ಆ್ಯಪ್ನಗರ

ಜ್ಯೋತಿಷ್ಯ ನಂಬುವವರಿಗೆ 2020ರ ಅನುಭವದ ಆಧಾರದಲ್ಲಿ ನಟ ಜಗ್ಗೇಶ್‌ ಹೇಳೋದೇನು?

ಸಮಾಜದಲ್ಲಿ ನಡೆಯುವ ಅನೇಕ ಘಟನೆಗಳ ಬಗ್ಗೆ ಜಗ್ಗೇಶ್‌ ಪ್ರತಿಕ್ರಿಯಿಸುತ್ತಾರೆ. ಸರಿ ಯಾವುದು, ತಪ್ಪು ಯಾವುದು ಎಂಬುದರ ಕುರಿತು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುತ್ತಾರೆ. ಈಗ ಅವರು ಜೋತಿಷ್ಯದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Vijaya Karnataka Web 28 Sep 2020, 12:39 pm
ನೀವು ಪ್ರತಿದಿನ ಜೋತಿಷ್ಯ ಫಾಲೋ ಮಾಡುತ್ತೀರಾ? ಅದರ ಅನುಗುಣವಾಗಿ ದಿನಚರಿ ರೂಪಿಸಿಕೊಳ್ಳುತ್ತೀರಾ? ಹಾಗಾದರೆ ನಟ ಜಗ್ಗೇಶ್‌ ಹೇಳುವ ಕೆಲವು ಮಾತುಗಳನ್ನು ಕೇಳಲೇಬೇಕು. ಇತ್ತೀಚೆಗೆ ಟ್ವಿಟರ್‌ನಲ್ಲಿ ಅವರು ಜೋತಿಷ್ಯದ ಬಗ್ಗೆ ಒಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅದು ನೆಟ್ಟಿಗರ ಗಮನ ಸೆಳೆಯುತ್ತಿದೆ. ಪರ-ವಿರೋಧದ ಚರ್ಚೆ ಕೂಡ ನಡೆಯುತ್ತಿದೆ.
Vijaya Karnataka Web ಜಗ್ಗೇಶ್‌


ಅಷ್ಟಕ್ಕೂ ಜಗ್ಗೇಶ್‌ ಅವರು ಏಕಾಏಕಿ ಜೋತಿಷ್ಯದ ಬಗ್ಗೆ ಮಾತನಾಡಲು ಕಾರಣ ಏನು? 2020! ಹೌದು, ಈ ವರ್ಷ ಜನರು ಅಂದುಕೊಂಡಿದ್ದು ಒಂದು, ಆದರೆ ಆಗಿದ್ದು ಮತ್ತೊಂದು. ಕೊರೊನಾ ವೈರಸ್‌ ಹಾವಳಿಯಿಂದಾಗಿ ಎಲ್ಲ ಪ್ಲ್ಯಾನ್‌ಗಳೂ ತಲೆಕೆಳಗಾದವು. ಅಷ್ಟೇ ಅಲ್ಲದೆ, ಜೋತಿಷಿಗಳು ಹೇಳಿದ ಎಷ್ಟೋ ಮಾತುಗಳು ನಿಜವಾಗಲಿಲ್ಲ. ಅದನ್ನೇ ಪರಾಮರ್ಶಿಸಿರುವ ಜಗ್ಗೇಶ್‌ ಅವರು ಆ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

'2020 ಆರಂಭಕ್ಕೆ ಬಹುತೇಕ ಜೋತಿಷಿಗಳು ವಾಡಿಕೆಯಂತೆ ಈ ವರ್ಷ ಅದ್ಭುತ ಮಳೆಬೆಳೆ! ಕೆಲ ರಾಶಿಗಳಿಗೆ ಶನಿ-ಗುರು ಉತ್ತಮ ಫಲ ಎಂದು ಆನೆ ಕುದುರೆ ಮೇಲೆ ಸವಾರಿ ಮಾಡಿ ಹೇಳಿಬಿಟ್ಟರು. ಆದರೆ, ಕೊರೊನಾ ವಿಶ್ವ ಮನುಕುಲಕ್ಕೆ ಹೀಗೆ ಗುಮ್ಮಿ ಅಮಾಯಕರ ಸಾವು, ನೋವು, ನಷ್ಟ ಆಗುತ್ತದೆ ಎಂದು ಹೇಳಲಿಲ್ಲ. ಜೋತಿಷ್ಯಕ್ಕಿಂತ ನಿಮ್ಮನ್ನು ನೀವು ನಂಬಿ. ನೀವು ಸರಿ ಇದ್ದರೆ ಜೀವ, ಜಗ ಸರಿಯಿರುತ್ತದೆ' ಎಂದು ನವರಸ ನಾಯಕ ಟ್ವೀಟ್‌ ಮಾಡಿದ್ದಾರೆ.

also read: ಜಗ್ಗೇಶ್‌ ಹೆಸರು ಹೇಳಿಕೊಂಡು ಟ್ವಿಟರ್‌ನಲ್ಲಿ ಮಹಾಮೋಸ! ಪಾಠ ಕಲಿಸಲು ಮುಂದಾದ ನವರಸ ನಾಯಕ

ಜಗ್ಗೇಶ್‌ ಅವರ ಈ ಮಾತಿಗೆ ಅನೇಕರು ಸಹಮತ ಸೂಚಿಸಿದ್ದರೆ, ಕೆಲವರು ವಿರೋಧ ಕೂಡ ವ್ಯಕ್ತಪಡಿಸಿದ್ದಾರೆ. 'ಜ್ಯೋತಿಷ್ಯದ ಹೆಸರಿನಲ್ಲಿ ಮೋಸ ಮಾಡುವ ಡೋಂಗಿಗಳಿದ್ದಾರೆ. ತಮ್ಮ ಇತಿಮಿತಿಯಲ್ಲಿ ಪ್ರಾಮಾಣಿಕವಾಗಿ ಬದುಕುವ ಜ್ಯೋತಿಷಿಗಳೂ ಇದ್ದಾರೆ. ವಿಜ್ಞಾನಿಗಳಲ್ಲಿ ಡೋಂಗಿಗಳಿಲ್ಲವೇ?' ಎಂಬಿತ್ಯಾದಿ ಕಾಮೆಂಟ್‌ಗಳು ಬಂದಿದೆ. 'ಜ್ಯೋತಿಷ್ಯಕ್ಕಿಂತ ನಿಮ್ಮನ್ನ ನೀವೇ ನಂಬಿ ಎಂದು ಹೇಳುವ ನೀವು, 2021ರವರೆಗೂ ಕೋಮಲ್‌ರವರಿಗೆ ಗ್ರಹಗತಿ ಚೆನ್ನಾಗಿಲ್ಲ ಎಂಬುದನ್ನ ಹೇಗೆ ನಂಬುತ್ತೀರಿ? ಚಿರಂಜೀವಿ ಮತ್ತು ಮೇಘನಾರ ಜ್ಯೋತಿಷ್ಯದಲ್ಲಿ ಚೂರು ದೋಷವಿದೆ, ಒಂದು ಪೂಜೆ ಮಾಡಿದರೆ ಸರಿ ಹೋಗುತ್ತದೆ ಎಂದು ಹೇಗೆ ನಂಬಿದಿರಿ?' ಎಂದು ಕೆಲವರು ಪ್ರಶ್ನಿಸಿದ್ದಾರೆ.

also read: ನಾವು-ನೀವು ಕಪ್ಪಾಗಿ ಹುಟ್ಟಿದ್ದು ಕರ್ಮನಾ? 'ದುನಿಯಾ' ವಿಜಯ್‌ ನೋವಿನ ಪ್ರಶ್ನೆಗೆ ಜಗ್ಗೇಶ್‌ ಉತ್ತರ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌