ಆ್ಯಪ್ನಗರ

Naresh & Pavitra Lokesh: ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಬೆಳ್ಳಂಬೆಳಗ್ಗೆ ಹೈಡ್ರಾಮಾ; ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!

ನಟಿ ಪವಿತ್ರಾ ಲೋಕೇಶ್ (Pavitra Lokesh) ಮತ್ತು ನರೇಶ್ (Naresh) ಕುರಿತ ಚರ್ಚೆ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಮೈಸೂರಿನ (Mysuru) ಖಾಸಗಿ ಹೋಟೆಲ್‌ನಲ್ಲಿ ಈ ಕುರಿತಂತೆ ಹೈಡ್ರಾಮಾ ನಡೆದಿದೆ. ಹೋಟೆಲ್‌ಗೆ ನರೇಶ್‌ ಮೂರನೇ ಪತ್ನಿ ರಮ್ಯಾ ರಘುಪತಿ (Ramya Raghupathi) ಆಗಮಿಸಿ, ಕೂಗಾಡಿರುವ ವಿಡಿಯೋ ವೈರಲ್ ಆಗಿದೆ.

Authored byಅವಿನಾಶ್ ಜಿ. ರಾಮ್ | Vijaya Karnataka Web 3 Jul 2022, 3:20 pm

ಹೈಲೈಟ್ಸ್‌:

  • ಮುಗಿಯದ ಪವಿತ್ರಾ ಲೋಕೇಶ್‌, ನರೇಶ್‌, ರಮ್ಯಾ ವಿವಾದ
  • ಒಂದೇ ರೂಮ್‌ನಿಂದ ಹೊರಬಂದ್ರಾ ಪವಿತ್ರಾ & ನರೇಶ್‌?
  • ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ನರೇಶ್‌ ಪತ್ನಿ ರಮ್ಯಾ ಧರಣಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ನಟಿ ಪವಿತ್ರಾ ಲೋಕೇಶ್‌ (Pavitra Lokesh) ಮತ್ತು ತೆಲುಗು ನಟ ನರೇಶ್ (Naresh) ಅವರ ಕುರಿತ ಸುದ್ದಿಗಳು ಸಾಕಷ್ಟು ಚರ್ಚೆ ಆಗುತ್ತಿವೆ. ಈಚೆಗಷ್ಟೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಪವಿತ್ರಾ ಲೋಕೇಶ್, 'ನನ್ನೆಲ್ಲಾ ನೋವು-ಸುಖದಲ್ಲಿ ನರೇಶ್ ಭಾಗಿಯಾಗಿದ್ದಾರೆ. ಹೀಗಾಗಿ, ಈಗ ಅವರ ಸಂಕಷ್ಟದ ಸಮಯದಲ್ಲಿ ನಾನು ಅವರ ಜೊತೆಗೆ ಇರುತ್ತೇನೆ. ನಾಳೆ ಏನಾಗುತ್ತೆ ಅಂತ ಈಗಲೇ ನಾನು ಹೇಳೋಕೆ ಆಗಲ್ಲ. ಅಫ್ ಕೋರ್ಸ್ ನಾವು ಜೊತೆಗಿರ್ತೀವಿ. ನಾವು ಅಟ್ಯಾಚ್ ಆಗಿದ್ದೀವಿ. ಸ್ನೇಹಕ್ಕಿಂತ ಒಂದು ಹೆಜ್ಜೆ ಮುಂದೆನೇ ಇದೆ ಅಂದುಕೊಳ್ಳಿ. ಅದರಲ್ಲಿ ತಪ್ಪೇನು' ಎಂದು ಪ್ರಶ್ನಿಸಿದ್ದರು. ಇದೀಗ ಮೈಸೂರಿನಲ್ಲಿ (Mysuru) ಹೈಡ್ರಾಮಾವೊಂದು ನಡೆದಿದೆ. ಪವಿತ್ರಾ ಲೋಕೇಶ್ ಮತ್ತು ನರೇಶ್‌ ತಂಗಿದ್ದ ಹೋಟೆಲ್‌ ಬಳಿ ನರೇಶ್‌ ಮೂರನೇ ಪತ್ನಿ ರಮ್ಯಾ ರಘುಪತಿ (Ramya Raghupathi) ಗಲಾಟೆ ಮಾಡಿದ್ದಾರೆ. ಅವರ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಲು ರಮ್ಯಾ ಪ್ರಯತ್ನಿಸಿದ್ದಾರೆ.
ಒಂದೇ ರೂಮ್‌ನಿಂದ ಹೊರಬಂದ ಪವಿತ್ರಾ & ನರೇಶ್
ಮೈಸೂರಿನ ಖಾಸಗಿ ಹೋಟೆಲ್‌ವೊಂದರ ರೂಮ್‌ನಿಂದ ಪವಿತ್ರಾ ಲೋಕೇಶ್ ಮತ್ತು ನರೇಶ್ ಒಟ್ಟಿಗೆ ಹೊರಗೆ ಬಂದಿದ್ದಾರೆ. ಅದಕ್ಕೂ ಮುನ್ನ ರಮ್ಯಾ ರಘುಪತಿ ಹೋಟೆಲ್‌ಗೆ ಪ್ರವೇಶಿಸಿ, ಅವರಿಬ್ಬರು ಒಟ್ಟಿಗೆ ಇದ್ದರು ಎನ್ನಲಾದ ರೂಮ್‌ನ ಬಳಿ ಧರಣಿ ನಡೆಸಿದ್ದಾರೆ. ತುಂಬ ಸಮಯ ಬಾಗಿಲು ಬಡಿಯುತ್ತ ಹೊರಗಡೆ ಕಾದಿದ್ದಾರೆ. ರೂಮ್‌ ಮುಂದೆಯೇ ಪಟ್ಟು ಹಿಡಿದು ಕುಳಿತಿದ್ದರು. ಆದರೆ ರೂಮ್‌ ಬಾಗಿಲು ತೆರೆದಿರಲಿಲ್ಲ.

Pavithra Lokesh: ನರೇಶ್ ಹಾಗೂ ಪವಿತ್ರಾ ಲೋಕೇಶ್‌ಗೆ ಮದುವೆ ಆಗಿರೋದು ನಿಜವೇ?
ಸ್ಥಳಕ್ಕೆ ಬಂದ ಪೊಲೀಸರು
ನಂತರ ಅಲ್ಲಿಗೆ ಪೊಲೀಸರು ಆಗಮಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ. ರಮ್ಯಾ ರಘುಪತಿ ಮಾತ್ರ ಕೂಗಾಡುತ್ತಲೇ ಇದ್ದರು. ಪೊಲೀಸರು ಬಂದ ಬಳಿಕ ರೂಮ್‌ನಿಂದ ನರೇಶ್ ಮತ್ತು ಪವಿತ್ರಾ ಹೊರಬಂದರು. ಈ ವೇಳೆ ರಮ್ಯಾ ರಘುಪತಿ ಚಪ್ಪಲಿಯಿಂದ ಇಬ್ಬರ ಮೇಲೂ ಅಲ್ಲೆ ಮಾಡುವ ಪ್ರಯತ್ನ ಮಾಡಿದ್ದಾರೆ. ಅವರ ಜೊತೆಗೆ ಬಂದವರು ಕೂಡ ನರೇಶ್‌ ಮತ್ತು ಪವಿತ್ರಾ ವಿರುದ್ಧ ಘೋಷಣೆ ಕೂಗಿದ್ದಾರೆ. ಪೊಲೀಸರ ರಕ್ಷಣೆಯಲ್ಲಿ ಪವಿತ್ರಾ ಲೋಕೇಶ್‌ ಹಾಗೂ ನರೇಶ್‌ ಹೋಟೆಲ್‌ನಿಂದ ನಿರ್ಗಮಿಸಿದ್ದಾರೆ.

Pavithra Lokesh: ಮಕ್ಕಳ ಬಗ್ಗೆ ಯೋಚಿಸಿದಾಗ ಮನಸ್ಸು ನಿಜವಾಗಿಯೂ ವಿಚಲಿತವಾಗುತ್ತದೆ - ಸುಚೇಂದ್ರ ಪ್ರಸಾದ್
ನರೇಶ್ ಕೂಲ್ ರಿಯಾಕ್ಷನ್‌
ಇಷ್ಟೆಲ್ಲ ನಡೆದರೂ ಕೂಡ ನಟ ನರೇಶ್ ಮಾತ್ರ ತುಂಬ ಕೂಲ್ ಆಗಿದ್ದರು. ವಿಕ್ಟರಿ ಸಿಂಬಲ್ ತೋರಿಸುತ್ತ, ನಗುಮುಖದಿಂದಲೇ ಹೋಟೆಲ್‌ನಿಂದ ಹೊರನಡೆದರು. ಜೊತೆಗೆ ಶಿಳ್ಳೆ ಹೊಡೆಯುವ ಪ್ರಯತ್ನ ಮಾಡಿದರು.

Pavithra Lokesh: ನಾನು ಕಾರು ಬೇಕು ಅಂದಾಗ ಅದನ್ನ ‘ಆಸೆ’ ಅಂತ ಸುಚೇಂದ್ರ ಪ್ರಸಾದ್ ಕರೆದರೆ ಅದು ಮೂರ್ಖತನ!
ನಗುತ್ತ ಹೋದರಲ್ಲ, ಅದೇ ನನ್ನ ಜಯ..
ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ರಮ್ಯಾ ರಘುಪತಿ, 'ಇವರು ಇಲ್ಲಿದ್ದಾರೆ ಎಂದು ನನಗೆ ರಾತ್ರಿ 12 ಗಂಟೆಗೆ ಗೊತ್ತಾಯಿತು. 1 ಗಂಟೆಗೆ ಬೆಂಗಳೂರಿನಿಂದ ಹೊರಟೆ. ಇಲ್ಲಿಗೆ ಬಂದು ಡಿಸ್ಟರ್ಬ್ ಮಾಡುವುದು ಬೇಡ ಎಂದು ಬೆಳಗ್ಗೆವರೆಗೂ ಕಾದಿದ್ದೇನೆ. ಬೆಸ್ಟ್ ಫ್ರೆಂಡ್ಸ್.. ಬೆಸ್ಟ್ ಫ್ರೆಂಡ್ಸ್.. ಎಂದುಕೊಂಡು ರಾತ್ರಿಯೆಲ್ಲ ಒಂದು ರೂಮ್‌ನಲ್ಲಿದ್ದಾರೆ. ಅವರು ನಗುತ್ತ ಹೋದರಲ್ಲ, ಅದೇ ನನ್ನ ಜಯ.. ಕೆಳಗೆ ಬಿದ್ರು ಮೀಸೆ ಮಣ್ಣಾಗಲಿಲ್ಲ ಅಂತಾರಲ್ಲ ಹಾಗೇ ಇವರು. ಕಳೆದ 10 ವರ್ಷದಿಂದ ಇದೇ ಕರ್ಮ ಆಗಿದೆ. ಬಿರುಕು ಹೊರಗಿನವರಿಂದಲೇ ಬರಬೇಕು. ನಮ್ಮ ಅತ್ತೆ (ವಿಜಯ ನಿರ್ಮಲಾ) ಇಲ್ಲದಿರುವಾಗ ನನಗೆ ವಿಚ್ಛೇದನ ನೋಟಿಸ್ ನೀಡಿದ್ದಾರೆ. ನನ್ನ ಮಗ ಅಳುತ್ತಿದ್ದಾನೆ. ನರೇಶ್‌ಗೆ ಮೂರು ಮಕ್ಕಳಿದ್ದಾರೆ. ಮೂರು ಮದುವೆಯಿಂದಲೂ ಒಂದೊಂದು ಮಗು ಆಗಿದೆ..' ಎಂದು ಹೇಳಿದ್ದಾರೆ.
ಲೇಖಕರ ಬಗ್ಗೆ
ಅವಿನಾಶ್ ಜಿ. ರಾಮ್
'ವಿಜಯ ಕರ್ನಾಟಕ' ಡಿಜಿಟಲ್ ವಿಭಾಗದಲ್ಲಿ 2019ರ ಸೆಪ್ಟೆಂಬರ್‌ನಿಂದ ಪತ್ರಕರ್ತನಾಗಿ ಅವಿನಾಶ್ ಜಿ. ರಾಮ್ ಕೆಲಸ ಮಾಡುತ್ತಿದ್ದಾರೆ. ಚಿನ್ನದ ಪದಕದೊಂದಿಗೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ ಕಳೆದ 10 ವರ್ಷಗಳಿಂದ ಸಿನಿಮಾ ವರದಿಗಾರರಾಗಿ ಕೆಲಸ ಮಾಡಿದ ಅನುಭವವಿದೆ. ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ನಾಲ್ಕು ವರ್ಷ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಅವಿನಾಶ್‌ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ವರದಿಗಾರಿಕೆ ಜೊತೆಗೆ ಪ್ರವಾಸ, ಓದು, ಸಂಗೀತ ಕೇಳುವುದು ಇವರ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌