ಆ್ಯಪ್ನಗರ

ದಿನಗೂಲಿ ಕಾರ್ಮಿಕರಿಗೆ ಆಸರೆಯಾದ ನಿಖಿಲ್‌ ಕುಮಾರಸ್ವಾಮಿ! ಯಾವ ರೀತಿ ಸಹಾಯ ಮಾಡ್ತಿದ್ದಾರೆ ನೋಡಿ

ಕನ್ನಡ ಚಿತ್ರರಂಗದ 3 ಸಾವಿರಕ್ಕೂ ಅಧಿಕ ದಿನಗೂಲಿ ಕಾರ್ಮಿಕರ ಬದುಕು ಸಂಕಷ್ಟದಲ್ಲಿದೆ. ಅವರ ಸಹಾಯಕ್ಕಾಗಿ ನಿಖಿಲ್‌ ಕುಮಾರಸ್ವಾಮಿ ಮುಂದಾಗಿದ್ದಾರೆ.

Vijaya Karnataka Web 27 Mar 2020, 6:17 pm
ಕೊರೊನಾ ವೈರಸ್‌ನಿಂದ ಇಡೀ ದೇಶದಲ್ಲಿ ಬಂದ್ ವಾತಾವರಣ ಇದೆ. ಈ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಕೆಲಸ-ಕಾರ್ಯಗಳು ಸ್ಥಗಿತಗೊಂಡಿವೆ. ಇದರ ಎಫೆಕ್ಟ್ ಕನ್ನಡ ಚಿತ್ರರಂಗದ ಮೇಲೂ ಆಗಿದೆ. ಎಲ್ಲಾ ಉದ್ಯಮಗಳು ಸ್ಥಗಿತವಾಗಿ, ಜನರು ದುಡಿಮೆಯಿಲ್ಲದೇ ಮನೆಯಲ್ಲೇ ಕೂರಬೇಕಾಗಿದೆ. ಯಾವುದೇ ಥರದ ಧಾರಾವಾಹಿ ಮತ್ತು ಸಿನಿಮಾಗಳ ಚಿತ್ರೀಕರಣ ಸದ್ಯಕ್ಕೆ ನಡೆಯುತ್ತಿಲ್ಲ. ಇದರಿಂದ ಚಲನಚಿತ್ರ ಕಾರ್ಮಿಕರಿಗೆ ತೊಂದರೆ ಆಗಿದೆ. ಸಿನಿಮಾ ಎಂದರೆ, ಅಲ್ಲಿ ಬರೀ ಕಲಾವಿದರು, ತಂತ್ರಜ್ಞರು ಮಾತ್ರವಲ್ಲ, ದಿನಗೂಲಿ ಕಾರ್ಮಿಕರು ಇರುತ್ತಾರೆ.
Vijaya Karnataka Web actor nikhil kumaraswamy helps kannada film daily wage workers
ದಿನಗೂಲಿ ಕಾರ್ಮಿಕರಿಗೆ ಆಸರೆಯಾದ ನಿಖಿಲ್‌ ಕುಮಾರಸ್ವಾಮಿ! ಯಾವ ರೀತಿ ಸಹಾಯ ಮಾಡ್ತಿದ್ದಾರೆ ನೋಡಿ


ಶೂಟಿಂಗ್‌ ಇದ್ದಾಗಲಷ್ಟೇ ಅವರಿಗೆ ಕೆಲಸ. ಆದರೆ, ಈಗ ಎಲ್ಲಿಯೂ ಚಿತ್ರೀಕರಣವೇ ನಡೆಯುತ್ತಿಲ್ಲ. ಹಾಗಾಗಿ, ಲೈಟ್‌ ಬಾಯ್ಸ್, ಫೈಟರ್ಸ್‌, ಯೂನಿಟ್‌ ಬಾಯ್ಸ್, ಮೇಕಪ್‌ ಬಾಯ್ಸ್, ಸಹ ನೃತ್ಯಗಾರರು ಹೀಗೆ ಸಾಕಷ್ಟು ವಿಭಾಗಳಲ್ಲಿ ಕೆಲಸ ಮಾಡುವ ಸಾವಿರಾರು ಜನ ಕಾರ್ಮಿಕರು ಒಂದು ಕೆಲಸವಿಲ್ಲದೆ ಕಷ್ಟದಲ್ಲಿದ್ದಾರೆ. ದಿನಗೂಲಿ ನಂಬಿ ಬದುಕುತ್ತಿದ್ದ ಸಿನಿಮಾ ಕಾರ್ಮಿಕ ವರ್ಗ ಕಂಗಾಲಾಗಿದೆ. ಇಂತಹ ಸಂದರ್ಭದಲ್ಲಿ ನಟ/ರಾಜಕಾರಣಿ ನಿಖಿಲ್‌ ಕುಮಾರಸ್ವಾಮಿ ಅವರು ಆರ್ಥಿಕ ಸಹಾಯ ನೀಡಲು ಮುಂದೆ ಬಂದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಅಷ್ಟೂ ಕಾರ್ಮಿಕರಿಗೆ ಅವರು ಮನಸ್ಸು ಮಾಡಿದ್ದಾರೆ.

18 ಅಸೋಸಿಯೇಷನ್‌ನ 3 ಸಾವಿರ ಕಾರ್ಮಿಕರು

ಕನ್ನಡ ಚಿತ್ರರಂಗದಲ್ಲಿ ಲೈಟ್ಸ್ ಬಾಯ್ಸ್ ಅಸೋಸಿಯೇಷನ್, ಯುನಿಟ್ ಬಾಯ್ಸ್ ಅಸೋಸಿಯೇಷನ್, ಪ್ರೊಡಕ್ಷನ್ ಅಸೋಸಿಯೇಷನ್, ಫೈಟರ್ಸ್ ಅಸೋಸಿಯೇಷನ್, ಮೇಕಪ್ ಮೆನ್ ಅಸೋಸಿಯೇಷನ್ ಹೀಗೆ ಸುಮಾರು 18 ಅಸೋಸಿಯೇಷನ್‌ಗಳಿಂದ ಸುಮಾರು 3 ಸಾವಿರಕ್ಕೂ ಅಧಿಕ ಸಿನಿಮಾ ಕಾರ್ಮಿಕರಿದ್ದಾರೆ. ಅವರೆಲ್ಲರಿಗೂ ಕಷ್ಟದ ಸಮಯ. ಸದ್ಯ ಅವರೆಲ್ಲರೂ ಶೂಟಿಂಗ್ ಇಲ್ಲದ ಕಾರಣ, ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹಾಗಾಗಿ, ಅವರ ಖಾತೆಗಳಿಗೆ ನೇರವಾಗಿ ಹಣ ಹಾಕುವುದಕ್ಕೆ ನಿಖಿಲ್‌ ಕುಮಾರಸ್ವಾಮಿ ತಿರ್ಮಾನಿಸಿದ್ದಾರೆ. ಅದಕ್ಕಾಗಿ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಂಡಿದ್ದು ಶೀಘ್ರದಲ್ಲೇ ಎಲ್ಲರ ಖಾತೆಗೂ ಹಣ ಜಮೆಯಾಗಲಿದೆ.

ಪರಿಹಾರ ನಿಧಿಗೆ ಕೋಟಿ ಕೋಟಿ ಹಣ ಕೊಟ್ಟ ಸ್ಟಾರ್ ನಟರು! ಸಂಪೂರ್ಣ ವಿವರ ಇಲ್ಲಿದೆ

30 ಲಕ್ಷಕ್ಕೂ ಅಧಿಕ ಪರಿಹಾರ

ಕನ್ನಡ ಚಿತ್ರದಲ್ಲಿರುವ 3 ಸಾವಿರಕ್ಕೂ ಅಧಿಕ ಕಾರ್ಮಿಕರಿಗೆ ತಲಾ ಒಂದು ಸಾವಿರ ರೂ.ಗಳನ್ನು ನೀಡುವುದಕ್ಕೆ ನಿರ್ಧಾರ ಮಾಡಲಾಗಿದೆ. ಅಲ್ಲಿಗೆ, ಈ ಒಟ್ಟಾರೆ ಮೊತ್ತವೇ 30 ಲಕ್ಷ ರೂ. ದಾಟುತ್ತದೆ. 'ನೇರವಾಗಿ ಅವರ ಬಳಿ ತೆರಳಿ ನೀಡುವಂತಹ ಪರಿಸ್ಥಿತಿ ಈಗ ಇಲ್ಲ. ಎಲ್ಲ ಕಡೆ ಬಂದ್ ಇದೆ. ಆದ್ದರಿಂದ ಕಾರ್ಮಿಕರ ಅಸೋಸಿಯೇಷನ್‌ನಿಂದ ಎಲ್ಲರ ಬಗ್ಗೆ ಮಾಹಿತಿ ಪಡೆಯಲಾಗಿದೆ. 18 ಅಸೋಸಿಯೇಷನ್‌ಗಳಿದ್ದು, ಅಲ್ಲಿರುವ ಕಾರ್ಮಿಕರ ಆಧಾರದ ಮೇಲೆ ಅವರಿಗೆ ಹಣ ನೀಡಲಾಗುತ್ತದೆ. ಅವರು ಕಾರ್ಮಿಕರ ಖಾತೆಗಳಿಗೆ ಹಣ ಹಾಕಲಿದ್ದಾರೆ. ಕೆಲವೇ ದಿನಗಳಲ್ಲಿ ಈ ಕೆಲಸ ಪೂರ್ಣಗೊಳ್ಳಲಿದೆ' ಎಂದು ನಿಖಿಲ್‌ ಆಪ್ತ ಸುನೀಲ್ ಮಾಹಿತಿ ನೀಡಿದ್ದಾರೆ. ಸಿನಿ ಕಾರ್ಮಿಕರು ನಿಖಿಲ್ ಮಾಡಿದ ಸಹಾಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಶಿವರಾಜ್‌ಕುಮಾರ್ ನೇತೃತ್ವದಲ್ಲಿ ಚಲನಚಿತ್ರ ಕಾರ್ಮಿಕರ ನೆರವಿಗೆ ನಿಂತ ಸ್ಯಾಂಡಲ್‌ವುಡ್‌

-------------------------------------------------------

ಈ ಕೆಳಗಿನ ಪ್ರಶ್ನೆಗೆ ಸರಿಯಾದ ಉತ್ತರವನ್ನು ಕಾಮೆಂಟ್‌ ಬಾಕ್ಸ್‌ನಲ್ಲಿ ತಿಳಿಸಿ.

1. ನಿಖಿಲ್ ಕುಮಾರಸ್ವಾಮಿ ನಟನೆಯ ಯಾವ ಸಿನಿಮಾ ನಿಮಗೆ ತುಂಬ ಇಷ್ಟ?


ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ರೂ. ನೀಡಿದ ಕಪಿಲ್‌ ಶರ್ಮಾ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌