್ರಸ್ತುತ ಇಡೀ ಜಗತ್ತೇ ಕೊರೊನಾ ವಿರುದ್ಧ ಹೋರಾಡುತ್ತಿದೆ. ಹಾಗಾಗಿ, ಸುರಕ್ಷತೆ ಬಹಳ ಮುಖ್ಯ. ಆದ್ದರಿಂದ ನನ್ನ ಜನ್ಮದಿನದಂದು ಯಾರೂ ಕೂಡ ಗುಂಪು ಸೇರಬೇಡಿ. ಎಲ್ಲರೂ ಸುರಕ್ಷಿತವಾಗಿರಿ..' ಎಂದು ಮನವಿ ಮಾಡಿಕೊಂಡಿದ್ದಾರೆ ಮಹೇಶ್‌.

'ಸಹೋದರ' ಎಂದಿದ್ದೇ ತಪ್ಪಾಯಿತು!
ಮಹೇಶ್ ಮಾಡಿದ್ದ ಟ್ವೀಟ್‌ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರು ನಡೆದುಕೊಂಡ ರೀತಿ ಉತ್ತಮವಾದದ್ದು ಎಂದಿದ್ದಾರೆ. ಅದೇ ರೀತಿ ಸಂಗೀತ ನಿರ್ದೇಶ ಥಮನ್‌ ಕೂಡ ಮಹೇಶ್ ಮಾಡಿದ್ದ ಟ್ವೀಟ್ ಅನ್ನು ರೀ-ಟ್ವೀಟ್ ಮಾಡಿದ್ದಾರೆ. ಜೊತೆಗೆ 'ಗ್ರೇಟ್ ಗೆಸ್ಚರ್ ಬದ್ರರ್' ಎಂದು ಬರೆದುಕೊಂಡಿದ್ದಾರೆ. ಯಾವಾಗ 'ಬ್ರದರ್‌' ಎಂಬ ಪದ ಪ್ರಯೋಗ ಮಾಡಿದರೋ, ಆಗಲೇ ಅಭಿಮಾನಿಗಳು ಗರಂ ಆಗಿದ್ದಾರೆ!

'ನೀವಿನ್ನೂ ಮಹೇಶ್ ಬಾಬು ಅವರಿಗೆ ಬ್ರದರ್ ಅನ್ನೋವಷ್ಟು ಬೆಳೆದಿಲ್ಲ. 'ಸರ್' ಎಂದು ಕರೆಯಿರಿ...', 'ಅಂದು ಸರ್ ಎಂದು ಕರೆದು, ಈಗ ಬ್ರದರ್ ಅಂತಿರಾ.. 'ಮಹೇಶ್ ಸರ್' ಎಂದು ಕರೆಯಿರು' ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. ಆದರೆ, ಈವರೆಗೂ ಥಮನ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಂದಹಾಗೆ, ಮಹೇಶ್ ನಟಿಸಿದ್ದ 'ಆಗಡು', 'ದೂಕುಡು', 'ಬ್ಯುಸಿನೆಸ್‌ಮ್ಯಾನ್‌' ಸಿನಿಮಾಗಳಿಗೆ ಸಂಗೀತ ನೀಡಿದ್ದು ಇದೇ ಥಮನ್. ಅಷ್ಟೇ ಅಲ್ಲ, ಮುಂಬರುವ 'ಸರ್ಕಾರು ವಾರಿ ಪಾಟ' ಚಿತ್ರಕ್ಕೂ ಥಮನ್ ಸಂಗೀತ ನೀಡಲಿದ್ದಾರೆ. ಸದ್ಯ ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ನಟಿಸಿರುವ 'ಯುವರತ್ನ' ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ ಎಸ್‌. ಥಮನ್. ಇದು ಪುನೀತ್ ಜೊತೆಗೆ ಇದು ಅವರಿಗೆ ಮೂರನೇ ಸಿನಿಮಾ ಅನ್ನೋದು ವಿಶೇಷ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌